ದಶಕದ ತಪಸ್ಸು ಫಲಿಸೋ ಸುಸಂದರ್ಭದಲ್ಲಿ ಕಾಮಿಡಿ ಕಿಲಾಡಿ ಮಡೆನೂರು ಮನು ಲೈಫ್ಗೆ ಬಹುದೊಡ್ಡ ಕಳಂಕ ಅಂಟಿದೆ. ಸಹನಟಿಯಿಂದ ರೇಪ್ ಕೇಸ್ ದಾಖಲಾಗಿದ್ದು, ನಾಳೆ ಸಿನಿಮಾ ರಿಲೀಸ್ ಇದ್ಕೊಂಡು, ಇಂದು ಪೊಲೀಸರ ಅತಿಥಿ ಆಗಿದ್ದಾನೆ ಉದಯೋನ್ಮುಖ ನಟ.
- ನಾಳೆ ಸಿನಿಮಾ ರಿಲೀಸ್.. ಇಂದು ಮಡೆನೂರು ಮನು ಅರೆಸ್ಟ್
- ಸಹನಟಿಯಿಂದ ರೇಪ್ ಕೇಸ್.. ಲೈಫ್ ಫುಲ್ ಸೀರಿಯಸ್..!
ಕಾಮಿಡಿ ಕಿಲಾಡಿಗಳು ಸೀಸನ್-2 ವಿನ್ನರ್, ಗಾಳಿಪಟ-2 ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಮಡೆನೂರು ಮನು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಹೌದು.. ಸಹನಟಿ ನೀಡಿರೋ ರೇಪ್ ಕೇಸ್ ಆಧರಿಸಿ ನಟನನ್ನ ಬಂಧಿಸಿದ್ದಾರೆ ಪೊಲೀಸರು. ಈಗಾಗ್ಲೇ ಮದ್ವೆ ಆಗಿ ಮಗು ಇರೋ ಮನು, ಮದ್ವೆ ಆಗೋದಾಗಿ ನಂಬಿಸಿ, ಮೋಸ ಮಾಡಿದ್ದಾನೆ ಅಂತ ದೂರಿದ್ದಾಳೆ ಸಹನಟಿ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರೋ ಸಂತ್ರಸ್ಥೆ, ತನಗೆ 2018ರಿಂದ ಮನು ಪರಿಚಯ. 2022ರಲ್ಲೇ ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಶಿವಮೊಗ್ಗದ ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಕರೆದೊಯ್ದಿದ್ದ, ಆಗ ಸಂಭಾವನೆ ಕೊಡೋ ನೆಪದಲ್ಲಿ ರೂಮ್ನಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದ ಎಂದಿದ್ದಾರೆ.
ಅಂದಿನಿಂದ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರ ನಡೆಸಿರೋ ಮನು, ಎರಡು ಬಾರಿ ಗರ್ಭಪಾತ ಕೂಡ ಮಾಡಿಸಿದ್ದಾನೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ ಅರೆಸ್ಟ್ ಅಗೋಕೂ ಮುನ್ನ ಇದೊಂದು ಉದ್ದೇಶಪೂರ್ವಕ ಷಡ್ಯಂತ್ರ. ಇಬ್ಬರು ಹೀರೋಗಳು ಹಾಗೂ ಒಬ್ಬ ಲೇಡಿ ಡಾನ್ ನನ್ಮೇಲೆ ಷಡ್ಯಂತ್ರ ರೂಪಿಸಿದ್ದಾರೆ. ನಾನು ಸಾಕ್ಷಿ ಸಮೇತ ಮುಂದೆ ಇಡ್ತೀನಿ ಅಂತ ವಿಡಿಯೋ ಮೂಲಕ ತನ್ನ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾನೆ ಮನು.
ನಾಳೆ ಆರೋಪಿ ಮಡೆನೂರು ಮನು ಹೀರೋ ಆಗಿ ಬಣ್ಣ ಹಚ್ಚಿರೋ ಚೊಚ್ಚಲ ಚಿತ್ರ ಕುಲದಲ್ಲಿ ಕೀಳ್ಯಾವುದೋ ರಿಲೀಸ್ ಆಗ್ತಿದ್ದು, ಅದಕ್ಕೆ ತೊಂದರೆ ಆಗಬಾರದು. ನಿರ್ಮಾಪಕರು ಬಹಳ ಕಷ್ಟಪಟ್ಟು ಹಣ ಹೂಡಿದ್ದಾರೆ ಎಂದಿದ್ದಾನೆ ಮನು. ಇನ್ನು ನಿರ್ಮಾಪಕ ಸಂತೋಷ್ ಕುಮಾರ್ ಕೂಡ ಗ್ಯಾರಂಟಿ ನ್ಯೂಸ್ಗೆ ಸ್ಪಷ್ಟನೆ ನೀಡಿದ್ದು, ಸಿನಿಮಾ ರಿಲೀಸ್ನಲ್ಲಿ ಯಾವುದೇ ವ್ಯತ್ಯಯ ಇರಲ್ಲ. ನಾಳೆ ಚಿತ್ರ ಬಿಡುಗಡೆ ಆಗಲಿದೆ ಎಂದಿದ್ದಾರೆ.
ಯೋಗರಾಜ್ ಭಟ್ ಜೊತೆ ಕನ್ನಡಿಗರ ಮನಸ್ಸು ಕೂಡ ಗೆದ್ದಿದ್ದ ಮಡೆನೂರು ಮನು, ಇದೀಗ ಸಿನಿಮಾ ಕರಿಯರ್ ಆರಂಭವಾಗುವ ಹೊತ್ತಲೇ ಬಹುದೊಡ್ಡ ಆಪವಾದ ಹೊತ್ತಿದ್ದಾನೆ. ಇದು ನಿಜಕ್ಕೂ ಷಡ್ಯಂತ್ರವಾ..? ಆತ ಇದ್ರಿಂದ ಹೇಗೆ ಹೊರಬರ್ತಾನೆ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್