• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 17, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರವಿಚಂದ್ರನ್ ‘ರಣಧೀರ’.. 36 ಸಾವಿರ & 17 ವರ್ಷದ ಖುಷ್ಬೂ..!

ಕ್ರೇಜಿಸ್ಟಾರ್ & ವೀರಸ್ವಾಮಿ ಎಂಥಾ ಹೃದಯವಂತರು ಗೊತ್ತಾ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 2, 2025 - 10:36 am
in ಸಿನಿಮಾ
0 0
0
Film 2025 04 02t102553.532

ಖಷ್ಬೂ.. ಭಾರತೀಯ ಚಿತ್ರರಂಗ ಕಂಡ ಅಪರೂಪದ ಅಭಿನೇತ್ರಿ. 55 ವರ್ಷದ ಖಷ್ಬೂ ಅವರು ಪಂಚಭಾಷಾ ತಾರೆಯಾಗಿ ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಹೀಗೆ ಬಹುತೇಕ ಎಲ್ಲಾ ಭಾಷೆಗಳಲ್ಲಿ ತಮ್ಮ ನಟನಾ ಗಮ್ಮತ್ತು ತೋರಿದ್ದಾರೆ. ಕಳೆದ 40 ವರ್ಷಗಳಿಂದ ಚೆನ್ನೈನಲ್ಲಿ ನೆಲೆಸಿರೋ ಖುಷ್ಬೂ, ಹುಟ್ಟಿ ಬೆಳೆದದ್ದೆಲ್ಲಾ ಮುಂಬೈ. 1980ರ ದಶಕದಲ್ಲೇ ಬಾಲನಟಿಯಾಗಿ ಬಣ್ಣ ಹಚ್ಚಿದ ಖುಷ್ಬೂ ಹತ್ತಾರು ಚಿತ್ರಗಳಲ್ಲಿ ತಾನು ಭವಿಷ್ಯದ ಅಭಿನೇತ್ರಿ ಅನ್ನೋದನ್ನ ನೋಡುಗರಿಗೆ ಮನವರಿಕೆ ಮಾಡ್ತಾರೆ.

ಅದ್ರಂತೆ 1985ರಲ್ಲಿ ಜಾನೂ ಅನ್ನೋ ಹಿಂದಿ ಚಿತ್ರದ ಮುಖೇನ ನಾಯಕನಟಿಯಾಗಿ ಬಾಲಿವುಡ್ ನಿಂದಲೇ ಲಾಂಚ್ ಆಗ್ತಾರೆ. ಮುಂದೆ ನಡೆದದ್ದೆಲ್ಲಾ ಇತಿಹಾಸ. ಈಕೆ 80 ಹಾಗೂ 90ರ ದಶಕದ ಮೋಸ್ಟ್ ಡಿಮ್ಯಾಂಡಿಂಗ್ ಬಹುಭಾಷಾ ನಟೀಮಣಿ. ಬರೀ ಬಣ್ಣದಲೋಕಕ್ಕಷ್ಟೇ ಸೀಮಿತವಾಗದ ಖುಷ್ಬೂ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನಲ್ಲೂ ಗುರ್ತಿಸಿಕೊಳ್ತಾರೆ. ಕಳೆದ ಐದು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿರೋ ಖುಷ್ಬೂ, ಮೋದಿ ಸಿದ್ದಾಂತಗಳನ್ನು ಚಾಚೂ ತಪ್ಪದೆ ಪಾಲಿಸ್ತಿದ್ದಾರೆ.

RelatedPosts

ಲಾಂಚ್ ಆಗಬೇಕಿದ್ದ ಕರ್ಣ ಸೀರಿಯಲ್‌ ಮುಂದೂಡಿಕೆ: ಕ್ಷಮೆ ಕೇಳಿದ ನಟ ಕಿರಣ್ ರಾಜ್

ಧ್ರುವ ಸರ್ಜಾರ ‘ಅದ್ದೂರಿ’ ಚಿತ್ರಕ್ಕೆ 13ನೇ ವರ್ಷದ ಸಂಭ್ರಮ

ಕಾಂತಾರ ಚಿತ್ರತಂಡಕ್ಕೆ ತಹಶೀಲ್ದಾರ್ ನೋಟಿಸ್: 3 ದಿನದೊಳಗೆ ಉತ್ತರಿಸುವಂತೆ ಸೂಚನೆ

ಮಕ್ಕಳೊಂದಿಗೆ ರಾಕಿಭಾಯ್, ರಿಷಬ್ ಕ್ವಾಲಿಟಿ ಟೈಂ

ADVERTISEMENT
ADVERTISEMENT

Ranadheera movie actress khushbu sundar want to do movie with v ravichandran 78981387
ಇನ್ನೂ ಕನ್ನಡ ಚಿತ್ರರಂಗದೊಂದಿಗೆ ಖುಷ್ಬೂಗೆ ವಿಶೇಷವಾದ ನಂಟಿದೆ. 1987ರಲ್ಲಿ ನಮ್ಮ ಚಂದನವನಕ್ಕೂ ಕಾಲಿಟ್ಟ ಖುಷ್ಬೂ, ರಣಧೀರ ಸಿನಿಮಾದಿಂದ ಬ್ಯಾಕ್ ಟು ಬ್ಯಾಕ್ ಕನ್ನಡ ಚಿತ್ರಗಳನ್ನ ಮಾಡ್ತಾರೆ. ಅಂಜದ ಗಂಡು, ಯುಗಪುರುಷ, ಪ್ರೇಮಾಗ್ನಿ, ಹೃದಯ ಗೀತೆ, ರುದ್ರ, ತಾಳಿಗಾಗಿ, ಗಗನ, ಕಲಿಯುಗ ಭೀಮ, ಒಂಟಿ ಸಲಗ.. ಹೀಗೆ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ನಟಿಸೋ ಮೂಲಕ ಕನ್ನಡದ ಮನೆ ಮಗಳಾಗ್ತಾರೆ. ಅದಾದ ಬಳಿಕವೂ ಪುಂಡರ ಗಂಡ, ಶಾಂತಿ ಕ್ರಾಂತಿ, ಅಭಿಜಿತ್, ಪಾಳೆಗಾರ, ಜೀವನದಿ, ಮಹಾ ಎಡಬಿಡಂಗಿ, ಚಾಮುಂಡಿ, ಆಂಟಿ ಪ್ರೀತ್ಸೆ, ಮ್ಯಾಜಿಕ್ ಅಜ್ಜಿ, ಜನನಿ, ನಾನಲ್ಲ ಅನ್ನೋ ಸಾಕಷ್ಟು ಚಿತ್ರಗಳನ್ನ ಮಾಡ್ತಾರೆ.

Khushboo sundar 99508238
ಬೆಳ್ಳಿತೆರೆ, ರಾಜಕಾರಣದ ಜೊತೆ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾದಂತಹ ಖುಷ್ಬೂ ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ಅಲ್ಲದೆ, ಒಂದಷ್ಟು ಶೋಗಳಿಗೆ ಹೋಸ್ಟ್ ಆಗಿ, ಜಡ್ಜ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಖುಷ್ಬೂ ಅಂದ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈಕೆ ನಮ್ಮ ನೆಲದ ಹೆಣ್ಣು ಮಗಳು ಅನ್ನೋ ಪ್ರೀತಿ, ಗೌರವ, ಅಭಿಮಾನವಿದೆ. ಇಂತಹ ಖುಷ್ಬೂ ಒಮ್ಮೆ ಕೇವಲ 36 ಸಾವಿರ ರೂಪಾಯಿಗಳ ಬಿಲ್ ಕಟ್ಟಲಾಗದೆ ಒದ್ದಾಡಿದ ನಿದರ್ಶನವೊಂದಿದೆ ಅಂದ್ರೆ ನೀವು ನಂಬಲೇಬೇಕು. ಹೌದು.. ಇದನ್ನ ನಾವು ಹೇಳ್ತಿರೋದಲ್ಲ. ಸ್ವತಃ ಖುಷ್ಬೂ ಅವರೇ ಇತ್ತೀಚೆಗೆ 80ರ ದಶಕದ ಆ ರೋಚಕ ಘಟನೆಯನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಅದು 1987ನೇ ಇಸವಿ. ಆಗ ಖಷ್ಬೂಗೆ ಇನ್ನೂ 17 ವರ್ಷ. ಅಮ್ಮನೊಂದಿಗೆ ಚೆನ್ನೈಗೆ ಬಂದು ಚಿತ್ರರಂಗದಲ್ಲಿ ಆಕೆ ಬದುಕು ಕಟ್ಟಿಕೊಳ್ಳೋ ಮನಸ್ಸು ಮಾಡಿದ್ದ ಕಾಲಘಟ್ಟ. ಕನ್ನಡ ಚಿತ್ರರಂಗಕ್ಕೆ ಆಕೆ ಬಲಗಾಲಿಟ್ಟಿದ್ದ ಪರ್ವವದು. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆ ನೀಡಿದಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಂದೆ, ಖ್ಯಾತ ನಿರ್ಮಾಪಕ ಎನ್ ವೀರಸ್ವಾಮಿ ನಿರ್ಮಾಣದ ರಣಧೀರ ಚಿತ್ರದ ಶೂಟಿಂಗ್ ಸಮಯದಲ್ಲಿ ಖಷ್ಬೂ ಬಾಳಲ್ಲಿ ಒಂದು ಮರೆಯಲಾಗದ ಘಟನೆ ನಡೆಯುತ್ತದೆ. ಅದನ್ನ ಸ್ವತಃ ಖುಷ್ಬೂ ಅವರೇ ಮುಕ್ತವಾಗಿ 38 ವರ್ಷಗಳ ಬಳಿಕ ಹಂಚಿಕೊಂಡಿದ್ದಾರೆ.

K6 380x506xt
ಚೆನ್ನೈನ AVM ಸ್ಟುಡಿಯೋದಲ್ಲಿ ರಣಧೀರ ಚಿತ್ರದ ಶೂಟಿಂಗ್ ನಡೆಯುತ್ತಿರುತ್ತದೆ. ಒಂದು ದಿನ ಶೂಟಿಂಗ್ ಸೆಟ್ ಗೆ ಎಂಟ್ರಿ ಕೊಟ್ಟ ಖುಷ್ಬೂ ಮುಖದಲ್ಲಿ ನಗುವಿಲ್ಲ. ಆಕೆಯ ಮನಸ್ಸು ಭಾರವಾಗಿದೆ. ಯಾರ ಬಳಿಯೂ ಹೇಳಿಕೊಳ್ಳಲಾಗದಂತಹ ಕಷ್ಟ. ಮೌನಕ್ಕೆ ಜಾರಿದ ಖುಷ್ಬೂರನ್ನ ಆ ರೀತಿ ಡಲ್ ಆಗಿ ಕಂಡಂತಹ ರಣಧೀರ ಚಿತ್ರದ ನಾಯಕ ನಟ ಕಮ್ ನಿರ್ದೇಶಕ ವಿ ರವಿಚಂದ್ರನ್ ಹಾಗೂ ನಿರ್ಮಾಪಕ ವೀರಸ್ವಾಮಿ ಅವರು, ಆಕೆಯ ಸ್ಟ್ಯಾಫ್ ನಿಂದ ಏನಾಗಿದೆ ಅನ್ನೋದನ್ನ ಅರಿಯುತ್ತಾರೆ. ಇಷ್ಟಕ್ಕೂ ಅಂಥದ್ದೇನಾಗಿತ್ತು ಅಂದ್ರೆ, ಅದೇ ಎವಿಎಂ ಸ್ಟುಡಿಯೋ ಪಕ್ಕದಲ್ಲಿದ್ದ ವಿಜಯ ಆಸ್ಪತ್ರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಖುಷ್ಬೂ ತಾಯಿ ದಾಖಲಾಗಿರ್ತಾರೆ. ಆಕೆಗೆ ಚಿಕಿತ್ಸೆ ನೀಡಿ, ತಕ್ಕಮಟ್ಟಿಗೆ ಗುಣವೂ ಆಗಿರುತ್ತದೆ. ಆದ್ರೆ 36 ಸಾವಿರ ರೂಪಾಯಿ ಬಿಲ್ ಪಾವತಿಸಿ, ಡಿಸ್ಚಾರ್ಜ್ ಮಾಡಿಕೊಂಡು ಹೋಗಲು ಹೇಳಿರುತ್ತಾರೆ. ಖುಷ್ಬೂ ಕೈಯಲ್ಲಿ ಕಾಸಿಲ್ಲ. ಹೀಗಾಗಿ ಅವ್ರ ತಾಯಿ ಆಸ್ಪತ್ರೆಯಲ್ಲೇ ಇರ್ತಾರೆ.

ಈ ವಿಷಯ ತಿಳಿದ ರವಿಚಂದ್ರನ್ ಹಾಗೂ ಅವ್ರ ತಂದೆ ವೀರಸ್ವಾಮಿ ಅವರು, ಖುಷ್ಬೂಗೂ ತಿಳಿಯದಂತೆ ಆಸ್ಪತ್ರೆಗೆ ತೆರಳಿ, ಖುಷ್ಬೂ ತಾಯಿಯನ್ನ ಭೇಟಿ ಮಾಡಿ, 36 ಸಾವಿರ ರೂಪಾಯಿ ಮೊತ್ತದ ಬಿಲ್ ಪಾವತಿಸಿ, ಆಕೆಯನ್ನ ಮನೆಗೂ ಬಿಟ್ಟು ಬರ್ತಾರೆ. ನಂತ್ರ ಸೆಟ್ ಗೆ ಮರಳಿ, ಇಂತಹ ವಿಷಯವನ್ನು ನಮ್ಮ ಬಳಿ ಯಾಕೆ ಹೇಳಿಲ್ಲ ಅಂತ ಖುಷ್ಬೂ ಬಳಿ ಜಗಳ ಕೂಡ ಮಾಡ್ತಾರೆ. 36 ಸಾವಿರ ರೂಪಾಯಿ ಈ ದಿನಕ್ಕೆ ಸಣ್ಣ ಮೊತ್ತದ ಹಣವೇ ಇರಬಹುದು. ಆದ್ರೆ 1987ರಲ್ಲಿ ಅದು ಕೋಟಿ ಸಮಾನ. ಅಂತಹ ಕಡು ಕಷ್ಟಕಾಲದಲ್ಲಿ ಖುಷ್ಬೂ ಫ್ಯಾಮಿಲಿ ಜೊತೆ ನಿಂತ ಟ್ರೆಂಡ್ ಸೆಟ್ಟರ್, ದಿ ಶೋ ಮ್ಯಾನ್, ಕನಸುಗಾರ ಡಾ. ವಿ ರವಿಚಂದ್ರನ್ ಹಾಗೂ ಅವರ ತಂದೆಯನ್ನ ಈಗ ನೆನೆದಿರೋ ಖುಷ್ಬೂ ನಿಜಕ್ಕೂ ದೊಡ್ಡ ಮನಸ್ಸಿನ ದೊಡ್ಡ ತಾರೆ.

Untitled design 2023 05 31t182228.474 16855375603x2
ಹತ್ತಿದ ಏಣಿಯನ್ನೇ ಒದೆಯೋ ಈ ಕಾಲಘಟ್ಟದಲ್ಲಿ ಖುಷ್ಬೂ ಅವರು ಈ ರೀತಿ ಮಾಡಿದ ಸಹಾಯವನ್ನು ನೆನೆದು ಗ್ರೇಟ್ ಅನಿಸಿಕೊಂಡಿದ್ದಾರೆ. ನಾವು ಯಾವಾಗ್ಲೂ ಎಲ್ಲಿಂದ ಬಂದ್ವಿ..? ಹೇಗೆ ಬಂದ್ವಿ ಅನ್ನೋದನ್ನ ಮರೆಯಬಾರದು ಅನ್ನೋದು ಇದರ ನೀತಿಪಾಠ. ಅಷ್ಟೇ ಅಲ್ಲ, ಸಹಾಯ ಮಾಡಿದವರಿಗೆ ಸಣ್ಣದೊಂದು ಕೃತಜ್ಞತಾಭಾವ ಇರಬೇಕು. ಇನ್ನು ರವಿಚಂದ್ರನ್ ಆ ಕಾಲದಲ್ಲೇ ಪ್ಯಾನ್ ಇಂಡಿಯಾ ಮಾಡಿದವರು. ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು, ದೆಸೆ ತೋರಿಸದವರು. ನೂತನ, ವಿನೂತನ ಪ್ರಯೋಗಗಳನ್ನ ಮಾಡಿದವರು. ಅವ್ರ ಜೀವಿತಾವಧಿಯಲ್ಲಿ ಸಿನಿಮಾನೇ ಉಸಿರಾಡಿದವರು. ಖುಷ್ಬೂ ಅವರದ್ದು ಜಸ್ಟ್ ಒಂದು ಇನ್ಸಿಡೆಂಟ್. ಈ ರೀತಿ ಸಾವಿರಾರು ಮಂದಿಗೆ ಸಹಾಯ ಮಾಡಿದೆ ಈಶ್ವರಿ ಪ್ರೊಡಕ್ಷನ್ಸ್, ವೀರಸ್ವಾಮಿ ಹಾಗೂ ರವಿಚಂದ್ರನ್. ಇದಲ್ಲವೇ ಮಾನವೀಯತೆ..? ಇದಲ್ಲವೇ ರಿಯಲ್ ಹೀರೋಯಿಸಂ..? ಇದಲ್ಲವೇ ಸಾರ್ಥಕ ಜೀವನ..?

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web 2025 06 17t072731.448

ಪಿಸ್ತಾ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಿ!

by ಶ್ರೀದೇವಿ ಬಿ. ವೈ
June 17, 2025 - 7:28 am
0

Rashi bavishya

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ, ಯಾರಿಗೆ ಎಚ್ಚರಿಕೆ?

by ಶ್ರೀದೇವಿ ಬಿ. ವೈ
June 17, 2025 - 6:56 am
0

1444 (10)

ಲಾಂಚ್ ಆಗಬೇಕಿದ್ದ ಕರ್ಣ ಸೀರಿಯಲ್‌ ಮುಂದೂಡಿಕೆ: ಕ್ಷಮೆ ಕೇಳಿದ ನಟ ಕಿರಣ್ ರಾಜ್

by ಶಾಲಿನಿ ಕೆ. ಡಿ
June 16, 2025 - 11:43 pm
0

1444 (8)

ಮೆಟಾದಿಂದ ವಾಟ್ಸಾಪ್‌ಗೆ ಜಾಹೀರಾತು: ಎರಡು ತಿಂಗಳಲ್ಲಿ ಹೊಸ ಬದಲಾವಣೆ!

by ಶಾಲಿನಿ ಕೆ. ಡಿ
June 16, 2025 - 11:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • 1444 (10)
    ಲಾಂಚ್ ಆಗಬೇಕಿದ್ದ ಕರ್ಣ ಸೀರಿಯಲ್‌ ಮುಂದೂಡಿಕೆ: ಕ್ಷಮೆ ಕೇಳಿದ ನಟ ಕಿರಣ್ ರಾಜ್
    June 16, 2025 | 0
  • 1444 (2)
    ಧ್ರುವ ಸರ್ಜಾರ ‘ಅದ್ದೂರಿ’ ಚಿತ್ರಕ್ಕೆ 13ನೇ ವರ್ಷದ ಸಂಭ್ರಮ
    June 16, 2025 | 0
  • 1444 (1)
    ಕಾಂತಾರ ಚಿತ್ರತಂಡಕ್ಕೆ ತಹಶೀಲ್ದಾರ್ ನೋಟಿಸ್: 3 ದಿನದೊಳಗೆ ಉತ್ತರಿಸುವಂತೆ ಸೂಚನೆ
    June 16, 2025 | 0
  • 1444
    ಮಕ್ಕಳೊಂದಿಗೆ ರಾಕಿಭಾಯ್, ರಿಷಬ್ ಕ್ವಾಲಿಟಿ ಟೈಂ
    June 16, 2025 | 0
  • Untitled design 2025 06 16t180930.586
    ಬಯಲಾಯ್ತು ರಾಜಾಸಾಬ್ ಹಾರರ್ ಫ್ಯಾಂಟಸಿ ವರ್ಲ್ಡ್‌
    June 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version