ಸಿನಿದುನಿಯಾದ ಸರ್ವಶ್ರೇಷ್ಠ ಪ್ರಶಸ್ತಿ ಆಸ್ಕರ್ ಅಂಗಳಕ್ಕೆ ಕನ್ನಡದ ಕಾಂತಾರ-1 ಎಂಟ್ರಿ ಕೊಟ್ಟಿದ್ದು, ಇದು 90 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಚ್ಚ ಹೊಸ ಮೈಲಿಗಲ್ಲಾಗಿದೆ. ಇದರೊಟ್ಟಿಗೆ ಮಹಾವತಾರ ನರಸಿಂಹ ಕೂಡ ಕಾಲಿಟ್ಟಿದ್ದು, ಇಂಡಿಯಾದ ಐದೇ ಸಿನಿಮಾಗಳಲ್ಲಿ ಕನ್ನಡದ ಹೊಂಬಾಳೆಯಿಂದಲೇ ಎರಡೆರಡು ಎಂಟ್ರಿ ಕೊಟ್ಟಿರೋದು ಗ್ರೇಟ್. ಇಷ್ಟಕ್ಕೂ ಯಾವ ಹಂತಕ್ಕೆ ಎಂಟ್ರಿ..? ಆಸ್ಕರ್ ಗೆಲ್ಲೋಕೆ ಏನೆಲ್ಲಾ ಪ್ರಾಸಸ್ ಆಗಬೇಕಿದೆ..? ತ್ರಿಬಲ್ ಆರ್ ನಂತ್ರ ಶೆಟ್ರು-ವಿಜಯ್ ಇಂಡಿಯಾಗೆ ಆಸ್ಕರ್ ತರ್ತಾರಾ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.
2023ರಲ್ಲಿ ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ಟಿಆರ್-ರಾಮ್ ಚರಣ್ ತೇಜಾ ನಟನೆಯ ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಸಾಂಗ್ಗೆ ವಿಶ್ವ ಸಿನಿದುನಿಯಾದ ಸರ್ವಶ್ರೇಷ್ಠ ಪ್ರಶಸ್ತಿ ಆಸ್ಕರ್ ಲಭಿಸಿತ್ತು. ಇಡೀ ದೇಶವೇ ಸಂಭ್ರಮಿಸಿತ್ತು. ಇದೀಗ 2026ರಲ್ಲಿ 98ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳ ರೇಸ್ಗೆ ನಮ್ಮ ಕನ್ನಡದ ಕಾಂತಾರ ಚಾಪ್ಟರ್-1 ಹಾಗೂ ಮಹಾವತಾರ ನರಸಿಂಹ ಚಿತ್ರಗಳು ಎಂಟ್ರಿ ಕೊಟ್ಟಿವೆ. ಇದು ಪ್ರತಿಯೊಬ್ಬ ಕನ್ನಡಿಗನಷ್ಟೇ ಅಲ್ಲ, ಭಾರತೀಯ ಕೂಡ ಖುಷಿ ಪಡುವ ವಿಷಯ.

ಆಸ್ಕರ್ ಅಂಗಳಕ್ಕೆ ಕನ್ನಡದ ಕಾಂತಾರ..ಐತಿಹಾಸಿಕ ಘಟ್ಟ
ಇಂಡಿಯಾದಿಂದ 5 ಆಯ್ಕೆ..ಹೊಂಬಾಳೆಯಿಂದಲೇ 2..!
ಇಡೀ ಇಂಡಿಯಾದಿಂದ ಐದೇ ಐದು ಮೂವಿಗಳು ಆಸ್ಕರ್ ಅಂಗಳಕ್ಕೆ ಕಾಲಿಟ್ಟಿವೆ. ಆ ಪೈಕಿ ನಮ್ಮ ಕನ್ನಡದಿಂದಲೇ ಎರಡು ಸಿನಿಮಾಗಳು ಅನ್ನೋದು ಡಬಲ್ ಖುಷಿ. ಯೆಸ್.. ಹೊಂಬಾಳೆ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿರೋ ಕಾಂತಾರ-1 ಹಾಗೂ ಅದೇ ಹೊಂಬಾಳೆ ಪ್ರೆಸೆಂಟ್ ಮಾಡಿರೋ ಮಹಾವತಾರ ನರಸಿಂಹ ಎರಡೂ ಎಂಟ್ರಿ ಕೊಟ್ಟಿರೋದು ಹೆಮ್ಮೆಯ ಸಂಗತಿ. ಇವೆರಡರ ಜೊತೆ ತನ್ವಿ ದಿ ಗ್ರೇಟ್, ಟೂರಿಸ್ಟ್ ಫ್ಯಾಮಿಲಿ, ಸಿಸ್ಟರ್ ಮಿಡ್ನೈಟ್ ಚಿತ್ರಗಳು ಕೂಡ ಭಾರತದಿಂದ ಆಯ್ಕೆ ಆಗಿವೆ.

90 ವರ್ಷಗಳ ಇತಿಹಾಸ..ಇದೇ ಮೊದಲ ಮಹಾ ಹೆಜ್ಜೆ
ದಿಗ್ವಿಜಯದತ್ತ ರಿಷಬ್ ಶೆಟ್ರು-ವಿಜಯ್ ಹೊಸ ಪರ್ವ..!!
90 ವರ್ಷಗಳ ಇತಿಹಾಸವಿರೋ ನಮ್ಮ ಕನ್ನಡ ಚಿತ್ರರಂಗದಿಂದ ಇದೇ ಮೊದಲ ಬಾರಿಗೆ ಅತ್ಯುನ್ನತ್ತ ಹಾಗೂ ಸರ್ವಶ್ರೇಷ್ಠ ಆಸ್ಕರ್ಗೆ ಕನ್ನಡದ ಸಿನಿಮಾವೊಂದು ಆಯ್ಕೆ ಆಗಿದ್ದು, ಇದೆಲ್ಲದರ ಕ್ರೆಡಿಟ್ ಒನ್ ಅಂಡ್ ಓನ್ಲಿ ರಿಷಬ್ ಶೆಟ್ಟಿ ಹಾಗೂ ಅವ್ರ ಕನಸು ನನಸಾಗಿಸಿದ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಅವರಿಗೆ ಸಲ್ಲಬೇಕು. ಇದೊಂದು ಮಹತ್ವದ ಐತಿಹಾಸಿಕ ಮೊಮೆಂಟ್ ಆಗಿದ್ದು, ಆ ದೈವ ಶಕ್ತಿಯೇ ಡಿವೈನ್ ಸ್ಟಾರ್ ಪ್ರಯೋಗಕ್ಕೆ ಇಂಥದ್ದೊಂದು ಬೃಹತ್ ವೇದಿಕೆ ಸಿದ್ಧಗೊಳಿಸಿದೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಇದು ಜಸ್ಟ್ ಮೊದಲ ಹೆಜ್ಜೆ..ಇನ್ನೂ 2 ರೌಂಡ್ಸ್ ಇರಲಿದೆ
ಅಕಾಡೆಮಿ ಸದಸ್ಯರ ವೋಟಿಂಗ್ ಮೂಲಕ ಆಯ್ಕೆ ಪ್ರಕ್ರಿಯೆ
ಆಸ್ಕರ್ಗೆ ಎಂಟ್ರಿ ಕೊಟ್ಟಿದೆ ಅಂದಮಾತ್ರಕ್ಕೆ ಪ್ರಶಸ್ತಿ ಬಂದೇಬಿಡ್ತು ಅಂತಲ್ಲ. ಅದಕ್ಕೆ ಸಾಕಷ್ಟು ರೂಲ್ಸ್ & ರೆಗ್ಯಲೇಷನ್ಸ್ ಇದೆ. ಎಂಟ್ರಿ ಹಂತಕ್ಕೇನೇ ಬಹುದೊಡ್ಡ ಪ್ರಾಸಸ್ ಇದೆ. ಆದ್ರೀಗ ಅಫಿಶಿಯಲಿ ನಮ್ಮ ಕಾಂತಾರ-1 ಸಿನಿಮಾ ಹಾಗೂ ಮಹಾವತಾರ ನರಸಿಂಹ ಎಂಟ್ರಿ ಆಗಿದೆ. ಇದಕ್ಕಾಗಿಯೇ ಅಕಾಡೆಮಿ ಸದಸ್ಯರ ಸ್ಪೆಷಲ್ ಕಮಿಟಿ ಇರಲಿದೆ. ಅವರೆಲ್ಲಾ ವೋಟ್ ಮಾಡುವ ಮೂಲಕ ಈ ಎಂಟ್ರಿ ಸಾಧ್ಯವಾಗಿದೆ.

ಆಸ್ಕರ್ ಅಕಾಡೆಮಿಯಲ್ಲಿ ಬರೋಬ್ಬರಿ 11,120 ಮಂದಿ ಸದಸ್ಯರಿದ್ದು, ಆ ಪೈಕಿ 10,143 ಮಂದಿ ಸದಸ್ಯರಿಗೆ ವೋಟಿಂಗ್ ಪವರ್ ಇದೆ. ಇವರೆಲ್ಲರೂ ಸಹ ಸದ್ಯ ಬೇರೆ ಬೇರೆ ಕೆಟಗರಿಗೆ ಆಯ್ಕೆ ಆಗಿರೋ ಸಿನಿಮಾಗಳನ್ನ ಎಡರನೇ ಹಂತಕ್ಕೆ ನಾಮಿನೇಟ್ ಮಾಡಬೇಕಾಗುತ್ತದೆ. ಅದು ಕೂಡ ವೋಟಿಂಗ್ ಮೂಲಕವೇ ನಾಮನಿರ್ದೇಶನ ಮಾಡಬೇಕಾಗುತ್ತೆ. ಸೀಕ್ರೆಟ್ ಆನ್ಲೈನ್ ಬ್ಯಾಲೆಟ್ ಮುಖೇನ ನಾಮಿನೇಟ್ ಮಾಡ್ತಾರೆ. ಅದಾದ ಬಳಿಕ ನಾಮಿನೇಷನ್ ಆದಂತಹ ಸಿನಿಮಾಗಳಿಗೆ ಫೈನಲ್ ವೋಟಿಂಗ್ ಇರಲಿದೆ. ಅಲ್ಲಿ ವಿನ್ನಿಂಗ್ ಸಿನಿಮಾಗಳು ಅಧಿಕ ಮತಗಳಿಂದ ಗೆಲ್ಲಲಿವೆ. ಸೋ.. ಇದು ಮೊದಲ ಹಂತವಾಗಿದ್ದು, ಇನ್ನೆರಡು ಹಂತಗಳು ಇದಕ್ಕಿಂತ ಕ್ಲಿಷ್ಠವಾಗಿರಲಿವೆ.
11,120 ಮಂದಿ ಅಕಾಡೆಮಿ ಸದಸ್ಯರು..10,143 ವೋಟ್ಸ್
8 ವಿಭಾಗಗಳಲ್ಲಿ ಕಾಂತಾರ ಎಂಟ್ರಿ..4 ಪಾತ್ರಧಾರಿ ರಿಷಬ್
ಸದ್ಯ ಬೆಸ್ಟ್ ಆ್ಯಕ್ಟರ್, ಬೆಸ್ಟ್ ಆ್ಯಕ್ಟ್ರೆಸ್, ಬೆಸ್ಟ್ ಫಿಲ್ಮ್, ಬೆಸ್ಟ್ ಡೈರೆಕ್ಟರ್, ಬೆಸ್ಟ್ ಪ್ರೊಡ್ಯೂಸರ್, ಬೆಸ್ಟ್ ರೈಟಿಂಗ್, ಬೆಸ್ಟ್ ಪ್ರೊಡಕ್ಷನ್ ಡಿಸೈನ್, ಬೆಸ್ಟ್ ಸಿನಿಮಾಟೋಗ್ರಫಿ.. ಹೀಗೆ ಒಂದಲ್ಲ ಎರಡಲ್ಲ ಸುಮಾರು 8 ವಿಭಾಗಗಳಿಗೆ ಕಾಂತಾರ-1 ಸಿನಿಮಾ ಅಪ್ಲೈ ಮಾಡಿದೆ. ಅಂದಹಾಗೆ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಬೆರ್ಮೆ, ಮಾಯಕಾರ, ಅಣ್ಣಪ್ಪ ಹಾಗೂ ಕಾಡುಬೆಟ್ಟು ಶಿವ ಅನ್ನೋ ನಾಲ್ಕು ಪಾತ್ರಗಳನ್ನ ನಿಭಾಯಿಸಿರೋದು ಮತ್ತೊಂದು ವಿಶೇಷ. ಕಳೆದ ವರ್ಷ ಇಂಡಿಯನ್ ಬಾಕ್ಸ್ ಆಫೀಸ್ನಲ್ಲಿ 850ರಿಂದ 900 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿರೋ ಕಾಂತಾರ-1 ಇಡೀ ಚಿತ್ರತಂಡದ ಸಿನಿಮೋತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನೂ ಪ್ರತಿಷ್ಠಿತ ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್, ನಮ್ಮ ನೆಲದ ಸಂಸ್ಕೃತಿ, ಇಲ್ಲಿನ ಮಣ್ಣಿನ ಸೊಗಡು, ಸೊಬಗನ್ನ ವಿಶ್ವದ ಮೂಲೆ ಮೂಲೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಕಾಂತಾರ ಸಿನಿಮಾ ಕನ್ನಡದಿಂದ ವಿಶ್ವಸಂಸ್ಥೆವರೆಗೂ ಗಮನ ಸೆಳೆದದ್ದು ಗೊತ್ತೇಯಿದೆ. ಇದೀಗ ವಿದೇಶಿಗರು ಕೂಡ ಕಾಂತಾರ-1ನ ಬೆರಗುಗಣ್ಣಿನಿಂದ ಕಂಡಿದ್ದು, ಮೆಚ್ಚಿದ್ದಾರೆ. ಹೀಗಾಗಿ ಡಿವೈನ್ ರೂಟ್ಸ್ ಇರೋ ಕಾಂತಾರ, ಆಸ್ಕರ್ ಅಕಾಡೆಮಿ ಸದಸ್ಯರಿಗೆ ರುಚಿಸಿ, ಅವಾರ್ಡ್ ನೀಡಿದ್ರೆ ಇದಕ್ಕಿಂತ ದೊಡ್ಡ ಖುಷಿ, ಸಂಭ್ರಮ ಮತ್ತೊಂದಿರಲು ಸಾಧ್ಯವಿಲ್ಲ.





