• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಯಶ್, ರಣ್‌ಬೀರ್, ಉನ್ನಿ ಆಯ್ತು.. ಈಗ ಶಾಹಿದ್ ಸಿನಿಮಾದಲ್ಲೂ ವೈಲೆನ್ಸ್‌..!

ಓ ರೋಮಿಯೋ ಆ ರೋಮಿಯೋ-ಜೂಲಿಯೆಟ್ ಕಥೆ ಅಲ್ಲ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 11, 2026 - 3:24 pm
in ಬಾಲಿವುಡ್, ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2026 01 11T150325.224

ಸೆಕ್ಸ್ & ವಯಲೆನ್ಸ್.. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿಬಿಟ್ಟಿದೆ. ಇದು ಕಲೆಯ ಕಗ್ಗೊಲೆಯೋ ಅಥ್ವಾ ಹಣ ಮಾಡೋಕೆ ಉಪಯೋಗಿಸ್ತಿರೋ ಟೂಲ್‌ಗಳೋ ಒಂದೂ ಗೊತ್ತಾಗ್ತಿಲ್ಲ. ಯಶ್, ರಣ್‌ಬೀರ್, ಉನ್ನಿ ಮಕುಂದನ್ ಆಯ್ತು. ಇದೀಗ ಶಾಹಿದ್ ಕಪೂರ್ ಸರದಿ.

ಇದು ಬಾಲಿವುಡ್ ಸಿನಿಮಾದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಓ ರೋಮಿಯೋ ಚಿತ್ರದ ಟೀಸರ್ ದೃಶ್ಯಗುಚ್ಚ. ನಾವು ಯಾವುದೆಲ್ಲಾ ಬಹುನಿರೀಕ್ಷಿತ ಅಂತ ಕಾತರದಿಂದ ಕಾಯ್ತಿರ್ತೀವೋ ಅವೆಲ್ಲಾ ಕೂಡ ಇದೇ ರೀತಿ ಭ್ರಮನಿರಸಗೊಳಿಸಿ ಬಿಡುತ್ತವೆ. ಹೌದು.. ಟೈಟಲ್ ನೋಡಿ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಅಂದುಕೊಂಡಿದ್ದವ್ರಿಗೆ ಇದು ಆ ರೋಮಿಯೋ-ಜೂನಿಯೆಟ್ ಕಥೆ ಅಲ್ಲ, ಇದೊಂದು ಭಯಂಕರ ಅಂಡರ್‌‌ವರ್ಲ್ಡ್‌ ಕ್ರೈಂ ಕಥಾನಕ ಅನ್ನೋದ್ರ ಹಿಂಟ್ ನೀಡಿದೆ.

RelatedPosts

ಅಯೋಗ್ಯ ಟ್ರೈಲರ್ ಬರಲ್ಲ.. ಆದರೆ ಜಗಮಗಿಸಲಿದೆ ಇವೆಂಟ್

ಜನನಾಯಗನ್ ನಲ್ಲಿ ವಜ್ರಾಂಗ್ ಶೆಟ್ಟಿ ಅಬ್ಬರ

ರಾವಣನಾಗಿ ಯಶ್ ಅಬ್ಬರ: ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿದ ಸ್ಟಾರ್‌ಗಳು ಯಾರು ಗೊತ್ತಾ?

‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾಧಿಕಾ ಪಂಡಿತ್ ಪೋಸ್ಟ್ ವೈರಲ್

ADVERTISEMENT
ADVERTISEMENT

ಯೆಸ್.. ಪ್ರೀತಿಗಾಗಿ ಯುದ್ಧಗಳು ನಡೆದಿವೆ ನಿಜ. ಹಾಗಂತ ಇಷ್ಟೊಂದು ಕ್ರೌರ್ಯದ ಅಗತ್ಯತೆ ಆದ್ರೂ ಏನಿತ್ತು ಅನ್ನೋ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಲಿದೆ. ಶಾಹಿದ್ ಕಪೂರ್ ಇಲ್ಲಿ ರೋಮಿಯೋ ಆಗಿ ಮಿಂಚ್ತಿದ್ರೆ, ಜೂಲಿಯೆಟ್ ಆಗಿ ದಿಶಾ ಪಟಾನಿ ಹಾಗೂ ಪ್ರಮುಖ ಪಾತ್ರಗಳಲ್ಲಿ ನಾನಾ ಪಾಟೇಕರ್ ಹಾಗೂ ತೃಪ್ತಿ ದಿಮ್ರಿ ಕೂಡ ಕಾಣಸಿಗಲಿದ್ದಾರೆ. ಸ್ಟಾರ್‌ಕಾಸ್ಟ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ವಯಲೆನ್ಸ್ ಈ ಪಾಟಿ ಇರೋದು ಸಿನಿಮಾಗೆ ಒಳಿತೇನೋ ಆದ್ರೆ ನೋಡುಗ ವರ್ಗಕ್ಕೆ, ಸಮಾಜಕ್ಕೆ ಮಾತ್ರ ಕಂಡಿತ ಶುಭವಲ್ಲ.

ಯಶ್, ರಣ್‌ಬೀರ್, ಉನ್ನಿ ಆಯ್ತು.. ಈಗ ಶಾಹಿದ್ ಸರದಿ

ಇವ್ರೇ ನೋಡಿ ಟಾಕ್ಸಿಕ್ ಕ್ರೌರ್ಯಕ್ಕೆ ಕೇರ್ ಆಫ್ ಅಡ್ರೆಸ್..!

ವಿಶಾಲ್ ಭಾರದ್ವಜ್ ನಿರ್ದೇಶನದ ಓ ರೋಮಿಯೋ ವ್ಯಾಲಂಟೈನ್ಸ್ ಡೇ ವಿಶೇಷ ಫೆಬ್ರವರಿ 13ಕ್ಕೆ ತೆರೆಗಪ್ಪಳಿಸುತ್ತಿದೆ. ಈ ಟೀಸರ್ ನೋಡಿದ್ಮೇಲೆ ಅನಿಸ್ತಿರೋದು ಒಂದೇ.. ಇತ್ತೀಚೆಗೆ ಅದ್ಯಾಕೋ ನಮ್ಮ ಪ್ಯಾನ್ ಇಂಡಿಯನ್ ಸಿನಮಾಗಳ ಕಥಾವಸ್ತು ಕ್ರೌರ್ಯ ಹಾಗೂ ಸೆಕ್ಸ್ ಮೇಲೆ ಜಾಸ್ತಿ ಫೋಕಸ್ ಆಗ್ತಿದೆಯಾ ಅನಿಸ್ತಿದೆ. ಕೆಜಿಎಫ್‌‌ನಲ್ಲಿ ಯಶ್, ಮಾರ್ಕೋದಲ್ಲಿ ಉನ್ನಿ ಮುಕುಂದನ್ ಹಾಗೂ ಅನಿಮಲ್‌‌ನಲ್ಲಿ ರಣ್‌ಬೀರ್ ಕಪೂರ್ ಬಳಿಕ ಇದೀಗ ಶಾಹಿದ್ ಕಪೂರ್ ಸರದಿ ಅನಿಸ್ತಿದೆ.

ಗನ್ ಹಿಡಿದು ಬುಲೆಟ್‌‌ಗಳ ಸುರಿಮಳೆಗೈದು ದೀಪಾವಳಿ ಮಾಡುವ ದೃಶ್ಯಗಳು. ಲೀಟರ್‌ಗಟ್ಟಲೆ ರಕ್ತ ಹರಿಸುವ ಬ್ಲಡಿ ಡೆಡ್ಲಿ ಫೈಟ್‌‌ಗಳು ಈ ಸಿನಿಮಾಗಳಲ್ಲಿರೋ ಸಾಮ್ಯತೆ ವಿಷಯಗಳು. ರಾಕಿಭಾಯ್ ಯಶ್ ತಮ್ಮ ತಾಯಿಗೆ ನೀಡಿದ ಮಾತಿನಂತೆ ಶ್ರೀಮಂತನಾಗೋಕೆ ಅಂಥದ್ದೇ ದೊಡ್ಡ ಆನೆ ಆದ್ರೂ ಹೊಡೀತಾನೆ. ಎಷ್ಟೇ ತಲೆಗಳು ಬೇಕಾದ್ರೂ ಉರುಳಿಸ್ತಾನೆ. ಕೆಜಿಎಫ್ ಮೊದಲ ಭಾಗದ ಓಪನಿಂಗ್ ಸೀನ್‌‌ನಲ್ಲೇ ಹ್ಯಾಪಿ ಬರ್ತ್ ಡೇ ಟು ಯು ಅಂತ ಬರೋ ಯಶ್ ರಕ್ತಸ್ನಾನ ಮಾಡಿಯೇ ಬಂದಂತಿದೆ.

ಮಲಯಾಳಂನ ಮಾರ್ಕೋ ಸಿನಿಮಾದ ವಯಲೆನ್ಸ್‌ಗೆ ಬೆಚ್ಚಿಬಿದ್ದ ಜನ, ಅದ್ರ ಸೀಕ್ವೆಲ್ ಅಂತೂ ನಿರೀಕ್ಷೆ ಮಾಡಲಿಲ್ಲ. ಪ್ರೇಕ್ಷಕರಿಂದ ಬಂದಂತಹ ಮಿಶ್ರ ಪ್ರತಿಕ್ರಿಯೆಗೆ ನಾಯಕನಟ ಉನ್ನಿ ಮುಕುಂದನ್ ಅವ್ರೇ ಎರಡನೇ ಭಾಗ ಮಾಡೋ ನಿರ್ಧಾರ ಬದಲಿಸಿಬಿಟ್ಟರು. ವುಡ್ ಕಟರ್ ಮೂಲಕ ಇಂಗ್ಲಿಷ್‌ನ ರಾಂಗ್ ಟರ್ನ್ ಮೂವಿಯಂತೆ ಮನುಷ್ಯರನ್ನ ಕತ್ತರಿಸುವ, ರಕ್ತದೋಕುಳಿ ಮಾಡುವ ಮಾರ್ಕೋ ಸಿನಿಮಾದಲ್ಲಿ ಭಯಾನಕ ವಯಲೆನ್ಸ್ ಇತ್ತು. ಮಿಗಿಲಾಗಿ ಡೆಲಿವರಿ ವೇಳೆ ಖಳನಾಯಕ ತಾಯಿಯ ಹೊಟ್ಟೆಯಿಂದ ಮಗುವನ್ನು ಹೊರತಳ್ಳಿ, ಕತ್ತಿಯಿಂದ ಆ ಮಗು ಹಾಗೂ ತಾಯಿಯ ಕರುಳಬಳ್ಳಿ ಕತ್ತರಿಸಿ, ಆ ಮಗುನ ಕೂಡ ಕೊಲ್ಲೋಕೆ ಮುಂದಾಗುವಂತಹ ನೀಚ ಕೃತ್ಯಕ್ಕೆ ಈ ಸಿನಿಮಾ ಸಾಕ್ಷಿಯಾಗಿರೋದು ಈ ಶತಮಾನದ ಬಹುದೊಡ್ಡ ದುರ್ದೈವವೇ ಸರಿ.

ಓ ರೋಮಿಯೋ ಆ ರೋಮಿಯೋ-ಜೂಲಿಯೆಟ್ ಕಥೆ ಅಲ್ಲ

ಪ್ರೀತಿಗಾಗಿ ರಕ್ತ ಹರಿಸೋ ರೋಮಿಯೋ ಈ ಶಾಹಿದ್ ಕಪೂರ್

ಇನ್ನೋ ತಂದೆಗೆ ಯಾರೋ ಗನ್‌ನಿಂದ ಶೂಟ್ ಮಾಡಿದ ಅನ್ನೋ ಕಾರಣಕ್ಕೆ ಅವನ ತಲೆ ಹೊಡೆದುರಳಿಸಿ ತಂದು ನಿಮ್ಮ ಪಾದದಡಿ ಇಡ್ತೀನಿ ಅಂತ ಶಪಥ ಮಾಡುವ ಮಗನ ಕಥೆ ಅನಿಮಲ್. ರಣ್‌ಬೀರ್ ಕಪೂರ್ ಇದೇ ಮೊದಲ ಬಾರಿಗೆ ಅಷ್ಟೊಂದು ವಯಲೆಂಟ್ ಪಾತ್ರ ಮಾಡಿದ್ರು. ಸಂದೀಪ್ ರೆಡ್ಡಿ ವಂಗಾ ಆ ಪಾತ್ರವನ್ನ ರಕ್ತದಿಂದಲೇ ಡಿಸೈನ್ ಮಾಡಿದ್ರು. ಈ ಸಿನಿಮಾದಲ್ಲಿ ಹೆಣ್ಣನ್ನ ಕೀಳಾಗಿ ತೋರಿಸಿರೋ ಪರಿ, ಸೆಕ್ಸ್ ಟೂಲ್ ಆಗಿ ಬಳಿಸಿಕೊಂಡಿರೋದು ನಿಜಕ್ಕೂ ನೀಚತನ ಅನಿಸಲಿದೆ. ಅದ್ರಲ್ಲೂ ಅಕ್ಷರಶಃ ಅನಿಮಲ್ ರೀತಿ ಬದಲಾಗೋ ಹೀರೋ ವರ್ತನೆಗಳು ನೋಡುಗರಿಗೆ ಮುಜುಗರ ತರಿಸಿದ್ದು ಸುಳ್ಳಲ್ಲ.

ಇದೀಗ ಟಾಕ್ಸಿಕ್ ಟೀಸರ್ ಕೂಡ ಅದ್ರಿಂದ ಹೊರತಾಗಿಲ್ಲ. ವಯಲೆನ್ಸ್ ಹಾಗೂ ಸೆಕ್ಸ್‌ಗೆ ಕೇರ್ ಆಫ್ ಅಡ್ರೆಸ್‌‌ನಂತಿರೋ ಟಾಕ್ಸಿಕ್ ಟೀಸರ್‌‌ಗೆ ಈಗಾಗ್ಲೇ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಮೊನ್ನೆಯಷ್ಟೇ ಟಾಕ್ಸಿಕ್ ಟೀಸರ್ ನೋಡಿ, ಇನ್ನೂ ಜನ ಅದ್ರಿಂದ ಹೊರಬರಲಾಗದೆ ಇದೇನ್ ಟಾಕ್ಸಿಕ್ ಗುರು ಅಂತಿದ್ದಾರೆ. ಅಷ್ಟರಲ್ಲೇ ಓ ರೋಮಿಯೋ ಆಟ ಶುರುವಾಗಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಗ್ಯಾಪ್ ಕೊಡದೆ ಡೋಸ್ ಮೇಲೆ ಡೋಸ್ ಕೊಟ್ರೆ ಪ್ರೇಕ್ಷಕರು ತಡೆದುಕೊಳ್ಳೋದಾದ್ರೂ ಹೇಗೆ ನೀವೇ ಹೇಳಿ..?

ಟಾಕ್ಸಿಕ್' ಟೀಸರ್​ ವಿರುದ್ಧ ದೂರು ದಾಖಲು.. ಆಗಿರೋ ಮಿಸ್ಟೇಕ್ಸ್ ಎಲ್ಲಿ..?

ಇದು ನಿಜಕ್ಕೂ ಬದಲಾಗಬೇಕಿದೆ. ಹೀಗೆ ಮಾಡಿದ ಎಲ್ಲಾ ಸಿನಿಮಾಗಳು ನಿರೀಕ್ಷೆಗೂ ಮೀರಿದ ಹಣ ಮಾಡಿದವು. ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಹಿಟ್ಸ್ ಅನಿಸಿಕೊಂಡವು. ಆದ್ರೆ ಕಿಂಚಿತ್ತಾದ್ರೂ ಮಾನವೀಯತೆ ಬೇಡವೇ..? ಸಮಾಜಕ್ಕೆ ಇಂತಹ ಚಿತ್ರಗಳಿಂದ ಸಿಗುವ ಸಂದೇಶವಾದ್ರೂ ಏನು..? ಕೆಟ್ಟದನ್ನ ಮ್ಯಾಗ್ನೆಟ್‌‌‌‌ನಂತೆ ಬೇಗ ಸೆಳೆಯುವ ಜನರಿಗೆ ಇಂಥದ್ದನ್ನ ತೋರಿಸಿದ್ರೆ ಅವ್ರು ಬಹುಬೇಗ ಪ್ರಭಾವಿತರಾಗ್ತಾರೆ ಅನ್ನೋ ಕನಿಷ್ಟ ಜ್ಞಾನವಾದ್ರೂ ಬೇಕಲ್ಲವೇ..? ಸಿನಿಮಾದ ಮೂಲ ಉದ್ದೇಶ ಮನರಂಜನೆ. ಎರಡನೆಯದ್ದು ವ್ಯಾಪಾರ. ಮೂರನೆಯದ್ದು ಸಂದೇಶ. ಆದ್ರೆ ಹಣಕ್ಕಾಗಿ ಏನೆಲ್ಲಾ ಆಗ್ತಿದೆ..? ಎತ್ತ ಸಾಗುತ್ತಿದೆ ಚಿತ್ರರಂಗ ಅನ್ನೋದಕ್ಕೆ ಮಾತ್ರ ಉತ್ತರ ಕಂಡುಕೊಳ್ಳಬೇಕಿದೆ. ಜನರ ಮನಸ್ಥಿತಿ ಬದಲಾಗದ ಹೊರತು ಇಂತಹ ಸಿನಿಮಾಗಳು ಮಾಡುವ ಫಿಲ್ಮ್ ಮೇಕರ್‌‌ಗಳ ಪರಿಸ್ಥಿತಿ ಕೂಡ ಬದಲಾಗದು ಅನ್ನೋದಷ್ಟೇ ಸ್ಪಷ್ಟ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಈಶ್ವರ ಖಂಡ್ರೆ (14)

ಕಾಮನ್‌ವೆಲ್ತ್‌ನಲ್ಲಿ ಜೂಡೋ ಚಿನ್ನದ ಮಳೆ: 5ನೇ ಚಿನ್ನಕ್ಕೆ ಹರ್ಷ್ ಸಿಂಗ್ ಮುದ್ರೆ

by ಕವಿತಾ
July 31, 2026 - 11:23 pm
0

ಈಶ್ವರ ಖಂಡ್ರೆ (15)

ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ವಿನಯ್ ಕುಲಕರ್ಣಿ

by ಕವಿತಾ
July 31, 2026 - 10:48 pm
0

ಈಶ್ವರ ಖಂಡ್ರೆ (13)

ಜೂಡೋದಲ್ಲಿ ಭಾರತಕ್ಕೆ ಚಿನ್ನದ ಪದಕ: ಅಸ್ಮಿತಾ ಡೇ ಐತಿಹಾಸಿಕ ಸಾಧನೆ

by ಕವಿತಾ
July 31, 2026 - 10:30 pm
0

ಈಶ್ವರ ಖಂಡ್ರೆ (12)

ಭಾರೀ ಮಳೆ: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ

by ಕವಿತಾ
July 31, 2026 - 9:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮೇಘಸ್ಫೋಟ (3)
    ಸಲ್ಮಾನ್ ಖಾನ್‌ಗೆ ಅನಾರೋಗ್ಯ? ವೈರಲ್ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್
    July 19, 2026 | 0
  • Untitled design 2026 06 21T140407.848
    ಗೌರಿ ಜೊತೆ ಆಮಿರ್ ಖಾನ್ 3ನೇ ಮದುವೆ: ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್
    June 21, 2026 | 0
  • Untitled design (68)
    ರಾಷ್ಟ್ರಪತಿ ಮುರ್ಮು ಜೀವನ ಪಯಣಕ್ಕೆ ಡಾಕ್ಯುಮೆಂಟರಿ ರೂಪ
    June 20, 2026 | 0
  • Untitled design 2026 06 12T174712.765
    ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ
    June 12, 2026 | 0
  • Untitled design 2026 05 30T185424.093
    ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಖಾನ್‌ಗೆ ಹಿಂದೂ ಕನೆಕ್ಷನ್
    May 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version