ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯಿಂದ ಇರಾನ್ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗಿದೆ. ಇರಾನ್-ಇಸ್ರೇಲ್ ನಡುವಿನ ವಾರ್ ಎಫೆಕ್ಟ್ ಉಳಿದ ಅರಬ್ ಕಂಟ್ರಿಗಳಿಗೂ ದೊಡ್ಡ ಮಟ್ಟಕ್ಕೆ ತಟ್ಟಿದೆ. ಇಂಡಿಯನ್ಸ್ಗೆ ಹಾರ್ಟ್ ಫೇವರಿಟ್ ಸ್ಪಾಟ್ ಆಗಿದ್ದ ದುಬೈನಲ್ಲಿ 100ಕ್ಕೂ ಅಧಿಕ ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಆ ಪೈಕಿ ನಮ್ಮ ಡ್ರೋಣ್ ಪ್ರತಾಪ್ ಕೂಡ ಒಬ್ಬರು.
ಡ್ರೋಣ್ ಪ್ರತಾಪ್..ಸ್ವಯಂ ಘೋಷಿತ ವಿಜ್ಞಾನಿ. ಡ್ರೋಣ್ ಸ್ಪೆಷಲಿಸ್ಟ್ ಅಂತ ಪುಂಗಿ ಬಿಡುತ್ತಲೇ ವಿಶ್ವ ಸುತ್ತಿ ಬಂದಿರೋ ಬಿಲ್ಡಪ್ ನೀಡುವುದರ ಮೂಲಕ ಜಗ್ಗೇಶ್ ಅಂತಹ ಬಿಗ್ ಸ್ಟಾರ್ನ ಕೂಡ ಮರಳು ಮಾಡಿದ್ರು. ಅದೇ ಚೀಪ್ ಪಬ್ಲಿಸಿಟಿ ಗಿಮಿಕ್ಗಳಿಂದ ನೇಮು, ಫೇಮು ಮಾಡಿದ ಪ್ರತಾಪ್, ಕೊನೆಗೆ ಬಿಗ್ಬಾಸ್ ಶೋಗೆ ಹೋಗಿ ಒಂದಷ್ಟು ಮಂದಿಗೆ ಚಿರಪರಿಚಿತರಾದರು.
ದುಬೈನಲ್ಲಿ ಡಮಾಲ್ ಡಿಮಿಲ್..ಡ್ರೋಣ್ ಪ್ರತಾಪ್ ಮಾಡಿದ್ದೇನು?
ಡ್ರೋಣ್ ಹಾರಿಸಲು ಹೋಗಿ ದುಬೈ ಏರ್ಪೋರ್ಟ್ನಲ್ಲಿ ಲಾಕ್..!!
ಆದ್ರೀಗ ಡ್ರೋಣ್ ಪ್ರತಾಪ್ ವರಸೆ ಬದಲಾಗಿದೆ. ತನ್ನನ್ನ ಆಡಿಕೊಂಡ ಜನರೇ ಭೇಷ್ ಅಂತ ಬೆನ್ನು ತಟ್ಟಬೇಕು ಅನ್ನೋ ನಿಟ್ಟಿನಲ್ಲಿ ನಿಜವಾಗಿಯೂ ಡ್ರೋಣ್ ಗಳ ವಿಚಾರದಲ್ಲಿ ಸಂಶೋಧನೆಗೆ ಇಳಿದಿದ್ದಾರೆ. ಇತ್ತೀಚೆಗೆ ಚೀನಾಗೆ ಹೋಗಿ ಒಂದಷ್ಟು ಮೀಟಿಂಗ್ಸ್, ಕಂಪೆನಿಗಳನ್ನ ಅಟೆಂಡ್ ಮಾಡಿಕೊಂಡು ಬಂದಂತಹ ಪ್ರತಾಪ್, ಇದೀಗ ದುಬೈನಲ್ಲಿದ್ದಾರೆ. ಅಲ್ಲಿ ಕೂಡ ಡೆಸರ್ಟ್ ಫಾರ್ಮಿಂಗ್ ವಿಡಿಯೋಸ್ ಸೇರಿದಂತೆ ಸಾಕಷ್ಟು ದೃಶ್ಯಗಳನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ರು ಡ್ರೋಣ್ ಪ್ರತಾಪ್.
ಆದ್ರೀಗ ಇರಾನ್-ಇಸ್ರೇಲ್ ವಾರ್ನಿಂದಾಗಿ ದುಬೈನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇಸ್ರೇಲ್-ಅಮೆರಿಕಾ ಜಂಟಿ ಕಾರ್ಯಚರಣೆಯಿಂದಾಗಿ ಖಮೇನಿಯನ್ನ ಹತ್ಯೆಗೈದಿರಬಹುದು. ಆದ್ರೆ ಅಮೆರಿಕ ಏರ್ ಬೆಸ್ಗಳಿರೋ ಎಲ್ಲಾ ಅರಬ್ ಕಂಟ್ರಿಗಳ ಮೇಲೆ ಇರಾನ್ ಮಿಸೈಲ್ ದಾಳಿ ಮಾಡ್ತಿದೆ. ಇದರಿಂದ ಏರ್ ಸ್ಪೇಸ್ ಕಂಪ್ಲೀಟ್ ಆಗಿ ಬಂದ್ ಆಗಿದ್ದು, ದುಬೈನಿಂದ ಹೊರದೇಶಗಳಿಗೆ ಹಾರುವ ವಿಮಾನಗಳಿಗೆ ಬ್ರೇಕ್ ಬಿದ್ದಿದೆ. ನಮ್ಮ ಡ್ರೋಣ್ ಪ್ರತಾಪ್ ಕೂಡ ವಾಪಸ್ ಇಂಡಿಯಾಗೆ ಬರೋಕೆ ಏರ್ಪೋರ್ಟ್ಗೆ ತೆರಳಿದ್ದಾರೆ. ಅಷ್ಟರಲ್ಲೇ ಏರ್ಸ್ಪೇಸ್ ಬಂದ್ ಆಗಿದೆ. ಸೋ..ಅಲ್ಲೇ ಬೀಡುಬಿಡುವಂತಾಗಿದೆ.
ಆತಂಕದಲ್ಲಿದ್ದ ಕನ್ನಡಿಗರಿಗೆ ಡ್ರೋಣ್ ಪ್ರತಾಪ್ ಕೊಟ್ರು ಧೈರ್ಯ
ದುಬೈ ಏರ್ ಸ್ಪೇಸ್ ಕ್ಲೋಸ್..ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ..!
ದುಬೈನಲ್ಲಿ ಬರೀ ಅಮೆರಿಕ ಏರ್ಬೇಸ್ಗಳ ಮೇಲಷ್ಟೇ ಅಲ್ಲ,. ಕಟ್ಟಡಗಳ ಮೇಲೆಯೂ ದಾಳಿ ಮಾಡಿರೋ ಇರಾನ್, ಬುರ್ಜ್ ಖಲೀಫ ಸೇರಿದಂತೆ ವಿಶ್ವದ ಗಮನ ಸೆಳೆದ ಕಟ್ಟಡಗಳ ಬಳಿ ಮಿಸೈಲ್ ದಾಳಿ ನಡೆದಿದೆ ಎನ್ನಲಾಗಿದೆ. ಆದ್ರೆ ನಮ್ಮ ಡ್ರೋಣ್ ಪ್ರತಾಪ್ ಸ್ವತಃ ಅಲ್ಲಿಂದಲೇ ವಿಡಿಯೋ ಮಾಡಿ, ಇಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಅಲ್ಲದೆ ಏರ್ಪೋರ್ಟ್ ಸೇರಿದಂತೆ ಇಂಡಿಯಾಗೆ ವಾಪಸ್ ಬರಲಾಗದೆ ಒದ್ದಾಡ್ತಿರೋ 100ಕ್ಕೂ ಅಧಿಕ ಕನ್ನಡಿಗರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಾವಿರುವ ಸ್ಥಳದಿಂದ ಏರ್ಪೋರ್ಟ್ ಹತ್ತೇ ನಿಮಿಷ. ನಿಮಗೆ ಊಟ, ತಿಂಡಿ, ವಸತಿ..ಹೀಗೆ ಏನೇ ಬೇಕು ಅಂದ್ರೂ ನಮಗೆ ಕರೆ ಮಾಡಿ. ಕೈಲಾದ ಸಹಾಯ ಮಾಡ್ತೀವಿ ಅನ್ನೋ ಭರವಸೆ ನೀಡಿದ್ದಾರೆ. ಈಗಾಗ್ಲೇ ನಿನ್ನೆ ರಾತ್ರಿ ಏರ್ಪೋರ್ಟ್ನಲ್ಲಿ ಸಿಲುಕಿದ್ದ 50ಕ್ಕೂ ಅಧಿಕ ಕನ್ನಡಿಗರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಆತಂಕದಲ್ಲಿದ್ದ ಹಿರಿಯ ವ್ಯಕ್ತಿಯೊಬ್ಬರಿಗೆ ನಿಮ್ಮ ಮೊಮ್ಮಗನಂತೆ ನಾನಿದ್ದೇನೆ ಭಯ ಬೇಡ ಎಂದಿದ್ದಾರೆ.
ಪ್ರತಾಪ್ ಮಾಡ್ತಿರೋ ಈ ಕಾರ್ಯಕ್ಕೆ ಉದ್ಯಮಿ ಹಾಗೂ ಪ್ರೇಮಂ ಪೂಜ್ಯಂ ಚಿತ್ರದ ಕಾರ್ಯಕಾರಿ ನಿರ್ಮಾಪಕ ಮಾಧವ್ ಕಿರಣ್ ಕೂಡ ಸಾಥ್ ನೀಡಿದ್ದಾರೆ. ಸೋ..ಯಾವಾಗ ದುಬೈನಿಂದ ಫ್ಲೈಟ್ಗಳು ಹಾರಾಟ ಶುರು ಮಾಡುತ್ತವೋ ಆಗ ಅಲ್ಲಿರೋ ಕನ್ನಡಿಗರು ಸೇಫ್ ಆಗಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಅದು ಆದಷ್ಟು ಬೇಗ ಆಗಲಿ ಅನ್ನೋದು ನಮ್ಮ ಆಶಯ.





