ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ , ಶರತ್ ಕೃಷ್ಣ ನಿರ್ದೇಶನದಲ್ಲಿ ಶರತ್ ಕೃಷ್ಣ ಮತ್ತು ರೇಷ್ಮಾ, ಶಿಲ್ಪಾ ಮುಖ್ಯ ಪಾತ್ರದಲ್ಲಿ ನಟಿಸಿರುವ “ದೊಡ್ಮನ್ಸ” ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಪಕ್ಕಾ ಆಕ್ಷನ್ ಪ್ಯಾಕ್ಡ್ ಸಿನಿಮಾ ಅನ್ನೋದನ್ನ ಈ ಟ್ರೇಲರ್ ತೋರಿಸಿಕೊಟ್ಟಿದೆ. ಹೀರೋ ಮಾಸ್ ಅವತಾರ, ಫೈಟ್ ಸೀನ್ ಗಳು ಟ್ರೇಲರ್ ನಲ್ಲಿಯೇ ಮಾಸ್ ಪ್ರಿಯರ ಗಮನ ಸೆಳೆದಿದೆ. ಇನ್ನು ಒಂದು ಇನ್ನೊಸೆಂಟ್ ಲವ್ ಕೂಡ ಅನಾವರಣವಾಗಿದೆ. ಸಿನಿಮಾ ಬಗ್ಗೆ ಒಂದೊಳ್ಳೆ ಭರವಸೆಯನ್ನ ಈ ಟ್ರೇಲರ್ ಮೂಡಿಸಿದೆ.
ನಟ, ನಿರ್ದೇಶಕ ಶರತ್ ಕೃಷ್ಣ ಮಾತನ್ನಾಡಿ, ದೊಡ್ಮನ್ಸ ಎಲ್ಲಿ ಆರಂಭ ಮಾಡಿ, ಇಲ್ಲಿ ನಿಂತಿದ್ದೀವಿ. ಈ ಹಿಂದೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಮಾತನ್ನ ಹೇಳ್ತಾ ಇದ್ದರು. ಈಗ ಲೋನ್ ಕೊಡೋಕೆ ಬೇಕಾದಷ್ಟು ಬ್ಯಾಂಕ್ ಗಳಿದಾವೆ. ಆದರೆ ಆಕ್ಟಿಂಗ್ ಮಾಡಬೇಕು ಅಂತ ಹೊರಟಾಗ ಎಷ್ಟೆಲ್ಲಾ ಸ್ಟ್ರಗಲ್ ಮಾಡಬೇಕು ಅನ್ನೋದು ಅನುಭವಿಸಿದ್ದೀನಿ. ನನ್ನೀಡಿ ಫ್ಯಾಮಿಲಿ ನನಗೆ ಬೆಂಬಲ ನೀಡಿದೆ. ನಂಗೆ ಇನ್ನೊಬ್ಬರು ಫ್ರೆಂಡ್ ಬ್ಯಾಕ್ ಬೋನ್ ಆಗಿ ನಿಂತಿದ್ದಾರೆ. ಅದಕ್ಕೆ ನಾನು ಋಣಿ. ಬಾಬಾ ಏನು ಶಕ್ತಿ ಕೊಟ್ಟಿದ್ದಾರೆ ಅದರ ಮೇಲೆ ಹೋಗ್ತಾ ಇದ್ದೀನಿ. ದೊಡ್ಮನ್ಸ ಒಂದು ಮಾರ್ಕ್ ಮಾಡಿನೆ ಮುಂದೆ ಸಾಗುತ್ತೆ. ಒನ್ ಮ್ಯಾನ್ ಆರ್ಮಿ ಥರ ಕೆಲಸ ಮಾಡಿದ್ದೀನಿ ಎಂದಿದ್ದಾರೆ.
ಸಿನಿಮಾದಲ್ಲಿ ಬಾಲ ರಾಜ್ವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವರು ನಟಿಸಿದ್ದಾರೆ. ಇದೇ ತಿಂಗಳ 19 ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದೆ.
ಪಕ್ಕಾ ಎಂಟರ್ಟೈನ್ಮೆಂಟ್ ‘ಗೋಲ್ಮಾಲ್ ಗ್ಯಾಂಗ್’ ಟೀಸರ್ ರಿಲೀಸ್
ಸಿನಿಮಾ ಅಂದ್ರೆನೆ ಮನರಂಜನೆ. ಆ ಮನರಂಜನೆಗಾಗಿಯೇ ಜನ ಕಾಯ್ತಾ ಇರುತ್ತಾರೆ. ನಕ್ಕು ಮನಸ್ಸನ್ನ ಕೂಲ್ ಆಗಿಸಿಕೊಳ್ಳುವಂತ ಸಿನಿಮಾವೊಂದು ಸಿದ್ಧವಾಗುತ್ತಿದೆ. ಅದರ ಹೆಸರೇ ಗೊಲ್ಮಾಲ್ ಗ್ಯಾಂಗ್. ಇದೀಗ ಒಂದೊಳ್ಳೆ ಟೀಸರ್ ರಿಲೀಸ್ ಆಗಿದ್ದು, ಸಿನಿಮಾದ ಮೇಲೆ ಭರವಸೆ ಮೂಡಿಸಿದೆ. ಶಾಂತ್ವು ಯೂನಿವರ್ಸಲ್ ಪಿಕ್ಚರ್ ಬ್ಯಾನರ್ ನಡಿ ಸತೀಶ್ ಚಂದ್ರ ಅವರು ನಿರ್ಮಾಣ ಮಾಡಿದ್ದಾರೆ.
ನಿರ್ದೇಶಕ ಶಿವಕುಮಾರ್ ಮಾತನ್ನಾಡುತ್ತಾ, ಈ ಸಿನಿಮಾಗೆ ನಿರ್ಮಾಪಕರು ಬಹಳಷ್ಟು ಹೆಲ್ಪ್ ಮಾಡಿದ್ದಾರೆ. ಪ್ರತಿಯೊಂದಕ್ಕೂ ಬೆನ್ನೆಲುಬಾಗಿ ನಿಂತವರು, ತಪ್ಪು ಮಾಡಿದಾಗ ತಿದ್ದಿದವರು. ಈ ಸಿನಿಮಾದಲ್ಲಿ ಏನಿಲ್ಲ ಅಂದ್ರು 16 ಜನ ಕಲಾವಿದರಿದ್ದಾರೆ. ಆ ಎಲ್ಲಾ ಪಾತ್ರಕ್ಕೂ ಜೀವವಿದೆ. ನಾವೆಷ್ಟೇ ಬಡಿದುಕೊಂಡರು ಕಲಾವಿದರಿಲ್ಲದೆ ಏನು ಮಾಡುವುದಕ್ಕೆ ಆಗಲ್ಲ. ಕಾರ್ತಿಕ್ ರುವಾರಿ ನನ್ನನ್ನ ಬ್ರದರ್ ಆಗಿನೇ ಟ್ರೀಟ್ ಮಾಡಿದ್ರು. ಗೋಲ್ಮಾಲ್ ಮಾಡಯವಂತ ಕ್ಯಾರೆಕ್ಟರ್ ಜಾಸ್ತಿ. ಅದಕ್ಕೆ ಆ ಟೈಟಲ್ ಇಟ್ಟಿದ್ದು ಎಂದಿದ್ದಾರೆ.
ನಿರ್ಮಾಪಕ ಕೆ ಸತೀಶ್ ಚಂದ್ರ ಎಲೆಕೆರೆ ಮಾತನ್ನಾಡಿ, ಶೂಟಿಂಗ್ ಸೆಟ್ ನಲ್ಲಿ ಕೆಲಸ ಮಾಡುವಾಗಲೂ ಎಲ್ಲರೂ ಒಟ್ಟಿಗೆ ಚರ್ಚೆ ಮಾಡ್ತಾ ಇದ್ವಿ. ಸಿನಿಮಾವನ್ನ ಗೆದ್ದೇ ಗೆಲ್ತೀವಿ ಅಂತ ಬಂದಿದ್ದೀವಿ. 26-27 ವರ್ಷದಿಂದ ಇಂಡಸ್ಟ್ರಿಗೆ ಲೇಬರ್ ಸಪ್ಲೈ ಮಾಡ್ತಾ ಇದ್ದೀವಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂತ ಬರಲಿಲ್ಲ. ನಿರುದ್ಯೋಗದ ಸಮಸ್ಯೆ ಕಂಡಾಗ ಏನಾದರೂ ಮಾಡಬೇಕು ಅಂತ ಹೊರಟಿದ್ದು. ಒಂದು ಬ್ಯಾನರ್ ಶುರು ಮಾಡಿ, ಕೆಲಸ ಕೊಡಬೇಕು ಅಂತ ಆರಂಭಿಸಿದೆವು ಎಂದರು.
ನಾಯಕ ನಟ ಕಾರ್ತಿಕ್ ಮಾತನ್ನಾಡಿ, ನಿರ್ದೇಶಕ ಶಿವು ಸರ್ ಕಡೆಯಿಂದ ನಿರ್ಮಾಪಕರ ಪರಿಚಯ ಆಯ್ತು. ಅವರಿಗೆ ಎಳೆ ಮಕ್ಕಳಿಗೆ ಇರುವ ಸ್ಪಿರಿಟ್ ಇದೆ. ಹೀರೋ ನಾನು ಅಂದಾಗ ಕೆಲವು ಹೀರೋಯಿನ್ ಗಳು ಒಪ್ಪಲಿಲ್ಲ. ಶಾರ್ಟ್ ಫಿಲ್ಮ್ ಅವರ ಜೊತೆಗೆ ಮಾಡಲ್ಲ ಅಂದವರೇ ಹೆಚ್ಚು. ಆದರೆ ನಿರ್ಮಾಪಕರು ಹೀರೋಯಿನ್ ಇಲ್ಲ ಅಂದ್ರು ಕಾರ್ತಿಕ್ ನ ಚೇಂಜ್ ಮಾಡಲ್ಲ ಅಂದ್ರು. ಆ ಮಾತು ತುಂಬಾ ಎಮೋಷನಲ್ ಆಗ್ಬಿಟ್ಟೆ. ನಾನೇ ನನ್ನ ಹೀರೋ ಅಂದ್ಕೊಂಡಿರ್ಲಿಲ್ಲ. ಆದರೆ ನಮ್ಮ ಡೈರೆಕ್ಟರ್ ಅಷ್ಟು ಸಲ ನನ್ನನ್ನ ಹೀರೋ ಅಂದಿದ್ದರು. ಆಡಿಯನ್ಸ್ ಮುಂದೆ ಬಂದಾಗ ಸಿನಿಮಾ ವರ್ಕ್ ಆಗುತ್ತೆ ಎಂದಿದ್ದಾರೆ.
ನಾಯಕ ನಟಿ ಆರಾಧನಾ ಭಟ್ ಮಾತನ್ನಾಡಿ, ನಂಗೆ ಯಾರಾದ್ರೂ ಕೇಳಿದ್ರೆ ಹೀರೋಯಿನ್ ಆಗ್ಬೇಕು ಅಂತಿದ್ದೆ. ಇವತ್ತು ಗೋಲ್ಮಾಲ್ ಗ್ಯಾಂಗ್ ಸಿನಿಮಾ ಮೂಲಕ ಅದಾಗಿದ್ದೀನಿ ಅಂದ್ರೆ ನಮ್ಮ ನಿರ್ಮಾಪಕರೇ ಕಾರಣ. ನಿರ್ದೇಶಕರಾದ ಶಿವು ಸರ್ ಗೂ ಥ್ಯಾಂಕ್ಸ್. ಇಲ್ಲಿ ಸುಮಾರು ಗ್ಯಾಂಗ್ ಇದೆ. ಅದರಲ್ಲಿ ನಾನು ಯಾವ ಗ್ಯಾಂಗ್ ಗೆ ಸೇರ್ತೀನಿ ಅನ್ನೋದೆ ಟ್ವಿಸ್ಟ್. ನಿಮ್ಮ ಅಪ್ಪ ಆಗಿ ಮಂಡ್ಯ ರಮೇಶ್ ಸರ್ ಮಾಡ್ತಾ ಇದ್ದಾರೆ ಅಂದಾಗ ಭಯ ಆಗಿತ್ತು. ಆದರೆ ಅವರು ಅದನ್ನೆಲ್ಲ ಅಚ್ಚುಕಟ್ಟಾಗಿ ಹೇಳಿಕೊಟ್ಟಿದ್ದಾರೆ ಎಂದಿದ್ದಾರೆ.





