ರಣ್ವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಿಕ್ಕಾಪಟ್ಟೆ ಧೂಳೆಬ್ಬಿಸ್ತಿದೆ. ಯೆಸ್.. ದಿನಕ್ಕೆ 50 ಕೋಟಿ ಗಳಿಸ್ತಿರೋ ಈ ಸಿನಿಮಾ ವಿಶ್ವ ಸಿನಿದುನಿಯಾದ ಹುಬ್ಬೇರಿಸಿದೆ. ಇಷ್ಟಕ್ಕೂ ಅಂಥದ್ದೇನಿದೆ ಈ ಸಿನಿಮಾದಲ್ಲಿ..? ಇಂಡಿಯಾ-ಪಾಕ್ ಜಿದ್ದಾಜಿದ್ದಿನ ನೈಜ ಘಟನೆ ಆಧಾರಿತ ಚಿತ್ರದಲ್ಲಿ ಯಾರ ರೋಲ್ ಯಾರು ಮಾಡಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ.
ಡಿಸೆಂಬರ್ 5ರಂದು ತೆರೆಕಂಡ ಬಾಲಿವುಡ್ನ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಂಚಲನ ಮೂಡಿಸಿದೆ. ತೆರೆಕಂಡ ಹನ್ನೊಂದೇ ದಿನದಲ್ಲಿ ಬರೋಬ್ಬರಿ 600 ಕೋಟಿ ಪೈಸಾ ವಸೂಲ್ ಮಾಡಿರೋ ಈ ಚಿತ್ರ, ಪ್ರತೀ ದಿನ ಕನಿಷ್ಠ 50 ಕೋಟಿ ಲೂಟಿ ಮಾಡ್ತಿದೆ. ಇಷ್ಟಕ್ಕೂ ಅಂಥದ್ದೇನಿದೆ ಈ ಚಿತ್ರದಲ್ಲಿ ಅಂತ ಒಳಹೊಕ್ಕಿ ನೋಡಿದ್ರೆ ಇದೊಂದು ಪೇಟ್ರಿಯಾಟಿಕ್ ಮೂವಿ. ಅದ್ರಲ್ಲೂ ಇಂಡೋ-ಪಾಕ್ ಜಿದ್ದಾಜಿದ್ದಿನ ಸ್ಪೈ ಥ್ರಿಲ್ಲರ್ ಎಂಟರ್ಟೈನರ್.
‘ಧುರಂಧರ್’ ಧಮಾಕ.. 11 ದಿನಕ್ಕೆ 600 ಕೋಟಿ ಲೂಟಿ..!
ದಿನಕ್ಕೆ 50 ಕೋಟಿ ಕೊಳ್ಳೆ ಹೊಡೆಯುತ್ತಿರೋ ರಣ್ವೀರ್
ಸುಮಾರು 4 ಗಂಟೆಗಳ ಕಾಲ ಅಂದ್ರೆ 214 ನಿಮಿಷಗಳಷ್ಟು ರನ್ಟೈಮ್ ಇರೋ ಧುರಂಧರ್ ಸಿನಿಮಾಗೆ ರಿಲೀಸ್ಗೂ ಮೊದಲೇ ಆಕ್ಷೇಪಗಳು ವ್ಯಕ್ತವಾಗಿದ್ದವು. ಹಿಂಸಾತ್ಮಕ ದೃಶ್ಯಗಳು ಹೆಚ್ಚಾಗಿದ್ದು, ಅವುಗಳಿಗೆ ಕಡಿವಾಣ ಹಾಕಬೇಕು ಅಥ್ವಾ ಡಿಲೀಟ್ ಮಾಡಬೇಕು ಅನ್ನೋ ಅಲೆ ಎದ್ದಿತ್ತು. ಆದ್ರೆ ಎಲ್ಲವನ್ನ ನಿವಾರಿಸಿಕೊಂಡು, ಸಿನಿಮಾ ಕೊನೆಗೂ ತೆರೆಕಂಡಿದೆ. ಈ ಹಿಂದೆ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಆದಿತ್ಯ ಧಾರ್ ಅವರೇ ಧುರಂಧರ್ ಸಿನಿಮಾನ ನಿರ್ದೇಶಿಸಿರೋದು ವಿಶೇಷ.
ಈ ಹಿಂದೆ ಆಲಿಯಾ ಭಟ್ ನಟಿಸಿದ್ದ ರಾಝಿ ಚಿತ್ರದ ಮುಂದುವರೆದ ಭಾಗದಂತಿರೋ ಧುರಂಧರ್, ಒಂದಷ್ಟು ವಿವಾದಗಳ ನಡುವೆಯೂ ವಿಜಯೋತ್ಸವ ಆಚರಿಸ್ತಿದೆ. ಇಡೀ ವಿಶ್ವ ಸಿನಿದುನಿಯಾ ಬೆರಗುಗಣ್ಣಿನಿಂದ ಬಾಲಿವುಡ್ನತ್ತ ತಿರುಗಿ ನೋಡುವಂತೆ ಮಾಡಿದೆ. 1999ರ ಡಿಸೆಂಬರ್ನಲ್ಲಿ ನಮ್ಮ ಇಂಡಿಯನ್ ಸ್ಪೈ ಏಜೆಂಟ್ ಜಸ್ಕಿರತ್ ಸಿಂಗ್, ಪಾಕಿಸ್ತಾನಕ್ಕೆ ತೆರಳಿ, ಅಲ್ಲಿ ಗೂಢಚರ್ಯೆ ನಡೆಸೋ ಕಥೆ ಇದಾಗಿದೆ. ಆ ಸ್ಪೈ ಏಜೆಂಟ್ ಪಾತ್ರದಲ್ಲಿ ನಮ್ಮ ಕರ್ನಾಟಕದ ಅಳಿಯ ರಣ್ವೀರ್ ಸಿಂಗ್ ಮಿಂಚಿರೋದು ಇಂಟರೆಸ್ಟಿಂಗ್.
ಸ್ಪೈ ಏಜೆಂಟ್ ಜಸ್ಕಿರತ್ ಸಿಂಗ್ ಆಗಿ ರಣ್ವೀರ್ ರಾಕಿಂಗ್..!
ಪಾಕ್ ಗ್ಯಾಂಗ್ಸ್ಟರ್ ರೆಹಮಾನ್.. 13 ವರ್ಷಕ್ಕೆ ಕ್ರೈಂ ಡೈರಿ..!
ರಾಝಿ ಮೀರಿಸೋ ಸೀಕ್ರೆಟ್ ಆಪರೇಷನ್..
ವಿವಾದಗಳ ನಡುವೆ ವಿಜಯೋತ್ಸವ
ಇದು ಅಜಿತ್ ದೋವಲ್ ನಡೆಸಿದ ಸೀಕ್ರೆಟ್ ಆಪರೇಷನ್ ಆಗಿದ್ದು, ದೋವಲ್ ಪಾತ್ರದಲ್ಲಿ ಮಾಧವನ್ ಕಾಣಸಿಗುತ್ತಾರೆ. ಐಎಸ್ಐ ಮೇಜರ್ ಇಕ್ಬಾಲ್ ಪಾತ್ರಕ್ಕೆ ಅರ್ಜುನ್ ರಾಮ್ಪಾಲ್ ಜೀವ ತುಂಬಿದ್ದು, ಪಾಕ್ನಲ್ಲಿರೋ ಲ್ಯಾರಿ ಟಾಸ್ಕ್ ಫೋರ್ಸ್ನ ಎಸ್.ಪಿ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಇನ್ನು ಆಪರೇಷನ್ ಧುರಂಧರ್ಗೆ ಕಾರಣೀಭೂತವಾದ ವ್ಯಕ್ತಿ ಪಾಕ್ ಗ್ಯಾಂಗ್ಸ್ಟರ್ ರೆಹಮಾನ್ ಡಕಾಯಿತ್. ಆ ಪಾತ್ರದಲ್ಲಿ ಅಕ್ಷಯ್ ಖನ್ನಾ ಭಯಂಕರ ಹಾಗೂ ಭೀಭತ್ಸವಾಗಿ ಅಭಿನಯಿಸಿದ್ದಾರೆ.
13ನೇ ವಯಸ್ಸಿಗೆ ಪಟಾಕಿ ಸಿಡಿಸೋದನ್ನ ಪ್ರಶ್ನಿಸಿದವರನ್ನ ಚಾಕಿನಿಂದ ಇರಿಯೋ ಮೂಲಕ ಕ್ರೈಂ ಲೋಕಕ್ಕೆ ಎಂಟ್ರಿ ಕೊಡೋ ರೆಹಮಾನ್ ಡಕಾಯಿತ್, 15ನೇ ವಯಸ್ಸಿಗೆ ಹೆತ್ತ ತಾಯಿಯನ್ನೇ ಕೊಲ್ಲುತ್ತಾನೆ. 34ನೇ ವಯಸ್ಸಿಗೆ ಆತ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗ್ತಾನೆ. ಆದ್ರೆ ಅದಕ್ಕೂ ಮುನ್ನ ಮುಂಬೈ ಅಟ್ಯಾಕ್ ಸೇರಿದಂತೆ ಇಂಡಿಯಾದ ಪ್ರಮುಖ ಬಾಂಬ್ ಬ್ಲಾಸ್ಟ್ ಪ್ರಕರಣಗಳ ರೂವಾರಿ ಇದೇ ರೆಹಮಾನ್ ಡಕಾಯಿತ್. ಹಾಗಾಗಿ ಟಾಸ್ಕ್ ಫೋರ್ಸ್ ಜೊತೆಗೂಡಿ ಆಪರೇಷನ್ ಧುರಂಧರ್ ನಡೆಸುತ್ತೆ ಇಂಡಿಯಾ.
ಸಾರಾ ಅರ್ಜುನ್ ನಾಯಕನಟಿಯಾಗಿ ಬಣ್ಣ ಹಚ್ಚಿದ್ದು, ರಣ್ವೀರ್ ಸಿಂಗ್-ಸಾರಾ ನಡುವಿನ ಲವ್ವಿಡವ್ವಿ ನೋಡುಗರಿಗೆ ಮಜಾ ಕೊಡಲಿದೆ. ಗೂಢಚರ್ಯೆ ನಡೆಸೋಕೆ ಅಂತಲೇ ಪಾಕ್ಗೆ ತೆರಳಿ, ಅಲ್ಲಿ ಸಾಷಕ್ಟು ದಿನ ಹೋಟೆಲ್ನಲ್ಲಿ ವೆಯ್ಟರ್ ಆಗಿ ಕೆಲಸ ಮಾಡಿಕೊಂಡು, ನಂತ್ರ ಗ್ಯಾಂಗ್ಸ್ಟರ್ ಗ್ರೂಪ್ಗೆ ಸೇರಿಕೊಂಡು, ವ್ಯೂಹ ಹೆಣೆಯುವ ರಣ್ವೀರ್ ಸಿಂಗ್ ಚಾಕಚಕ್ಯತೆ ಸೂಪರ್ ಅನಿಸಲಿದೆ. ರಣ್ವೀರ್ ಕೂಡ ಸಿಕ್ಕಾಪಟ್ಟೆ ಫೆರೋಷಿಯಸ್ ಆಗಿ ಕಾಣಸಿಗಲಿದ್ದು, ಕೆಲ ದೃಶ್ಯಗಳು ವಿಚಲಿತಗೊಳಿಸುತ್ತವೆ.





