ಪರಪ್ಪನ ಅಗ್ರಹಾರದಲ್ಲಿ ಪರದಾಡ್ತಿರೋ ನಟ ದರ್ಶನ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸ್ತಿದೆ. ಸಿಕ್ಕಾಪಟ್ಟೆ ತೆಳ್ಳಗಾಗಿರೋ ಡಿಬಾಸ್ ಹೊಸ ಅವತಾರ ಕಂಡ್ರೆ, ಕರುಳು ಕಿವುಚಿದಂತಾಗ್ತಿದೆ. ಇಷ್ಟಕ್ಕೂ ಎಷ್ಟು ಕೆಹಿ ವೆಯ್ಟ್ ಲಾಸ್ ಆಗಿದ್ದಾರೆ..? ಜೈಲಲ್ಲಿ ಊಟ, ನೀರಿನ ವ್ಯವಸ್ಥೆ ಹೇಗಿದೆ..? ಈ ಫೋಟೋ ಅಸಲಿಯತ್ತೇನು..? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.
- ನೀವು ನೋಡಿದ್ದು ಸತ್ಯ.. ಡಿ ಬಾಸ್ 20KG ವೆಯ್ಟ್ ಲಾಸ್
- ಪ್ರೋಟೀನ್ಸ್ ಇಲ್ಲ.. ವಿಟಮಿನ್ಸ್ ಇಲ್ಲ.. ಬಾಡಿ ಅಡ್ಜೆಸ್ಟ್ ಆಗ್ತಿಲ್ಲ
- ಬೋರ್ವೆಲ್, ಶುದ್ಧೀಕರಿಸಿದ ನೀರು.. ಕೂದಲೆಲ್ಲಾ ಖಾಲಿ.!
- ಪರಪ್ಪನ ಅಗ್ರಹಾರದಲ್ಲಿ ದಾಸ ದರ್ಶನ್ ಪರದಾಟ ರೋಚಕ
ಡಿಬಾಸ್ ದರ್ಶನ್ ಅವರನ್ನ ಆರಡಿ ಕಟೌಟ್ ಅಂತ ಸುಮ್ ಸುಮ್ನೆ ಕರೆಯುತ್ತಿರಲಿಲ್ಲ. ಮುಗಿಲೆತ್ತರಕ್ಕೆ ಕಾಣುವ ಅವರ ಹೈಟು, ಅದಕ್ಕೆ ತಕ್ಕನಾಗಿ ಜಿಮ್ನಲ್ಲಿ ದೇಹವನ್ನ ದಂಡಿಸಿ, ಕಟ್ಟು ಮಸ್ತಾದ ಮೈಕಟ್ಟು ಇಟ್ಟುಕೊಂಡಿದ್ರು ದಚ್ಚು. ಐರಾವತ ಚಿತ್ರದಲ್ಲಿನ ಆ ಜಿಮ್ ಸೀನ್.. ಕ್ರಾಂತಿ, ಕಾಟೇರಗಾಗಿ ಅವರು ಜಿಮ್ನಲ್ಲಿ ದೇಹವನ್ನ ದಂಡಿಸುತ್ತಿದ್ದ ಪರಿ ನೋಡಿದ್ರೆ ಓ ಮೈ ಗಾಡ್ ಅನಿಸುತ್ತೆ. ಅಕ್ಷರಶಃ ಮಾಚೋ ಮ್ಯಾನ್ ಆಗಿದ್ದ ದರ್ಶನ್, ಹೀರೋ ಮೆಟೀರಿಯಲ್ ಅಲ್ಲ.. 100% ಹೀರೋನೇ.
ಕೈಗೊಬ್ರು, ಕಾಲಿಗೊಬ್ರು ಆಳುಗಳು.. ಮುಖದಲ್ಲಿ ಬೆವರು ಬಂದ್ರೆ ಅದನ್ನ ಒರೆಸೋಕ್ಕೆ ಇರ್ತಿದ್ದ ಜನ.. ಮೈಕೈಗೆ ಚೂರು ಏಟಾದ್ರೂ ದಂಡು ದಂಡಾಗಿ ಆಸ್ಪತ್ರೆಗೆ ಜೊತೆಗೇ ಹೋಗ್ತಿದ್ದವರು.. ವೇದಿಕೆ ಹತ್ತಿದ್ರೆ ಸಾಕು, ಸ್ಟೇಡಿಯಂ ಕಿತ್ತು ಹೋಗುವ ರೇಂಜ್ಗೆ ಮುಗಿಲು ಮುಟ್ಟುತ್ತಿದ್ದ ಉದ್ಘಾರಗಳು.. ಒಂದು ಲಕ್ಷ ಜನರ ಮಧ್ಯೆ ಇದ್ದರೂ ಥಟ್ ಅಂತ ಕಂಡುಹಿಡಿಯಬಹುದಾದ ಮೈಕಟ್ಟು.. ಎದ್ದುಕಾಣುವ ಆ ಆರಡಿ ಹೀರೋ ರೂಪ.. ವರದಂತಿದ್ದ ವಾಕಿಂಗ್ ಸ್ಟೈಲ್.. ದೇವತೆಯಂತಹ ಹೆಂಡ್ತಿ.. ಮುದ್ದಾದ ಸಂಸಾರ.. ಪಡ್ಕೊಂಡ್ ಬಂದಂತೆ ಇದ್ದ ಅಮ್ಮ-ತಮ್ಮ.. ಬೇಕಾಗಿದ್ದು, ಬಯಸಿದ್ದು ಕಾಲಡಿ ಬೀಳುವಂತೆ ಮಾಡ್ತಿದ್ದ ಯಶಸ್ಸು ಎಲ್ಲವೂ ಇತ್ತು.
ಆದ್ರೆ ಈ ಒಂದೇ ಒಂದು ಫೋಟೋ ನೋಡ್ತಿದ್ರೆ ಮೂಡುವ ಪ್ರಶ್ನೆ ಇಷ್ಟೇ.. ಯಶಸ್ಸು, ಹಣ, ಆಸ್ತಿ, ಅಂತಸ್ತು, ಆಸೆ.. ಇವುಗಳೇ ದುಃಖಕ್ಕೆ ಮೂಲ ಆಗುತ್ತವಾ..? ಮನುಷ್ಯನ ನಿಜವಾದ ಶತ್ರುಗಳು ಇವೇನಾ..? ಅಥವಾ ಅವುಗಳನ್ನ ನಿಭಾಯಿಸಲು ಬಾರದಿದ್ದವರು ಕಾಲಚಕ್ರದ ಮುಂದೆ ಸೋತು ಹೀಗೆ ಶರಣಾಗುತ್ತಾರಾ..? ಅನಿಸದೆ ಇರದು. ಹೌದು.. ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲು ಪಾಲಾಗಿರೋ ದರ್ಶನ್ ಸದ್ಯದ ಪರಿಸ್ಥಿತಿ ಹೀಗಿದೆ ಎನ್ನಲಾಗ್ತಿದೆ. ಸಿಕ್ಕಾಪಟ್ಟೆ ವೆಯ್ಟ್ ಲಾಸ್ ಆಗಿರೋ ದರ್ಶನ್, ಹೆಚ್ಚೂ ಕಮ್ಮಿ 20 ಕೆಜಿಯಷ್ಟು ದೇಹದ ತೂಕ ಇಳಿದು ಬಿಟ್ಟಿದೆಯಂತೆ.
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಅದರಲ್ಲಿ ದಾಸ ದರ್ಶನ್ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಮುಖದಲ್ಲಿ ಕಾಂತಿ ಕೂಡ ಇಲ್ಲ. ಹೇಗಿದ್ದವ್ರು ಹೇಗೆ ಆಗಿದ್ದಾರೆ ಅಂತ ಊಹಿಸೋಕೂ ಆಗ್ತಿಲ್ಲ. ಆದ್ರೆ ಅದು ನಿಜವಂತೆ. ಸದ್ಯ ದಾಸನ ಸ್ಥಿತಿ ಹೀಗೆಯೇ ಇದೆ. ಒಬ್ಬ ಸ್ಟಾರ್ 20 ಕೆಜಿ ಕಮ್ಮಿ ಆದ್ರೆ ನೋಡೋಕೆ ಹೇಗಾಗಬೇಡ ಅಲ್ಲವೇ..? ಇದಂತೂ ಅವ್ರ ಡೈಹಾರ್ಡ್ ಫ್ಯಾನ್ಸ್ಗೆ, ಕುಟುಂಬಸ್ಥರಿಗೆ ಡೈಜೆಸ್ಟ್ ಮಾಡ್ಕೊಳಕ್ಕೆ ಆಗ್ತಿಲ್ಲ.
- ಜೈಲಿಗೆ ಪ್ರತೀ ದಿನ ಒಂದೂವರೆ ಕೋಟಿ ಲೀಟರ್ ನೀರು..?
- 12 ಬೋರ್ವೆಲ್ಗಳಲ್ಲಿ 8 ಆ್ಯಕ್ಟೀವ್.. 4 ಬತ್ತಿ ಹೋಗಿವೆ.!
ದರ್ಶನ್ ವೆಯ್ಟ್ ಲಾಸ್ ಆಗಿ ಸಣ್ಣ ಮಾತ್ರ ಆಗಿಲ್ಲ. ತಲೆಯ ಕೂದಲು ಕೂಡ ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ಬೋರ್ವೆಲ್ ನೀರು ಹಾಗೂ ಶುದ್ಧೀಕರಿಸಿದ ನೀರು. ಹೌದು.. ರಿಫೈನ್ಡ್ ವಾಟರ್ ಬಳಸೋದ್ರಿಂದ ಕೂದಲು ಉದುರುವಿಕೆ ಆಗಲಿದೆ ಎನ್ನಲಾಗ್ತಿದೆ. ಯಾಕಂದ್ರೆ ಪರಪ್ಪನ ಅಗ್ರಹಾರದಲ್ಲಿ ಸುಮಾರು 12 ಬೋರ್ವೆಲ್ಗಳಿದ್ದವಂತೆ. ಆ ಪೈಕಿ ಸದ್ಯ ನೀರು ಬರ್ತಿರೋದು 8 ಬೋರ್ವೆಲ್ಗಳಲ್ಲಿ ಮಾತ್ರ. ಪ್ರತೀ ದಿನ ಜೈಲಿನಲ್ಲಿ ಬಳಕೆ ಆಗ್ತಿರೋ ನೀರು ಒಂದೂವರೆ ಕೋಟಿ ಲೀಟರ್ ಅಂತೆ. ಹೀಗಾಗಿ ನೀರಿನ ಅಭಾವದಿಂದಾಗಿ ಶುದ್ಧೀಕರಿಸಿದ ರಿಫೈನ್ಡ್ ವಾಟರ್ ಬಳಸಲಾಗ್ತಿದೆ ಅನ್ನೋ ಮಾತುಗಳು ಕೂಡ ಕೇಳಿಬರ್ತಿವೆ.
ಮನೆಯಲ್ಲಿ ಯುಎಫ್, ಆರ್ಓ ಪ್ಯೂರಿಫೈಯ್ಡ್ ವಾಟರ್ ಕುಡಿಯುತ್ತಿದ್ದ ನಟ ದರ್ಶನ್ಗೆ ಈ ಶುದ್ಧೀಕರಿಸಿದ ನೀರು ದೇಹಕ್ಕೆ ಒಗ್ಗುತ್ತಿಲ್ಲ. ಕೂದಲಿಗೂ ಆ ನೀರು ಆಗಿಬಂದಂತೆ ಕಾಣಿಸ್ತಿಲ್ಲ. ಹಾಗಾಗಿಯೇ ದಿನದಿಂದ ದಿನಕ್ಕೆ ದರ್ಶನ್ ತಲೆ ಕೂದಲು ಕಮ್ಮಿ ಆಗ್ತಿವೆ ಎನ್ನಲಾಗ್ತಿದೆ.
- ಮನೆಯೂಟ ಇಲ್ಲ.. ಜೈಲಿನ ಸಪ್ಪೆ ಊಟ ಒಗ್ಗುತ್ತಿಲ್ಲ..!!
- ಸ್ಟಿರಾಯ್ಡ್ ತಗೊಂಡು ವರ್ಕೌಟ್ ಮಾಡ್ತಿದ್ರಾ ದಾಸ..?
ಮನೆಯಲ್ಲಿ ಮಟನ್, ಚಿಕನ್, ಸೊಪ್ಪು, ತರಕಾರಿ, ಹಾಲು, ಮೊಸರು, ಮೊಟ್ಟೆ, ಡ್ರೈ ಫ್ರೂಟ್ಸ್ ಸೇರಿದಂತೆ ಹೈ ಪ್ರೋಟೀನ್ ಹಾಗೂ ವಿಟಮಿನ್ಸ್ ನ ತಗೊಳ್ತಿದ್ದ ದರ್ಶನ್ಗೆ ದಿಢೀರ್ ಅಂತ ಅವೆಲ್ಲಕ್ಕೂ ಕಡಿವಾಣ ಬೀಳುತ್ತೆ. ಆಗ ದೇಹ ಸಾಮಾನ್ಯವಾಗಿ ಜೈಲಿನ ಆ ಸಪ್ಪೆ ಊಟಕ್ಕೆ ಒಗ್ಗಿಕೊಳ್ಳುವುದಿಲ್ಲ. ಜೈಲಿನ ಆ ವೆಜ್ ಊಟ, ದರ್ಶನ್ ಬಾಡಿಗೆ ಅಡ್ಜಸ್ಟ್ ಆಗ್ತಿಲ್ಲ. ಹಾಗಾಗಿ ಸಹಜವಾಗಿಯೇ ದಾಸನ ದೇಹದ ತೂಕ ಇಳಿಮುಖವಾಗಿದೆಯಂತೆ.
ಮತ್ತೊಂದು ವಿಷಯ ಏನಪ್ಪಾಂದ್ರೆ ನಟ ದರ್ಶನ್ ಮಸಲ್ಸ್ ಬರಿಸಿಕೊಳ್ಳೋಕೆ ಆಗ ಜಿಮ್ ಮಾಡುವ ವೇಳೆ ಸ್ಟಿರಾಯ್ಡ್ಗಳನ್ನ ತೆಗೆದುಕೊಳ್ತಿದ್ರು ಎನ್ನಲಾಗ್ತಿದೆ. ಅದರ ಎಫೆಕ್ಟ್ ಇದೀಗ ಸಿಕ್ಕಾಪಟ್ಟೆ ಸಣ್ಣ ಆಗಿದ್ದಾರೆ ಅಂತಲೂ ಹೇಳಲಾಗ್ತಿದೆ. ಒಟ್ಟಾರೆ ವಿಟಮಿನ್ಸ್, ಪ್ರೊಟೀನ್ ಇಲ್ಲದೆ ಪರಪ್ಪನ ಅಗ್ರಹಾರದಲ್ಲಿ ದಾಸನ ಪರದಾಟ ಯಾರಿಗೂ ಹೇಳತೀರದು. ಅದ್ಯಾವಾಗ ಇದರಿಂದ ಮುಕ್ತರಾಗ್ತಾರೋ ಗೊತ್ತಿಲ್ಲ. ಸದ್ಯ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನೋಡಿದ್ರೆ ಇನ್ನೂ ಒಂದು ವರ್ಷ ದರ್ಶನ್ಗೆ ಬೇಲ್ ಸಿಗಲ್ಲ ಅನ್ನೋದು ಮಾತ್ರ ಸ್ಪಷ್ಟವಾಗಿದೆ. ಈ ಸ್ಥಿತಿಯಲ್ಲಿ ದರ್ಶನ್ನ ನೋಡಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅನ್ನೋದು ಕೂಡ ಸತ್ಯದ ಮಾತು. ಸದ್ಯ ಎಲ್ಲೆಡೆ ಅವರ ಮೇಲೆ ಅನುಕಂಪದ ಅಲೆ ಎದ್ದಿರೋದು ಸುಳ್ಳಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





