ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಪ್ರೇಮಲೋಕದ ಮ್ಯಾಜಿಕಲ್ ಹಿಸ್ಟರಿ ರಿಪೀಟ್ ಆಗೋ ಕಾಲ ಹತ್ತಿರ ಬಂದಿದೆ. 80-90ರ ದಶಕದಲ್ಲಿ ಕನ್ನಡ ಸಿನಿ ಲೋಕವನ್ನ ತಮ್ಮದೇ ಸ್ಟೈಲ್ನಲ್ಲಿ ಆಳಿದ ಆ ‘ಮ್ಯೂಸಿಕಲ್ ಮೊಘಲ್ಸ್’ ಒಂದಾಗ್ತಿದ್ದಾರೆ. ಹೌದು.. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖ ಜೋಡಿಯ 40 ವರ್ಷಗಳ ಆ ಅಪೂರ್ವ ಮೈತ್ರಿಯನ್ನ ಕೊಂಡಾಡೋಕೆ ವೇದಿಕೆ ಸಜ್ಜಾಗಿದೆ. ಮೇ 30ಕ್ಕೆ ನಡೆಯಲಿರೋ ಈ ಮೆಗಾ ರೀ-ಯೂನಿಯನ್ ಇವೆಂಟ್ ‘ಕ್ರೇಜಿ ಬ್ರಹ್ಮ’ದ ಹೈಲೈಟ್ಸ್ ಇಲ್ಲಿದೆ..
- ರವಿಮಾಮ ಬರ್ತ್ಡೇಗೆ ಕ್ರೇಜಿ-ಬ್ರಹ್ಮ ಮ್ಯೂಸಿಕಲ್ ನೈಟ್
- 6 ಗಂಟೆ ಲೈವ್ ಮ್ಯೂಸಿಕ್ ಫೆಸ್ಟ್.. ಇದು ಹೊಸ ಇತಿಹಾಸ
- ರವಿ ಬರ್ತ್ ಡೇಗೆ ಮಳೆ ಬರುತ್ತೆ.. ಹಂಸಲೇಖ ಕ್ರೇಜಿ ಭವಿಷ್ಯ
- ನಮ್ಮ ಕಾಂಬೋ ಮುಟ್ಟಕ್ಕೆ ಆಗಲ್ಲ, ಮುರಿಯೋಕೂ ಆಗಲ್ಲ
- ಹುಟ್ಟುಹಬ್ಬಕ್ಕೆ ಫ್ಯಾನ್ಸ್ಗೆ ಕ್ರೇಜಿಸ್ಟಾರ್ ಪ್ರೀತಿಯ ಆಮಂತ್ರಣ..!
ಕನ್ನಡ ಚಿತ್ರರಂಗದಲ್ಲಿ ಒಂದು ಕಾಲಕ್ಕೆ ರವಿಚಂದ್ರನ್ ಡೈರೆಕ್ಷನ್ ಹಾಗೂ ಹಂಸಲೇಖ ಮ್ಯೂಸಿಕ್ ಅಂದ್ರೆ ಥಿಯೇಟರ್ಗಳ ಮುಂದೆ ಹೌಸ್ಫುಲ್ ಬೋರ್ಡ್ ಗ್ಯಾರಂಟಿ ಬಿದ್ದೇ ಬೀಳ್ತಿತ್ತು. ಪ್ರೇಮಲೋಕ, ರಣಧೀರ, ಯುಗಪುರುಷ ಸಿನಿಮಾಗಳ ಎವರ್ಗ್ರೀನ್ ಹಾಡುಗಳು ಇಂದಿಗೂ ಪ್ರತಿಯೊಬ್ಬರ ಪ್ಲೇ ಲಿಸ್ಟ್ನಲ್ಲಿವೆ. ಇದೀಗ ಅದೇ 40 ವರ್ಷಗಳ ಹಳೇ ಮ್ಯಾಜಿಕ್ ಮತ್ತು ಅದ್ಭುತ ಸಂಗೀತ ಸಂಯೋಜನೆಯನ್ನು ಕೊಂಡಾಡಲು ಭವ್ಯವಾದ ಮೆಗಾ ರೀ-ಯೂನಿಯನ್ ವೇದಿಕೆ ಸಜ್ಜಾಗಿದೆ.
ಯೆಸ್.. ಇದೇ ಮೇ 30ರಂದು ಕ್ರೇಜಿಸ್ಟಾರ್ ಹುಟ್ಟುಹಬ್ಬದ ಸವಿನೆನಪಿನಲ್ಲಿ, ಸಂಜೆ 6 ರಿಂದ ರಾತ್ರಿ 12 ಗಂಟೆ ವರೆಗೆ ಕೆಂಗೇರಿಯ ಜೆಕೆ ಗ್ರ್ಯಾಂಡ್ ಅರೇನಾದಲ್ಲಿ 6 ಗಂಟೆಗಳ ಕಾಲ Where Music Meets Magic ಎಂಬ ಟ್ಯಾಗ್ಲೈನ್ನೊಂದಿಗೆ ಈ ಮ್ಯೂಸಿಕ್ ಕಾನ್ಸರ್ಟ್ ನಡೆಯಲಿದೆ. ದಕ್ಷಿಣ ಭಾರತದ ಸ್ಟಾರ್ ನಟ-ನಟಿಯರು ಹಾಗೂ ರವಿಚಂದ್ರನ್ ಜೊತೆ ನಟಿಸಿದ 25ಕ್ಕೂ ಹೆಚ್ಚು ನಾಯಕಿಯರು ಈ ಅದ್ಧೂರಿ ಇವೆಂಟ್ಗೆ ಸಾಕ್ಷಿಯಾಗಲಿದ್ದಾರೆ.
ಈ ಮೆಗಾ ಇವೆಂಟ್ ಬಗ್ಗೆ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾದಬ್ರಹ್ಮ ಹಂಸಲೇಖ, ಸಖತ್ ಇಂಟರೆಸ್ಟಿಂಗ್ ವಿಷಯಗಳನ್ನ ಹಂಚಿಕೊಂಡಿದ್ದಾರೆ. ಇದು ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತಹ ವಿದ್ಯಮಾನ. ಈಗಾಗಲೇ ರಿಲೀಸ್ ಆಗಿರೋ ಇವೆಂಟ್ ಪ್ರೋಮೋಗಳು ಟ್ರೆಂಡ್ಸೆಟ್ ಮಾಡಿದ್ದು, ಕಾರ್ಯಕ್ರಮದ ಜಾಗದಲ್ಲಿ ದೊಡ್ಡ ಮಟ್ಟದ ಕಟೌಟ್ಗಳನ್ನು ನಿಲ್ಲಿಸಲಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ರವಿಚಂದ್ರನ್ ಬಗ್ಗೆ ಕೊಂಡಾಡಿದ ಹಂಸಲೇಖ, ರವಿ ಮೊದಲಿನ ತರ ಬರೀ ಕನಸುಗಾರನಾಗಿ ಉಳಿದಿಲ್ಲ, ಈಗ ಆತ ಅದ್ಭುತ ಮಾತುಗಾರ. ರವಿ ಹುಟ್ಟುಹಬ್ಬದ ದಿನ ಮಳೆ ಬಂದೇ ಬರುತ್ತೆ ಆ ಮಳೆಯೇ ನಮಗೆ ಆಶೀರ್ವಾದ ಮಾಡುತ್ತೆ ಎಂದಿದ್ದಾರೆ.
ಇನ್ನೊಂದೆಡೆ ಕ್ರೇಜಿಸ್ಟಾರ್ ರವಿಚಂದ್ರನ್ ಆಡಿದ ಮಾತುಗಳು ಅಭಿಮಾನಿಗಳ ಎದೆಯಲ್ಲಿ ರೋಮಾಂಚನ ಉಂಟು ಮಾಡಿವೆ. ಆಯೋಜಕ ವಿನಯ್ ಅವರ ವಿನಯಕ್ಕೆ ಶರಣಾಗಿ ಈ ಇವೆಂಟ್ಗೆ ಒಪ್ಪಿಕೊಂಡೆ ಎಂದ ಕ್ರೇಜಿಸ್ಟಾರ್, ನಾವು ಜೊತೆಯಲ್ಲಿ ಬಂದ್ರೆ ಹಿಟ್ ಪಕ್ಕಾ, ನಮ್ಮ ಕಾಂಬಿನೇಷನ್ನ ಯಾರೂ ಮುಟ್ಟೋಕೂ ಆಗಲ್ಲ.. ಮುರಿಯೋಕೂ ಆಗಲ್ಲ ಅಂತ ಬಹಳ ಗರ್ವದಿಂದ ಹೇಳಿದ್ದಾರೆ.
ನಮ್ಮಿಬ್ಬರದ್ದು ಸಾಮಾನ್ಯ ಜರ್ನಿಯಲ್ಲ. ಇದು ಬರೀ 16 ವರ್ಷಗಳ ಪ್ರೇಮಕಥೆಯಲ್ಲ. ಇದರ ಹಿಂದೆ ಕಠಿಣ ಪರಿಶ್ರಮವಿದೆ. ನಮ್ಮಲ್ಲಿ ಎಷ್ಟೋ ಬಿರುಕುಗಳು.. ಖುಷಿಗಳಿವೆ. ಆ ಎಲ್ಲಾ ಜರ್ನಿ ಬಗ್ಗೆ ನಾನು ಹಂಸಲೇಖ ಹತ್ತಿರ ಹಂಚಿಕೊಳ್ಳಬೇಕು. ನಾವಿಬ್ಬರೂ ಒಂದಾದ್ವಿ ಅಂದಾಗಲೆಲ್ಲಾ ಬೇರೆ ಆಗ್ತಿದ್ವಿ. ಆದರೆ ನಮ್ಮ ಜಗಳದಲ್ಲೂ ಒಂದು ಪ್ರೀತಿ ಅಡಗಿದೆ. ನಾವು ಯಾವತ್ತೂ ಜಗಳವನ್ನು ಹೊರಗೆ ತೋರಿಸಿಕೊಂಡಿಲ್ಲ. ನಿಜ ಹೇಳಬೇಕು ಅಂದ್ರೆ ನಾವಿಬ್ಬರು ಬೇರೆ ಆಗಿಯೇ ಇಲ್ಲ. ಈಗ ನಮ್ಮ ತಾಕತ್ತು-ತೂಕ ಎರಡೂ ಜಾಸ್ತಿಯಾಗಿದೆ ಅಂತ ಬಹಳ ಇಮೋಷನಲ್ ಆಗಿ ಮಾತನಾಡಿದ್ದಾರೆ ರವಿಮಾಮ.
ಪ್ರೆಸ್ಮೀಟ್ನಲ್ಲಿ ರವಿಚಂದ್ರನ್ ತಮ್ಮ ಫ್ಯಾನ್ಸ್ಗೆ ಪ್ರೀತಿಯಿಂದ ಕರೆಯೋಲೆ ನೀಡುತ್ತಾ.. ನಾನು ಯಾರನ್ನೂ ನನ್ನ ಹುಟ್ಟುಹಬ್ಬಕ್ಕೆ ಬಾ ಅಂತ ಕರೆಯಲ್ಲ. ಆದ್ರೆ ನೀವೆಲ್ಲರೂ ಬಂದೇ ಬರ್ತೀರಾ.. ಬರಲೇಬೇಕು ಅನ್ನೋ ನಂಬಿಕೆ ನನಗಿದೆ ಎಂದಿದ್ದಾರೆ. ಇನ್ನೂ ಹಂಸಲೇಖ ಹೇಳಿದ ಮಳೆಯ ಮಾತಿಗೆ ಧ್ವನಿಗೂಡಿಸಿದ ರವಿಮಾಮ, ನನ್ನ ಹುಟ್ಟುಹಬ್ಬಕ್ಕೆ ಮಳೆ ಬಂದೇ ಬರುತ್ತೆ, ಆದ್ರೆ ನಾವು ಮಳೆಗೆ ಹೆದರುವ ಕೆಲಸವೇ ಇಲ್ಲ. ಯಾಕಂದ್ರೆ ಮಳೆ ಇಲ್ಲದೇ ರವಿಚಂದ್ರನ್ ಸಿನಿಮಾನೇ ಇರಲಿಲ್ಲ ಎಂದು ಮಾಸ್ ಡೈಲಾಗ್ ಹೊಡೆದಿದ್ದಾರೆ.
ಈ ಕ್ರೇಜಿ ಬ್ರಹ್ಮ ಇವೆಂಟ್ಗೆ ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆಯಿದ್ದು.. ಮೆಗಾಸ್ಟಾರ್ ಚಿರಂಜೀವಿ, ಶಿಲ್ಪಾ ಶೆಟ್ಟಿ, ಖುಷ್ಬೂ, ಸುಧಾರಾಣಿ, ರವೀನಾ ಟಂಡನ್ ಸೇರಿದಂತೆ ಘಟಾನುಘಟಿಗಳು ಭಾಗವಹಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಈ ‘ಕ್ರೇಜಿ-ಬ್ರಹ್ಮ’ ರೀ- ಯೂನಿಯನ್, ಮೇ 30ರಂದು, ರವಿಮಾಮನ ಬರ್ತ್ ಡೇ ವಿಶೇಷ, ಕೇವಲ ಇವೆಂಟ್ ಆಗಿ ಉಳಿಯದೆ ಪ್ರತಿಯೊಬ್ಬ ಕನ್ನಡಿಗನ ಪಾಲಿಗೆ ಎಮೋಷನಲ್ ಹಬ್ಬ ಆಗೋದಂತೂ ಗ್ಯಾರಂಟಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





