ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಇಂಡಿಯಾದಲ್ಲೇ ಬಿಗ್ಗೆಸ್ಟ್ ಸಿನಿಮಾ ಹಾಲ್ವೊಂದನ್ನ ಆರಂಭಿಸಿದ್ದಾರೆ. ಅದರಲ್ಲಿ ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಫೋಟೋಗಳು ಕೂಡ ರಾರಾಜಿಸ್ತಿವೆ. ಕನ್ನಡದ ಡೈರೆಕ್ಟರ್ಗಳ ಫೋಟೋಗಳು ಹೈದ್ರಾಬಾದ್ ಮಲ್ಟಿಪ್ಲೆಕ್ಸ್ನಲ್ಲಿ ಮಿಂಚ್ತಿರೋದು ಲಂಡನ್ ಮ್ಯೂಸಿಯಂನಷ್ಟೇ ಖುಷಿ ಕೊಡ್ತಿದೆ. ಈ ಕುರಿತ ಒಂದು ಸ್ಪೆಷಲ್ ಖಬರ್ ನಿಮಗಾಗಿ.
ಇತ್ತೀಚಿನ ದಿನಗಳಲ್ಲಿ ಮಲ್ಟಿಪ್ಲೆಕ್ಸ್ಗಳು ಕೇವಲ ಸಿನಿಮಾ ನೋಡುವ ಜಾಗ ಮಾತ್ರ ಆಗಿ ಉಳಿದುಕೊಂಡಿಲ್ಲ. ಅದು ಸ್ಟೈಲ್, ಐಡಿಯಾ, ಗೌರವದ ಪ್ರತೀಕ ಕೂಡ ಹೌದು. ಮಲ್ಟಿಪ್ಲೆಕ್ಸ್ ಲೋಕದಲ್ಲಿ ಹೊಸ ಟ್ರೆಂಡ್ಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೈ ಜೋಡಿಸಿದ್ದಾರೆ. ಆದ್ರೆ ಇಲ್ಲಿ ಟ್ವಿಸ್ಟ್ ಏನು ಗೊತ್ತಾ..? ಪುಷ್ಪ ಸ್ಟಾರ್ ಅಲ್ಲು ತಮ್ಮ ಮಲ್ಟಿಪ್ಲೆಕ್ಸ್ನಲ್ಲಿ ಕನ್ನಡದ ಇಬ್ಬರು ಸ್ಟಾರ್ ನಿರ್ದೇಶಕರ ಫೋಟೋ ಹಾಕಿ ನೇರವಾಗಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಹೈದ್ರಾಬಾದ್ನಲ್ಲಿ ಐಕಾನಿಕ್ ಅಲ್ಲು ಸಿನಿಮಾಸ್ ಓಪನ್..!
ಕನ್ನಡ ನಿರ್ದೇಶಕರಿಗೆ ಗೌರವ.. ಕನ್ನಡಿಗರ ಮನ ಗೆದ್ದ ಪುಷ್ಪ
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಅಲ್ಲು ಸಿನಿಮಾಸ್, ಮಲ್ಟಿಪ್ಲೆಕ್ಸ್ ಚೈನ್ನಲ್ಲಿ ಇನ್ನೊಂದು ಹೊಸ ಅಧ್ಯಾಯ ಬರೆದಿದೆ. ಹೈದ್ರಾಬಾದ್ ಹೊರವಲಯದ ಕೋಕಾಪೇಟ್ನಲ್ಲಿ ನಿರ್ಮಾಣಗೊಂಡಿರೋ ಈ ಹೊಸ ಶಾಖೆ, ಸಂಕ್ರಾಂತಿಗೆ ಗ್ರ್ಯಾಂಡ್ ಓಪನಿಂಗ್ಗೆ ಸಜ್ಜಾಗಿದೆ. 75 ಅಡಿ ಎತ್ತರದ ದೈತ್ಯ ಪರದೆ, ಅತ್ಯಾಧುನಿಕ ಸೌಂಡ್ ಸಿಸ್ಟಮ್, ಒಟ್ಟಾರೆ ಇದು ಪ್ರೀಮಿಯಂ ಸಿನಿಮಾದ ಅನುಭವ ನೀಡಲಿದೆ ಅನ್ನೋದು ಸಿನಿಪ್ರೇಮಿಗಳ ಮಾತು.

ಆದ್ರೆ ಇಲ್ಲಿ ನಿಜವಾದ ಹೈಲೈಟ್ ಏನು ಅಂದ್ರೆ ಈ ಥಿಯೇಟರ್ನ ಗೋಡೆ ಮೇಲೆ ಅಳವಡಿಸಿರುವ ಕನ್ನಡದ ನಿರ್ದೇಶಕರ ಫೋಟೋಗಳು. ಐಕಾನಿಕ್ ಸಿನಿಮಾ ಹೆಸರು, ಅಪರೂಪದ ಫೋಟೋ ಫ್ರೇಮ್, ದಿಗ್ಗಜ ನಿರ್ದೇಶಕರ ಸಿನಿಮಾಗಳು, ಈ ಟ್ರೆಂಡ್ಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಕೈ ಹಾಕಿದ್ದಾರೆ.
ಮಲ್ಟಿಪ್ಲೆಕ್ಸ್ನಲ್ಲಿ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಫೋಟೋ
ಕೋಕಾಪೇಟ್ನಲ್ಲಿ ತಲೆ ಎತ್ತಿದೆ ಬಿಗ್ಗೆಸ್ಟ್ ಅಲ್ಲು ಸಿನಿಮಾಸ್

ಅಲ್ಲು ಸಿನಿಮಾಸ್ ಒಳಭಾಗದ ಗೋಡೆ ನೋಡಿದ್ರೆ ಸಿನಿಮಾ ಪ್ರೇಮಿಗಳಿಗೆ ಅದೊಂದು ಮ್ಯೂಸಿಯಂ ಅನುಭವ ಕೊಡುತ್ತೆ. ತೆಲುಗಿನ ರಾಜಮೌಳಿ, ಸುಕುಮಾರ್, ತ್ರಿವಿಕ್ರಂ ಶ್ರೀನಿವಾಸ್, ತಮಿಳಿನ ಮಣಿರತ್ನಂ, ವೆಟ್ರಿಮಾರನ್, ಅಟ್ಲೀ.. ಹಿಂದಿಯ ರಾಜ್ಕುಮಾರ್ ಹಿರಾನಿ, ಸಂದೀಪ್ ರೆಡ್ಡಿ ವಂಗಾ.. ಇವರ ಮಧ್ಯೆ ಕನ್ನಡದ ಹೆಮ್ಮೆಯ ನಿರ್ದೇಶಕರುಗಳಾದ ಕಾಂತಾರ ಫೇಮ್ ರಿಷಬ್ ಶೆಟ್ಟಿ ಹಾಗೂ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಫೋಟೋಗಳು ಕೂಡ ಇವೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಕನ್ನಡಿಗರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗ್ತಿದೆ.

ರಿಷಬ್ ಶೆಟ್ಟಿ ಮತ್ತು ಪ್ರಶಾಂತ್ ನೀಲ್ ಹೆಸರು ಈಗ ಕೇವಲ ಕನ್ನಡಕ್ಕೆ ಸೀಮಿತವಾಗಿಲ್ಲ. ಪ್ರಶಾಂತ್ ನೀಲ್ ಕೆಜಿಎಫ್ ಸರಣಿಯ ಮೂಲಕ ಪ್ಯಾನ್ ಇಂಡಿಯಾ ಸಂಚಲನ ಸೃಷ್ಟಿಸಿದ ನಿರ್ದೇಶಕ. Gen z ಜನರೇಷನ್ಗೆ ಪಕ್ಕಾ ಸೂಟ್ ಆಗೋ ಡೈರೆಕ್ಟರ್. ಇನ್ನೊಂದೆಡೆ ರಿಷಬ್ ಶೆಟ್ಟಿ ನಟನಾಗಿ, ನಿರ್ದೇಶಕರಾಗಿ ತೆಲುಗು ಪ್ರೇಕ್ಷಕರಿಗೂ ಫೇವರಿಟ್ ಆಗಿದ್ದಾರೆ. ಕಾಂತಾರ ಚಾಪ್ಟರ್-1 ತೆಲುಗು ರಾಜ್ಯಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ಕಾರಣಕ್ಕೇ ಇರಬಹುದು ಅಲ್ಲು ಅರ್ಜುನ್ ತಮ್ಮ ಮಲ್ಟಿಪ್ಲೆಕ್ಸ್ನಲ್ಲಿ ಕನ್ನಡ ನಿರ್ದೇಶಕರಿಬ್ಬರಿಗೆ ಬಹುದೊಡ್ಡ ಗೌರವ ಅರ್ಪಿಸಿದ್ದಾರೆ.

ಭಾಷೆ, ಗಡಿ, ಜಾತಿ, ಧರ್ಮದ ಹಂಗಿಲ್ಲದೆ ರಿಯಲ್ ಪ್ರತಿಭೆಗೆ ಗೌರವ ಕೊಡುವುದು ನಿಜವಾದ ಸ್ಟಾರ್ ಗುಣ. ಅದೇ ಗುಣವನ್ನು ತೋರಿಸಿ, ಕನ್ನಡ ನಿರ್ದೇಶಕರ ಫೋಟೋ ಹಾಕುವ ಮೂಲಕ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಈಗ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಎನಿವೇ.. ಕನ್ನಡದ ಟ್ಯಾಲೆಂಟ್ಗೆ ತೆಲುಗು ಇಂಡಸ್ಟ್ರಿಯಿಂದ ಬಂದ ಈ ಗೌರವ ಇಡೀ ಕನ್ನಡ ಚಿತ್ರಪ್ರೇಮಿಗಳಿಗಷ್ಟೇ ಅಲ್ಲ, ಪ್ರತಿಯೊಬ್ಬ ಕನ್ನಡಿಗಿನಿಗೂ ಹೆಮ್ಮೆಯ ವಿಷಯವೇ ಸರಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





