ತಮ್ಮ ನೆಚ್ಚಿನ ನಾಯಕನಟನಿಗೆ ಪದ್ಮಭೂಷಣ ಪುರಸ್ಕಾರ ಸಂದ ಖುಷಿಯಲ್ಲಿದ್ದ ತಲಾ ಅಜಿತ್ ಫ್ಯಾನ್ಸ್ಗೆ ಶಾಕಿಂಗ್ ನ್ಯೂಸ್ ಒಂದು ಕಾದಿದೆ. ಅದ್ಯಾಕೋ ಚಿತ್ರರಂಗ ತೊರೆಯುವ ಮನಸ್ಸು ಮಾಡಿದ್ದಾರೆ ತಮಿಳು ಸೂಪರ್ ಸ್ಟಾರ್ ಅಜಿತ್. ಈ ಸುದ್ದಿ ಸದ್ಯ ಟಾಕ್ ಆಫ್ ದಿ ಸಿನಿದುನಿಯಾ ಆಗಿದೆ. ಈ ಕುರಿತ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ.
ಅಜಿತ್ ಕುಮಾರ್ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪದ್ಮಭೂಷಣ ಗೌರವ ಪಡೆದ ತಮಿಳಿನ ಸೂಪರ್ ಸ್ಟಾರ್. ಇವರೇ ಬೇರೆ ಇವರ ಆಲೋಚನಾ ಲಹರಿಯೇ ಬೇರೆ. ಸಿನಿಮಾದಲ್ಲಷ್ಟೇ ಇವರು ಹೀರೋ, ನಿಜ ಜೀವನದಲ್ಲಿ ಅಜಿತ್ ಸಾಮಾನ್ಯರಲ್ಲಿ ಸಾಮಾನ್ಯ.
ಅಭಿಮಾನಿಗಳು ಇವ್ರನ್ನ ತಲಾ ಅಂತ ಪ್ರೀತಿಯಿಂದ ಕರೆದರೂ, ಇವ್ರ ಸಿನಿಮಾಗಳು ನೂರಾರು ಕೋಟಿ ಗಳಿಸಿದ್ರೂ, ಇವರು ಕೂಡ ದೊಡ್ಡ ಮೊತ್ತದ ಸಂಭಾವನೆ ಪಡೆದರೂ ಕೂಡ, ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಸಿನಿಮಾದಲ್ಲಿ ನಟಿಸೋದು ಎಷ್ಟೋ ಅಷ್ಟೇ. ನಂತ್ರ ಅದರ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವುದಾಗಲಿ, ಫ್ಯಾನ್ಸ್ ಮೀಟ್ ಇದ್ಯಾವುದೂ ಇರಲ್ಲ. ಬಹುಶಃ ಸಿನಿಮಾನ ಪ್ರಚಾರ ಮಾಡದೆ ಇದ್ರೂ ಗೆಲ್ಲಿಸೋ ತಾಕತ್ತು ಇರೋ ಸ್ಟಾರ್ ಇವರೊಬ್ಬರೇ ಅನಿಸುತ್ತೆ.
ಕಳೆದ 10 ವರ್ಷಗಳಲ್ಲಿ ಅಜಿತ್ ಒಂದು ಸಂದರ್ಶನ ನೀಡಿದ ನಿದರ್ಶನ ಕೂಡ ಇಲ್ಲ. ಹೌದು.. ಫಾರ್ಮುಲಾ ರೇಸರ್ ಆಗಿರೋ ಇವರು ಪ್ರೊಫೆಷನಲ್ ರೇಸರ್. ಇತ್ತೀಚೆಗೆ ರೇಸಿಂಗ್ ಸಲುವಾಗಿ ಕಾರ್ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ರು ತಲಾ ಅಜಿತ್. ಸದ್ಯ ಇತ್ತೀಚೆಗೆ ಅವ್ರ 63ನೇ ಸಿನಿಮಾ ಗುಡ್ ಬ್ಯಾಡ್ ಅಗ್ಲಿ ರಿಲೀಸ್ ಆಗಿತ್ತು. ಸಿನಿಮಾ ತಕ್ಕಮಟ್ಟಿಗೆ ಸೌಂಡ್ ಮಾಡಿತಾದ್ರೂ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಅದಕ್ಕೂ ಮುನ್ನ ತೆರೆಕಂಡ ಅಜಿತ್- ಅರ್ಜುನ್ ಸರ್ಜಾ ಕಾಂಬೋನ ವಿದಾಮುಯಾರ್ಚಿ ಸಿನಿಮಾ ಕೂಡ ಫ್ಲಾಪ್ ಆಗಿದೆ. ಅದೇ ಕಾರಣಕ್ಕೋ ಏನೋ ಸದ್ಯ ಚಿತ್ರರಂಗ ತೊರೆದು, ನಟನೆಗೆ ಗುಡ್ಬೈ ಹೇಳುವ ಮನಸ್ಸು ಮಾಡಿದ್ದಾರಂತೆ ತಲಾ ಅಜಿತ್. ಹೌದು.. ಇತ್ತೀಚೆಗೆ ಅವರು ಒಂದು ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ರಿಟೈರ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ನಿಮಗೆ ಗೊತ್ತಿಲ್ಲ, ನಾನು ಯಾವಾಗ ನಿವೃತ್ತಿ ಹೊಂದಬೇಕು ಅಂತ ಚಿಂತಿಸುತ್ತಿಲ್ಲ. ಆದ್ರೆ ನಾನು ನಿವೃತ್ತಿಗೆ ಮನಸ್ಸು ಮಾಡುವ ಸಂದರ್ಭ ಬರಬಹುದು ಎಂದಿದ್ದಾರೆ. ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಜನ ಜೀವನದ ಬಗ್ಗೆ ದೂರುತ್ತಾರೆ. ಬೆಳಗ್ಗೆ ಎದ್ದಾಗ ಜೀವಂತವಾಗಿರಲು ಬಯಸ್ತಾರೆ. ಹಾಗೆ ಜೀವಂತವಾಗಿರೋದು ಕೂಡ ಆಶೀರ್ವಾದವೇ. ನಾನಿಲ್ಲಿ ತಾತ್ವಿಕನಲ್ಲ, ಸರ್ಜರಿಗಳು ಹಾಗೂ ಗಾಯಗಳಿಂದ ಬಂದಿದ್ದೇನೆ. ಕ್ಯಾನ್ಸರ್ನಿಂದ ಬದುಕುಳಿದ ಸ್ನೇಹಿತರು ಹಾಗೂ ಕುಟುಂಬವಿದೆ ಎಂದಿದ್ದಾರೆ.
ಜೀವನ ತುಂಬಾ ಅಮೂಲ್ಯವಾದದ್ದು, ಒಂದೊಂದು ಸೆಕೆಂಡ್ ಕೂಡ ಮುಖ್ಯ. ಹಾಗಾಗಿ ಒಂದೊಂದು ಸೆಕೆಂಡ್ ಕೂಡ ಬಳಸಿಕೊಳ್ಳಲು ಬಯಸ್ತೇನೆ ಅಂತ ಬಹಳ ವಿನಮ್ರವಾಗಿ ಹೇಳಿದ್ದಾರೆ. ಅಲ್ಲದೆ, ಸದ್ಯ ಕಮಿಟ್ ಆಗಿರೋ ಸಿನಿಮಾಗಳನ್ನ ಮುಗಿಸಿಕೊಡೋದ್ರ ಹಿಂಟ್ ಕೂಡ ನೀಡಿದ್ದಾರೆ. ನನ್ನ ಸಮಯ ಬಂದಾಗ ನನ್ನ ನಿರ್ಮಾಪಕರು, ನಾನು ಆ ಆತ್ಮಕ್ಕೆ ಒಂದು ಜೀವ ಕೊಟ್ಟೆ. ಮತ್ತು ಅವನು ಅದ್ರ ರಸವನ್ನು ಹೀರಿದನು ಅಂತ ಪ್ರತಿ ಸೆಕೆಂಡ್ನ ಪಾಸಿಟಿವ್ ಆಗಿ ಬಳಸಿದನು ಅಂತ ಯೋಚಿಸಬೇಕು ಅಂತ ಬಯಸುತ್ತೇನೆ ಎಂದಿದ್ದಾರೆ.
ಪತ್ನಿ ಶಾಲಿನಿ ಹಾಗೂ ಮಕ್ಕಳಿಗೆ ಸಿಕ್ಕಾಪಟ್ಟೆ ಸಮಯ ಕೊಡುವ ಅಜಿತ್, ಮುಂದಿನ ಜೀವನವನ್ನು ಅವರೊಟ್ಟಿಗೆ ಕ್ವಾಲಿಟಿ ಲೈಫ್ನ ಲೀಡ್ ಮಾಡೋಕೆ ಮುಂದಾಗಿದ್ದಾರೆ. ಅಲ್ಲದೆ, ರೇಸಿಂಗ್ನ ಸೀರಿಯಸ್ ಆಗಿ ತೆಗೆದುಕೊಂಡು, ಮನಸ್ಸಿಗೆ ಹಿತ ಕೊಡೋದನ್ನೇ ಮಾಡೋಕೆ ಹೊರಟಂತಿದೆ. ಸೋ.. ಇದು ಫ್ಯಾನ್ಸ್ಗೆ ಆಘಾತ ತಂದರೂ ಸಹ, ಅಧಿಕೃತವಾಗಿ ನಟನೆ ನಲ್ಲಿಸ್ತಿದೀನಿ ಅಮತ ಹೇಳದಿರೋದು ಕೊಂಚ ಸಮಾಧಾನ ತರಿಸಿದೆ.