ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದಿಢೀರ್ ಬೆಳವಣಿಗೆಗಳು ಕಾಣ್ತಿವೆ. ಅದಕ್ಕೆ ಕಾರಣ ಕಾಮಾಕ್ಷಿಪಾಳ್ಯ ಪೊಲೀಸರು, ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ಮಾಡಿರೋ ಎಡವಟ್ಟು. ಖಾಕಿ ಮಾಡಿದ ಎಡವಟ್ ಕೋರ್ಟ್ ಟ್ರಯಲ್ಸ್ ವೇಳೆ ಕ್ರಾಸ್ ಎಕ್ಸಾಮಿನ್ ಮಾಡುವಾಗ ಬಯಲಾಗಿದೆ. ಅದ್ರಿಂದ ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ಮೇಲೆಯೇ ಕ್ರಿಮಿನಲ್ ಕೇಸ್ ದಾಖಲಾಗುವ ಸಾಧ್ಯತೆಯಿದೆ.
ರೇ.ಸ್ವಾಮಿ ಮರ್ಡರ್ ಕೇಸ್ಗೆ ಬಿಗ್ ಟ್ವಿಸ್ಟ್.. ಬಾಸ್ ರಿಲ್ಯಾಕ್ಸ್
ಖಾಕಿಯಿಂದ ಸುಳ್ಳು ಸಾಕ್ಷ್ಯ.. ಇನ್ಸ್ಪೆಕ್ಟರ್ ಗಿರೀಶ್ಗೆ ಸಂಕಷ್ಟ
ಕಾಮಾಕ್ಷಿಪಾಳ್ಯ ಪೊಲೀಸರ ವಿರುದ್ಧವೇ ಕ್ರಿಮಿನಲ್ ಕೇಸ್..?!
ಆರೋಪಿಗಳ ಮೊಬೈಲ್ ಸೀಜ್, ಮಹಜರ್ ಜಾಗ ಎಡವಟ್
ಆರೋಪಿಗಳ ಮೊಬೈಲ್ಗಳನ್ನ ಸೀಜ್ ಮಾಡಿ, ಮಹಜರು ಮಾಡಿರುವುದು ಠಾಣೆಯಲ್ಲೇ ಎಂದು ಪೊಲೀಸರು ಕೋರ್ಟ್ಗೆ ವರದಿ ಸಲ್ಲಿಸಿದ್ದರು. ಆದ್ರೆ ಮಹಜರು ಮಾಡಿರೋ ವಿಡಿಯೋದಲ್ಲಿ ಫ್ಲೋರಿಂಗ್ಗೆ ಟೈಲ್ಸ್ ಬಳಸಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಟೈಲ್ಸ್ ಫ್ಲೋರಿಂಗ್ ಇಲ್ಲವೇ ಇಲ್ಲ. ಹೀಗಾಗಿ ಖಾಕಿ ತಮಗೆ ಬೇಕಾದ ಕಡೆ ಮಹಜರು ಮಾಡಿದೆ ಅಂತ ಆರೋಪಿಗಳ ಪರ ವಕೀಲರು ಮಂಡಿಸಿದ್ದಾರೆ. ಅಷ್ಟೇ ಅಲ್ಲ ಪೊಲೀಸರು ಸುಳ್ಳು ಸಾಕ್ಷಿ ಸೃಷ್ಟಿಸಿದ್ದಾರೆ. ಹೀಗಾಗಿ ಖಾಕಿ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಕೋರ್ಟ್ಗೆ ರಿಟ್ ಅರ್ಜಿ ಕೂಡ ಸಲ್ಲಿಸಿದ್ದಾರೆ.
ಮನೆ ಊಟ, ಫ್ಯಾಮಿಲಿ ಒಳ ಸಂದರ್ಶನ.. ಗುಡ್ ನ್ಯೂಸ್..?
VC ಮೂಲಕ ಜಡ್ಜ್ಗೆ ಥ್ಯಾಂಕ್ಸ್ ಹೇಳಿದ್ಯಾಕೆ ದಾಸ ದರ್ಶನ್?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರೋ ದರ್ಶನ್ ಇದೀಗ ಪರಪ್ಪನ ಅಗ್ರಹಾರದಿಂದ ಹೊರಗೆ ಬರುವ ಸೂಚನೆ ಸಿಕ್ಕಿದೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆದ ಕೋರ್ಟ್ ಟ್ರಯಲ್ಸ್ ವೇಳೆ ನಡೆದ ಮಹತ್ವದ ಬೆಳವಣಿಗೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರಾದ ದಾಸ, ಆ ವೇಳೆ ನಮಗೆ ವಿಸಿ ಮೂಲಕ ಅಲ್ಲದೆ, ನೇರವಾಗಿ ಕೋರ್ಟ್ಗೆ ಬಂದು ವಿಚಾರಣೆಗೆ ಹಾಜರಾಗಲು ಅವಕಾಶ ಕಲ್ಪಿಸಿ ಅನ್ನೋ ಮನವಿ ಮಾಡಿದ್ದಾರೆ.
ವಿಜಯಲಕ್ಷ್ಮೀ ಹೇಳಿದ್ದು ನಿಜ.. ಸ್ಟ್ರಾಂಗ್ ಆಗಿ ಇದ್ದಾರೆ ದಚ್ಚು..!
ಪರಪ್ಪನ ಬಲೆಯಿಂದ ಡಿಬಾಸ್ ದರ್ಶನ್ ಹೊರಬರೋ ಸಾಧ್ಯತೆ
ಒಂದು ವೇಳೆ ದರ್ಶನ್ ಮನವಿಯನ್ನ ನ್ಯಾಯಾಧೀಶರು ಪುರಸ್ಕರಿಸಿದ್ರೆ ನಾಲ್ಕು ಗೋಡೆ ಬಿಟ್ಟು ಹೊರಬರುವ ಸಾಧ್ಯತೆಯಿದೆ. ಅಲ್ಲದೆ, ಕೋರ್ಟ್ಗೆ ಬಂದಾಗ ಕನಿಷ್ಟ ಒಂದು ಹೊತ್ತು ಮನೆ ಊಟ ಕೂಡ ಲಭಿಸುತ್ತೆ. ಅಲ್ಲದೆ, ನ್ಯಾಯಾಧೀಶರ ಮುಂದೆ ಕುಟುಂಬಸ್ಥರ ಒಳ ಸಂದರ್ಶನಕ್ಕೂ ಅವಕಾಶ ನೀಡಲು ಅಹವಾಲು ಇಟ್ಟಿದ್ದಾರೆ ದಾಸ. ಅಂದ್ರೆ ಇಲ್ಲಿಯವರೆಗೆ ವಾರಕ್ಕೆ ಎರಡು ಬಾರಿ.. ಮಂಗಳವಾರ ಹಾಗೂ ಗುರುವಾರದಂದು ದರ್ಶನ್ ಕುಟುಂಬಸ್ಥರು ಬಂದು ದರ್ಶನ್ನ ಭೇಟಿ ಆಗಬಹುದಿತ್ತು. ಆದ್ರೆ ಅವ್ರನ್ನ ನೇರವಾಗಿ ಒಳಗಡೆ ಭೇಟಿಯಾಗಲು ವಾರಕ್ಕೆ ಕನಷ್ಟ ಒಮ್ಮೆ ಆದ್ರೂ ಅವಕಾಶ ಕೊಡಿ ಎನ್ನಲಾಗಿದೆ. ಸೋ ಅದು ಕೂಡ ಸಿಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಅಲ್ಲದೆ, ದರ್ಶನ್ ಇರೋ ಸೆಲ್ಗೆ ಟಿವಿಯನ್ನ ಇತ್ತೀಚೆಗೆ ನೀಡಲಾಗಿದೆ. ಹೆಚ್ಚುವರಿ ಬೆಡ್ ಹಾಗೂ ತಲೆದಿಂಬು ಕೂಡ ಸಿಕ್ಕಿದೆ. ಹೀಗಾಗಿ ದರ್ಶನ್ ವಿಸಿ ಮೂಲಕ ಜಡ್ಜ್ಗೆ ಥ್ಯಾಂಕ್ಸ್ ಕೂಡ ಹೇಳಿದ್ದಾರೆ. ಅಲ್ಲದೆ, ಪತಿಯ ಬರ್ತ್ ಡೇ ದಿನ ಪರಪ್ಪನ ಅಗ್ರಹಾರಕ್ಕೆ ಹೋಗಿ ಭೇಟಿ ಆಗಿ ಬಂದಂತಹ ಪತ್ನಿ ವಿಜಯಲಕ್ಷ್ಮೀ, ಧನ್ವೀರ್ ಗೌಡ ಹಯಗ್ರೀವ ಟ್ರೈಲರ್ ಲಾಂಚ್ ಇವೆಂಟ್ ಮಂಡ್ಯದಲ್ಲಿ ಮಾತಾಡ್ತಾ ದರ್ಶನ್ ಸ್ಟ್ರಾಂಗ್ ಆಗಿ ಇದ್ದಾರೆ ಎಂದಿದ್ದರು. ಇದೆಲ್ಲವೂ ಪಾಸಿಟಿವ್ ವೈಬ್ಸ್ ನೀಡಿದೆ.
ದರ್ಶನ್ ಗನ್ ಲೈಸೆನ್ಸ್ ಅಮಾನತುಗೆ ಹೈಕೋರ್ಟ್ ತಡೆ
2008ರಿಂದ ದಾಸನ ಬಳಿ ಲೈಸೆನ್ಸ್ ಗನ್.. ಇಲ್ಲಿಯೂ ಮೇಲುಗೈ
ಬೇಲ್ ಕ್ಯಾನ್ಸಲ್ ಆದ ಬಳಿಕ ದರ್ಶನ್ ಬಳಿ ಇದ್ದಂತಹ ಲೈಸೆನ್ಸ್ ಗನ್ನ ಅಮಾತನುಗೊಳಿಸಿ ಕೋರ್ಟ್ ಆದೇಶ ನೀಡಿತ್ತು. ಆದ್ರೀಗ ದರ್ಶನ್ ಪರ ಹೈ ಕೋರ್ಟ್ನಲ್ಲಿ ವಾದ ಮಂಡಿಸಿರೋ ವಕೀಲ ಸುನೀಲ್ ಕುಮಾರ್, 2008ರಿಂದ ದರ್ಶನ್ ಲೈಸೆನ್ಸ್ ಗನ್ ಹೊಂದಿದ್ದಾರೆ. ದರ್ಶನ್ ಹೆಸರಿನ ಕಾರಣಕ್ಕೆ ಅಮಾನತು ಮಾಡೋದು ಸರಿಯಲ್ಲ ಎಂದಿದ್ದಾರೆ. ಅದಕ್ಕೆ ಕೋರ್ಟ್ ಕೂಡ ಅವ್ರ ಮೇಲೆ ಆರೋಪ ಇರೋ ಕಾರಣಕ್ಕೆ ಅಮಾತನುಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿ, ಆ ಅಮಾನತು ಆದೇಶಕ್ಕೆ ಮಾರ್ಚ್ 6ರ ತನಕ ಮಧ್ಯಂತರ ತಡೆ ಕೂಡ ನೀಡಿದೆ.
ಮತ್ತೊಂದೆಡೆ ಕೋರ್ಟ್ ಟ್ರಯಲ್ಸ್ ಪ್ರತೀ ದಿನ ನಡೆದರೆ ಪ್ರಕರಣ ಬೇಗ ಇತ್ಯರ್ಥ ಆಗುತ್ತೆ ಅಂತ ನ್ಯಾಯಾಧೀಶರ ಬಳಿ ಪ್ರತಿ ದಿನ ನಡೆಸಲು ಮನವಿ ಮಾಡಿಕೊಂಡಿದ್ದಾರೆ. ಸೋ.. ಇವೆಲ್ಲಾ ನೋಡ್ತಿದ್ರೆ ದರ್ಶನ್ಗೆ ಬಹಳ ಪ್ಲಸ್ ಆಗ್ತಿದೆ. ಬಾಸ್ ನಿಧಾನಕ್ಕೆ ಬಿಂದಾಸ್ ಆಗ್ತಿದ್ದಾರೆ ಅನ್ನೋ ಶುಭ ಸೂಚನೆ ಸಿಕ್ಕಿದೆ.





