ಬಿಗ್ ಬಾಸ್ ಕನ್ನಡ ಮನೆಯ ರಹಸ್ಯಗಳಿಗೆ ಎಂದಿಗೂ ಕೊರತೆಯಿಲ್ಲ. ಇತ್ತೀಚೆಗೆ, ಸೀಕ್ರೆಟ್ ರೂಮ್ನಲ್ಲಿರುವ ಇಬ್ಬರು ಸ್ಪರ್ಧಿಗಳಾದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ನಡುವಿನ ಕಿರುಚಾಟ ಹೊಸದೇನಲ್ಲ ಈ ಬಾರಿಯ ವೀಕೆಂಡ್ ಪಂಚಾಯಿತಿಯಲ್ಲಿ ಬಹುತೇಕ ಅವರ ಬಗ್ಗೆಯೇ ಬಾದ್ಷಾ ಚರ್ಚೆ ಮಾಡಲಿದ್ದಾರೆ.
ಸೀಕ್ರೆಟ್ ರೂಮ್ಗೆ ಕಾಲಿಟ್ಟ ಮೊದಲ ದಿನದಿಂದಲೇ ರಕ್ಷಿತಾ, ಧ್ರುವಂತ್ ಜೊತೆ ಇರುವುದು ತನಗೆ ಹೇಗೆ ಸಾಧ್ಯ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಈಗ, ಈ ಚರ್ಚೆ ಸುದೀಪ್ ಅವರ ವೀಕೆಂಡ್ ಪಂಚಾಯಿತಿ ವೇದಿಕೆಗೂ ಬಂದಿದೆ. ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಹೊಸ ಪ್ರೋಮೋದಲ್ಲಿ, ಧೃವಂತ್ನ ಜೊತೆಗಿರೊ ರಕ್ಷಿತಾ ತಮ್ಮ ಗೋಳನ್ನ ಕಿಚ್ಚನೊಂದಿಗೆ ಹೇಳಿಕೊಂಡಿದ್ದಾರೆ.
ಸೀಕ್ರೆಟ್ ರೂಮ್ ನಿಮ್ಮ ಪ್ರಕಾರ ಹೇಗಿತ್ತು? ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದಾಗ, ರಕ್ಷಿತಾ, ಧೃವಂತ್ ವುರುದ್ದ ದೂರುಗಳ ಸರಮಾಲೆಯನ್ನೇ ಹೇಳುತ್ತಾರೆ. ನೀವು (ಸುದೀಪ್) ಬಂದಾಗ ಇವರ ಮುಖ ಒಂಥರಾ ಇರುತ್ತದೆ. ನೀವು ಹೋದ ಮೇಲೆ ಇವರ ಮುಖ ಬೇರೆ ಥರ ಇರುತ್ತದೆ. ಇವರ ಮುಖ ನೋಡಿದರೆ ಅಳು ಬರುತ್ತದೆ ನನಗೆ…” ಎಂದು ಹೇಳಿದ್ದಾರೆ ರಕ್ಷಿತಾ.
ಈ ಸಮಸ್ಯೆಗೆ ಪರಿಹಾರವೊಂದನ್ನು ಸೂಚಿಸುವ ಸುದೀಪ್, ಧ್ರುವಂತ್ ಅವರನ್ನು ರಕ್ಷಿತಾ ಮನವೊಲಿಸಿದರೆ, ಸೀಕ್ರೆಟ್ ರೂಮ್ನಿಂದ ಹೊರಬರಲು ಅವಕಾಶ ಇದೆ ಎಂದು ಸೂಚಿಸುತ್ತಾರೆ. ಇದರ ಜೊತೆಯೇ ಆರಂಭವಾಗುವ ಮನವೊಲಿಸುವ ಪ್ರಯತ್ನದ ಸಂಭಾಷಣೆಯೇ ಪ್ರೋಮೋದ ಹೈಲೈಟ್.
ನನಗೆ ಇಲ್ಲಿ ಅಷ್ಟೊಂದು ನೆಮ್ಮದಿ ಇಲ್ಲ. ಅದೇ ಥರ ನಿಮ್ಮನ್ನು ಇಲ್ಲಿ ನೆಮ್ಮದಿಯಾಗಿ ಮಲಗಲಿಕ್ಕೆ ಬಿಡುವುದಿಲ್ಲ, ಎಂದು ರಕ್ಷಿತಾ ಧ್ರುವಂತ್ರನಿಗೆ ಹೇಳಿದಾಗ, ನನ್ನ ನೆಮ್ಮದಿಯನ್ನು ನೀನು ಹೇಗೆ ಡಿಸೈಡ್ ಮಾಡ್ತಿಯಾ? ಎಂದು ಧೃವಂತ್ ಪ್ರಶ್ನಿಸುತ್ತಾರೆ. ಇದಕ್ಕೆ ರಕ್ಷಿತಾ ನಿಮ್ಮ ನೆಮ್ಮದಿ ನನ್ನ ಕೈಯಲ್ಲಿ ಉಂಟು ಎಂದು ಹೇಳುತ್ತಾರೆ. ಇದಕ್ಕೆ ಹಾಸ್ಯದ ಛಾಪೂ ಮೂಡಿಸುವ ಸುದೀಪ್, ನೀವು ಇಬ್ಬರು ಹೀಗೆ ಇದ್ದರೆ ವೈಯಕ್ತಿಕವಾಗಿ ನಮಗೆ ಮನರಂಜನೆ ಸಿಗುತ್ತಿದೆ ಎಂದು ಹೇಳುತ್ತಾರೆ. ಇದಕ್ಕೆ ರಕ್ಷಿತಾ ಇಲ್ಲಿ (ತಲೆಯಲ್ಲಿ) ನೋವಾಗ್ತ ಉಂಟು ಸಾರ್… ಎಂದು ಉತ್ತರಿಸಿದಾಗ, ಸುದೀಪ್ “ನಿಮಗೆ ಅಲ್ಲಿ ಮಾತ್ರ ನೋವಾಗ್ತ ಉಂಟು.. ನಮಗೆ ಎಲ್ಲಾ ಕಡೆ ನೋವಾಗ್ತ ಉಂಟು ಎಂದು ಎಂದು ಹೇಳಿ ನಗುತ್ತಾರೆ.





