‘ಬಿಗ್ ಬಾಸ್ ಕನ್ನಡೆ 12’ ಆರಂಭವಾದ ಮೊದಲ ವಾರದಲ್ಲೇ ಗಿಲ್ಲಿ ತನ್ನ ನಗು–ನಲುವಿನಿಂದ, ತಮಾಷೆಯ ಮಾತುಗಳಿಂದ ಮತ್ತು ವಿನೋದಶೈಲಿಯಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದರು. ರಕ್ಷಿತಾ, ಧನುಶ್, ಅಭಿ ಮೊದಲಾದ ಹಲವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡ ಅವರ ಹಾಸ್ಯಶೈಲಿಗೆ ಕಿಚ್ಚ ಸುದೀಪ್ ಕೂಡಾ ಚಪ್ಪಾಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಗಿಲ್ಲಿಯ ನಡವಳಿಕೆಯಲ್ಲಿ ಸ್ಪಷ್ಟ ಬದಲಾವಣೆ ಕಾಣಿಸಿಕೊಳ್ಳುತ್ತಿದ್ದು, ಅದೇ ಮನೆಗೆ ಹೊಸ ಉದ್ವಿಗ್ನತೆ ತರಿಸಿದೆ.
ಆರಂಭದಲ್ಲಿ ಗಿಲ್ಲಿ–ಕಾವ್ಯರ ಜೋಡಿ ಮನೆಗೆ ಒಳ್ಳೆಯ ಮನರಂಜನೆ ನೀಡುತ್ತಿತ್ತು. ಇಬ್ಬರ ನಡುವಿನ ಸ್ನೇಹ, ಆಟದಲ್ಲಿನ ಸಹಕಾರ, ಪರಸ್ಪರ ಬೆಂಬಲ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಗಿಲ್ಲಿಯ ಇತ್ತೀಚಿನ ವರ್ತನೆಯೇ ಅವರಿಬ್ಬರ ನಡುವೆ ಅಂತರ ತಂದಿದೆ. ಗಿಲ್ಲಿ ಅನೇಕ ಸಂದರ್ಭಗಳಲ್ಲಿ ತಾನು ಹೇಳುತ್ತಿರುವ ಮಾತಿನ ತೀವ್ರತೆ ಮತ್ತು ಪರಿಣಾಮ ಅರಿಯದೆ ಮಾತನಾಡುತ್ತಿದ್ದಾರೆ ಎಂದು ಮನೆಯ ಸದಸ್ಯರು ಹೇಳಿದ್ದಾರೆ.
ಕಾವ್ಯ ಬಾರಿ ಗಿಲ್ಲಿಗೆ ಮಾತಿನ ಮಿತಿಯ ಬಗ್ಗೆ ಮತ್ತು ಮನೆಯ ಸದಸ್ಯರೊಂದಿಗಿನ ಅವರ ವರ್ತನೆ ಬಗ್ಗೆ ಶಾಂತವಾಗಿ ಮಾತನಾಡಲು ಪ್ರಯತ್ನಿಸಿದರೂ, ಗಿಲ್ಲಿ ತನ್ನ ವಾದ ಮಾಡುತ್ತಲೇ ಇದ್ದರು. ಇದರಿಂದ ಕಾವ್ಯ ಆವೇಶಗೊಂಡು ಕಣ್ಣೀರಿಟ್ಟ ಘಟನೆ ನಿನ್ನೆ ಎಪಿಸೋಡಿನಲ್ಲಿ ಕಂಡುಬಂದಿತು.
ಅಶ್ವಿನಿ ಮತ್ತು ಜಾನ್ವಿ ಮೇಲೆ ಗಿಲ್ಲಿಯ ಕಟು ಟೀಕೆ
ಗಿಲ್ಲಿಯ ನಡವಳಿಕೆಯಿಂದ ಹೆಚ್ಚು ನೋವಿಗೆ ಗುರಿಯಾದವರು ಅಶ್ವಿನಿ ಗೌಡ ಮತ್ತು ಜಾನ್ವಿ. ಟಾಸ್ಕ್ ನಡೆಯುವ ಸಂದರ್ಭದಲ್ಲಿ ಗಿಲ್ಲಿ ಇಬ್ಬರ ಮೇಲೂ ವ್ಯಕ್ತಿಗತ ಟೀಕೆ ಮಾಡಿದ ರೀತಿಯೇ ಮನೆಯೊಳಗಿನ ವಾತಾವರಣ ಗಂಭೀರಗೊಳಿಸಿತು. ಜಾನ್ವಿಯ ವಯಸ್ಸಿನ ಬಗ್ಗೆ ಹಾಸ್ಯ ಮಾಡುವ ರೀತಿಯಲ್ಲಿ ಮಾತಾನಾಡಿದ್ದು, ಅಶ್ವಿನಿಯನ್ನು ಕೀಳಾಗಿ ಕಾಣುವಂತೆ ವ್ಯಂಗ್ಯ ಮಾಡಿದ್ದಾರೆ.
ಈ ವರ್ತನೆ ಮನೆ ಸದಸ್ಯರಿಗೆ ಮತ್ತು ಪ್ರೇಕ್ಷಕರಿಗೂ ಅಸಮಾಧಾನ ತಂದಿದೆ. ಗಿಲ್ಲಿ ಹಿಂದೆ ತಮಾಷೆ ಮಾಡಿದರೂ ಅದು ಯಾರಿಗೂ ನೋವು ಆಗುವಂತೆ ಇರಲಿಲ್ಲ. ಈಗಿನ ಗಿಲ್ಲಿಯ ಗೇಲಿ ಮನೆ ಸದಸ್ಯರ ಭಾವನೆಗಳನ್ನು ನೇರವಾಗಿ ಮುಟ್ಟಿದೆ ಎಂದು ಮನೆಯ ಸದಸ್ಯರೆಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಸ್ಕ್ ವೇಳೆ ಗಿಲ್ಲಿಯ ಅನಿರೀಕ್ಷಿತ ಕೋಪ ಮತ್ತು ವಾದಕ್ಕೆ ಕಾರಣವಾಗಿ ಅವರ ಆಪ್ತ ಸ್ನೇಹಿತರೂ ಆಗಿರುವ ಧನುಶ್ ಮತ್ತು ಅಭಿ ಮಧ್ಯಪ್ರವೇಶಿಸಿದರು. ಇಬ್ಬರೂ ಗಿಲ್ಲಿಗೆ ಶಾಂತವಾಗಿ, ಯಾವ ಮಾತು ಯಾರಿಗೆ ಹೇಗೆ ತೊಂದರೆ ಕೊಡಬಹುದು ಎಂಬುದನ್ನು ವಿವರಿಸಿದರು. ಆದರೆ ಗಿಲ್ಲಿ ತಮ್ಮದೇ ವಾದಕ್ಕೆ ಇಳಿದರೂ, ತಾನು ತಪ್ಪೇನೂ ಮಾಡಿಲ್ಲ ಎಂದು ಹೇಳುತ್ತಾ ಇದ್ದರು.
ಬಿಗ್ ಬಾಸ್ ಈ ವಾರ ಮನೆಯವರನ್ನು ಎರಡು ತಂಡಗಳಾಗಿ ವಿಭಜಿಸಿ ಟಾಸ್ಕ್ ನೀಡಿದ್ದರು. ಗಿಲ್ಲಿಯ ತಂಡ ಎರಡು ಗೇಮ್ಗಳಲ್ಲಿ ಸೋತರೂ, ಗೆದ್ದ ತಂಡಕ್ಕೆ ಅನೌನ್ಸ್ ಆಗುವ ಮುನ್ನವೇ ಗಿಲ್ಲಿ ಅವರನ್ನು ಉದ್ದೇಶಿಸಿ ಕಟು ಮಾತುಗಳು ಹೇಳಿದ್ಧರು. ಇದರಿಂದ ಮನೆಯೊಳಗೆ ಮತ್ತೆ ವಾಗ್ವಾದಗಳ ಸರಮಾಲೆ ಶುರುವಾಯಿತು.
ಕಾವ್ಯ ಮತ್ತೆ ಗಿಲ್ಲಿಗೆ ಅವರ ತಪ್ಪನ್ನು ನೇರವಾಗಿ ವಿವರಿಸಲು ಪ್ರಯತ್ನಿಸಿದರೂ, ಆದರೆ ಗಿಲ್ಲಿ “ನಾನು ತಪ್ಪಿಲ್ಲ” ಎಂದು ಹೇಳಿದ್ದಾರೆ. ಸತತ ವಾಗ್ವಾದಗಳಿಂದ ಬೇಸತ್ತು ಕಾವ್ಯ ಬೇಡ್ ರೂಮ್ಗೆ ತೆರಳಿ ಕಣ್ಣೀರಿಟ್ಟರು. ಆನಂತರ ಕಾವ್ಯ ಅವರಿಗೆ ಗಿಲ್ಲಿ ಕ್ಷಮೆ ಕೇಳಿದರು.





