ಡಿಬಾಸ್ ದರ್ಶನ್ ಹಾಗೂ ಮಗ ವಿನೀಶ್ ನಡುವಿನ ತಂದೆ-ಮಗನ ಬಾಂಧವ್ಯ ಪದಗಳಿಗೆ ನಿಲುಕದ್ದು. ಬಣ್ಣಿಸಲಾಗದ್ದು. ಈಗ ದರ್ಶನ್-ವಿನೀಶ್ ನಡುವೆ ಒಂದು ಅಂತರ ಏರ್ಪಟ್ಟಿದೆ. ಅಂತಹ ಸ್ಥಿತಿ ಬೇರಾವ ಶತ್ರುವಿಗೂ ಬೇಡ ಅಂತಾರೆ ದಚ್ಚು ಭಂಟ ಧನ್ವೀರ್. ಇಷ್ಟಕ್ಕೂ ಜೈಲ್ನಲ್ಲಿ ದಾಸನ ಬರ್ತ್ ಡೇ ದಿನ ಆಗಿದ್ದೇನು..? ವಿನೀಶ್ ಎಷ್ಟು ಸ್ಟ್ರಾಂಗ್ ಪರ್ಸನ್..? ಚಾಲೆಂಜಿಂಗ್ ಸ್ಟಾರ್ನ ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಿರೋದ್ಯಾರು ಅನ್ನೋದ್ರ ಎಕ್ಸ್ಕ್ಲೂಸಿವ್ ಇಲ್ಲಿದೆ ನೋಡಿ.
ಇತ್ತೀಚೆಗೆ ಡಿಬಾಸ್ ದರ್ಶನ್ 49ನೇ ವಸಂತಕ್ಕೆ ಕಾಲಿಟ್ಟರು. ಆದ್ರೆ ಈ ಹಿಂದಿನ 48 ವರ್ಷಗಳಿಗಿಂತ ಈ ವರ್ಷ ತುಂಬಾ ಡಿಫರೆಂಟ್. ಫ್ಯಾನ್ಸ್ ಇಲ್ಲ. ಫ್ಯಾಮಿಲಿ ಇಲ್ಲ. ಕೇಕ್ ಇಲ್ಲ. ಸೆಲೆಬ್ರೇಷನ್ ಇಲ್ಲ. ಜೈಕಾರ ಇಲ್ಲ. ಶಿಳ್ಳೆ-ಚಪ್ಪಾಳೆಗಳ ಸದ್ದಿಲ್ಲ. ನಾಲ್ಕು ಗೋಡೆ ಮಧ್ಯೆ ದರ್ಶನ್ ಒಂಟಿ. ಒಬ್ಬಂಟಿ. ಬರೀ ಏಕಾಂತ.

ದರ್ಶನ್-ವಿನೀಶ್ ಮಧ್ಯೆ ಅಂತರ.. ಶತ್ರುವಿಗೂ ಬೇಡ ಆ ಸ್ಥಿತಿ
ಜೈಲ್ನಲ್ಲಿ ನಡೆದದ್ದೇನು..? ವಿನೀಶ್ ಭಾವುಕಗೊಂಡಿದ್ಯಾಕೆ..?!

ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲು ಪಾಲಾಗಿರೋ ದಾಸ ದರ್ಶನ್ಗೆ ಈ ಬರ್ತ್ ಡೇ ಬಹಳ ಕೆಟ್ಟ ನೆನಪುಗಳನ್ನ ಕೊಟ್ಟಿದೆ. ಅದ್ರಲ್ಲೂ ಬರ್ತ್ ಡೇ ದಿನ ವಿಶ್ ಮಾಡಿ ಬರೋಣ ಅಂತ ಹೋದ ವಿಜಯಲಕ್ಷ್ಮೀ ದರ್ಶನ್, ಮಗ ವಿನೀಶ್, ಸಹೋದರ ದಿನಕರ್ ಹಾಗೂ ಆಪ್ತ ಧನ್ವೀರ್ ಗೌಡಗೆ ಮಾತ್ರ ಗೊತ್ತು ಆ ಕ್ಷಣ ಎಷ್ಟು ಭಾವನಾತ್ಮಕವಾಗಿತ್ತು ಅನ್ನೋದು. ಯಾಕಂದ್ರೆ ಅಲ್ಲೇ ಎದುರು ಬದುರು ಇದ್ರೂ ಸಹ ಏನೂ ಮಾಡಲಾಗದ ಅಸಹಾಯಕತೆ ಅವ್ರನ್ನ ಕಾಡಿತ್ತು.

ಅದರಲ್ಲೂ ತಂದೆಗೆ ವಿನೀಶ್ ಅಂದ್ರೆ ಪ್ರಾಣ. ಮಗ ವಿನೀಶ್ಗೂ ದರ್ಶನ್ ಅಂದ್ರೆ ಪಂಚಪ್ರಾಣ. ಅವರಿಬ್ಬರ ನಡುವೆ ಒಂದು ಅಂತರ ಏರ್ಪಟ್ಟಿದೆ. ಆ ಡಿಸ್ಟ್ಯಾನ್ಸ್ ಯಾವ ಶತ್ರುವಿಗೂ ಬೇಡ ಅನಿಸುತ್ತೆ ಸರ್. ನಿಜಕ್ಕೂ ಅಂದು ತುಂಬಾ ಬೇಜಾರಾಯ್ತು ಅಂತ ನಡೆದದ್ದನ್ನ ನಡೆದಂತೆ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ವಿವರಿಸಿದ್ರು ಕರುನಾಡ ಶೋಕ್ದಾರ್ ಧನ್ವೀರ್ ಗೌಡ.

ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಿರೋದು ಯಾರು ಗೊತ್ತಾ?
ಗ್ಯಾರಂಟಿಯಲ್ಲಿ ದಚ್ಚು ಭಂಟ ಧನ್ವೀರ್ ಎಕ್ಸ್ಕ್ಲೂಸಿವ್ ಟಾಕ್

ಅಲ್ಲದೆ, ವಿನೀಶ್ ತುಂಬಾ ಮೆಚ್ಯೂರಿಟಿ ಇರೋ ಹುಡುಗ. ತೂಕವಾಗಿಯೇ ಮಾತಾಡ್ತಾನೆ.. ಏನಂದ್ರೆ ಅದು ಮಾತಾಡಲ್ಲ. ಮೊನ್ನೆ ಜೈಲಲ್ಲಿ ನನಗೆ ತುಂಬಾ ಬೇಸರವಾಯ್ತು. ಇಬ್ಬರೂ ಎದುರು ಬದುರು ಇದ್ದರು.. ತಂದೆ-ಮಗನ ಮಧ್ಯೆ ಶತ್ರುಗಳಿಗೂ ಆ ತರಹದ ಕೆಟ್ಟ ಗಳಿಗೆ ಬರಬಾರದು. ಯಾಱರೋ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಮಾಡ್ತಿದ್ದಾರೆ. ಕಾಲ ಅನ್ನೋದು ಹೀಗೆಯೇ ಇರಲ್ಲ. ಅವರಿಗೂ ಮಕ್ಕಳಿರ್ತಾರೆ.. ಫ್ಯಾಮಿಲಿ ಇರತ್ತೆ.. ಅವ್ರಿಗೂ ಅನುಭವ ಆಗುತ್ತೆ ಎಂದರು.

ವಿನೀಶ್ ಸಮಾಜ ಕೂಡ ಫೇಸ್ ಮಾಡಬೇಕು. ಸ್ಕೂಲ್, ಕಾಲೇಜ್ ಅಂತ ಇವೆ.. ಮಕ್ಕಳು ಅಲ್ಲೆಲ್ಲಾ ಬೇರೆ ರೀತಿ ಆಡಿಕೊಳ್ತಾರೆ. ಆದ್ರೂ ತಲೆ ಕೆಡಿಸಿಕೊಳ್ಳಲ್ಲ ವಿನೀಶ್.. ನಾವೆಲ್ಲಾ ಧೈರ್ಯ ತುಂಬುತ್ತಾ ಇರ್ತೀವಿ. ವಿನೀಶ್ ಎಲ್ಲೂ ಹೋಗಲ್ಲ.. ಯಾರ ಜೊತೆಯೂ ಸೇರಲ್ಲ. ಎಲ್ಲಾದ್ರೂ ಹೋಗ್ಬೇಕು ಅಂದ್ರೂ ಅವ್ರ ತಾಯಿ ಅಥ್ವಾ ನಮ್ಮನ್ನ ಕೇಳ್ತಾನೆ ಅಂತ ಎಲ್ಲವನ್ನ ಮುಕ್ತವಾಗಿ ತೆರೆದಿಟ್ಟರು ಧನ್ವೀರ್.

ವಿಜಯಲಕ್ಷ್ಮೀ ಅವ್ರಿಗೆ ದೊಡ್ಡದೊಂದು ನಮಸ್ಕಾರ ಎಂದ ಧನು
ಬೇರೆ ಯಾರಾದ್ರೂ ಆಗಿದ್ದಿದ್ರೆ ದರ್ಶನ್ ಸಹವಾಸ ಬಿಟ್ಟು ಬಿಡ್ತಿದ್ರು

ದರ್ಶನ್ ಧರ್ಮ ಪತ್ನಿ ವಿಜಯಲಕ್ಷ್ಮೀ ಬಗ್ಗೆಯೂ ಮಾತನಾಡಿದ ಧನ್ವೀರ್ ಗೌಡ, ಅವರಿಗೊಂದು ದೊಡ್ಡ ನಮಸ್ಕಾರ ಅಂದ್ರು. ಅಷ್ಟೇ ಅಲ್ಲ, ಬೇರೆ ಯಾರೇ ಆಗಿದ್ದಿದ್ರೂ ಸಹವಾಸ ಬೇಡ ಅಂತ ಬಿಟ್ಟುಬಿಡ್ತಿದ್ರು. ಆದ್ರೆ ಅಕ್ಕ ಬಿಟ್ಟುಕೊಡೋ ಮಾತೇ ಇಲ್ಲ ಅಂತಾರೆ. ಹೆಣ್ಣು ಒಂಟಿಯಾಗಿ ನಿಂತ್ಕೊಂಡು.. ಹೀಗೆ ನಿಭಾಯಿಸೋದು ಅಸಾಧ್ಯ. ನಾವೆಲ್ಲಾ ಕಣ್ಣಾರೆ ಕಂಡಿದ್ದೀವಿ. ಇವತ್ತಿಗೂ ಈ ಕ್ಷಣಕ್ಕೂ ಅವರು ದರ್ಶನ್ ಅವ್ರನ್ನ ಬಿಟ್ಟುಕೊಡಲ್ಲ. ಫೇಸ್ ಮಾಡ್ತೀನಿ ಅಂತಾರೆ. ಗಂಡು ಮಕ್ಕಳಿಗೂ ಆ ಗಟ್ಟಿತನ ಬರೋಕೆ ಸಾಧ್ಯವಿಲ್ಲ ಎಂದರು.
ಒಟ್ಟಾರೆ ಧನ್ವೀರ್ ಗೌಡ ಇಡೀ ದರ್ಶನ್ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಕಷ್ಟಕಾಲಕ್ಕೆ ಕೈ ಹಿಡಿಯೋ ಮೂಲಕ ದರ್ಶನ್ ಮೇಲಿನ ಅಭಿಮಾನ, ಪ್ರೀತಿ, ಗೌರವವನ್ನ ಕರುನಾಡಿಗೆ ಸಾರಿದ್ದಾರೆ.




