ಇಂದು ಜನವರಿ 31, ಶನಿವಾರ. ಶನಿವಾರವು ಶನಿದೇವರ ಅಧಿಪತ್ಯದ ದಿನವಾಗಿದ್ದು, ಶ್ರಮ, ಸಹನೆ, ಕರ್ತವ್ಯ ಹಾಗೂ ಫಲಪ್ರಾಪ್ತಿಗೆ ಮಹತ್ವದ ದಿನವೆಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗುತ್ತದೆ. ಈ ದಿನ ಕೆಲ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದ್ದರೆ, ಕೆಲವು ರಾಶಿಗಳು ಜಾಗರೂಕತೆಯಿಂದ ನಡೆದುಕೊಳ್ಳುವುದು ಉತ್ತಮ. ನಿಮ್ಮ ರಾಶಿಗೆ ಇಂದು ಹೇಗಿದೆ? ತಿಳಿದುಕೊಳ್ಳೋಣ..
ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಸಹೋದರರೊಂದಿಗೆ ಬಾಂಧವ್ಯ ಗಟ್ಟಿಯಾಗುವ ದಿನ. ಸೇವಕರು ಹಾಗೂ ಸಹಾಯಕರಿಂದ ನಿರೀಕ್ಷಿತ ಸಹಕಾರ ದೊರೆಯಲಿದೆ. ಕೈಗೊಂಡ ಕೆಲಸಗಳಲ್ಲಿ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ವಸ್ತು ಹಾನಿಯ ಸಾಧ್ಯತೆ ಇರುವುದರಿಂದ ಜಾಗರೂಕತೆ ಅಗತ್ಯ. ಆಧ್ಯಾತ್ಮಿಕ ಶಾಂತಿಗಾಗಿ ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಶ್ರೇಯಸ್ಕರ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಹಣಕಾಸಿನ ಸಮೃದ್ಧಿ ಕಂಡುಬರುತ್ತದೆ. ಪತ್ರಿಕಾ, ಮಾಧ್ಯಮ ಹಾಗೂ ಬರವಣಿಗೆ ಕ್ಷೇತ್ರಗಳಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಆದರೆ ಕುಟುಂಬದಲ್ಲಿ ಸಣ್ಣ ಹಾನಿ ಅಥವಾ ದಾಂಪತ್ಯದಲ್ಲಿ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಮನಸ್ಸಿನ ಸಮತೋಲನಕ್ಕಾಗಿ ಲಕ್ಷ್ಮೀನಾರಾಯಣರ ಆರಾಧನೆ ಮಾಡುವುದು ಒಳಿತು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಧನಲಾಭದ ಯೋಗವಿದೆ. ಹಾಲು-ಹೈನು, ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಲಾಭ ಕಾಣಬಹುದು. ಮಹಿಳೆಯರಿಗೆ ಕುಟುಂಬದಲ್ಲಿ ಸೌಖ್ಯ ಹೆಚ್ಚಾಗುತ್ತದೆ. ಹಿರಿಯರಿಂದ ಸಹಕಾರ ಸಿಗಲಿದೆ. ಆದರೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಹಾಗೂ ಶತ್ರುಗಳಿಂದ ಭಯ ಉಂಟಾಗಬಹುದು. ನರಸಿಂಹ ಸ್ವಾಮಿಯ ಪ್ರಾರ್ಥನೆ ಶುಭಕರ.
ಕರ್ಕ ರಾಶಿ
ಇಂದು ಕರ್ಕ ರಾಶಿಯವರಿಗೆ ಖರ್ಚು ಮತ್ತು ಅಲೆದಾಟ ಹೆಚ್ಚಾಗುವ ದಿನ. ಮಕ್ಕಳಿಂದ ಸ್ವಲ್ಪ ಕಿರಿಕಿರಿ ಅನುಭವಿಸಬಹುದು. ಮನಸ್ಸು ಅಸ್ಥಿರವಾಗುವ ಸಾಧ್ಯತೆ ಇದೆ. ಆದರೆ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದೆ. ಮಾನಸಿಕ ಶಾಂತಿಗಾಗಿ ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ನೆರವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಅನುಕೂಲಕರ ದಿನ. ಹಾಲು-ಹೈನು ಹಾಗೂ ವಸ್ತ್ರ ವ್ಯಾಪಾರದಲ್ಲಿ ಲಾಭ ಸಾಧ್ಯತೆ ಇದೆ. ಪ್ರಯಾಣ ಮಾಡುವಾಗ ಎಚ್ಚರಿಕೆ ಅಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ಕಿತ್ತಾಟ ಅಥವಾ ಅಸಮಾಧಾನ ಉಂಟಾಗಬಹುದು. ಗ್ರಾಮ ದೇವತಾರಾಧನೆ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಕೆಲಸದಲ್ಲಿ ಶ್ರದ್ಧೆ ಮತ್ತು ಕಾರ್ಯಸಿದ್ಧಿ ದೊರೆಯಲಿದೆ. ಮಿತ್ರರೊಂದಿಗೆ ಉತ್ತಮ ಸಾಮರಸ್ಯ ಕಂಡುಬರುತ್ತದೆ. ಕೈಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ದಾಂಪತ್ಯದಲ್ಲೂ ಸಂತೋಷವಿರುತ್ತದೆ. ನಿಮ್ಮ ಇಷ್ಟದೇವತಾರಾಧನೆ ಶುಭ ಫಲ ನೀಡುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಧರ್ಮ ಹಾಗೂ ಪುಣ್ಯ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಜ್ಜನರ ಭೇಟಿ ಲಾಭಕರವಾಗಲಿದೆ. ಆಹಾರದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಸಾಮರಸ್ಯ ಇರುತ್ತದೆ. ಅನ್ನಪೂರ್ಣೇಶ್ವರಿ ದೇವಿಯ ಪ್ರಾರ್ಥನೆ ಒಳಿತು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಅಪೇಕ್ಷೆಗಳು ಹೆಚ್ಚಾಗಬಹುದು. ಆದರೆ ಕಾರ್ಯಗಳಲ್ಲಿ ಅನುಕೂಲ ಹಾಗೂ ಹಿರಿಯರ ಸಹಾಯ ದೊರೆಯಲಿದೆ. ಮನೋಸ್ಥೈರ್ಯಕ್ಕಾಗಿ ವಿಷ್ಣು ಸಹಸ್ರನಾಮ ಪಠಣ ಶ್ರೇಯಸ್ಕರ.
ಧನು ರಾಶಿ
ಧನು ರಾಶಿಯವರಿಗೆ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ, ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳು ಕಾದಿವೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಶ್ರೀಕೃಷ್ಣ ಪ್ರಾರ್ಥನೆ ಶುಭ ನೀಡುತ್ತದೆ.
ಮಕರ ರಾಶಿ
ಮಕರ ರಾಶಿಯವರಿಗೆ ಕೆಲಸಗಳಲ್ಲಿ ಅನುಕೂಲಕರ ಪರಿಸ್ಥಿತಿ. ಗೃಹ ಸಂಬಂಧಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಸಾಲದ ಸಾಧ್ಯತೆ ಇದೆ – ಹಣಕಾಸು ನಿರ್ಣಯದಲ್ಲಿ ಎಚ್ಚರಿಕೆ ಅಗತ್ಯ. ನರಸಿಂಹ ಸ್ವಾಮಿಯ ಆರಾಧನೆ ಶುಭಕರ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಕಾರ್ಯಹಾನಿ ಹಾಗೂ ಕೆಲಸದಲ್ಲಿ ತೊಡಕು ಉಂಟಾಗಬಹುದು. ಆಕ್ಷೇಪಗಳು ಬರಲಿವೆ. ದಾಂಪತ್ಯದಲ್ಲಿ ಮನಸ್ತಾಪ ಸಾಧ್ಯ. ಆದರೆ ಮಕ್ಕಳಿಂದ ಅನುಕೂಲ ಹಾಗೂ ಅಧ್ಯಯನಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಗಣಪತಿ ಪ್ರಾರ್ಥನೆ ಒಳಿತು.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಅನುಕೂಲಕರ ದಿನ. ಬಂಧುಗಳೊಂದಿಗೆ ಮನೋರಂಜನೆ, ಮನಸ್ಸಿಗೆ ಹಿತವಾದ ವಾತಾವರಣ ನಿರ್ಮಾಣವಾಗಲಿದೆ. ಕ್ಷೇತ್ರ ದರ್ಶನ ಸಾಧ್ಯತೆ ಇದೆ. ನರಸಿಂಹ ಸ್ವಾಮಿಯ ಪ್ರಾರ್ಥನೆ ಶುಭ ಫಲ ನೀಡುತ್ತದೆ.





