ರಾಕಿಂಗ್ ಸ್ಟಾರ್ ಯಶ್ ಬಳಿಕ ಇತ್ತೀಚಿನ ಸ್ಟಾರ್ಗಳಲ್ಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಸಿನಿಕರ್ಮಿಗಳಲ್ಲಿ ರಿಷಬ್ ಶೆಟ್ಟಿ ಕೂಡ ಪ್ರಮುಖರು. ಕಾಂತಾರ ಹಾಗೂ ಕಾಂತಾರ-1 ಮೂಲಕ ಡಿವೈನ್ ಸ್ಟಾರ್ ಆಗಿ ಹೊರಹೊಮ್ಮಿರೋ ಶೆಟ್ರು, ಬಾಲಿವುಡ್ ಶೆಹೆನ್ ಷಾ ಅಮಿತಾಬ್ ಬಚ್ಚನ್ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅದಕ್ಕೆ ಕಾರಣ ಬೇರೇನೇ ಇದೆ. ಆ ಅನ್ಟೋಲ್ಡ್ ಸ್ಟೋರಿಯನ್ನ ಹೇಳ್ತೀವಿ ಈ ಸ್ಟೋರಿ ನೋಡಿ.
ರಿಷಬ್ ಶೆಟ್ಟಿ-ಅಮಿತಾಬ್ ಅನ್ಟೋಲ್ಡ್ ಸ್ಟೋರಿ ಗೊತ್ತಾ..?
ಗೋವಾ CM ಜೊತೆ ಕಾಂತಾರ ಕ್ರಿಯೇಟರ್ ಕುಶಲೋಪರಿ
ಮೂರು ವರ್ಷಗಳ ಹಿಂದೆ ತೆರೆಕಂಡ ಕಾಂತಾರ ಸಿನಿಮಾದ ಗಳಿಕೆ ಬರೋಬ್ಬರಿ 450 ಕೋಟಿ. ಇತ್ತೀಚೆಗೆ ರಿಲೀಸ್ ಆದ ಕಾಂತಾರ-1 ಆದಾಯ ಬರೋಬ್ಬರಿ 900 ಕೋಟಿ. ಇವೆರಡೂ ಚಿತ್ರಗಳಿಂದ ಭಾರತೀಯ ಚಿತ್ರರಂಗವನ್ನೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿದ್ರು ನಮ್ಮ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿ. ನಟ ಹಾಗೂ ನಿರ್ದೇಶಕರಾಗಿ ಎಲ್ಲರೂ ಮಾತನಾಡುವಂತೆ ಮಾಡಿದ್ರು. ಡಿವೈನ್ ಸ್ಟಾರ್ ಆಗಿ ಮಿಂಚುತ್ತಿರೋ ಶೆಟ್ರು, ಪತ್ನಿ ಕಮ್ ಕಾಂತಾರ ಕಾಸ್ಟ್ಯೂಮ್ ಡಿಸೈನರ್ ಪ್ರಗತಿ ಜೊತೆಗೂಡಿ, ಸಿನಿಮಾದ ಸಕ್ಸಸ್ನ ಎಂಜಾಯ್ ಮಾಡ್ತಿದ್ದಾರೆ.

ಇತ್ತೀಚೆಗೆ ಗೋವಾ ಸಿಎಂರನ್ನ ಭೇಟಿಯಾಗಿ ಉಭಯ ಕುಶಲೋಪರಿ ಹಂಚಿಕೊಂಡಿದ್ದಾರೆ ರಿಷಬ್ ದಂಪತಿ. ಅದ್ರ ಫೋಟೋಸ್ ಹಾಗೂ ವಿಡಿಯೋಸ್ ಎಲ್ಲೆಡೆ ವೈರಲ್ ಕೂಡ ಆಗ್ತಿವೆ. ಸಿನಿಮಾದ ಗೆಲುವಿಗೆ ಸಾಥ್ ನೀಡಿದಂತಹ ಎಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳನ್ನ ರಿಷಬ್ ಭೇಟಿ ಆಗುವ ಮೂಲಕ ಧನ್ಯವಾದ ಹೇಳುವ ಕಾರ್ಯ ಮಾಡ್ತಿದ್ದಾರೆ. ಎಲ್ಲೇ ಹೋದ್ರೂ ಸಹ ಇವರ ಸಾಧನೆಗೆ ಸನ್ಮಾನ ಮಾಡುವ ಮೂಲಕ ಗೌರವ ಅರ್ಪಿಸ್ತಿದ್ದಾರೆ ರಾಜಕಾರಣಿಗಳು.
ಅಂದಹಾಗೆ ಬಾಲಿವುಡ್ನ ಶೆಹೆನ್ ಷಾ ಬಿಗ್ಬಿ ಅಮಿತಾಬ್ ಬಚ್ಚನ್ ಜೊತೆ ರಿಷಬ್ ಶೆಟ್ಟಿಗೊಂದು ಅವಿನಾಭಾವ ಸಂಬಂಧವಿದೆ. ಅದೊಂದು ಅನ್ಟೋಲ್ಡ್ ಸ್ಟೋರಿ ಕೂಡ ಹೌದು.
ಬಾಲಿವುಡ್ ಶೆಹೆನ್ಷಾ ಜೊತೆ ರಿಷಬ್ ಶೆಟ್ರಿಗಿದೆ ಬಾಂಧವ್ಯ
KBC ಶೋಗೆ ಸ್ವತಃ ಬಿಗ್ಬಿಯಿಂದಲೇ ಬಂದಿತ್ತು ಬುಲಾವ್
ರಿಷಬ್ ಶೆಟ್ಟಿ.. ಯಾವುದೇ ಮಾಸ್ ಸಿನಿಮಾ ಮಾಡಿ, ದೊಡ್ಡ ಮಟ್ಟದಲ್ಲಿ ಮಾಸ್ ಫ್ಯಾನ್ಸ್ನ ಗಳಿಸಿದ ಹೀರೋ ಅಲ್ಲ. ಸ್ವಂತ ಬುದ್ದಿಯಿಂದ, ಕಂಟೆಂಟ್ ಬೇಸ್ಡ್ ಸಿನಿಮಾಗಳನ್ನ ಮಾಡಿ ಇಡೀ ದೇಶದ ಪ್ರೀತಿ, ಗೌರವ, ಅಭಿಮಾನ ಗಳಿಸಿದವರು. ಇಂದು ರಿಷಬ್ ಬರೀ ಹೆಸರಲ್ಲ. ಕಲೆಗೆ ಬೆಲೆ ಕೊಡೋ ಶಕ್ತಿ ಅಂತಲೇ ಎಲ್ಲರೂ ಅವ್ರನ್ನ ಬಿಂಬಿಸ್ತಾರೆ. ಅದೇ ಕಾರಣದಿಂದ ಬಾಲಿವುಡ್ ಶೆಹೆನ್ಷಾ ಅಮಿತಾಬ್ ಬಚ್ಚನ್ಗೂ ಕೂಡ ರಿಷಬ್ನ ಕಂಡ್ರೆ ಎಲ್ಲಿಲ್ಲದ ಅಭಿಮಾನ.
ಕಾಂತಾರ ಚಾಪ್ಟರ್-1 ರಿಲೀಸ್ಗೂ ಮೊದಲೇ ಅಮಿತಾಬ್ ಬಚ್ಚನ್, ಕೌನ್ ಬನೇಗಾ ಕರೋಡ್ಪತಿ ಶೋಗೆ ರಿಷಬ್ ಶೆಟ್ಟಿಯನ್ನ ಕರೆಸಿದ್ದರು. ಅಂದ್ರೆ ಸಿನಿಮಾ ಹಿಟ್ ಆದ್ಮೇಲೆ ಅಲ್ಲ ಅನ್ನೋದನ್ನ ನಾವು ಇಲ್ಲಿ ಗಮನಿಸಬೇಕು. ಅಂದಹಾಗೆ ರಿಷಬ್ ಶೆಟ್ಟಿ ಅವ್ರು ಬಿಗ್ಬಿಗೆ ಮೊದಲೇ ಗೊತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಹಂಡ್ರೆಡ್ ಪರ್ಸೆಂಟ್ ಗೊತ್ತು. ಅದಕ್ಕೆ ಕಾರಣ ರಿಷಬ್ ಶೆಟ್ಟಿ 2018ರಲ್ಲಿ ಮಾಡಿದಂತಹ ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು.
ಯೆಸ್.. ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಅನ್ನೋ ಮಕ್ಕಳ ಸಿನಿಮಾನ ರಿಷಬ್ ನಟಿಸಿ, ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದ್ದರು. ಇದರಲ್ಲಿ ಎವರ್ಗ್ರೀನ್ ಹೀರೋ ಅನಂತ್ನಾಗ್ ಅವ್ರು ಸರ್ಕಾರಿ ಶಾಲೆಗಳನ್ನ ಉಳಿಸುವ ನಿಟ್ಟಿನಲ್ಲಿ ಕೋರ್ಟ್ನಲ್ಲಿ ವಾದ ಮಾಡುವ ಪರಿ ನಿಜಕ್ಕೂ ಅನನ್ಯ. ಈ ಸಿನಿಮಾಗೆ ನ್ಯಾಷನಲ್ ಜೊತೆ ಸ್ಟೇಟ್ ಅವಾರ್ಡ್ಸ್ ಕೂಡ ಬಂತು.
ಸ.ಹಿ.ಪ್ರಾ.ಶಾಲೆ ಕಾಸರಗೋಡಿನಲ್ಲಿ ನಟಿಸಬೇಕಿತ್ತು ಅಮಿತಾಬ್
ಕಾಂತಾರ ನಂತ್ರ ಮುಂಬೈ ತಾಜ್ ಹೋಟೆಲ್ನಲ್ಲಿ ನಡೆದದ್ದೇನು?
ಇಂಟರೆಸ್ಟಿಂಗ್ ಅಂದ್ರೆ ಅನಂತ್ನಾಗ್ ಮಾಡಿರೋ ಪಾತ್ರಕ್ಕೆ ಅದಕ್ಕೂ ಮುನ್ನ ರಿಷಬ್ ಅವರು ಅಮಿತಾಬ್ ಬಚ್ಚನ್ ಕೈಯಲ್ಲಿ ಮಾಡಿಸೋಕೆ ಅಪ್ರೋಚ್ ಮಾಡಿದ್ದರಂತೆ. ಆಗ ಡೇಟ್ಸ್ ಇಲ್ಲದ ಕಾರಣ ಬಿಗ್ಬಿ ನಟಿಸೋಕೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಆದ್ರೆ ಯಾವಾಗ ಕಾಂತಾರ ಚಿತ್ರ ಹಿಟ್ ಆಯ್ತೋ ಆಗ, ಸ್ವತಃ ಅಮಿತಾಬ್ ಅವರೇ ರಿಷಬ್ಗೆ ಕರೆ ಮಾಡಿ, ಮುಂಬೈನ ತಾಜ್ ಹೋಟೆಲ್ಗೆ ಕರೆಸಿ ಅಭಿನಂದಿಸಿದ್ದರಂತೆ.
ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಪಂಚೆಯನ್ನೇ ಜಾಸ್ತಿ ಉಡುವಂತಹ ಶೆಟ್ರು, ಪಂಚೆಯಲ್ಲೇ ತಾಜ್ ಹೋಟೆಲ್ಗೆ ಹೋಗಿದ್ದರಂತೆ. ಅಲ್ಲಿ ಸೆಕ್ಯೂರಿಟಿ ಪಂಚೆ ಹಾಕಿರೋ ಹಿನ್ನೆಲೆ ಒಳಗೆ ಬಿಡದೇ ಇದ್ದಾಗ, ಜಯಾ ಬಚ್ಚನ್ ಅವರೇ ಹೋಟೆಲ್ ಮ್ಯಾನೇಜ್ಮೆಂಟ್ ಜೊತೆ ಮಾತಾಡಿದ್ದರಂತೆ. ರಿಷಬ್ ಅವ್ರನ್ನ ಒಳಗೆ ಬಿಡಿ. ಇಲ್ಲ ಅಂದ್ರೆ ನಾನು ಅಮಿತಾಬ್ ಹೊರಗೆ ಹೋಗುತ್ತೇವೆ ಎಂದಿದ್ದರಂತೆ. ಆಗ ಹೋಟೆಲ್ ಸಿಬ್ಬಂದಿ ಕ್ಷಮೆ ಕೇಳಿ, ರಿಷಬ್ ಶೆಟ್ಟಿಯವರನ್ನ ಕರೆತಂದು ಅಮಿತಾಬ್ ದಂಪತಿ ಬಳಿ ಬಿಟ್ಟಿದ್ದರಂತೆ.
ಇದು ಕಾಂತಾರ ಚಿತ್ರದ ಸಕ್ಸಸ್ ಬಳಿಕ ಆದ ಘಟನೆ. ಆದ್ರೀಗ ರಿಷಬ್ ಮೇಲೆ ಅಮಿತಾಬ್ ಬಚ್ಚನ್ಗಿರೋ ಭರವಸೆ, ಜಡ್ಜ್ಮೆಂಟ್ ನಿಜಕ್ಕೂ ಅದ್ಭುತ ಅನಿಸಿತು. ಕಾಂತಾರ-1 ರಿಲೀಸ್ಗೂ ಮೊದಲೇ ಶೆಟ್ರನ್ನ ಕರೆಸಿ, ಕೆಬಿಸಿ ಶೋನಲ್ಲಿ ಕೂರಿಸಿದ್ದು, ಒಂದಷ್ಟು ಮಾತನಾಡಿಸಿದ್ದು ಗ್ರೇಟೆಸ್ಟ್ ವಿಷಯ. ಬಹುಶಃ ಇದೆಲ್ಲವನ್ನ ನೋಡ್ತಿದ್ರೆ ಸದ್ಯದಲ್ಲೇ ರಿಷಬ್ ಶೆಟ್ಟಿ ಚಿತ್ರದಲ್ಲಿ ಬಿಗ್ಬಿ ಬಣ್ಣ ಹಚ್ಚೋದು ಪಕ್ಕಾ ಅನಿಸ್ತಿದೆ. ಇದಲ್ಲವೇ ಕನ್ನಡಿಗರ ಗತ್ತು. ನಿಜಕ್ಕೂ ಇದೊಂದು ಅಭೂತಪೂರ್ವ, ಅನನ್ಯ ಬಾಂಧವ್ಯದ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ.





