• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ 1 ವರ್ಷ! ಭಯೋತ್ಪಾದನೆ ವಿರುದ್ಧ ‘ಸಿಲಿಕಾನ್ ಶೀಲ್ಡ್’ ಆಯ್ತಾ ಬೆಂಗಳೂರು?

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
March 1, 2025 - 11:17 am
in Flash News, ಬೆಂ. ನಗರ, ವಿಶೇಷ
0 0
0
Rameshwara

ಮಾರ್ಚ್ 1, 2024. ಬೆಂಗಳೂರಿನ ಐಟಿಐಪಿಎಲ್ ರಸ್ತೆಯ ಜನನಿಬಿಡ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಮಧ್ಯಾಹ್ನದ ಊಟದ ಸಮಯ.. ಆಹಾರದ ಪ್ಲೇಟುಗಳ ಸದ್ದು, ಗ್ರಾಹಕರ ಗಲಾಟೆ, ಸಿಬ್ಬಂದಿಯ ತರಾತುರಿಯ ನಡುವಲ್ಲೇ ಹಠಾತ್ ಘಟನೆಯೊಂದು ಸಂಭವಿಸಿತ್ತು… ಮಧ್ಯಾಹ್ನ 12:55ಕ್ಕೆ ಸರಿಯಾಗಿ ಭೂಕಂಪದಂತಹ ದೊಡ್ಡ ಸದ್ದು ಕೇಳಿ ಬಂತು! ಕಿವಿಗಡಚಿಕ್ಕುವ ಸ್ಫೋಟದ ಶಬ್ದಕ್ಕೆ ಕಿಟಕಿಗಳು ಚೂರಾದವು. ಧೂಳು, ರಕ್ತ, ಚೀರಾಟ, ಕೂಗಾಟದ ಸದ್ದು ಕೇಳಿಸಿತು. ಹೋಟೆಲ್ ಸಿಬ್ಬಂದಿ ಸೇರಿದಂತೆ 9 ಜನ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸದೇ ಇದ್ದರೂ ಕೂಡಾ, ಸಿಲಿಕಾನ್ ಸಿಟಿಯ ‘ಸಾಮಾನ್ಯ’ದಿನವೊಂದು ಹೃದಯವಿದ್ರಾವಕ ಅಧ್ಯಾಯಕ್ಕೆ ಸಾಕ್ಷಿಯಾಯ್ತು..

ಇದು ಸಾಮಾನ್ಯ ಸ್ಫೋಟವಲ್ಲ..! ಇದರ ಹಿಂದಿತ್ತು ಭಯೋತ್ಪಾದನೆಯ ‘ಡಾರ್ಕ್ ವೆಬ್’..!

ರಾಮೇಶ್ವರಂ ಕೆಫೆ ಸ್ಫೋಟ ಕೇವಲ ಒಂದು ಆಕಸ್ಮಿಕ ಘಟನೆ ಅಲ್ಲ. ಇದು ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಮತ್ತು ಲಷ್ಕರ್ – ಎ – ತೊಯ್ಬಾ ಉಗ್ರ ಸಂಘಠನೆಗಳ ಸಂಪರ್ಕ ಹೊಂದಿದ್ದ ಆರೋಪಿಗಳ ಕುತಂತ್ರ.. ಎನ್ಐಎ ತನಿಖೆ ವೇಳೆ ಈ ಕುರಿತಾಗಿ ಹಲವು ಆತಂಕಕಾರಿ ಮಾಹಿತಿಗಳು ಹೊರ ಬಿದ್ದವು. ಸ್ಫೋಟಕ್ಕೆ ಕಾರಣವಾದ ಐಇಡಿ ಸಾಧನವನ್ನ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜೀಬ್ ರೂಪಿಸಿದ್ದರು. ಕೊಲ್ಕತ್ತಾದಲ್ಲಿ ಏಪ್ರಿಲ್ 12ರಂದು ಇಬ್ಬರೂ ಆರೋಪಿಗಳನ್ನು ಬಂಧಿಸಲಾಯಿತು. ಇವರೊಂದಿಗೆ ಅರಾಫತ್, ಮಾಜಿದ್ ಮುನೀರ್, ಮುಜಾಮಿಲ್ ಶರೀಫ್ ಸೇರಿದಂತೆ ಒಟ್ಟು 5 ಜನ ಆರೋಪಿಗಳನ್ನು ಎನ್ಐಎ ಪತ್ತೆ ಹಚ್ಚಿತು. ಸ್ಫೋಟ ನಡೆದ ಕೇವಲ 43 ದಿನಗಳಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನೂ ಬಂಧನ ಮಾಡಿದ ಭದ್ರತಾ ಪಡೆಗಳ ವೇಗ ಹಾಗೂ ಸೂಕ್ಷ್ಮತೆ ನಿಜಕ್ಕೂ ಶ್ಲಾಘನಾರ್ಹ..

RelatedPosts

25 ವರ್ಷಗಳ ಬಳಿಕ ಬೆಂಗಳೂರಿನ HAL ವಿಮಾನ ನಿಲ್ದಾಣ ಪುನಃ ತೆರೆಯಲು ಪ್ಲಾನ್..!

ಬೆಂಗಳೂರಿನಲ್ಲಿ ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ದೌರ್ಜನ್ಯ: ಕಾಮುಕನ ಬಂಧನ

ಚಿನ್ನಾಭರಣ ವಂಚನೆ ಕೇಸ್‌‌‌ನಿಂದ ಶ್ವೇತಾಗೌಡಗೆ ರಿಲೀಫ್

ಬೆಂಗಳೂರಿಗರೇ ಎಚ್ಚರ! 3 ದಿನ ಕಾವೇರಿ ನೀರು ಸ್ಥಗಿತ, ಸಂಗ್ರಹಿಸಿಟ್ಟುಕೊಳ್ಳಿ

ADVERTISEMENT
ADVERTISEMENT
‘ಸೈಬರ್ ಜಿಹಾದ್’ – ಇದು ಭಯೋತ್ಪಾದನೆಯ ಹೊಸ ಮುಖ

ಅಬ್ದುಲ್ ಮತೀನ್ ತಾಹಾ ಸಾಮಾನ್ಯನಲ್ಲ. ಈತ ಡಾರ್ಕ್ ವೆಬ್, ಎನ್‌ಕ್ರಿಪ್ಟೆಡ್ ಆ್ಯಪ್‌ಗಳ ಮೂಲಕ ಸ್ಫೋಟದ ಯೋಜನೆ ರೂಪಿಸಿದ್ದ ‘ಟೆಕ್-ಸ್ಯಾವಿ’ಭಯೋತ್ಪಾದಕ. ಎನ್‌ಐಎ ಪ್ರಕಾರ, ಈ ಆರೋಪಿಗಳು ಸೋಷಿಯಲ್ ಮೀಡಿಯಾ ಮೂಲಕ ಐಎಸ್ಐಎಸ್ ಪ್ರಚಾರಕರೊಂದಿಗೆ ಸಂಪರ್ಕದಲ್ಲಿದ್ದರು.

ರಾಮೇಶ್ವರಂ ಕೆಫೆಯನ್ನು ಆಯ್ಕೆಮಾಡಲು ಕಾರಣ?

ಬೆಂಗಳೂರು ಭಾರತದ ತಂತ್ರಜ್ಞಾನದ ಹೃದಯ. ಇಲ್ಲಿ ಸ್ಫೋಟ ಸಂಭವಿಸಿದರೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಸಾಧ್ಯ. ಆದರೆ, ಈ ಸ್ಫೋಟದ ಸಂಚುಕೋರರ ಯೋಜನೆಗಳು ಇನ್ನೂ ದೊಡ್ಡ ಮಟ್ಟದಲ್ಲಿತ್ತು. ನ್ಯಾಯಾಲಯಕ್ಕೆ ಎನ್‌ಐಎ ಸಲ್ಲಿಸಿರುವ 1 ಸಾವಿರ ಪುಟಗಳ ಚಾರ್ಜ್ ಶೀಟ್ ಪ್ರಕಾರ, ಈ ಗುಂಪಿನ ಯೋಜನೆಗಳು ಸಾಕಷ್ಟು ವಿಶಾಲವಾಗಿದ್ದು, ಕೇವಲ ಒಂದು ಸ್ಫೋಟವೇ ಅಲ್ಲದೆ ದೇಶದ ಇತರ ಭಾಗಗಳಲ್ಲಿ ಹಲವಾರು ದಾಳಿಗಳನ್ನು ಸಂಘಟಿಸಲು ಸಂಚು ರೂಪಿಸುತ್ತಿದ್ದರು.

ರಾಮೇಶ್ವರಂ ಕೆಫೆ ಸ್ಫೋಟದಿಂದ ಸೃಷ್ಟಿಯಾದ ಪ್ರಶ್ನೆಗಳು

ಈ ಘಟನೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಇರಬೇಕಾದ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಹಾಗೂ ಭದ್ರತಾ ಕೊರತೆಗಳತ್ತ ಬೊಟ್ಟು ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಮತ್ತು ಮೆಟಲ್ ಡಿಟೆಕ್ಟರ್‌ಗಳು ಸಾಕಾಗುವುದಿಲ್ಲ. ಜೊತೆಯಲ್ಲೇ ಇಂತಹ ಸಂಕೀರ್ಣ ತನಿಖೆಗಳಲ್ಲಿ ಎನ್ಐಎ ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕು ಎಂಬ ಆಗ್ರಹಗಳೂ ಇವೆ. ಮತ್ತೊಂದೆಡೆ, ಯುವಕರನ್ನು ಭಯೋತ್ಪಾದನೆಯತ್ತ ಪ್ರಚೋದಿಸುವ ಆನ್‌ಲೈನ್ ವೇದಿಕೆಗಳು ತುಂಬಾನೇ ಅಪಾಯಕಾರಿ ಎಂದೂ ಸಾಬೀತಾಗಿದೆ.

ಒಂದು ವರ್ಷದ ನಂತರ: ಏನು ಬದಲಾಯಿತು?

ಸ್ಫೋಟದಲ್ಲಿ ಗಾಯಗೊಂಡಿದ್ದವರು ಚೇತರಿಸಿಕೊಂಡಿದ್ದಾರೆ. ರಾಮೇಶ್ವರಂ ಕೆಫೆ ಮತ್ತೆ ಜನರಿಂದ ತುಂಬಿದೆ. ಆದರೆ, ಭಯೋತ್ಪಾದನೆಯ ಕರಿನೆರಳು ಇನ್ನೂ ಮಾಯವಾಗಿಲ್ಲ. ಎನ್ಐಎ ವಕೀಲರ ಪ್ರಕಾರ, ‘ಈ ಪ್ರಕರಣದ ತನಿಖೆ ಭಾರತದ ಭದ್ರತಾ ಚೌಕಟ್ಟಿನ ಸವಾಲುಗಳನ್ನು ಮತ್ತು ಸಾಧ್ಯತೆಗಳನ್ನು ಎತ್ತಿ ತೋರಿಸಿದೆ’ ಎನ್ನುತ್ತಾರೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ. ಬಂಧಿತ ಆರೋಪಿಗಳ ವಿರುದ್ಧ ದೇಶದ ವಿರುದ್ಧ ಯುದ್ಧ, ಭಯೋತ್ಪಾದನೆ, ಸ್ಫೋಟಕಗಳ ಉಪಯೋಗದಂಥಾ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.

ಒಟ್ಟಿನಲ್ಲಿ, ರಾಮೇಶ್ವರಂ ಕೆಫೆ ಸ್ಫೋಟ ಕೇವಲ ಒಂದು ಘಟನೆ ಅಲ್ಲ. ಇದು ಭಯೋತ್ಪಾದನೆಯು ಸಾಂಪ್ರದಾಯಿಕ ಗಡಿಗಳನ್ನು ದಾಟಿ, ತಂತ್ರಜ್ಞಾನ ಮತ್ತು ಮಾನಸಿಕ ಯುದ್ಧದ ಮೂಲಕ ಹೇಗೆ ಹರಡುತ್ತಿದೆ ಎಂಬುದರ ಸೂಚನೆ..! ಆದರೆ, ಎನ್ಐಎದ ವೇಗವಾದ ಕಾರ್ಯ ವಿಧಾನ ಮತ್ತು ನ್ಯಾಯಾಂಗ ಪ್ರಕ್ರಿಯೆ ಭಾರತದ ಶಕ್ತಿಯನ್ನು ಪ್ರತಿಬಿಂಬಿಸುತ್ತಿದೆ. ಹೊಸ ತಲೆಮಾರಿನ ಸ್ಫೋಟಕ ಯೋಜನೆಗಳಿಗೆ ಬೆಂಗಳೂರು ‘ಸಿಲಿಕಾನ್ ಶೀಲ್ಡ್’ಆಗಬೇಕಿದೆ.

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (63)

ಯಶ್ ತಾಯಿ ಪುಷ್ಪ ವಿರುದ್ಧ ಕೊತ್ತಲವಾಡಿ ಸಹ ನಟನ ಪೇಮೆಂಟ್ ವಂಚನೆ ಆರೋಪ

by ಶ್ರೀದೇವಿ ಬಿ. ವೈ
September 16, 2025 - 2:09 pm
0

Web (62)

ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ..!

by ಶ್ರೀದೇವಿ ಬಿ. ವೈ
September 16, 2025 - 2:00 pm
0

Web (61)

ಸದ್ಗುರು ಜಗ್ಗಿ ವಾಸುದೇವ್ ಹೆಸರಲ್ಲಿ ಕೋಟಿ ಕೋಟಿ ವಂಚನೆ

by ಶ್ರೀದೇವಿ ಬಿ. ವೈ
September 16, 2025 - 1:46 pm
0

Web (60)

ಎಸಿಎಸ್ ಅಧಕಾರಿ ಮನೆಯಲ್ಲಿ 2 ಕೋಟಿ ನಗದು,1 ಕೋಟಿ ಚಿನ್ನ ಪತ್ತೆ, ಭೂ ಹಗರಣದಲ್ಲಿ ಅರೆಸ್ಟ್​

by ಶ್ರೀದೇವಿ ಬಿ. ವೈ
September 16, 2025 - 1:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • 111 (44)
    ಅವಾಚ್ಯವಾಗಿ ನಿಂದಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಮಾರಣಾಂತಿಕ ಹಲ್ಲೆ: 3 ದಿನದ ಬಳಿಕ ಯುವಕ ಸಾ*ವು
    September 14, 2025 | 0
  • 111 (43)
    ಗುಜರಾತ್ ಕಾರ್ಖಾನೆಯಲ್ಲಿ ಭೀಕರ ಬೆಂಕಿ: ಸುಟ್ಟು ಕರಕಲಾದ ಫ್ಯಾಕ್ಟರಿ
    September 14, 2025 | 0
  • 111 (42)
    ಜನಸಾಮಾನ್ಯರಿಗೆ ಮತ್ತೆ ಕರೆಂಟ್ ಶಾಕ್..ವಿದ್ಯುತ್ ದರ ಏರಿಕೆಗೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಕೆ
    September 14, 2025 | 0
  • 111 (40)
    ಹಾಸನ ಗಣೇಶೋತ್ಸವ ದುರಂತ: ಮೃತ ಗೋಕುಲ್ ಕುಟುಂಬದವರಿಗೆ ದೇವೇಗೌಡರ ಸಾಂತ್ವನ
    September 14, 2025 | 0
  • 111 (36)
    ಸೌಜನ್ಯಳ ಹ*ತ್ಯೆಗೈದಿದ್ದು ಮಾನ ವಿಠಲಗೌಡ ಎಂದು ಆರೋಪಿಸಿದ್ದ ಸ್ನೇಹಮಯಿ ಕೃಷ್ಣ ವಿರುದ್ದ ದೂರು
    September 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version