ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಧಾರವಾಡ, ಹಾವೇರಿ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಜೊತೆಗೆ ದಾವಣಗೆರೆ, ಚಾಮರಾಜನಗರ, ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.
ಕರಾವಳಿ ಮತ್ತು ಒಳನಾಡಿನ ಹಲವು ಪ್ರದೇಶಗಳಾದ ಆಗುಂಬೆ, ಸೋಮವಾರಪೇಟೆ, ಸಿದ್ದಾಪುರ, ಶೃಂಗೇರಿ, ಭಾಗಮಂಡಲ, ಜಯಪುರ, ಕುಂದಾಪುರ, ಮಂಕಿ, ಕೋಟಾ, ಮೂಡಬಿದಿರೆ, ಬೆಳ್ತಂಗಡಿ, ಕೊಪ್ಪ, ನಾಪೋಕ್ಲು, ಉಪ್ಪಿನಂಗಡಿ, ಧರ್ಮಸ್ಥಳ, ಸುಳ್ಯ, ಪುತ್ತೂರು, ಕಾರ್ಕಳ, ಕುಮಟಾ, ಹುಮ್ನಾಬಾದ್, ಕಮ್ಮರಡಿ, ಕಳಸ, ಕೊಟ್ಟಿಗೆಹಾರ, ಮಾಣಿ, ಹಾರಂಗಿ, ಹುಂಚದಕಟ್ಟೆ, ಕೋಣನೂರು, ಎನ್ಆರ್ ಪುರ, ಮಂಗಳೂರು, ಗೇರುಸೊಪ್ಪ, ನಿಪ್ಪಾಣಿ, ಅಜ್ಜಂಪುರ, ತರೀಕೆರೆ, ಬಂಡೀಪುರ, ಭದ್ರಾವತಿ, ಬೇಲೂರು, ಬರಗೂರು, ಅಂಕೋಲಾ, ಲೋಕಾಪುರ, ಜೇವರ್ಗಿ, ಆಲಮಟ್ಟಿ, ಬಬಲೇಶ್ವರ, ಚಿಕ್ಕೋಡಿ, ಸೇಡಬಾಳ, ಮತ್ತು ಯಾದಗಿರಿಯಲ್ಲಿ ಈಗಾಗಲೇ ಮಳೆಯಾಗಿದೆ.
ತಾಪಮಾನ ವಿವರ: ರಾಯಚೂರಿನಲ್ಲಿ 32.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಎಚ್ಎಎಲ್ನಲ್ಲಿ 29.2 ಡಿಗ್ರಿ ಗರಿಷ್ಠ ಮತ್ತು 20.2 ಡಿಗ್ರಿ ಕನಿಷ್ಠ, ನಗರದಲ್ಲಿ 28.2 ಡಿಗ್ರಿ ಗರಿಷ್ಠ ಮತ್ತು 21.6 ಡಿಗ್ರಿ ಕನಿಷ್ಠ, ಕೆಐಎಎಲ್ನಲ್ಲಿ 29.6 ಡಿಗ್ರಿ ಗರಿಷ್ಠ ಮತ್ತು 21.6 ಡಿಗ್ರಿ ಕನಿಷ್ಠ, ಜಿಕೆವಿಕೆಯಲ್ಲಿ 28.8 ಡಿಗ್ರಿ ಗರಿಷ್ಠ ಮತ್ತು 21.2 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಹೊನ್ನಾವರದಲ್ಲಿ 27.2 ಡಿಗ್ರಿ ಗರಿಷ್ಠ ಮತ್ತು 22.6 ಡಿಗ್ರಿ ಕನಿಷ್ಠ, ಕಾರವಾರದಲ್ಲಿ 29.6 ಡಿಗ್ರಿ ಗರಿಷ್ಠ ಮತ್ತು 23.3 ಡಿಗ್ರಿ ಕನಿಷ್ಠ, ಪಣಂಬೂರಿನಲ್ಲಿ 31.0 ಡಿಗ್ರಿ ಗರಿಷ್ಠ ಮತ್ತು 22.9 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಬೆಳಗಾವಿಯಲ್ಲಿ 24.5 ಡಿಗ್ರಿ ಗರಿಷ್ಠ ಮತ್ತು 20.0 ಡಿಗ್ರಿ ಕನಿಷ್ಠ, ಬೀದರ್ನಲ್ಲಿ 28.2 ಡಿಗ್ರಿ ಗರಿಷ್ಠ ಮತ್ತು 21.4 ಡಿಗ್ರಿ ಕನಿಷ್ಠ, ಬಾಗಲಕೋಟೆಯಲ್ಲಿ 29.2 ಡಿಗ್ರಿ ಗರಿಷ್ಠ ಮತ್ತು 22.4 ಡಿಗ್ರಿ ಕನಿಷ್ಠ, ಧಾರವಾಡದಲ್ಲಿ 27.0 ಡಿಗ್ರಿ ಗರಿಷ್ಠ ಮತ್ತು 19.5 ಡಿಗ್ರಿ ಕನಿಷ್ಠ, ಗದಗದಲ್ಲಿ 28.0 ಡಿಗ್ರಿ ಗರಿಷ್ಠ ಮತ್ತು 20.2 ಡಿಗ್ರಿ ಕನಿಷ್ಠ, ಕಲಬುರಗಿಯಲ್ಲಿ 28.8 ಡಿಗ್ರಿ ಗರಿಷ್ಠ ಮತ್ತು 22.8 ಡಿಗ್ರಿ ಕನಿಷ್ಠ, ಹಾವೇರಿಯಲ್ಲಿ 26.4 ಡಿಗ್ರಿ ಗರಿಷ್ಠ ಮತ್ತು 21.6 ಡಿಗ್ರಿ ಕನಿಷ್ಠ, ಕೊಪ್ಪಳದಲ್ಲಿ 29.2 ಡಿಗ್ರಿ ಗರಿಷ್ಠ ಮತ್ತು 24.1 ಡಿಗ್ರಿ ಕನಿಷ್ಠ, ರಾಯಚೂರಿನಲ್ಲಿ 32.0 ಡಿಗ್ರಿ ಗರಿಷ್ಠ ಮತ್ತು 22.0 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಷ್ಟ್ರವ್ಯಾಪಿ ಹವಾಮಾನ: ದೇಶಾದ್ಯಂತ ಪಶ್ಚಿಮ ಬಂಗಾಳ, ಹಿಮಾಚಲಪ್ರದೇಶ, ಉತ್ತರಾಖಂಡ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್, ಒಡಿಶಾ, ಜಾರ್ಖಂಡ್, ಮಧ್ಯ ಮಹಾರಾಷ್ಟ್ರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅಸ್ಸಾಂ, ಮೇಘಾಲಯ, ಛತ್ತೀಸ್ಗಢ, ಉತ್ತರ ಪ್ರದೇಶ, ಬಿಹಾರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ಮತ್ತು ಕಾರೈಕಲ್ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಜನರು ಮುಂಜಾಗ್ರತೆ ವಹಿಸಿ, ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚಿಸಲಾಗಿದೆ.