• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 24, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ನಾಗಪುರಕ್ಕೆ ಮೋದಿ ಆಗಮನದ ಹೊತ್ತಲ್ಲೇ ಔರಂಗಜೇಬ್ ಸಮಾಧಿಗೆ ಬೆಂಕಿ! ‘ಛಾವಾ’ ಎಫೆಕ್ಟ್?

ಇತಿಹಾಸ, ಸಿನಿಮಾ ಮತ್ತು ರಾಜಕೀಯದ ರಣಾಂಗಣವಾಯ್ತಾ ಮಹಾರಾಷ್ಟ್ರದ ನಾಗಪುರ?

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
March 18, 2025 - 1:03 pm
in Flash News, ದೇಶ, ವಿಶೇಷ
0 0
0
Maharashtra

ಮಹಾರಾಷ್ಟ್ರ ರಾಜ್ಯದ ನಾಗಪುರದ ರಸ್ತೆಗಳಲ್ಲಿ ಸೋಮವಾರ ಮಾರ್ಚ್ 17 ರಂದು ಉದ್ವಿಗ್ನ ಸ್ಥಿತಿ.. ಕಲ್ಲು ತೂರಾಟ, ಬೆಂಕಿ, ಆಕ್ರೋಶ, ಹಾಹಾಕಾರ.. “ಔರಂಗಜೇಬ್ ಸಮಾಧಿ ಕಿತ್ತೊಗೆಯಿರಿ!” ಅನ್ನೋ ಘೋಷಣೆ..! ಈ ಹಿಂಸಾತ್ಮಕ ಸಂಘರ್ಷಕ್ಕೆ ಕಾರಣವಾಗಿದ್ದು, ಐತಿಹಾಸಿಕ ಕರಿನೆರಳು..! ಮೊಘಲ್ ಚಕ್ರವರ್ತಿ ಔರಂಗಜೇಬ್ ಮತ್ತು ಮರಾಠಾ ವೀರ ಛತ್ರಪತಿ ಸಂಭಾಜಿ ಮಹಾರಾಜರ ನಡುವಿನ 300 ವರ್ಷಗಳ ಹಿಂದಿನ ಸಂಘರ್ಷ, ಇದೀಗ ಜನಸಾಮಾನ್ಯರು ರೊಚ್ಚಿಗೇಳುವಂತೆ ಮಾಡಿದೆ.. 3 ಶತಮಾನಗಳ ಹಿಂದಿನ ವಿವಾದ ಇಂದೇಕೆ? ಇದು ಕೇವಲ ಇತಿಹಾಸದ ಕರಾಳ ನೆನಪಿನ ವಿರುದ್ಧದ ಆಕ್ರೋಶವೇ? ಅಥವಾ ಸಿನಿಮಾ, ರಾಜಕೀಯ ಮತ್ತು ಜನ ಸಮೂಹದ ಉದ್ರೇಕಕಾರಿ ಭಾವನೆಗಳ ಸಂಗಮವೇ?

ಇತಿಹಾಸ-ವರ್ತಮಾನಗಳ ನಡುವಣ ಸಂಘರ್ಷ..!

ತನ್ನ ಕರ್ಮಠ ಇಸ್ಲಾಮಿಕ್ ನೀತಿಗಳಿಂದಲೇ ಕುಖ್ಯಾತನಾದ ಔರಂಗಜೇಬ್, 17ನೇ ಶತಮಾನದಲ್ಲಿ ಜಾರಿಗೆ ತಂದಿದ್ದ ನೀತಿಗಳು, ಆತ ಎಸಗಿದ ಕ್ರೌರ್ಯಗಳು ಇಂದು ಮಾರ್ದನಿಸುತ್ತಿವೆ. ಜಿಝಿಯಾ ತೆರಿಗೆ, ದೇವಾಲಯಗಳ ಧ್ವಂಸ ಮತ್ತು ಸಂಭಾಜಿ ಮಹಾರಾಜರಿಗೆ ನೀಡಿದ್ದ ಕ್ರೂರ ಹಿಂಸಾತ್ಮಕ ಮರಣ ಇದೀಗ ಹಿಂದೂ ಸಮುದಾಯದ ಕಹಿ ನೆನಪುಗಳನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಖುಲ್ದಾಬಾದ್‌ನಲ್ಲಿ ಇರುವ ಔರಂಗಜೇಬನ ಮಸೀದಿಯನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆಗಳು, ಆತನ ಸಮಾಧಿಗೆ ಬೆಂಕಿ ಇಟ್ಟ ಘಟನೆ, ದೇಶಾದ್ಯಂತ ಹೊಸ ವಿವಾದದ ಸ್ವರೂಪವನ್ನೇ ಪಡೆದುಕೊಂಡಿದೆ.

RelatedPosts

Iran-America: ತಕ್ಷಣ ಬಂಕರ್ ಸೇರಿಕೊಳ್ಳಿ.! ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ..!

ಇರಾನ್‌ನಿಂದ ಅಮೆರಿಕ್ಕೆ ತಿರುಗೇಟು! ಕತಾರ್‌ನ ಯುಎಸ್ ನೆಲೆಯ ಮೇಲೆ ಕ್ಷಿಪಣಿ ದಾಳಿ!

‘ಅಪ್ಪಾ ಪ್ಲೀಸ್, ಅಮ್ಮನಿಗೆ ಹೊಡಿಬೇಡಿ’: ಮಹಿಳೆಯ ಸಾವು, ವೈರಲ್ ವಿಡಿಯೋ ಆಘಾತ

ಶಾಸಕನಿಗೆ ಸೀಟು ಬಿಟ್ಟುಕೊಡದ ಪ್ರಯಾಣಿಕನಿಗೆ ಥಳಿತ: ವಿಡಿಯೋ ವೈರಲ್

ADVERTISEMENT
ADVERTISEMENT
“ಹಿಂದೂ ಸ್ವಾಭಿಮಾನ”ದ ಕಿಡಿ ಹೊತ್ತಿಸಿತಾ “ಛಾವಾ”..?

ಮರಾಠಾ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಮಗ ಛತ್ರಪತಿ ಸಂಭಾಜಿ ಮಹಾರಾಜರನ್ನು ಬಂಧಿಸಿದ್ದ ಔರಂಗಜೇಬ್, ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈದ ಸನ್ನಿವೇಶವನ್ನು “ಛಾವಾ” ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಈ ಸಿನಿಮಾ ಯುವ ಜನರಲ್ಲಿ “ಹಿಂದೂ ಸ್ವಾಭಿಮಾನ”ದ ಕಿಡಿ ಹೊತ್ತಿಸಿದೆ. ಈ ಕಿಡಿ ಜ್ವಾಲೆಯ ರೂಪ ಪಡೆದುಕೊಂಡಿದೆ!

ಫೆಬ್ರವರಿ 2025ರಲ್ಲಿ ಬಿಡುಗಡೆಯಾದ “ಛಾವಾ” ಚಿತ್ರದಲ್ಲಿ ಔರಂಗಜೇಬ್‌ನನ್ನು “ಕ್ರೂರ ಸಾಮ್ರಾಟ”ನಾಗಿ ಬಿಂಬಿಸಲಾಗಿದೆ. ಸಂಭಾಜಿ ಅವರನ್ನು ಬಂಧಿಸಿ ಅವರ ನಾಲಿಗೆ ಕತ್ತರಿಸುವ ದೃಶ್ಯಗಳನ್ನು ನೋಡಿದ ಪ್ರೇಕ್ಷಕರಂತೂ ಸಿಡಿದೆದ್ದಿದ್ದಾರೆ. “ಇದು ನಮ್ಮ ಐತಿಹಾಸಿಕ ವೀರನಿಗೆ ಆದ ಅಪಮಾನ” ಎಂಬ ಆಕ್ರೋಶದ ನುಡಿಯಿಂದ ಹಿಡಿದು, ಹತ್ತು ಹಲವು ರೀತಿಯಲ್ಲಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಔರಂಗಜೇಬ್ ಸಮಾಧಿಗೆ ಬೆಂಕಿ! “ಛಾವಾ” ಸಿನಿಮಾದ ಪರೋಕ್ಷ ಪಾತ್ರ..?
  • “ಛಾವಾ” ಸಿನಿಮಾ ನೇರವಾಗಿ ಇಂಥಾದ್ದೊಂದು ಹಿಂಸಾತ್ಮಕ ಪ್ರತಿಭಟನೆಗೆ ಪ್ರೇರಣ ನೀಡಿಲ್ಲ. ಆದರೆ ಸಾಮೂಹಿಕ ಪ್ರಜ್ಞೆ ಕೆರಳಿಸಿದೆ ಅನ್ನೋದು ಸುಳ್ಳಲ್ಲ!
  • ಯುವಕರು ಸಿನಿಮಾ ನಂತರ ತಮ್ಮೂರಿನಲ್ಲಿ ಇರುವ ಔರಂಗಜೇಬನ ಸಮಾಧಿಯ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದ್ದೇ ಈ ಘರ್ಷಣೆಯ ಮೂಲ!
  • “ಸಂಭಾಜಿ ಮಹಾರಾಜರಿಗೆ ಹಿಂಸೆ ನೀಡಿದ ವ್ಯಕ್ತಿಯ ಸ್ಮಾರಕ ಮರಾಠಾ ನೆಲದಲ್ಲಿ ಏಕೆ?” ಎಂಬ ಪ್ರಶ್ನೆಯೇ ಉದ್ವಿಗ್ನತೆಗೆ ಮೂಲ ಕಾರಣ!
ಮಾರ್ಚ್ 17.. ಆಕ್ರೋಶದ ಕಟ್ಟೆ ಒಡೆದ ದಿನ!

ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗ ದಳದ ಕಾರ್ಯಕರ್ತರು ನಾಗಪುರದ ಮಹಲ್ ಪ್ರದೇಶದಲ್ಲಿ ಮೊದಲಿಗೆ ಧರಣಿ ನಡೆಸಿದರು. “ಔರಂಗಜೇಬ್ ಸಮಾಧಿ ಕಿತ್ತೊಗೆಯಿರಿ, ಇತಿಹಾಸ ಸರಿಪಡಿಸಿ!” ಎಂದು ಘೋಷಣೆ ಕೂಗಿದರು. ಈ ವೇಳೆ ಔರಂಗಜೇಬನ ಸಮಾಧಿ ಸ್ಮಾರಕ್ಕೆ ಬೆಂಕಿ ಇಟ್ಟರು. ಆದರೆ, ಸಂದರ್ಭದಲ್ಲಿ ಪವಿತ್ರ ಧರ್ಮ ಗ್ರಂಥ ಸುಡಲಾಯ್ತು ಎಂಬ ವದಂತಿ ಹರಡಿತು. ಈ ಸುಳ್ಳು ವದಂತಿ ಹರಡಿದ್ದೇ ತಡ, ಕೆಲವೇ ನಿಮಿಷಗಳಲ್ಲಿ ನಾಗಪುರ ರಣಾಂಗಣವಾಯ್ತು!

ಎಲ್ಲೆಲ್ಲೂ ಹಿಂಸಾಚಾರ.. ಆಕ್ರೋಶ.. ಏನೇನಾಯ್ತು?
  • ವಾಹನಗಳ ಮೇಲೆ ಕಲ್ಲು ತೂರಾಟ..
  • ಬಸ್ ನಿಲ್ದಾಣದಲ್ಲಿ ಬೆಂಕಿ
  • ಪೊಲೀಸರಿಂದ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ
  • 30ಕ್ಕೂ ಹೆಚ್ಚು ಜನರಿಗೆ ಗಾಯ
  • ಸೋಮವಾರ ರಾತ್ರಿಯ ಹೊತ್ತಿಗೆ ನಾಗಪುರದಾಚೆಗೂ ಹರಡಿದ ಹಿಂಸೆ
ರಾಜಕೀಯ ನಾಯಕರು ಹೇಳಿದ್ದೇನು?

“ಶಾಂತಿಯನ್ನು ಕಾಪಾಡಲು ಎಲ್ಲರೂ ಸಹಕರಿಸಿ.”: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

– “ಸಾಮಾಜಿಕ ಸಾಮರಸ್ಯವೇ ನಮ್ಮ ಮುಖ್ಯ ಧ್ಯೇಯ.”: ಕೇಂದ್ರ ಸಚಿವ ನಿತಿನ್ ಗಡ್ಕರಿ

ಪ್ರಧಾನಿ ಮೋದಿ ಭೇಟಿಗೆ ಕೆಲವೇ ದಿನ ಮುನ್ನ ಗಲಭೆ? 

ಮಾರ್ಚ್ 30, 2025ರಂದು ಪ್ರಧಾನಿ ಮೋದಿ ನಾಗಪುರಕ್ಕೆ ಭೇಟಿ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಆರ್‌ ಎಸ್ ಎಸ್ ಮುಖ್ಯ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಇಂಥಾದ್ದೊಂದು ಮಹತ್ವದ ಸನ್ನಿವೇಶದಲ್ಲೇ ಈ ಗಲಭೆ ನಡೆದಿದೆ. ಆದರೆ, ಪ್ರಧಾನಿ ಭೇಟಿಗೂ ಈ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಆದಾಗ್ಯೂ ವಿಪಕ್ಷಗಳು ಮಾತ್ರ ಈ ಕುರಿತು ಬೊಟ್ಟು ಮಾಡುತ್ತಿವೆ.

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

4112 (3)

Iran-America: ತಕ್ಷಣ ಬಂಕರ್ ಸೇರಿಕೊಳ್ಳಿ.! ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ..!

by ಶ್ರೀದೇವಿ ಬಿ. ವೈ
June 23, 2025 - 11:27 pm
0

Web (59)

ರಚಿತಾ ರಾಮ್‌ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ತರಾಟೆ!

by ಶ್ರೀದೇವಿ ಬಿ. ವೈ
June 23, 2025 - 11:17 pm
0

4112 (2)

ಇರಾನ್‌ನಿಂದ ಅಮೆರಿಕ್ಕೆ ತಿರುಗೇಟು! ಕತಾರ್‌ನ ಯುಎಸ್ ನೆಲೆಯ ಮೇಲೆ ಕ್ಷಿಪಣಿ ದಾಳಿ!

by ಶ್ರೀದೇವಿ ಬಿ. ವೈ
June 23, 2025 - 11:00 pm
0

Web (58)

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ: ಅತಿವೇಗಕ್ಕೆ ದಂಡಂ ದಶಗುಣಂ!

by ಶ್ರೀದೇವಿ ಬಿ. ವೈ
June 23, 2025 - 10:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • 4112 (2)
    ಒಂದು ತಿಂಗಳಲ್ಲಿ ಹೃದಯಾಘಾತದಿಂದ 13 ಜನರ ಸಾವು : ಆಘಾತಕಾರಿ ಅಂಶ ಬಯಲು
    June 23, 2025 | 0
  • ಶಿವಪ್ಪ (3)
    ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
    June 22, 2025 | 0
  • ಶಿವಪ್ಪ (2)
    ಮನಿ ಕೊಟ್ಟರೆ ಮನೆ, ಹೌಸಿಂಗ್‌ ಬೋರ್ಡ್‌ನ ಹೊಸ ಸ್ಲೋಗನ್: ಆರ್. ಅಶೋಕ್ ಲೇವಡಿ
    June 22, 2025 | 0
  • Untitled design 2025 06 22t193339.341
    ಬೆಂಗಳೂರಿನ ಹಲವೆಡೆ ಜೂನ್‌ 23, 24ರಂದು ವಿದ್ಯುತ್ ವ್ಯತ್ಯಯ
    June 22, 2025 | 0
  • Untitled design 2025 06 22t154443.625
    ನಟ ವಿಜಯ್ ದೇವರಕೊಂಡ ವಿರುದ್ಧ ಎಫ್‌ಐಆರ್ ದಾಖಲು
    June 22, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version