ಬೆಂಗಳೂರು: ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ತನ್ನ ಐದನೇ ಗೆಲುವನ್ನು ದಾಖಲಿಸಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು (RCB) 5 ವಿಕೆಟ್ಗಳಿಂದ ಸೋಲಿಸಿದೆ. ಈ ಗೆಲುವು ಪಂಜಾಬ್ ತಂಡಕ್ಕೆ ಸತತ ಎರಡನೇ ಜಯವಾಗಿದ್ದು, ಒಟ್ಟು ಐದನೇ ಗೆಲುವಾಗಿ ದಾಖಲಾಗಿದೆ.
ಮಳೆಯ ಪರಿಣಾಮವಾಗಿ ಪಂದ್ಯ ತಡವಾಗಿ ಆರಂಭವಾಯಿತು ಹಾಗೂ ಎರಡು ತಂಡಗಳಿಗೂ 14 ಓವರ್ಗಳಂತೆ ಸೀಮಿತಮಾಡಲಾಯಿತು. ಟಾಸ್ ಗೆದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆರ್ಸಿಬಿ ಆರಂಭಿಕ ಬ್ಯಾಟರ್ಗಳು ನಿರೀಕ್ಷಿತ ಆಟವನ್ನಾಡಲಿಲ್ಲ.
RCB ತಂಡವು ಮೊದಲು ಬ್ಯಾಟಿಂಗ್ ಮಾಡಿ ಕೇವಲ 95 ರನ್ಗಳನ್ನು ಮಾತ್ರ ಗಳಿಸಿತು. ಬ್ಯಾಟರ್ಗಳು ಜವಾಬ್ದಾರಿಯಿಲ್ಲದ ಆಟವಾಡಿದ್ದು ಸೋಲಿಗೆ ಕಾರಣವಾಯಿತು. ಟಿಮ್ ಡೇವಿಡ್ (50) ಒಬ್ಬನೇ ಪ್ರತಿರೋಧ ನೀಡಿದರೂ, ಉಳಿದವರು ವೈಫಲ್ಯ ಹೊಂದಿದರು. ನಾಯಕ ರಜತ್ ಪಟಿದಾರ್ (23) ಸಹ ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು.
ಪಂಜಾಬ್ ಬೌಲರ್ಗಳಾದ ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮಾರ್ಕೊ ಯಾನ್ಸೆನ್ ಮತ್ತು ಹರ್ಪ್ರೀತ್ ಬ್ರಾರ್ ಪ್ರತಿಯೊಬ್ಬರೂ 2 ವಿಕೆಟ್ಗಳನ್ನು ಪಡೆದು RCBಯನ್ನು ಕುಸಿಯುವಂತೆ ಮಾಡಿದರು.
96 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಪ್ರಭ್ಸಿಮ್ರಾನ್ ಸಿಂಗ್ (13) ಮತ್ತು ಪ್ರಿಯಾಂಶ್ ಆರ್ಯ (13) ಸಣ್ಣ ಕೊಡುಗೆ ನೀಡಿದರು. ನಂತರ ಶ್ರೇಯಸ್ ಅಯ್ಯರ್ (7) ಮತ್ತು ಜೋಶ್ ಇಂಗ್ಲಿಷ್ (14) ವಿಫಲರಾದರು. 53/4 ಆಗಿದ್ದ ಪಂಜಾಬ್ ತಂಡವನ್ನು ನೆಹಾಲ್ ವಧೇರಾ (33) ಮತ್ತು ಶಶಾಂಕ್ ಸಿಂಗ್ (12) ಜೋಡಿ ಗೆಲುವಿನತ್ತ ನಡೆಸಿದರು.
RCY ಬೌಲರ್ ಜೋಶ್ ಹ್ಯಾಜಲ್ವುಡ್ (3 ವಿಕೆಟ್ಗಳು) ಮತ್ತು ಭುವನೇಶ್ವರ್ ಕುಮಾರ್ (2 ವಿಕೆಟ್ಗಳು) ಉತ್ತಮ ಬೌಲಿಂಗ್ ಮಾಡಿದರೂ, ಪಂಜಾಬ್ ತಂಡ 12.1 ಓವರ್ಗಳಲ್ಲಿ ಗೆಲುವು ಸಾಧಿಸಿತು.