• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಗೆರೆ ಎಳೆದು ಬ್ಯಾಟ್ ಕುಟ್ಟಿ ಸಂಭ್ರಮ..!ಕೆ.ಎಲ್.ರಾಹುಲ್‌ ರಿಂದ ಆರ್‌ಸಿಬಿಗೆ ಭರ್ಜರಿ ಉತ್ತರ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 11, 2025 - 11:58 am
in ಕ್ರೀಡೆ
0 0
0
Film 2025 04 11t115724.085

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ 2025ರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕೆ.ಎಲ್.ರಾಹುಲ್‌ 53 ಎಸೆತಗಳಲ್ಲಿ ಅಜೇಯ 93 ರನ್‌ ಗಳಿಸಿ ತಂಡಕ್ಕೆ ಆರು ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಆದರೆ, ಈ ಪಂದ್ಯದಲ್ಲಿ ರಾಹುಲ್‌ರ ಆಕ್ರಮಣಕಾರಿ ಸಂಭ್ರಮವೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ತಮ್ಮ ಬ್ಯಾಟ್‌ನಿಂದ ಗೆರೆ ಎಳೆದು, ಕುಟ್ಟಿ, ಎದೆಯನ್ನು ತೋರಿಸಿ “ಇದು ನನ್ನ ತವರು” ಎಂದು ಸೂಚಿಸಿದ ರಾಹುಲ್‌ರ ಕ್ರಿಯೆಯನ್ನು ಕೆಲವರು ಆರ್‌ಸಿಬಿ ಫ್ರಾಂಚೈಸಿಗೆ ಟಾಂಟ್‌ ಎಂದು ಭಾವಿಸಿದ್ದಾರೆ.

ಪಂದ್ಯವನ್ನು ಸಿಕ್ಸರ್‌ ಮೂಲಕ ಮುಗಿಸಿದ ಕೆ.ಎಲ್.ರಾಹುಲ್‌, ತಮ್ಮ ತವರಿನ ಮೈದಾನವಾದ ಚಿನ್ನಸ್ವಾಮಿಯಲ್ಲಿ ಭರ್ಜರಿ ಸಂಭ್ರಮ ಆಚರಿಸಿದರು. ಬ್ಯಾಟ್‌ನಿಂದ ಮೈದಾನದಲ್ಲಿ ಗೆರೆ ಎಳೆದು, ಬ್ಯಾಟ್‌ನ ತುದಿಯಿಂದ ಬಲವಾಗಿ ಕುಟ್ಟಿ, ಎದೆಯನ್ನು ತೋರಿಸಿದ ರಾಹುಲ್‌, “ನೀವು ನನ್ನ ಹೃದಯದಲ್ಲಿದ್ದೀರಿ, ಇದು ನನ್ನ ಮೈದಾನ” ಎಂಬ ಸಂದೇಶವನ್ನು ಅಭಿಮಾನಿಗಳಿಗೆ ರವಾನಿಸಿದರು. ಈ ಕ್ಷಣವನ್ನು ರೆಕಾರ್ಡ್‌ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

RelatedPosts

ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿರುವ ಫುಟ್‌ಬಾಲ್ ದಿಗ್ಗಜ ಮೆಸ್ಸಿ!

ಬುಮ್ರಾಗೆ ಐಪಿಎಲ್‌ನಲ್ಲಿ ವಿಶ್ರಾಂತಿ ಕೊಡಬೇಕಿತ್ತು: ದಿಲೀಪ್ ವೆಂಗ್‌ಸರ್ಕಾರ್!

ಸಾರಾ ತೆಂಡುಲ್ಕರ್‌ಗೆ ಕೈ ಕೊಟ್ರಾ ಕ್ಯಾಪ್ಟನ್ ಗಿಲ್? ಬಾಲಿವುಡ್ ನಟಿ ಜೊತೆ ಮತ್ತೆ ಶುಭ್​ಮನ್ ಸುತ್ತಾಟ!

ಕುಂಟುತ್ತಲೇ ಪಿಜ್ಜಾ ತಯಾರಿಸಿದ ರಿಷಭ್ ಪಂತ್, ವಿಡಿಯೋ ವೈರಲ್!

ADVERTISEMENT
ADVERTISEMENT

ಕೆ.ಎಲ್.ರಾಹುಲ್‌ರ ಈ ಸಂಭ್ರಮವನ್ನು ಅಭಿಮಾನಿಗಳು ಫುಲ್‌ ಖುಷಿಯಿಂದ ಸ್ವಾಗತಿಸಿದ್ದಾರೆ. ಆದರೆ, ಕೆಲವರು ಇದನ್ನು ವಿರಾಟ್‌ ಕೊಹ್ಲಿಗೆ ಟಾಂಟ್‌ ಎಂದು ಭಾವಿಸಿದರೆ, ಇನ್ನೂ ಕೆಲವರು ಆರ್‌ಸಿಬಿ ಫ್ರಾಂಚೈಸಿಗೆ ರಾಹುಲ್‌ ತಿರುಗೇಟು ನೀಡಿದ್ದಾರೆ ಎಂದು ತಿಳಿದಿದ್ದಾರೆ. ಐಪಿಎಲ್‌ 2025ರ ಆಕ್ಷನ್‌ನಲ್ಲಿ ಆರ್‌ಸಿಬಿ ರಾಹುಲ್‌ರನ್ನು ಖರೀದಿಸದಿರುವುದು ಕೆಲವು ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಈ ಹಿನ್ನೆಲೆಯಲ್ಲಿ, ರಾಹುಲ್‌ರ ಈ ಸಂಭ್ರಮವನ್ನು “ಆರ್‌ಸಿಬಿಗೆ ತಕ್ಕ ಉತ್ತರ” ಎಂದು ಕೆಲವರು ಬಣ್ಣಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಕೆ.ಎಲ್.ರಾಹುಲ್‌, ತಮ್ಮ ಯಶಸ್ಸಿನ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟರು. “ವಿಕೆಟ್‌ ಸ್ವಲ್ಪ ಟ್ರಿಕಿ ಆಗಿತ್ತು. 20 ಓವರ್‌ಗಳ ಕಾಲ ಸ್ಟಂಪ್‌ಗಳ ಹಿಂದೆ ಇದ್ದು, ಪಿಚ್‌ ಹೇಗೆ ವರ್ತಿಸುತ್ತಿದೆ ಎಂಬುದನ್ನು ಗಮನಿಸಿದ್ದೆ. ಇದು ನನ್ನ ಆಟಕ್ಕೆ ಸಹಾಯವಾಯಿತು. ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಲು ನಿರ್ಧರಿಸಿದ್ದೆ. ಬಿಗ್‌ ಶಾಟ್‌ಗಳನ್ನು ಎಲ್ಲಿ ಟಾರ್ಗೆಟ್‌ ಮಾಡಬೇಕು ಎಂಬುದು ಗೊತ್ತಿತ್ತು. ವಿಕೆಟ್‌ ಕೀಪಿಂಗ್‌ ಮಾಡಿದ್ದರಿಂದ ಯಾವ ಬ್ಯಾಟ್ಸ್‌ಮನ್‌ ಎಲ್ಲಿ ಆಡಿದರು, ಎಲ್ಲಿ ಔಟ್‌ ಆದರು ಎಂಬುದರ ಕಲ್ಪನೆ ಇತ್ತು. ಡ್ರಾಪ್‌ ಕ್ಯಾಚ್‌ನಿಂದ ಅದೃಷ್ಟ ಕೂಡಿಬಂತು. ಇದು ನನ್ನ ಮೈದಾನ, ಇದು ನನ್ನ ಮನೆ. ಬೇರೆಯವರಿಗಿಂತ ನನಗೆ ಇದು ಚೆನ್ನಾಗಿ ಗೊತ್ತು. ಇಲ್ಲಿ ಆಡುವುದನ್ನು ಆನಂದಿಸುತ್ತೇನೆ” ಎಂದರು.

ರಾಹುಲ್‌ರ 93 ರನ್‌ಗಳ ಒಂಬತ್ತು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಟ್ರಿಸ್ಟನ್‌ ಸ್ಟಬ್ಸ್‌ ಜೊತೆಗಿನ 111 ರನ್‌ಗಳ ಜೊತೆಗೂಡಿಕೆಯು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಗೆಲುವಿನ ದಾರಿ ತೆರೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ 163 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿತ್ತು, ಆದರೆ ರಾಹುಲ್‌ರ ಆಕ್ರಮಣಕಾರಿ ಬ್ಯಾಟಿಂಗ್‌ ಮುಂದೆ ಈ ಸ್ಕೋರ್‌ ಸಾಕಾಗಲಿಲ್ಲ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (22)

ಭಾರೀ ಮಳೆಯಿಂದ ಗುಡ್ಡ ಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯ

by ಶಾಲಿನಿ ಕೆ. ಡಿ
August 16, 2025 - 10:41 pm
0

Untitled design (21)

ಪ್ರೇಯಸಿಗೆ 9 ಬಾರಿ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ

by ಶಾಲಿನಿ ಕೆ. ಡಿ
August 16, 2025 - 10:26 pm
0

Untitled design (20)

ಭೀಕರ ರಸ್ತೆ ಅಪಘಾತ: ಓರ್ವ ಸ್ಥಳದಲ್ಲೇ ಸಾವು

by ಶಾಲಿನಿ ಕೆ. ಡಿ
August 16, 2025 - 9:59 pm
0

Untitled design (19)

ನಗರ್ತಪೇಟೆಯಲ್ಲಿ ಅಗ್ನಿ ಅವಘಡ: ಕಟ್ಟಡ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲು

by ಶಾಲಿನಿ ಕೆ. ಡಿ
August 16, 2025 - 9:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • 1 (51)
    ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿರುವ ಫುಟ್‌ಬಾಲ್ ದಿಗ್ಗಜ ಮೆಸ್ಸಿ!
    August 15, 2025 | 0
  • 1 (38)
    ಬುಮ್ರಾಗೆ ಐಪಿಎಲ್‌ನಲ್ಲಿ ವಿಶ್ರಾಂತಿ ಕೊಡಬೇಕಿತ್ತು: ದಿಲೀಪ್ ವೆಂಗ್‌ಸರ್ಕಾರ್!
    August 15, 2025 | 0
  • 1 (37)
    ಸಾರಾ ತೆಂಡುಲ್ಕರ್‌ಗೆ ಕೈ ಕೊಟ್ರಾ ಕ್ಯಾಪ್ಟನ್ ಗಿಲ್? ಬಾಲಿವುಡ್ ನಟಿ ಜೊತೆ ಮತ್ತೆ ಶುಭ್​ಮನ್ ಸುತ್ತಾಟ!
    August 15, 2025 | 0
  • Untitled design 2025 08 14t142726.038
    ಕುಂಟುತ್ತಲೇ ಪಿಜ್ಜಾ ತಯಾರಿಸಿದ ರಿಷಭ್ ಪಂತ್, ವಿಡಿಯೋ ವೈರಲ್!
    August 14, 2025 | 0
  • K l rahul 2025 08 13 18 06 01
    ಕನ್ನಡಿಗನ ಕನಸು ದೊಡ್ಡದು: ಅದೊಂದು ಆಸೆ ಈಡೇರುತ್ತಾ..?
    August 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version