ಶಾಲಿವಾಹನ ಶಕವರ್ಷ 1949, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಷಷ್ಠೀ ತಿಥಿ, ಗುರುವಾರ. ಇಂದು ಅನ್ಯರ ಗುರಿಯ ಮೇಲೆ ಗಮನ, ಸಮಯ ಹೊಂದಾಣಿಕೆ, ಅತಿಯಾದ ವಿಶ್ರಾಂತಿ, ಹಣದ ಆಸೆಗೆ ಮುಕ್ತಿ ಮತ್ತು ಭೋಗಕ್ಕೆ ಮಿತಿ ಇರುವ ದಿನ. ಜ್ಯೋತಿಷ್ಯ ಪ್ರಕಾರ ಇಂದು ಎಲ್ಲಾ ರಾಶಿಯವರಿಗೂ ವಿಶೇಷ ಫಲಿತಾಂಶಗಳಿವೆ.
ಮೇಷ ರಾಶಿ :
ಸಂಗಾತಿಯ ಆಯ್ಕೆಯನ್ನು ನೀವೇ ಮಾಡಿ. ಫಲಾಪೇಕ್ಷೆ ಇಲ್ಲದೇ ಕಾರ್ಯ ಮಾಡುವಿರಿ. ಸಾಲದಿಂದ ಮುಕ್ತಿ ಪಡೆಯುವ ಲಕ್ಷಣಗಳು ಕಾಣುತ್ತವೆ. ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸಂಜೆ ಸ್ನೇಹಿತರೊಂದಿಗೆ ಸಮಯ ಕಳೆಯಬಹುದು. ಕೆಲಸದಲ್ಲಿ ವೇಗವಿದೆ, ಯೋಜನೆಗಳು ಯಶಸ್ವಿಯಾಗುತ್ತವೆ. ದೇಹಕ್ಕೆ ವಿಶ್ರಾಂತಿ ಬೇಕಾದರೂ ಸಮಯ ಸಿಗದೇ ಇರಬಹುದು. ಹಿತಶತ್ರುಗಳಿಂದ ಸಣ್ಣ ತೊಂದರೆಯಾಗಬಹುದು.
ವೃಷಭ ರಾಶಿ :
ಒತ್ತಡದಿಂದ ಮುಕ್ತಿ ಪಡೆದು ಮಾನಸಿಕ ಶಾಂತಿ ಅನುಭವಿಸುವಿರಿ. ನಿಷ್ಣಾತರಂತೆ ತೋರಿಸಿಕೊಳ್ಳುವಿರಿ. ಖರ್ಚುಗಳ ಮೇಲೆ ನಿಯಂತ್ರಣ ಸಾಧ್ಯ. ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕೆಲಸದ ವೇಗ ಹೆಚ್ಚಾದ ಕಾರಣ ಆದಾಯ ವೃದ್ಧಿಯಾಗುತ್ತದೆ. ಸಂಗಾತಿಯ ಬೇಸರ ಉಂಟಾಗಬಹುದು. ವೃತ್ತಿಯಲ್ಲಿ ಕಿರಿಕಿರಿ ಇರಬಹುದು. ವಿನಯಭಾವ ನಿಮ್ಮನ್ನು ಇಷ್ಟಪಡುವಂತೆ ಮಾಡುತ್ತದೆ.
ಮಿಥುನ ರಾಶಿ :
ಪ್ರಸಿದ್ಧಿಯ ಬಯಕೆ ಹೆಚ್ಚಾಗುತ್ತದೆ. ಹೊಸ ಅವಕಾಶಗಳನ್ನು ಅನ್ವೇಷಿಸಲು ಧೈರ್ಯ ಮತ್ತು ತಾಳ್ಮೆ ಬೇಕು. ಹಳೆಯ ಯೋಜನೆ ಪುನರಾರಂಭಕ್ಕೆ ಅವಕಾಶ. ಸರಿಯಾದ ಸಮಯಕ್ಕಾಗಿ ಕಾಯಬೇಕು. ದಾಂಪತ್ಯದ ವಿರಸ ಮಾನಸಿಕ ಆರೋಗ್ಯ ಕೆಡಿಸಬಹುದು. ಉದ್ಯೋಗ ಬದಲಾವಣೆಯಿಂದ ಸಮಯ ವ್ಯರ್ಥವಾಗಬಹುದು. ಸಾಮಾಜಿಕ ಕಾರ್ಯಕ್ಕೆ ಪ್ರಶಂಸೆ ಸಿಗುತ್ತದೆ.
ಕರ್ಕಾಟಕ ರಾಶಿ :
ಯಾರ ಒತ್ತಾಯಕ್ಕೂ ಮಣಿಯದೇ ನಿರ್ಧಾರಗಳನ್ನು ಉಳಿಸಿಕೊಳ್ಳಿ. ದಿನ ಒಳ್ಳೆಯ ಸುದ್ದಿಗಳೊಂದಿಗೆ ಪ್ರಾರಂಭವಾಗುತ್ತದೆ. ಎಲ್ಲಾ ಚಿಂತೆಗಳನ್ನು ಮರೆತು ಸಂತೋಷದಿಂದಿರುವಿರಿ. ಯುವಕರು ವೃತ್ತಿಜೀವನದ ಬಗ್ಗೆ ಗಂಭೀರರಾಗಿರುತ್ತಾರೆ. ಸಂತೋಷ ವ್ಯಕ್ತಪಡಿಸುವ ವಿಧಾನ ವಿಭಿನ್ನವಾಗಿರುತ್ತದೆ. ನೋವನ್ನು ನಿರ್ಲಕ್ಷಿಸಬೇಡಿ. ಉಪಕಾರ ಕೇಳಿ ಬರಬಹುದು.
ಸಿಂಹ ರಾಶಿ :
ಹೆಚ್ಚು ಮಾತನಾಡಿ ನಿಮ್ಮನ್ನು ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ಕೆಲಸದ ಹೊರೆ ಹೆಚ್ಚಿರಬಹುದು, ಸ್ವಲ್ಪ ಆಲಸ್ಯವೂ ಇರಬಹುದು. ಕುಟುಂಬದಿಂದ ಬೆಂಬಲ ಸಿಗುತ್ತದೆ. ಪ್ರಯಾಣಕ್ಕೆ ಅವಕಾಶ. ಮಾನಸಿಕ ಒತ್ತಡ ನಿಯಂತ್ರಿಸಿ. ನಿಮ್ಮನ್ನು ಮೆಚ್ಚಿಸಿ ಕೆಲಸ ಮಾಡಿಸಿಕೊಳ್ಳುವರು. ಗುರಿಯನ್ನು ತಪ್ಪಿಸಬೇಡಿ.
ಕನ್ಯಾ ರಾಶಿ :
ಮನೆ ಹಿರಿಯರ ವಿರುದ್ಧ ಮಾತನಾಡುವ ಸಾಧ್ಯತೆ. ಕುಟುಂಬದಲ್ಲಿ ಸಣ್ಣ ಕಲಹವಾಗಬಹುದು. ಹಣದ ಒಳಹರಿವು ಸುಗಮ. ಆಕಸ್ಮಿಕ ಒಳ್ಳೆಯ ಸುದ್ದಿ ಮತ್ತು ಕುಟುಂಬ ಸಂತೋಷ. ನೂತನ ಗೃಹ ನಿರ್ಮಾಣದ ಬಗ್ಗೆ ಚರ್ಚೆ. ವಾಹನ ಓಡಾಟದಿಂದ ಸುಖವಿರುವುದಿಲ್ಲ.
ತುಲಾ ರಾಶಿ :
ಅನ್ಯರ ಕಾರ್ಯಕ್ಕಾಗಿ ವ್ಯರ್ಥ ಓಡಾಟ. ತಾಳ್ಮೆ ಮತ್ತು ತಿಳುವಳಿಕೆ ಅಗತ್ಯ. ದಿನವಿಡೀ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅತಿಯಾದ ಸಿಹಿ ತಿನ್ನದಿರಿ. ವ್ಯಾಪಾರದಲ್ಲಿ ತೊಡಕು. ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೆ ಬರಬಹುದು.
ವೃಶ್ಚಿಕ ರಾಶಿ :
ಪ್ರತಿಭೆಯ ಪ್ರದರ್ಶನವಾಗುತ್ತದೆ. ಸ್ನೇಹಿತರ ಜೊತೆ ನೋವು ಹಂಚಿಕೊಳ್ಳುವಿರಿ. ಹಳೆಯ ವಿವಾದಕ್ಕೆ ಪರಿಹಾರ. ಕುಟುಂಬ ವಾತಾವರಣ ಹಗುರವಾಗುತ್ತದೆ. ಇತರರೊಂದಿಗೆ ಹೋಲಿಕೆಯಿಂದ ಬೇಸರ. ಸಾಲಗಾರರಿಂದ ಹಿಂಸೆ ಹೆಚ್ಚಾಗಬಹುದು.
ಧನು ರಾಶಿ :
ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿರುವರು. ಅನ್ಯರ ವಿಷಯಗಳಲ್ಲಿ ಭಾಗಿಯಾಗದೇ ನಿಮ್ಮ ಕೆಲಸ ಮಾಡಿ. ಗುರಿ ಬದಲಿಸದೇ ಮುನ್ನಡೆಯಿರಿ. ಮಕ್ಕಳಿಗೆ ಪ್ರೋತ್ಸಾಹ ನೀಡಿ. ಉಳಿಕೆ ಹಣದ ಬಗ್ಗೆ ಎಚ್ಚರಿಕೆ.
ಮಕರ ರಾಶಿ :
ನಕಾರಾತ್ಮಕ ಭಾವನೆಗಳನ್ನು ತಡೆಯಿರಿ. ಯಶಸ್ಸು ಮತ್ತು ಆರ್ಥಿಕ ಲಾಭ. ಗೌರವ ಮತ್ತು ಪ್ರಭಾವ ಹೆಚ್ಚುತ್ತದೆ. ಹೊಸ ಆದಾಯ ಮೂಲಗಳು ಅಭಿವೃದ್ಧಿಯಾಗುತ್ತವೆ. ಮನೆಯವರೊಂದಿಗೆ ಸಿಟ್ಟು ಮಾಡದಿರಿ.
ಕುಂಭ ರಾಶಿ :
ಆಸ್ತಿ ಖರೀದಿ-ಮಾರಾಟ ಯೋಜನೆಗಳು ಮುಂದುವರಿಯುತ್ತವೆ. ಜ್ಞಾನವುಳ್ಳ ಪುಸ್ತಕಗಳನ್ನು ಓದಿ. ಅಜಾಗರೂಕತೆ ನಷ್ಟಕ್ಕೆ ಕಾರಣವಾಗಬಹುದು. ವಾದಗಳಲ್ಲಿ ತೊಡಗಬೇಡಿ. ಭೂಮಿ ಖರೀದಿಯ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ಮೀನ ರಾಶಿ :
ವಿವಾದಗಳನ್ನು ಎಳೆದುಕೊಳ್ಳಬೇಡಿ. ಗುರಿಯ ಮೇಲೆ ಗಮನ. ಅತಿಯಾದ ಖರ್ಚು ಬಿಕ್ಕಟ್ಟುಂಟು ಮಾಡಬಹುದು. ಕೋಪ ನಿಯಂತ್ರಿಸಿ. ಕಾರ್ಯವನ್ನು ಮುಂದೂಡಬೇಡಿ.





