• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಮದುವೆಯಲ್ಲಿ ನೋಟುಗಳ ಸುರಿಮಳೆ: ಹಣ ಕಂಡು ಕಕ್ಕಾಬಿಕ್ಕಿಯಾದ ಅತಿಥಿಗಳು!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 18, 2026 - 8:07 pm
in ದೇಶ, ವೈರಲ್
0 0
0
Untitled design 2026 02 18T200146.938

ಚಂಡೀಗಢ, ಫೆ. 18: ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳನ್ನು ವಿಭಿನ್ನವಾಗಿ ಮತ್ತು ಅದ್ಧೂರಿಯಾಗಿ ಆಚರಿಸುವುದು ಟ್ರೆಂಡ್ ಆಗಿದೆ. ಥೀಮ್‌ ಡೆಕೊರೇಶನ್‌, ಗ್ರ್ಯಾಂಡ್ ಎಂಟ್ರಿ, ಲೈವ್ ಮ್ಯೂಸಿಕ್‌, ವಿಶೇಷ ಫೋಟೋಶೂಟ್‌ ಹೀಗೆ ಪ್ರತಿಯೊಂದು ಅಂಶವೂ ಹೊಸತನದಿಂದ ಕೂಡಿದೆ. ಅದರಲ್ಲೂ ಪಂಜಾಬ್ ಮದುವೆಗಳು ಎಂದರೆ ವೈಭವ, ಸಂಭ್ರಮ ಮತ್ತು ಶೋಭೆಗೆ ಪ್ರಸಿದ್ಧ. ಇದೀಗ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಪಟ್ಟಿ ಗ್ರಾಮದಲ್ಲಿ ನಡೆದ ಮದುವೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ..

ಫೆಬ್ರವರಿ 14ರಂದು ನಡೆದ ಈ ಮದುವೆ ಸಮಾರಂಭದಲ್ಲಿ ವಧು-ವರರ ಮೇಲೆ ನೋಟುಗಳ ಸುರಿಮಳೆ ನಡೆದಿರುವ ದೃಶ್ಯ ವೈರಲ್ ಆಗಿದೆ. ಆಸ್ಟ್ರೇಲಿಯಾ ಮತ್ತು ಕೆನಡಾದಿಂದ ಬಂದಿದ್ದ ಅನಿವಾಸಿ ಭಾರತೀಯ ಅತಿಥಿಗಳು ದಂಪತಿಗೆ ವಿಶಿಷ್ಟವಾಗಿ ಶುಭಾಶಯ ಕೋರಿದ್ದಾರೆ. ಅವರು ಸುಮಾರು 4–5 ಲಕ್ಷ ರೂ. ಮೌಲ್ಯದ ಭಾರತೀಯ ನೋಟುಗಳು ಹಾಗೂ ಅಮೆರಿಕನ್ ಡಾಲರ್‌ಗಳನ್ನು ವೇದಿಕೆಯ ಮೇಲೆ ನಿಂತಿದ್ದ ವಧು-ವರರ ಮೇಲೆ ಸುರಿಸಿದ್ದಾರೆ.

RelatedPosts

ಮದುವೆ ನಿರಾಕರಿಸಿದಕ್ಕೆ ಎಚ್‌ಐವಿ ರಕ್ತ ಇಂಜೆಕ್ಟ್ ಮಾಡಿದ ಆರೋಪಿ: ಯುವತಿ ನೇಣಿಗೆ ಶರಣು

ಅಮೆರಿಕಾದ ಜತೆ ಪಾಕಿಸ್ತಾನ ಸ್ನೇಹ ಭಾರತಕ್ಕೆ ಮಾರಕವಾಗುತ್ತಾ?

ರೀಲ್ಸ್ ಹುಚ್ಚಿಗೆ ಮೂವರು ಬಾಲಕಿಯರು ಬಲಿ: ಜಲಪಾತದಲ್ಲಿ ಮುಳುಗಿ ಸಾ*ವು

ಆಟೋ-ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ: ಭಾಷೆ ಗೊತ್ತಿಲ್ಲದಿದ್ದರೆ ಲೈಸೆನ್ಸ್ ಕ್ಯಾನ್ಸಲ್

ADVERTISEMENT
ADVERTISEMENT

ವಿಡಿಯೋದಲ್ಲಿ ಕಾಣುವಂತೆ, ಮದುವೆ ವೇದಿಕೆಯಲ್ಲಿ ನಿಂತಿದ್ದ ದಂಪತಿಯನ್ನು ಸುತ್ತುವರಿದ ಅತಿಥಿಗಳು ಕೈಯಲ್ಲಿ ನೋಟುಗಳ ಬಂಡಲ್ ಹಿಡಿದು ಒಂದರ ನಂತರ ಒಂದಾಗಿ ಎಸೆದು ಹಾರೈಸುತ್ತಾರೆ. ಕೆಲವರು ತಮ್ಮ ಬ್ಯಾಗ್‌ಗಳಿಂದ ನೋಟುಗಳನ್ನು ತೆಗೆದು ನೇರವಾಗಿ ವಧು-ವರರ ಮೇಲೆ ಸುರಿಸುವ ದೃಶ್ಯ ಕಾಣಿಸುತ್ತದೆ. ಕೆಲವೇ ಕ್ಷಣಗಳಲ್ಲಿ ವೇದಿಕೆ ಹಾಗೂ ಅದರ ಸುತ್ತಲಿನ ನೆಲ ಸಂಪೂರ್ಣವಾಗಿ ನೋಟುಗಳಿಂದ ತುಂಬಿಬಿಟ್ಟಿದೆ.

A video from a lavish Punjabi wedding in Patti town of Punjab’s Tarn Taran has gone viral.

The ceremony, held on February 14, shows guests showering bundles of currency notes over the bride and groom as they stand on the wedding stage.

Several attendees, including NRI guests… pic.twitter.com/p7PuwnWW4G

— Vani Mehrotra (@vani_mehrotra) February 18, 2026

ಪಂಜಾಬಿ ಸಂಪ್ರದಾಯದಲ್ಲಿ ‘ಮನೆಯವರ ಸಂತೋಷ’ವನ್ನು ವ್ಯಕ್ತಪಡಿಸಲು ಹಣವನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಆದರೆ ಈ ಮಟ್ಟದ ಹಣದ ಪ್ರದರ್ಶನ ಅಪರೂಪ. ವಿಶೇಷವಾಗಿ ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು (NRIs) ತಮ್ಮ ಕುಟುಂಬದ ಮದುವೆಗಳಲ್ಲಿ ದೊಡ್ಡ ಮಟ್ಟದಲ್ಲಿ ಭಾಗವಹಿಸುವುದು ಸಾಮಾನ್ಯವಾಗಿದೆ. ಈ ಮದುವೆಯಲ್ಲೂ ಆಸ್ಟ್ರೇಲಿಯಾ ಮತ್ತು ಕೆನಡಾದಿಂದ ಆಗಮಿಸಿದ್ದ ಅತಿಥಿಗಳು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು “ಇದೇ ಪಂಜಾಬಿ ಮದುವೆಯ ವೈಭವ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದರೆ, ಇನ್ನೂ ಕೆಲವರು ಇಂತಹ ಹಣದ ಸಾರ್ವಜನಿಕ ಪ್ರದರ್ಶನದ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ. “ಹಣವನ್ನು ಹೀಗೆ ಸುರಿಯುವುದಕ್ಕಿಂತ ದಾನಧರ್ಮಗಳಿಗೆ ಬಳಸಿದ್ದರೆ ಉತ್ತಮವಾಗಿರುತ್ತಿತ್ತು” ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಇನ್ನೂ ಕೆಲವರು ಇದನ್ನು ಕುಟುಂಬದ ಸಂತೋಷದ ಅಭಿವ್ಯಕ್ತಿ ಎಂದು ಸಮರ್ಥಿಸಿದ್ದಾರೆ. ಮದುವೆ ಜೀವನದಲ್ಲಿ ಒಮ್ಮೆ ಮಾತ್ರ ಬರುವ ಮಹತ್ವದ ಕ್ಷಣವಾಗಿದ್ದು, ಅದನ್ನು ಅದ್ದೂರಿಯಾಗಿ ಆಚರಿಸುವುದು ತಪ್ಪಲ್ಲ ಎಂಬ ಅಭಿಪ್ರಾಯವನ್ನೂ ಹಲವರು ಹಂಚಿಕೊಂಡಿದ್ದಾರೆ. ವಿಶೇಷವಾಗಿ ವಿದೇಶದಲ್ಲಿ ನೆಲೆಸಿರುವ ಭಾರತೀಯರು ತಮ್ಮ ಮೂಲ ಊರಲ್ಲಿ ನಡೆಯುವ ಮದುವೆಗಳನ್ನು ಭರ್ಜರಿಯಾಗಿ ಆಚರಿಸುವ ಮೂಲಕ ತಮ್ಮ ಬಂಧುಬಳಗದೊಂದಿಗೆ ಸಂಭ್ರಮದಿಂದ ಹಂಚಿಕೊಳ್ಳುತ್ತಾರೆ..

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 12T123137.262

ಹರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಮತ್ತೆ ಕಾಡುತ್ತಾ ತೈಲ & ಎಲ್‌ಪಿಜಿ ಅಭಾವ..?

by ಶಾಲಿನಿ ಕೆ. ಡಿ
April 12, 2026 - 12:32 pm
0

Untitled design 2026 04 12T115721.152

ಹರ್ಮುಜ್ ಜಲಸಂಧಿಯಲ್ಲಿ ಬೀಡುಬಿಟ್ಟ ಅಮೆರಿಕದ 2 ಯುದ್ಧ ನೌಕೆಗಳು

by ಶಾಲಿನಿ ಕೆ. ಡಿ
April 12, 2026 - 12:02 pm
0

Untitled design 2026 04 12T113616.558

ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

by ಶಾಲಿನಿ ಕೆ. ಡಿ
April 12, 2026 - 11:37 am
0

Untitled design 2026 04 12T110002.851

ಇಸ್ಲಾಮಾಬಾದ್‌‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲ: ಜೆಡಿ ವ್ಯಾನ್ಸ್ ಹೇಳಿಕೆ

by ಶಾಲಿನಿ ಕೆ. ಡಿ
April 12, 2026 - 11:02 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 11T160249.808
    ಮದುವೆ ನಿರಾಕರಿಸಿದಕ್ಕೆ ಎಚ್‌ಐವಿ ರಕ್ತ ಇಂಜೆಕ್ಟ್ ಮಾಡಿದ ಆರೋಪಿ: ಯುವತಿ ನೇಣಿಗೆ ಶರಣು
    April 11, 2026 | 0
  • Untitled design 2026 04 11T111042.397
    ಅಮೆರಿಕಾದ ಜತೆ ಪಾಕಿಸ್ತಾನ ಸ್ನೇಹ ಭಾರತಕ್ಕೆ ಮಾರಕವಾಗುತ್ತಾ?
    April 11, 2026 | 0
  • Untitled design 2026 04 10T160024.910
    ರೀಲ್ಸ್ ಹುಚ್ಚಿಗೆ ಮೂವರು ಬಾಲಕಿಯರು ಬಲಿ: ಜಲಪಾತದಲ್ಲಿ ಮುಳುಗಿ ಸಾ*ವು
    April 10, 2026 | 0
  • ಅರ್ಚನಾ (2)
    ಆಟೋ-ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ: ಭಾಷೆ ಗೊತ್ತಿಲ್ಲದಿದ್ದರೆ ಲೈಸೆನ್ಸ್ ಕ್ಯಾನ್ಸಲ್
    April 9, 2026 | 0
  • Untitled design 2026 04 09T142424.184
    ಕೆರೆಯೇ ಅಡಗುತಾಣ, ಕಮಲದ ಕಡ್ಡಿಯಿಂದ ಉಸಿರಾಟ: ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನ ಹೊಸ ತಂತ್ರ
    April 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version