ಭಾರತ-ಪಾಕಿಸ್ತಾನ ಗಡಿಯಲ್ಲಿ ಕಳೆದ ಐದು ದಿನಗಳಿಂದ ಯುದ್ಧದ ಆತಂಕ ಮುಂದುವರಿದಿದ್ದು, ಮೇ 10ರಂದು ಸಂಜೆ ಕದನ ವಿರಾಮ ಘೋಷಣೆಯಾಗಿತ್ತು. ಆದರೆ, ಕೇವಲ ಮೂರು ಗಂಟೆಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ, ಜಮ್ಮುವಿನ ಆರ್ಎಸ್ ಪುರದ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬಿಎಸ್ಎಫ್ ಸಬ್ ಇನ್ಸ್ಪೆಕ್ಟರ್ ಎಂ.ಡಿ ಇಮ್ತೆಯಾಜ್ ಹುತಾತ್ಮರಾದರು.
ಪಾಕಿಸ್ತಾನದ ಗಡಿಯಾಚೆಗಿನ ಗುಂಡಿನ ದಾಳಿಯ ಸಂದರ್ಭದಲ್ಲಿ ದೇಶ ಸೇವೆಯಲ್ಲಿ ತೊಡಗಿದ್ದ ಇಮ್ತೆಯಾಜ್, ಶತ್ರುವಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಬಿಎಸ್ಎಫ್ ಈ ಘಟನೆಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಹುತಾತ್ಮ ಯೋಧನ ಸೇವೆಗೆ ಗೌರವ ಸಲ್ಲಿಸಿದೆ. ಮೃತರ ಕುಟುಂಬಕ್ಕೆ ಬಿಎಸ್ಎಫ್ ಸಾಂತ್ವನ ವ್ಯಕ್ತಪಡಿಸಿದ್ದು, ದೇಶದ ಗಡಿರಕ್ಷಣೆಗಾಗಿ ಯೋಧನ ತ್ಯಾಗವನ್ನು ಸ್ಮರಿಸಿದೆ.
DG BSF and All Ranks salute the supreme sacrifice made by BSF Sub Inspector Md Imteyaz in service to the Nation on 10 May 2025 during cross border firing by Pakistan along the International Boundary in R S Pura area, Jammu.
Prahari Pariwar stands firm with the bereaved family in… pic.twitter.com/eQeoLAHlEU
— BSF (@BSF_India) May 10, 2025
ಗಡಿಯಲ್ಲಿ ಪಾಕಿಸ್ತಾನದ ಕೃತ್ಯಗಳು ಭಾರತಕ್ಕೆ ಸವಾಲಾಗಿದ್ದು, ಈ ಘಟನೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತ ಸರ್ಕಾರ ಕದನ ವಿರಾಮ ಉಲ್ಲಂಘನೆಗೆ ತಕ್ಕ ಉತ್ತರ ನೀಡುವ ಭರವಸೆ ನೀಡಿದೆ. ಈ ಘಟನೆಯಿಂದ ಗಡಿಯಲ್ಲಿನ ಭದ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.