ಪಾಕಿಸ್ತಾನದಿಂದ ಶೆಲ್ ದಾಳಿ; ಭಾರತೀಯ ಯೋಧ ಹುತಾತ್ಮ

ಐಶ್ವರ್ಯ (13)

ಭಾರತ-ಪಾಕಿಸ್ತಾನ ಗಡಿಯಲ್ಲಿ ಕಳೆದ ಐದು ದಿನಗಳಿಂದ ಯುದ್ಧದ ಆತಂಕ ಮುಂದುವರಿದಿದ್ದು, ಮೇ 10ರಂದು ಸಂಜೆ ಕದನ ವಿರಾಮ ಘೋಷಣೆಯಾಗಿತ್ತು. ಆದರೆ, ಕೇವಲ ಮೂರು ಗಂಟೆಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ, ಜಮ್ಮುವಿನ ಆರ್‌ಎಸ್ ಪುರದ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬಿಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ಎಂ.ಡಿ ಇಮ್ತೆಯಾಜ್ ಹುತಾತ್ಮರಾದರು.

ಪಾಕಿಸ್ತಾನದ ಗಡಿಯಾಚೆಗಿನ ಗುಂಡಿನ ದಾಳಿಯ ಸಂದರ್ಭದಲ್ಲಿ ದೇಶ ಸೇವೆಯಲ್ಲಿ ತೊಡಗಿದ್ದ ಇಮ್ತೆಯಾಜ್, ಶತ್ರುವಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಬಿಎಸ್‌ಎಫ್ ಈ ಘಟನೆಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಹುತಾತ್ಮ ಯೋಧನ ಸೇವೆಗೆ ಗೌರವ ಸಲ್ಲಿಸಿದೆ. ಮೃತರ ಕುಟುಂಬಕ್ಕೆ ಬಿಎಸ್‌ಎಫ್ ಸಾಂತ್ವನ ವ್ಯಕ್ತಪಡಿಸಿದ್ದು, ದೇಶದ ಗಡಿರಕ್ಷಣೆಗಾಗಿ ಯೋಧನ ತ್ಯಾಗವನ್ನು ಸ್ಮರಿಸಿದೆ.

ADVERTISEMENT
ADVERTISEMENT

ಗಡಿಯಲ್ಲಿ ಪಾಕಿಸ್ತಾನದ ಕೃತ್ಯಗಳು ಭಾರತಕ್ಕೆ ಸವಾಲಾಗಿದ್ದು, ಈ ಘಟನೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತ ಸರ್ಕಾರ ಕದನ ವಿರಾಮ ಉಲ್ಲಂಘನೆಗೆ ತಕ್ಕ ಉತ್ತರ ನೀಡುವ ಭರವಸೆ ನೀಡಿದೆ. ಈ ಘಟನೆಯಿಂದ ಗಡಿಯಲ್ಲಿನ ಭದ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version