• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, January 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ವೈದ್ಯರ ನಿರ್ಲಕ್ಷ್ಯಕ್ಕೆ ಅವಳಿ-ಜವಳಿ ಮಕ್ಕಳು ಸಾವು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 7, 2025 - 12:47 pm
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ವಿಜಯನಗರ
0 0
0
Untitled design 2025 11 07t123403.473

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಅವಳಿ-ಜವಳಿ ಗಂಡು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ನಿವಾಸಿ ಪರ್ವೀನ್ ಬಾನು ಮತ್ತು ಹುಸೇನ್ ಭಾಷಾ ದಂಪತಿಗಳಾಗಿದ್ದು, ಈ ದಂಪತಿಗೆ ಮದ್ವೆಯಾಗಿ 7 ವರ್ಷಗಳ ನಂತರ ಅವಳಿ ಗಂಡು ಮಕ್ಕಳ ಜನನವಾಗಿದೆ. ಆದರೆ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದು, ತಾಯಿ ಪರ್ವೀನ್ ಬಾನು ಆಸ್ಪತ್ರೆಯ ವೈದ್ಯರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪರ್ವೀನ್ ಬಾನು ಅವರು ನಿನ್ನೆ (ಗುರುವಾರ) ಮಧ್ಯಾಹ್ನ ಸುಮಾರು 1:30 ಗಂಟೆಗೆ ಹೊಸಪೇಟೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ರಾತ್ರಿ 8:30 ಗಂಟೆವರೆಗೂ ಯಾವುದೇ ವೈದ್ಯರು ಅವರನ್ನು ಪರೀಕ್ಷಿಸಲಿಲ್ಲ ಎಂದು ಆರೋಪಿಸಲಾಗಿದೆ. 

RelatedPosts

ಬೆಂಗಳೂರು ಟೆಕ್ಕಿ ಶರ್ಮಿಳಾ ಸಾವಿಗೆ ಸ್ಪೋಟಕ ಟ್ವಿಸ್ಟ್: ತನಿಖೆಯಲ್ಲಿ ಕೊಲೆ ಭಯಾನಕ ರಹಸ್ಯ ಬಯಲು!

ರಮ್ಯಾ-ವಿಜಯಲಕ್ಷ್ಮಿ ಬೆನ್ನಲ್ಲೇ ಈ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ!

ಗಂಡ ಹೆಂಡತಿ ಕಿತ್ತಾಟಕ್ಕೆ ಟ್ವಿಸ್ಟ್: ರೋಚಕ ತಿರುವು ಕೊಟ್ಟ ಮೂರನೇ ಪತಿ..!

ವೃದ್ಧ ಡಾಕ್ಟರ್ ದಂಪತಿಗೆ ಡಿಜಿಟಲ್ ಅರೆಸ್ಟ್ ಭೀತಿ ಒಡ್ಡಿ 14 ಕೋಟಿ ರೂ. ದೋಚಿದ ವಂಚಕರು

ADVERTISEMENT
ADVERTISEMENT

“ನಾನು ಅವಳಿ ಮಕ್ಕಳಿಗೆ ಜನ್ಮ ನೀಡಿದೆ, ಆದರೆ ಮಕ್ಕಳ ಮುಖ ನೋಡುವ ಭಾಗ್ಯವೂ ನನಗಿಲ್ಲ,” ಎಂದು ಕಣ್ಣೀರು ಹಾಕಿದ್ದಾರೆ. “ನನ್ನನ್ನು ಯಾರೂ ಕೂಡ ಸರಿಯಾಗಿ ನೋಡಲಿಲ್ಲ, ಕೇವಲ ಸ್ಟಾಫ್ ನರ್ಸ್ ಮಾತ್ರ ನೋಡಿದ್ದಾರೆ. ವೈದ್ಯರು ‘ಚಾರ್ಜ್ ತಗೊಂಡು ಬಾ’ ಅಂತ ನರ್ಸ್‌ಗಳಿಗೆ ಹೇಳ್ತಾರೆ. ನನ್ನನ್ನು ಹೆರಿಗೆಗೆ ಕರಕೊಂಡು ಹೋಗಲಿಲ್ಲ,” ಎಂದು ಆಸ್ಪತ್ರೆಯ  ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾನು 7 ಗಂಟೆಗಳ ಕಾಲ ಕೂಗಾಡಿದೆ. ಆದರೆ ಯಾರೂ ಬಂದಿಲ್ಲ. ಒಂದು ಮಗು ಗರ್ಭಕೋಶದಲ್ಲೇ ಸತ್ತುಹೋಯಿತು, ಎರಡನೆಯದು ಹೊರಬಂದ ನಂತರ ಕೇವಲ 15 ನಿಮಿಷ ಬದುಕಿತ್ತು” ಎಂದು ಪರ್ವೀನ್ ಹೇಳಿದ್ದಾರೆ.

ಹಗರಿಬೊಮ್ಮನ ಹಳ್ಳಿಯಲ್ಲಿ ಅರವಳಿಕೆ ತಜ್ಞರು (ಗೈನಕಾಲಜಿಸ್ಟ್) ಲಭ್ಯವಿಲ್ಲದ ಕಾರಣ ಪರ್ವೀನ್ ಬಾನು ಅವರನ್ನು ಹೊಸಪೇಟೆಯ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ವೈದ್ಯರು ‘ಬಿಪಿ ಜಾಸ್ತಿ ಇದೆ’ ಎಂಬ ಕಾರಣ ಹೇಳಿ ಹೆರಿಗೆ ಮಾಡಲು ಮುಂದೂಡಿದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಪರ್ವೀನ್ ಬಾನು ಅವರ ಕುಟುಂಬದವರು ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

ಕೆಮ್ಮಿನ ಸಿರಪ್‌ನಿಂದ ಇಬ್ಬರು ಮಕ್ಕಳ ಸಾವು!

ಜೈಪುರ, ಅಕ್ಟೋಬರ್ 1, 2025: ರಾಜಸ್ಥಾನದ ಸರ್ಕಾರಿ ಆಸ್ಪತ್ರೆಗಳಿಗೆ ಕೇಸನ್ ಫಾರ್ಮಾ ಕಂಪನಿಯಿಂದ ಪೂರೈಕೆಯಾದ ಜೆನೆರಿಕ್ ಕೆಮ್ಮಿನ ಸಿರಪ್ ಸೇವಿಸಿದ ಇಬ್ಬರು ಮಕ್ಕಳು ಕಳೆದ ಎರಡು ವಾರಗಳಲ್ಲಿ ಸಾವನ್ನಪ್ಪಿದ್ದಾರೆ. ಕನಿಷ್ಠ 10 ಜನರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಿರಪ್ ಸುರಕ್ಷಿತವೆಂದು ಸಾಬೀತುಪಡಿಸಲು ಡೋಸ್ ತೆಗೆದುಕೊಂಡ ವೈದ್ಯರು ಮತ್ತು ಆಂಬ್ಯುಲೆನ್ಸ್ ಚಾಲಕ ಕೂಡ ಪ್ರಜ್ಞಾಹೀನರಾಗಿದ್ದಾರೆ.

ರಾಜಸ್ಥಾನದ ಸಿಕಾರ್ ಜಿಲ್ಲೆಯ 5 ವರ್ಷದ ಬಾಲಕ ನಿತೀಶ್‌ಗೆ ಕೆಮ್ಮು ಮತ್ತು ಶೀತದ ಲಕ್ಷಣಗಳು ಕಾಣಿಸಿಕೊಂಡಿತ್ತು. ಭಾನುವಾರ, ಸೆಪ್ಟೆಂಬರ್ 28, 2025ರಂದು, ಅವನ ಪೋಷಕರು ಚಿರಾನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ವೈದ್ಯರು ಕೇಸನ್ ಫಾರ್ಮಾ ತಯಾರಿಸಿದ ಡೆಕ್ಟೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಒಳಗೊಂಡ ಕೆಮ್ಮಿನ ಸಿರಪ್ ನೀಡಿದರು. ರಾತ್ರಿ 11:30ರ ಸುಮಾರಿಗೆ ನಿತೀಶ್‌ನ ತಾಯಿ ಔಷಧವನ್ನು ನೀಡಿದರು. ಬೆಳಗಿನ ಜಾವ 3 ಗಂಟೆಗೆ ನಿತೀಶ್ ಬಿಕ್ಕಳಿಸುತ್ತಿದ್ದನು. ತಾಯಿ ಸ್ವಲ್ಪ ನೀರು ಕೊಟ್ಟಾಗ, ಅವನು ಮಲಗಿದನು ಆದರೆ ಮತ್ತೆ ಎಚ್ಚರಗೊಳ್ಳಲಿಲ್ಲ. ಬೆಳಿಗ್ಗೆ 5 ಗಂಟೆಗೆ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ನಿತೀಶ್ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.

ನಿತೀಶ್‌ನ ಚಿಕ್ಕಪ್ಪ ಪ್ರಿಯಕಾಂತ್ ಶರ್ಮಾ, ನಿತೀಶ್ ಇಡೀ ದಿನ ಆರೋಗ್ಯವಾಗಿದ್ದ. ಸಂಜೆ ನವರಾತ್ರಿ ಕಾರ್ಯಕ್ರಮಕ್ಕೂ ಹೋಗಿದ್ದ. ರಾತ್ರಿ ಕೆಮ್ಮಿನ ಔಷಧ ನೀಡಿದ ಬಳಿಕ ಈ ದುರಂತ ಸಂಭವಿಸಿತು. ಔಷಧ ನೀಡುವ ಮೊದಲು ಅವನು ಚೆನ್ನಾಗಿದ್ದ ಎಂದು ಹೇಳಿದ್ದಾರೆ.

ಇದೇ ತಿಂಗಳ ಆರಂಭದಲ್ಲಿ, ಸೆಪ್ಟೆಂಬರ್ 22ರಂದು, 2 ವರ್ಷದ ಸಾಮ್ರಾಟ್ ಜಾತವ್ ಕೂಡ ಇದೇ ಕೆಮ್ಮಿನ ಸಿರಪ್ ಸೇವಿಸಿ ಸಾವನ್ನಪ್ಪಿದ. ಸಾಮ್ರಾಟ್, ಅವನ ಸಹೋದರಿ ಸಾಕ್ಷಿ ಮತ್ತು ಸೋದರ ಸಂಬಂಧಿ ವಿರಾಟ್‌ಗೆ ಕೆಮ್ಮು ಮತ್ತು ಶೀತದ ಲಕ್ಷಣಗಳಿದ್ದವು. ಸಾಮ್ರಾಟ್‌ನ ತಾಯಿ ಜ್ಯೋತಿ ಸ್ಥಳೀಯ ಸಾರ್ವಜನಿಕ ಆರೋಗ್ಯ ಕೇಂದ್ರದಿಂದ ಅದೇ ಸಿರಪ್ ತಂದು ಮಧ್ಯಾಹ್ನ 1:30ಕ್ಕೆ ಮೂರೂ ಮಕ್ಕಳಿಗೆ ನೀಡಿದ್ದರು. ಐದು ಗಂಟೆಗಳ ನಂತರ ಮಕ್ಕಳು ಎಚ್ಚರಗೊಳ್ಳದಿದ್ದಾಗ ಕುಟುಂಬ ಆತಂಕಗೊಂಡಿತು. ಸಾಕ್ಷಿ ಮತ್ತು ವಿರಾಟ್ ವಾಂತಿಯ ನಂತರ ಎಚ್ಚರಗೊಂಡರಾದರೂ, ಸಾಮ್ರಾಟ್ ಪ್ರಜ್ಞಾಹೀನನಾಗಿದ್ದ. ಭರತ್‌ಪುರದ ಆಸ್ಪತ್ರೆಗೆ ಕರೆದೊಯ್ದರೂ, ಜೈಪುರದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಸಾಮ್ರಾಟ್ ಸಾವನ್ನಪ್ಪಿದ.

ಸಾಮ್ರಾಟ್‌ನ ಅಜ್ಜಿ ನೆಕ್ಕಿ ಜಾತವ್, ನಮ್ಮ ಮೂವರು ಮೊಮ್ಮಕ್ಕಳಿಗೆ ಸಿರಪ್ ಕೊಟ್ಟಿದ್ದೆವು. ಅದು ಮಾರಕವೆಂದು ತಿಳಿದಿರಲಿಲ್ಲ. ಇಬ್ಬರು ಎಚ್ಚರಗೊಂಡರೂ, ಸಾಮ್ರಾಟ್‌ನನ್ನು ಕಳೆದುಕೊಂಡೆವು. ಸಿಕಾರ್‌ನ ಘಟನೆ ತಿಳಿದಾಗಲೇ ಸಿರಪ್ ಕಾರಣವೆಂದು ಗೊತ್ತಾಯಿತು ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 24ರಂದು, 3 ವರ್ಷದ ಗಗನ್ ಕುಮಾರ್ ಈ ಸಿರಪ್ ಸೇವಿಸಿ ಅನಾರೋಗ್ಯಕ್ಕೆ ಒಳಗಾಗಿದ್ದ. ಆತನ ತಾಯಿ ಚಿರಾನಾದ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ. ತಾರಾಚಂದ್ ಯೋಗಿ ಬಳಿ ದೂರು ನೀಡಲು ತೆರಳಿದ್ದರು. ಸಿರಪ್ ಸುರಕ್ಷಿತವೆಂದು ಸಾಬೀತುಪಡಿಸಲು ಡಾ. ಯೋಗಿ ಸ್ವತಃ ಡೋಸ್ ತೆಗೆದುಕೊಂಡರು. ಆದರೆ, ಭರತ್‌ಪುರಕ್ಕೆ ಕಾರಿನಲ್ಲಿ ತೆರಳುವಾಗ ಅವರಿಗೆ ನಿದ್ರಾಜನಕ ಪರಿಣಾಮ ಉಂಟಾಗಿ, ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿದರು. 8 ಗಂಟೆಗಳ ನಂತರ ಮೊಬೈಲ್ ಟವರ್ ಆಧಾರದಲ್ಲಿ ಅವರನ್ನು ಪತ್ತೆ ಮಾಡಿದಾಗ, ಡಾ. ಯೋಗಿ ಕಾರಿನಲ್ಲಿ ಪ್ರಜ್ಞಾಹೀನರಾಗಿದ್ದರು. ಇದೇ ಸಿರಪ್ ಸೇವಿಸಿದ ಆಂಬ್ಯುಲೆನ್ಸ್ ಚಾಲಕ ಕೂಡ ಕುಸಿದು ಬಿದ್ದಿದ್ದ.

ಈ ಘಟನೆಗಳ ನಂತರ, ರಾಜಸ್ಥಾನ ಸರ್ಕಾರವು ಕೇಸನ್ ಫಾರ್ಮಾ ತಯಾರಿಸಿದ ಕೆಮ್ಮಿನ ಸಿರಪ್‌ನ 22 ಬ್ಯಾಚ್‌ಗಳನ್ನು ನಿಷೇಧಿಸಿದೆ. ಜುಲೈ 2025ರಿಂದ ರಾಜ್ಯದಲ್ಲಿ 1.33 ಲಕ್ಷ ಬಾಟಲಿಗಳ ಸಿರಪ್ ರೋಗಿಗಳಿಗೆ ವಿತರಿಸಲಾಗಿದೆ ಎಂದು ವೈದ್ಯಕೀಯ ಇಲಾಖೆ ತಿಳಿಸಿದೆ. ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ 8,200ಕ್ಕೂ ಹೆಚ್ಚು ಬಾಟಲಿಗಳ ಸ್ಟಾಕ್ ಇದ್ದು, ಅವುಗಳನ್ನು ಬಳಕೆಗೆ ನೀಡದಂತೆ ಆದೇಶಿಸಲಾಗಿದೆ.

ಈ ಘಟನೆಯಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಔಷಧ ವಿತರಣೆಯ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ. ರಾಜಸ್ಥಾನ ಸರ್ಕಾರವು ತನಿಖೆಗೆ ಆದೇಶಿಸಿದ್ದು, ಔಷಧ ಕಂಪನಿಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರು ಈ ಘಟನೆಯಿಂದ ಆಕ್ರೋಶಗೊಂಡಿದ್ದು, ಔಷಧಗಳ ಸುರಕ್ಷತೆಗೆ ಕಟ್ಟುನಿಟ್ಟಿನ ಪರೀಕ್ಷೆಯ ಒತ್ತಾಯವನ್ನು ಮಾಡಿದ್ದಾರೆ.

 
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 01 11T232513.597

ಸುದೀಪ್ ಟ್ವೀಟ್‌‌‌ಗೆ ರೀಟ್ವೀಟ್ ಮಾಡಿದ ರಾಕಿಭಾಯ್ ಯಶ್..!

by ಶ್ರೀದೇವಿ ಬಿ. ವೈ
January 11, 2026 - 11:27 pm
0

BeFunky collage 2026 01 11T231431.597

ಸೀಬೆ ಹಣ್ಣು ಸಿಪ್ಪೆ ತೆಗೆದು ತಿಂತೀರಾ? ಹಾಗಾದ್ರೆ ಈ ಸ್ಟೋರಿ

by ಶ್ರೀದೇವಿ ಬಿ. ವೈ
January 11, 2026 - 11:15 pm
0

BeFunky collage 2026 01 11T225257.396

ಸ್ಟ್ರಾಂಗ್ ಸ್ಪರ್ಧಿ ರಾಶಿಕಾ ಶೆಟ್ಟಿ ಬಿಗ್ ಬಾಸ್‌ನಿಂದ ಔಟ್!

by ಶ್ರೀದೇವಿ ಬಿ. ವೈ
January 11, 2026 - 10:53 pm
0

BeFunky collage 2026 01 11T222552.876

IND vs NZ: ಏಕಪಕ್ಷೀಯ ಗೆಲುವನ್ನು ರೋಚಕಗೊಳಿಸಿ ಜಯಿಸಿದ ಟೀಂ ಇಂಡಿಯಾ!

by ಶ್ರೀದೇವಿ ಬಿ. ವೈ
January 11, 2026 - 10:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 11T140834.918
    ವೃದ್ಧ ಡಾಕ್ಟರ್ ದಂಪತಿಗೆ ಡಿಜಿಟಲ್ ಅರೆಸ್ಟ್ ಭೀತಿ ಒಡ್ಡಿ 14 ಕೋಟಿ ರೂ. ದೋಚಿದ ವಂಚಕರು
    January 11, 2026 | 0
  • Untitled design 2026 01 11T131545.759
    ಅಪ್ಪನ ಅಕ್ರಮ ಸಂಬಂಧಕ್ಕೆ ಬೇಸತ್ತ ಮಗ: ಸ್ಟೀಲ್ ರಾಡ್‌ನಿಂದ ಹೊಡೆದು ತಂದೆಯ ಹ*ತ್ಯೆ
    January 11, 2026 | 0
  • WhatsApp Image 2026 01 11 at 12.41.12
    ಸೋಮನಾಥ ದೇವಾಲಯದಲ್ಲಿ ‘ಸೋಮನಾಥ ಸ್ವಾಭಿಮಾನ ಪರ್ವ: ಬೃಹತ್‌ ಜನಸಮೂಹದಲ್ಲಿ ಮೋದಿ ರೋಡ್‌ ಶೋ
    January 11, 2026 | 0
  • Untitled design 2026 01 11T111500.121
    ಕೇಂದ್ರದ ಎಚ್ಚರಿಕೆಗೆ ಶರಣಾದ ಎಲಾನ್ ಮಸ್ಕ್: 3500 ಪೋಸ್ಟ್‌ ಬ್ಲಾಕ್‌, 600ಕ್ಕೂ ಹೆಚ್ಚು ಖಾತೆ ಡಿಲೀಟ್‌
    January 11, 2026 | 0
  • Untitled design 2026 01 11T105436.011
    ಬಿಗ್ ಬಾಸ್ ಸೂರಜ್ ಸಿಂಗ್ ಈಗ ಸೀರಿಯಲ್ ಹೀರೋ: ‘ಪವಿತ್ರ ಬಂಧನ’ದಲ್ಲಿ ಮೈಸೂರು ಹುಡುಗನ ದರ್ಬಾರ್
    January 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version