• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಭಾರತ-ಪಾಕ್‌ ಗಡಿಯ ಕಾವಲಿಗ ಮುಧೋಳ..! ಕರುನಾಡ ಹೆಮ್ಮೆಯ ಮುಧೋಳ ಬೇಟೆ ನಾಯಿ..!

ಭವ್ಯ ಶ್ರೀವತ್ಸ by ಭವ್ಯ ಶ್ರೀವತ್ಸ
March 29, 2025 - 4:48 pm
in Flash News, ಕರ್ನಾಟಕ
0 0
0
11 (67)

ಕರ್ನಾಟಕ ಹೆಮ್ಮೆಯ ಏಕೈಕ ನಾಯಿತಳಿ ಮುಧೋಳ ಇಂದು ಜಗತ್ಪ್ರಸಿದ್ಧ ಶ್ವಾನ ತಳಿಯಾಗಿದೆ. ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ಪ್ರತೀಕವಾದ ಈ ತಳಿಯ ನಾಯಿಗಳು ತಮ್ಮ ಚಾಣಾಕ್ಷ ಬೇಟೆಗಾರಿಕೆಯಿಂದಾಗಿ ವಿಶ್ವಾದ್ಯಂತ ಪ್ರಖ್ಯಾತಿ ಪಡೆಯೋ ಮೂಲಕ ನಮ್ಮ ಕರುನಾಡಿನ ಹೆಸರನ್ನು ಎತ್ತರಕ್ಕೆ ಏರಿಸಿವೆ. ಮುಧೋಳ ಹೌಂಡ್ಸ್ ಎಂದು ಕರೆಯಲ್ಪಡುವ ಈ ಬೇಟೆ ನಾಯಿಗಳು ಅತ್ಯಂತ ವೇಗವಾಗಿ ಓಡಿ, ಬೇಟೆಯಾಡುವ ತೀಕ್ಷ್ಣಬುದ್ಧಿಯನ್ನು ಹೊಂದಿವೆ. ಈ ಬೇಟೆ ನಾಯಿಗಳು ತುಂಬಾ ಸಣಕಲು ದೇಹ ಹೊಂದಿದ್ದರೂ ಒಂದು ಹುಲಿಯನ್ನು ಕೂಡ ಎದುರಿಸಿ ಸೋಲಿಸಿ ಮಲಗಿಸುವ ಶಕ್ತಿಯನ್ನು ಹೊಂದಿವೆ.

ಅತ್ಯಂತ ಕಡಿಮೆ ಆಹಾರ ಸೇವಿಸಿ, ಬಹಳ ದಿವಸ ಬದುಕುವುದರಲ್ಲಿಯೂ ಇದು ಹೆಸರುವಾಸಿಯಾಗಿದೆ. ಹೀಗಾಗಿ ಯಾವುದೇ ಹವಾಮಾನಕ್ಕೆ ಹಾಗೂ ವಾತಾವರಣಕ್ಕೆ ಮತ್ತು ಎಲ್ಲ ರೀತಿಯ ಜನರಿಗೂ ಎಲ್ಲ ತರಹದ ಕಾರ್ಯಕ್ಕೂ ಸೂಕ್ತವಾದ ನಾಯಿಯಾಗಿದೆ. ಸ್ವಾಮಿನಿಷ್ಠೆಯಲ್ಲೂ ಎತ್ತಿದ ಕೈ ಅನ್ನೋ ಕಾರಣಕ್ಕೆ ಇವುಗಳನ್ನು ಮೊಟ್ಟ ಮೊದಲ ಬಾರಿ 2017ರಲ್ಲಿ ಭಾರತೀಯ ಸೇನೆಯಲ್ಲಿ ಗಡಿಯನ್ನು ಕಾಯಲು ಬಳಸಿಕೊಳ್ಳಲು ಅವಕಾಶ ನೀಡಲಾಯಿತು. ಈ ಶ್ವಾನಗಳು ಈಗ ಭಾರತ ಮತ್ತು ಪಾಕ್​ ಗಡಿಯಲ್ಲಿ ಶತ್ರುಗಳ ಪಾಳಯದ ಎದೆ ನಡುಗಿಸುವಂತೆ ಕಾವಲು ಕಾಯುತ್ತಿವೆ.

RelatedPosts

ಆಗಸ್ಟ್‌ನಲ್ಲಿ ಸಾಲು ಸಾಲು ರಜೆ: 15 ದಿನ ಬ್ಯಾಂಕ್, ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಸಂಪೂರ್ಣ ರಜೆ!

ರಾಜ್ಯದಲ್ಲಿ ತಗ್ಗಿದ ಮುಂಗಾರು: ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್!

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ದಾಳಿ!

ಭೀಕರ ರಸ್ತೆ ಅಪಘಾತ: ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೆ ಸಾವು

ADVERTISEMENT
ADVERTISEMENT

ತೀಕ್ಷ್ಣ ಕಣ್ಣುಗಳನ್ನು ಹೊಂದಿರೋ ಈ ನಾಯಿಗಳ ಬಾಯಿಗೆ ಒಂದು ಬಾರಿ ಬೇಟೆ ಸಿಕ್ಕಿದರೆ ಅದನ್ನು ಬಾಯಿಯಿಂದ ಬಿಡಿಸುವುದು ಸಾಧ್ಯವೇ ಇಲ್ಲ. ಮುಧೋಳ ನಾಯಿಗಳು ಮನೆಯಲ್ಲಿ, ತೋಟದಲ್ಲಿ ಇದ್ದರೆ ಯಾವ ಸೆಕ್ಯೂರಿಟಿ ಗಾರ್ಡ್​​ನ ಅವಶ್ಯಕತೆ ಇರುವುದಿಲ್ಲ. ಥೇಟ್ ಸೈನಿಕನಂತೆ ಮನೆ ಮತ್ತು ತೋಟಗಳನ್ನು ಕಾಯಬಲ್ಲ ಈ ಶ್ವಾನಗಳು ಇವು ಒಂದು ಬಾರಿ ವೈರಿಯ ಬೆನ್ನಟ್ಟಿದರೆ, ಅದನ್ನು ಮಕಾಡೆ ಮಲಗಿಸಿ ರಕ್ತ ಹೀರೋವರೆಗೂ ಹಿಂದೆ ಸರಿಯುವುದಿಲ್ಲ,

ಮುಧೋಳ ನಾಯಿ ತಳಿಯ ಇತಿಹಾಸ ಬಹಳ ಆಸಕ್ತಿದಾಯಕವಾಗಿದೆ. ಮೊಗಲರು ಭಾರತಕ್ಕೆ ಬಂದಾಗ ಯುದ್ಧದಲ್ಲಿ ಬಳಸಿಕೊಳ್ಳಲು ತಮ್ಮೊಡನೆ ಮೊಟ್ಟ ಮೊದಲನೆಯ ಬಾರಿ ಈ ನಾಯಿಗಳನ್ನು ತಂದರು ಎಂದು ಪ್ರತೀತಿ ಇದೆ. ಮುಂದೆ ಔರಂಗಜೇಬನು ದಕ್ಷಿಣ ರಾಜ್ಯಗಳನ್ನು ಆಕ್ರಮಿಸಿದಾಗ, ತನ್ನ ಅಧೀನ ರಾಜರಿಗೆ ಈ ನಾಯಿಗಳನ್ನು ಪ್ರೀತಿಯ ಕಾಣಿಕೆಯಾಗಿ ಕೊಟ್ಟಿದ್ದನೆಂದೂ ಹೇಳುತ್ತಾರೆ. ಹೀಗೆ ಕರ್ನಾಟಕಕ್ಕೆ ಬಂದ ಈ ಬೇಟೆ ನಾಯಿಗಳನ್ನು ಆಗಿನ ವಿಜಾಪೂರದ ಮುಧೋಳ ಪ್ರಾಂತ್ಯದ ರಾಜರು ಪಾಲಿಸಿ, ಪೋಷಿಸಿ, ತಳಿ ಗುಣಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿದರು. ಇವರಲ್ಲಿ ಶ್ರೀಮಂತರಾಜಾ ಮಾಲೋಜಿರಾವ ಘೋರ್ಪಡೆಯವರು ಸ್ವತಃ ಶ್ವಾನಪ್ರೇಮಿಗಳಿದ್ದು, ಈ ಬೇಟೆನಾಯಿಗಳನ್ನು ಆಸಕ್ತಿವಹಿಸಿ ಅಭಿವೃದ್ಧಿಪಡಿಸಿ ‘ಮುಧೋಳ ಬೇಟೆ ನಾಯಿ’ ಎಂದು ಪ್ರಸಿದ್ಧಿ ಪಡೆಯಲು ಕಾರಣರಾದರು ಎಂದು ಹೇಳಬಹುದು.

ಇವುಗಳ ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಕಂಡ ಮರಾಠಾ ಸಾಮ್ರಾಜ್ಯದ ದೊರೆ ಛತ್ರಪತಿ ಶಿವಾಜಿ ಇವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಾಕಿ ಅವುಗಳಿಗೆ ಸೇನೆಯ ತರಬೇತಿ ನೀಡಿ ತನ್ನ ಸೇನೆಯಲ್ಲಿ ಇಟ್ಟುಕೊಂಡಿದ್ದ ಎಂದು ಇತಿಹಾಸಗಳು ಹೇಳುತ್ತವೆ. ಮುಧೋಳ ಶ್ವಾನಗಳು ಮೊಟ್ಟ ಮೊದಲ ಬಾರಿಗೆ ಸೇನೆಯಲ್ಲಿ ಕಾರ್ಯಾಚರಣೆಗೆ ಬಳಕೆಯಾಗಿದ್ದು ಶಿವಾಜಿ ಮಹಾರಾಜರ ಸೇನೆಯಲ್ಲಿ.

ದೇಶದ ಇತರೆ ಭಾಗಗಳಲ್ಲಿ ಈ ತಳಿಗಳ ಸಂತತಿ ಕ್ಷೀಣಿಸಿದ್ದರೂ ಕರ್ನಾಟಕದ ಬಾಗಲಕೋಟೆ, ವಿಜಾಪೂರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮತ್ತು ಮಹಾರಾಷ್ಟ್ರದ ಕೊಲ್ಹಾಪೂರ ಮತ್ತು ಸಾಂಗ್ಲಿ ಜಿಲ್ಲೆಯ ಕೆಲವು ಶ್ವಾನಾಸಕ್ತರಲ್ಲಿ ಕಾಣಸಿಗುತ್ತವೆ. ಇತ್ತೀಚಿಗೆ ಅಂದರೆ 1994 ರಿಂದ ಈಚೆ ಬೆಂಗಳೂರಿನ ‘ಮೈಸೂರು ಕೆನೆಲ್ ಕ್ಲಬ್’, ವಿಜಾಪೂರದ ‘ವಿಜಾಪೂರ ಕೆನೆಲ್ ಕ್ಲಬ್’ ಹಾಗೂ ರಾಷ್ಟ್ರೀಯ ಸಂಸ್ಥೆಯಾದ ‘ಕೆನೆಲ್ ಕ್ಲಬ್ ಆಫ್ ಇಂಡಿಯಾ’ದವರ ಸತತ ಪ್ರಯತ್ನದಿಂದ ಅಂತರ್ ರಾಷ್ತ್ರೀಯ ಮಾನ್ಯತೆಯನ್ನು ಪಡೆದಿದೆ.

ವಿಜಯಪುರ ಜಿಲ್ಲಾ ಪಂಚಾಯತ್, ಬಾಗಲಕೋಟೆ ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ಸರಕಾರದ ಪಶು ಸಂಗೋಪನೆ ಇಲಾಖೆಯ ನಿರಂತರ ಪ್ರೋತ್ಸಾಹದಿಂದ ಮತ್ತು ಜನಪ್ರತಿನಿಧಿಗಳ ಆಸಕ್ತಿಯಿಂದ ಇವತ್ತು ರಾಜ್ಯದ ಹೆಮ್ಮೆಯ ತಳಿಯಾಗಿದೆ. ಸದ್ಯ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರದಲ್ಲಿ ಈ ಮುಧೋಳ ನಾಯಿಗಳ ಸಂತಾನಭಿವೃದ್ಧಿಗಾಗಿಯೇ ಮುಧೋಳ ಬೇಟೆನಾಯಿ ತಳಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ShareSendShareTweetShare
ಭವ್ಯ ಶ್ರೀವತ್ಸ

ಭವ್ಯ ಶ್ರೀವತ್ಸ

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕರೆಂಟ್ ಅಫೇರ್ಸ್ ವಿಭಾಗದಲ್ಲಿ ಸೀನಿಯರ್ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಸುದ್ದಿ ವಾಹಿನಿಗಳಲ್ಲಿ ಹಲವು ಹುದ್ದೆಗಳಲ್ಲಿ 12 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ಆಧ್ಯಾತ್ಮ, ರಾಜಕೀಯ, ಸಾಹಿತ್ಯ ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಆಧ್ಯಾತ್ಮ, ಜ್ಯೋತಿಷ್ಯ, ಹಸ್ತ ಸಾಮುದ್ರಿಕೆ ಬರಹ, ಸ್ತ್ರೀ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು ಸುತ್ತಾಟ, ಪ್ರವಾಸ, ಕತೆ - ಕಾದಂಬರಿ ಓದುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

0 (34)

ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ಪ್ರಕರಣ: ಮೂವರು ಆರೋಪಿಗಳ ಬಂಧನ!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 12:32 pm
0

0 (33)

ಕನ್ವರ್ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ ಅಪಘಾತ: 18 ಮಂದಿ ಭಕ್ತರು ಸ್ಥಳದಲ್ಲೇ ಸಾ*ವು, 23 ಮಂದಿ ಗಂಭೀರ

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 12:11 pm
0

0 (32)

ಕೇವಲ 14,999 ರೂ.ಗೆ ಬಿಡುಗಡೆಯಾಯ್ತು ರೆಡ್ಮಿ ನೋಟ್ 14 SE 5G ಫೋನ್: ಫೀಚರ್ಸ್ ಇಲ್ಲಿವೆ!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 11:31 am
0

0 (31)

ರಿಷಭ್ ಪಂತ್ ಭಾವುಕ ಸಂದೇಶ: ಗಾಯದ ಬೆನ್ನಲ್ಲೇ ಟೀಮ್ ಇಂಡಿಯಾಗೆ ದಿಟ್ಟ ಸಂದೇಶ!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 9:48 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (52)
    ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ದಾಳಿ!
    July 29, 2025 | 0
  • Untitled design 2025 07 28t233914.721
    ಭೀಕರ ರಸ್ತೆ ಅಪಘಾತ: ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೆ ಸಾವು
    July 28, 2025 | 0
  • Untitled design 2025 07 28t215959.109
    RCB ಕಾಲ್ತುಳಿತ ಕೇಸ್: 4 ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ
    July 28, 2025 | 0
  • Untitled design 2025 07 28t211736.735
    ಬೆಂಗಳೂರಿನಲ್ಲಿ ಜುಲೈ 30ರಂದು ಈ ಪ್ರದೇಶಗಳಲ್ಲಿ ಪವರ್ ಕಟ್
    July 28, 2025 | 0
  • Untitled design 2025 07 28t203434.715
    90,000 ಸಾವಿರಕ್ಕೆ ಖರೀದಿ, 35 ಲಕ್ಷಕ್ಕೆ ಮಗು ಮಾರಾಟ: ವೈದ್ಯರು ಸೇರಿ 10 ಮಂದಿ ಅರೆಸ್ಟ್
    July 28, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version