ಬೆಂಗಳೂರು: ಇಷ್ಟು ದಿನ ಡಿಜಿಟಲ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಗ್ಯಾರಂಟಿ ನ್ಯೂಸ್ ಈಗ ಮತ್ತೊಂದು ಹೊಸ ಗ್ಯಾರಂಟಿ ನೀಡಲು ನಿಮ್ಮ ಮುಂದೆ ಬರ್ತಿದೆ.. ಸುದ್ದಿ ಖಚಿತ ನ್ಯಾಯ ನಿಶ್ಚಿತ ಧ್ಯೇಯ ವಾಕ್ಯದಡಿ ರಾಜ್ಯದ ಇಂದಿನಿಂದ ರಾಜ್ಯದ ಮನೆ ಮನೆಗೆ ಸ್ಯಾಟಲೈಟ್ ಮೂಲಕ ಎಂಟ್ರಿ ಕೊಡ್ತಿದೆ. ರಾಜ್ಯದ ಪ್ರತಿಷ್ಠಿತ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಸ್ಥ ಹಿರಿಯ ಪತ್ರಕರ್ತರೇ ಕಟ್ಟಿರೋ ಗ್ಯಾರಂಟಿ ನ್ಯೂಸ್ ಚಾನಲ್ ಇಂದಿನಿಂದ ನಿಮ್ಮ ಮುಂದೆ ಬರುತ್ತಿದೆ..
ಕನ್ನಡಿಗರ ಮನೆ ಮನೆಯಲ್ಲೂ ಮನೆಮಾತಾಗಲು ನಿಮ್ಮ ಮುಂದೆ ಈಗ ಗ್ಯಾರಂಟಿ ನ್ಯೂಸ್ ಚಾನೆಲ್ ಬರ್ತಿದ್ದು, ಇದರ ನೂತನ ಕಟ್ಟಡದ ಉದ್ಘಾಟನೆ ಸಮಾರಂಭಕ್ಕೆ ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಡೈಲಾಗ್ ರೈಟರ್ ಕ್ರಾಂತಿ ಕುಮಾರ್ ಆಗಮಿಸಿ ಶುಭ ಹಾರೈಸಿದರು.
ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ ಸೇರಿದಂತೆ ಹಲವು ಪ್ಲಾಟ್ಫಾರ್ಮ್ಗಳ ಮೂಲಕ ರಾಜ್ಯ, ದೇಶ, ವಿದೇಶ, ಅಂತರರಾಷ್ಟೀಯ ಮಟ್ಟದ ಸಂಕ್ಷಿಪ್ತ ಸುದ್ದಿಗಳನ್ನು ಮುಟ್ಟಿಸುವ ಕೆಲಸವನ್ನ ನಿಮ್ಮ ಗ್ಯಾರಂಟಿ ನ್ಯೂಸ್ ಮಾಡುತ್ತಾ ಬಂದಿದೆ.. ಈಗ ಮತ್ತಷ್ಟು ಹೊಸ ವಿನ್ಯಾಸ ಹಾಗೂ ಹೊಸ ಹೊಸ ಟೆಕ್ನಾಲಜಿಗಳ ಮೂಲಕ ಮತ್ತಷ್ಟು ಜನರ ಹತ್ತಿರಕ್ಕೆ ಬರುತ್ತಿದೆ.. ಯಾವುದೇ ಸುದ್ದಿಯಾಗ್ಲಿ, ಯಾರದ್ದೇ ಸುದ್ದಿಯಾಗ್ಲಿ ಕೇರ್ ಮಾಡದೇ ನಾವು ಬಿತ್ತರಿಸುತ್ತೇವೆ., ಸುದ್ದಿಗಳಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ.. ನೈಜ ಸುದ್ದಿಗಳ ತಾಣ ನಿಮ್ಮ ಗ್ಯಾರಂಟಿ ನ್ಯೂಸ್ ಆಗಿರುತ್ತೆ.. ಸ್ಪಷ್ಟ, ನಿಖರ ಸುದ್ದಿಗಳೊಂದಿಗೆ ನಿಮ್ಮ ಮುಂದೆ ಬರ್ತಿರೋ ಗ್ಯಾರಂಟಿ ನ್ಯೂಸ್ ಎಲ್ಲರ ಮನ ಗೆಲ್ಲಲು ಇಂದಿನಿಂದ ಗ್ರಾಂಡ್ ಎಂಟ್ರಿ ಕೊಡ್ತಿದೆ.. ನಿಮ್ಮದೇ ಗ್ಯಾರಂಟಿ ನ್ಯೂಸ್ ಚಾನೆಲ್ಗೆ ಹರಸಿ ಹಾರೈಸಿ..