• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಕೆಮಿಕಲ್‌ ಉತ್ಪನ್ನಗಳು ಬ್ಯಾನ್‌..ಬ್ಯಾನ್‌..! : ಜನರ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆ ಸಮರ..!

ಕೆಮಿಕಲ್‌ ಉತ್ಪನ್ನಗಳಿಗೆ ಉಳಿಗಾಲವಿಲ್ಲ!

ಭವ್ಯ ಶ್ರೀವತ್ಸ by ಭವ್ಯ ಶ್ರೀವತ್ಸ
March 1, 2025 - 5:20 pm
in ಕರ್ನಾಟಕ
0 0
0
ದದ (3)

ರಾಜ್ಯದ ಜನರ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆ ಸಮರ ಶುರು ಮಾಡಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರೋ ಕೆಮಿಕಲ್‌ ಉತ್ಪನ್ನಗಳನ್ನು ಒಂದಾದ ಮೇಲೊಂದರಂತೆ ಬ್ಯಾನ್‌ ಮಾಡ್ತಿದೆ ರಾಜ್ಯ ಆರೋಗ್ಯ ಇಲಾಖೆ. ಫುಡ್‌ ಪ್ರಾಡಕ್ಟ್‌ಗಳಿಂದ..ತಂಬಾಕು ಉತ್ಪನ್ನಗಳಿಂದ ಶುರುವಾದ ಈ ಹೆಲ್ತ್‌ ಸರ್ಜಿಕಲ್‌ ಸ್ಟೈಕ್‌ ಈಗ ಟ್ಯಾಟು..ಲಿಪ್‌ಸ್ಟಿಕ್‌..ಮೆಹಂದಿಗಳವರೆಗೂ ಬಂದು ನಿಂತಿದೆ. ಇಷ್ಟು ದಿನ ರಾಜಾರೋಷವಾಗಿ ಜನರಿಗೆ ಕೆಮಿಕಲ್‌ಯುಕ್ತ ಉತ್ಪನ್ನಗಳನ್ನು ತಿನ್ನಿಸುತ್ತಿದ್ದ ಕಂಪನಿಗಳಿಗೆ ಆರೋಗ್ಯ ಇಲಾಖೆ ಸೈಲೆಂಟಾಗೇ ಬಿಸಿ ಮುಟ್ಟಿಸಿದೆ.

ಆಹಾರಗಳಲ್ಲಿ ಹಾನಿಕಾರಕ ರಾಸಾಯನಿಕ ಬಣ್ಣ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ತಕ್ಷಣವಲ್ಲದಿದ್ದರೂ ನಿಧಾನಗತಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪುಟ್ಟ ಮಕ್ಕಳು ಅತೀ ಹೆಚ್ಚು ಕೃತಕ ಬಣ್ಣ ಬಳಸಿದ ಆಹಾರವನ್ನು ಸೇವಿಸುವುದರಿಂದ ಅತಿ ತೂಕ, ಬೊಜ್ಜು ಬರುವ ಸಾಧ್ಯತೆಗಳು ಇವೆ. ಯೌವನಾವಸ್ಥೆಯಲ್ಲಿ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ನರ ದೌರ್ಬಲ್ಯ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಹೆಲ್ತ್‌ ಸರ್ಜಿಕಲ್‌ ಸ್ಟ್ರೈಕ್‌ ನಡೆಸುತ್ತಿದ್ದು, ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಉಂಟು ಮಾಡೋ ಆಹಾರ ಪದಾರ್ಥಗಳು, ಉತ್ಪನ್ನಗಳ ವಿರುದ್ಧ ಸಮರ ಸಾರಿದೆ.

RelatedPosts

ಆಗಸ್ಟ್‌ನಲ್ಲಿ ಸಾಲು ಸಾಲು ರಜೆ: 15 ದಿನ ಬ್ಯಾಂಕ್, ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಸಂಪೂರ್ಣ ರಜೆ!

ರಾಜ್ಯದಲ್ಲಿ ತಗ್ಗಿದ ಮುಂಗಾರು: ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್!

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ದಾಳಿ!

ಭೀಕರ ರಸ್ತೆ ಅಪಘಾತ: ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೆ ಸಾವು

ADVERTISEMENT
ADVERTISEMENT

360 F 258274824 Kopplyrbzefoejie3wamq8xhvaxeciyd

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (COTPA) 2003 ರ ಸೆಕ್ಷನ್ 6 ರ ಅಡಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲು ಒಂದು ನಿಬಂಧನೆಯನ್ನು ಮಾಡಲಾಗಿದೆ. ಈ ಕಾಯಿದೆಯ ಅಡಿಯಲ್ಲಿ, ಯಾವುದೇ ಶಿಕ್ಷಣ ಸಂಸ್ಥೆಯ 100 ಗಜಗಳ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

Hookah Parlour Updraft Pre Smush Original 1024x538

ಬಳಿಕ ರಾಜ್ಯದಲ್ಲಿ ಹುಕ್ಕಾದಿಂದ ಆಗುತ್ತಿರುವ ಆರೋಗ್ಯ ಪರಿಣಾಮಗಳನ್ನು ಮನಗಂಡು ಹುಕ್ಕಾ ಬಾರ್‌ಗಳನ್ನೂ ಬ್ಯಾನ್‌ ಮಾಡಲಾಗಿದೆ. ಘಟಾನುಘಟಿ ವ್ಯಾಪಾರಸ್ಥರ ಪ್ರಭಾವಕ್ಕೆ ಮಣಿಯದೇ ಜನರ ಆರೋಗ್ಯವೇ ನಮ್ಮ ಮೊದಲ ಆದ್ಯತೆ ಅನ್ನೋ ಗುರಿಯೊಂದಿಗೆ ರಾಜ್ಯ ಆರೋಗ್ಯ ಇಲಾಖೆ ದೊಡ್ಡ ಹೆಜ್ಜೆ ಇಟ್ಟಿದೆ.

Images (4)

ಚಾಟ್ಸ್‌ ಐಟಂಗಳಲ್ಲಿ ಅತಿಹೆಚ್ಚು ಮಾರಾಟವಾಗೋ ಗೋಬಿ ಮಂಚೂರಿ..ಕಬಾಬ್‌..ಪಾನಿಪುರಿಗಳಲ್ಲಿ ಅತಿ ಹೆಚ್ಚು ಕ್ಯಾನ್ಸರ್‌ ಕಾರಕ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ಮನಗಂಡ ಆರೋಗ್ಯ ಇಲಾಖೆ ಕೆಮಿಕಲ್‌ಯುಕ್ತ ಗೋಬಿ..ಕಬಾಬ್‌.. ಪಾನಿಪುರಿಗಳನ್ನು ಬ್ಯಾನ್‌ ಮಾಡಿದೆ.

Hq720 (5)

ಕ್ಯಾನ್ಸರ್‌ಕಾರಕವಿರುವ ಸಾಸ್, ಮೀಟಾ, ಖಾರದ ಪುಡಿ, ಫುಡ್‌ ಕಲರ್‌ಗಳನ್ನು ಬಳಸುತ್ತಿರೋ ಬಗ್ಗೆ ವರದಿ ಪಡೆದು ಇದನ್ನೆಲ್ಲ ನಿಷೇಧ ಮಾಡಿದೆ. ಆಹಾರ ಪದಾರ್ಥಗಳಲ್ಲಿ ಕೆಮಿಕಲ್‌ ಕಲರ್‌ ಬಳಸಿದ್ರೆ ದಂಡದ ಜೊತೆಗೆ ಜೈಲು ಶಿಕ್ಷೆ ಖಾತರಿ ಎಂದು ಹೇಳಿದೆ. ಬರೀ ನಿಷೇಧ ಹೇರಿ ಸುಮ್ಮನೆ ಕೂರದ ಆರೋಗ್ಯ ಇಲಾಖೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಎಲ್ಲಾ ಗೋಬಿ ಸೆಂಟರ್‌, ಪಾನಿಪುರಿ ಅಂಗಡಿಗಳಲ್ಲಿ ತಪಾಸಣೆಯನ್ನೂ ಮಾಡಿಸುತ್ತಿದೆ.

Cotton Candy Makes Uttar Pradesh’s Suraj Gupta’s Life Sweeter

ಇನ್ನು ಪುಟ್ಟ ಪುಟ್ಟ ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನೋ ಕಾಟನ್‌ ಕ್ಯಾಂಡಿಗಳಲ್ಲೂ ದೇಹಕ್ಕೆ ಹಾನಿ ಉಂಟು ಮಾಡುವ ಕೆಮಿಕಲ್‌ ಬಳಸೋದನ್ನು ಮನಗಂಡು ರಾಜ್ಯದಲ್ಲಿ ಕಾಟನ್‌ ಕ್ಯಾಂಡಿಯನ್ನು ಸರ್ಕಾರ ನಿಷೇಧಿಸಿದೆ. ಬೀದಿ ಬೀದಿಗಳಲ್ಲಿ ಬಣ್ಣ ಬಣ್ಣದ ಕಾಟನ್‌ ಕ್ಯಾಂಡಿ ಮಾರುತ್ತಿದ್ದ ಮಾರಾಟಗಾರರು ಈಗ ಬರಿ ಬಿಳಿಯ ಬಣ್ಣದ ಕಾಟನ್‌ ಕ್ಯಾಂಡಿಗಳನ್ನು ಮಾಡುತ್ತಿರೋದನ್ನು ನಾವೆಲ್ಲಾ ನೋಡಿದ್ದೇವೆ.

ದದ (4)

ಹಸಿರು ಬಟಾಣಿ ಹಾಗೂ ಎಣ್ಣೆಯಲ್ಲಿ ಕರಿದ ಹಸಿರು ಬಟಾಣಿಯಲ್ಲಿ ಕಲರಿಂಗ್ ಏಜೆಂಟ್ ಬಳಸಿರುವುದು ಪತ್ತೆಯಾಗಿತ್ತು. 106 ಮಾದರಿಗಳನ್ನು ಸಂಗ್ರಹಿಸಿ 31 ಸ್ಯಾಂಪಲ್ಸ್ ವಿಶ್ಲೇಷಣೆಗೆ ಒಳಪಡಿಸಿದಾಗ 31 ಮಾದರಿಗಳಲ್ಲಿ 26 ಮಾದರಿಗಳು ಅಸುರಕ್ಷಿತ ಎಂಬುದು ಪತ್ತೆಯಾಗಿತ್ತು. ಹೀಗಾಗಿ ಹಸಿ ಬಟಾಣಿಯಲ್ಲಿ ಕೆಮಿಕಲ್‌ ಕಲರ್‌ ಬಳಸಿ ಮಾರಾಟ ಮಾಡೋದನ್ನು ಬ್ಯಾನ್‌ ಮಾಡಿ, ಜನರ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆ ಕಾಳಜಿ ವಹಿಸಿದೆ.

Plastic Bag 759 630 630

ರಾಜ್ಯದ ಜನರ ಆರೋಗ್ಯ ವಿಷಯದಲ್ಲಿ ಯಾವುದೇ ರಾಜೀ ಇಲ್ಲ ಅನ್ನೋ ಧ್ಯೇಯದೊಂದಿಗೆ, ಮೊನ್ನೆ ಮೊನ್ನೆಯಷ್ಟೇ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಬ್ಯಾನ್‌ ಮಾಡಿದೆ. ಹೋಟೆಗಳಲ್ಲಿ ಇಡ್ಲಿ ಮಾಡಲು ಪ್ಲಾಸ್ಟಿಕ್‌ ಶೀಟ್‌ಗಳನ್ನು ಬಳಸುತ್ತಿದ್ದವರಿಗೆ ಶಾಕ್‌ ನೀಡಲಾಗಿದೆ. ಮೊದಲಿನಂತೆ ಇಡ್ಲಿ ಮಾಡಲು ಕಾಟನ್‌ ಬಟ್ಟೆಗಳನ್ನಷ್ಟೇ ಉಪಯೋಗಿಸಿ ಜನರ ಆರೋಗ್ಯ ಕಾಪಾಡುವಂತೆ ಮಾಡಿದೆ ನಮ್ಮ ಆರೋಗ್ಯ ಇಲಾಖೆ.

Simply Recipes Strawberry Cake Lead 9 02d65bfdfd564146804192f8f6ceebb8

ಇನ್ನು ಕೇಕ್‌-ಐಸ್‌ ಕ್ರೀಂಗಳಲ್ಲೂ ಕೆಮಿಕಲ್‌ ಬಳಸದಂತೆ ನಿಷೇಧಿಸಲಾಗಿದೆ. ಕೇಕ್‌ಗೆ ಬಳಸುವ ಮೈದಾಹಿಟ್ಟು, ಕೋಕೋ ಪೌಡರ್, ಕ್ರೀಮ್‌ಗಳಿಗೆ ಬಳಸುವ ಪದಾರ್ಥಗಳು, ಫ್ಲೇವರ್‌ಗಳು ಹಾಗೂ ಕಲರ್‌ಗಳು ಹಾನಿಕಾರಕ ಎನ್ನಲಾಗಿದೆ.

Ice Cream Sundaes With Two Ingredient Hard Shell

ಕೇಕ್‌ಗಳು ಆಕರ್ಷಕವಾಗಿ ಕಾಣಲು ಮತ್ತು ತುಂಬಾ ಸಮಯ ಹಾಳಾಗದಂತೆ ಕಾಪಾಡಲು ಹೆಚ್ಚು ಕಲರ್‌ಗಳನ್ನು, ಟೇಸ್ಟಿಂಗ್ ಪೌಡರ್ ಗಳನ್ನು ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅದೇ ಕಾರಣಕ್ಕಾಗಿ ಆ ಬಣ್ಣಗಳನ್ನು ಬಳಸದಂತೆ ಆಹಾರ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

7 Tattoo Designs For Girls To Feel Like A Queen 1727186223100

ಬಹಳಷ್ಟು ಜನ ಇಷ್ಟ ಪಟ್ಟು ಟ್ಯಾಟೂ ಹಾಕಿಸಿಕೊಳ್ತಾರೆ ಆದರೆ ಈ ಟ್ಯಾಟೂ ಹಾಕಲು ಬಳಸುವ ಬಣ್ಣ ಅಪಾಯಕಾರಿಯಾಗಿದೆ ಅಂತ ವರದಿಯಲ್ಲಿ ಬಹಿರಂಗಗೊಂಡಿದೆ. ಟ್ಯಾಟೂ ಬಣ್ಣದಲ್ಲಿ 22 ಹೆವಿ ಮೆಟಲ್ ಇದ್ದು, ಇದು ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಟ್ಯಾಟೂ ಬ್ಯಾನ್‌ಗೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

9e59c86d2eaa0685084f911d76e1ea3f

ಇದರ ಜೊತೆಗೆ ಹೆಣ್ಮಕ್ಕಳ ಮೋಸ್ಟ್‌ ಫೇವರೆಟ್‌ ಆಗಿರೋ ಮೆಹಂದಿಯಲ್ಲೂ ಚರ್ಮದ ಕಾನ್ಸರ್‌ ಉಂಟು ಮಾಡೋ ಅಂಶಗಳು ಪತ್ತೆಯಾಗಿವೆ. ಈ ಹಿನ್ನೆಲೆ ಮೆಹಂದಿಯೂ ನಿಷೇಧವಾಗಬಹುದು ಎನ್ನಲಾಗಿದೆ. ಇನ್ನು ಹೆಣ್ಮಕ್ಕಳು ಹಚ್ಚಿಕೊಳ್ಳುವ ಲಿಪ್​​ಸ್ಟಿಕ್​ನಲ್ಲಿ ಕಳಪೆ ಗುಣಮಟ್ಟದ ಬಣ್ಣ, ವ್ಯಾಕ್ಸ್ ಬಳಕೆ ಮಾಡಿರೋದು ಆತಂಕಕಾರಿಯಾಗಿದೆ. ಇದು ಕ್ಯಾನ್ಸರ್‌ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.

Powerkiss Matte Lipstick

ಕಳಪೆ ಲಿಪ್​ಸ್ಟಿಕ್​ನಿಂದ ಅಲರ್ಜಿಕ್ ರಿಯಾಕ್ಷನ್ ಜೊತೆಗೆ ತುಟಿಗಳ ನ್ಯಾಚುರಲ್ ಪಿಂಗ್ಮೆಂಟೇಷನ್ ಹಾಳಾಗುತ್ತದೆ ಅನ್ನೋ ಕಾರಣದಿಂದ ಕೆಮಿಕಲ್‌ ಹೆಚ್ಚಾಗಿರೋ ಲಿಪ್‌ಸ್ಟಿಕ್‌ಗಳನ್ನು ಬ್ಯಾನ್‌ ಮಾಡೋ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಆಹಾರ ಮತ್ತು ಆರೋಗ್ಯ ಇಲಾಖೆ 5 ಸಾವಿರ ಅಧಿಕ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿರುವುದು ತಿಳಿದಿದೆ. ಜನವರಿ ತಿಂಗಳಲ್ಲಿ 3608 ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಇವುಗಳಲ್ಲಿ 28 ಆಹಾರ ಪದಾರ್ಥಗಳು ಆರೋಗ್ಯ ಮಾರಕವಾಗಿದೆ ಎಂಬುದು ಗೊತ್ತಾಗಿದೆ. ಫೆಬ್ರವರಿ ತಿಂಗಳಲ್ಲಿ 2543 ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಇವುಗಳಲ್ಲಿ 8 ಮಾದರಿಗಳು ಅಸುರಕ್ಷಿತ ಎಂಬುದು ತಿಳಿದಿದೆ. ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಮೆಹಂದಿ ಪೌಡರ್, ಐ ಲೈನರ್, ಕಾಜಲ್ ಮಾರಾಟ ಮಾಡಲಾಗುತ್ತಿದ್ದು ಇವೆಲ್ಲವನ್ನೂ ಕೇಂದ್ರ ಸರ್ಕಾರದ ಅಧಿನಿಯಮಕ್ಕೆ ಒಳಪಡಿಸುವಂತೆ ಆರೋಗ್ಯ ಇಲಾಖೆ ಪತ್ರ ಬರೆದಿದೆ.

ShareSendShareTweetShare
ಭವ್ಯ ಶ್ರೀವತ್ಸ

ಭವ್ಯ ಶ್ರೀವತ್ಸ

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕರೆಂಟ್ ಅಫೇರ್ಸ್ ವಿಭಾಗದಲ್ಲಿ ಸೀನಿಯರ್ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಸುದ್ದಿ ವಾಹಿನಿಗಳಲ್ಲಿ ಹಲವು ಹುದ್ದೆಗಳಲ್ಲಿ 12 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ಆಧ್ಯಾತ್ಮ, ರಾಜಕೀಯ, ಸಾಹಿತ್ಯ ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಆಧ್ಯಾತ್ಮ, ಜ್ಯೋತಿಷ್ಯ, ಹಸ್ತ ಸಾಮುದ್ರಿಕೆ ಬರಹ, ಸ್ತ್ರೀ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು ಸುತ್ತಾಟ, ಪ್ರವಾಸ, ಕತೆ - ಕಾದಂಬರಿ ಓದುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

0 (34)

ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ಪ್ರಕರಣ: ಮೂವರು ಆರೋಪಿಗಳ ಬಂಧನ!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 12:32 pm
0

0 (33)

ಕನ್ವರ್ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ ಅಪಘಾತ: 18 ಮಂದಿ ಭಕ್ತರು ಸ್ಥಳದಲ್ಲೇ ಸಾ*ವು, 23 ಮಂದಿ ಗಂಭೀರ

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 12:11 pm
0

0 (32)

ಕೇವಲ 14,999 ರೂ.ಗೆ ಬಿಡುಗಡೆಯಾಯ್ತು ರೆಡ್ಮಿ ನೋಟ್ 14 SE 5G ಫೋನ್: ಫೀಚರ್ಸ್ ಇಲ್ಲಿವೆ!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 11:31 am
0

0 (31)

ರಿಷಭ್ ಪಂತ್ ಭಾವುಕ ಸಂದೇಶ: ಗಾಯದ ಬೆನ್ನಲ್ಲೇ ಟೀಮ್ ಇಂಡಿಯಾಗೆ ದಿಟ್ಟ ಸಂದೇಶ!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 9:48 am
0

ಸಂಬಂಧಿಸಿದ ಪೋಸ್ಟ್‌ಗಳು

  • 0 (30)
    ಆಗಸ್ಟ್‌ನಲ್ಲಿ ಸಾಲು ಸಾಲು ರಜೆ: 15 ದಿನ ಬ್ಯಾಂಕ್, ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಸಂಪೂರ್ಣ ರಜೆ!
    July 29, 2025 | 0
  • Untitled design (7)
    ರಾಜ್ಯದಲ್ಲಿ ತಗ್ಗಿದ ಮುಂಗಾರು: ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್!
    July 29, 2025 | 0
  • Untitled design (52)
    ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ದಾಳಿ!
    July 29, 2025 | 0
  • Untitled design 2025 07 28t233914.721
    ಭೀಕರ ರಸ್ತೆ ಅಪಘಾತ: ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೆ ಸಾವು
    July 28, 2025 | 0
  • Untitled design 2025 07 28t215959.109
    RCB ಕಾಲ್ತುಳಿತ ಕೇಸ್: 4 ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ
    July 28, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version