ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿಯ ಸಮರ ಇದೀಗ ತಾರಕಕ್ಕೇರಿದೆ. ಕರ್ನಾಟಕದ ಕಾಂಗ್ರೆಸ್ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಕಾಂಗ್ರೆಸ್ ಹೈಕಮಾಂಡ್ ಕೈಗೊಂಡ ಕ್ರಮಗಳ ಹಿನ್ನೆಲೆ ಇಂದು ಮತ್ತೊಂದು ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿದರು. ಕಳೆದ ಶನಿವಾರ ಸಿಎಂ ನಿವಾಸದಲ್ಲಿ ನಡೆದ ಸಭೆಯ ನಂತರ, ಈ ಬಾರಿ ಸಿದ್ದರಾಮಯ್ಯ ಅವರನ್ನು ಡಿಕೆಶಿ ಅವರ ಸದಾಶಿವನಗರದ ನಿವಾಸಕ್ಕೆ ಆಹ್ವಾನಿಸಲಾಗಿತ್ತು.
ಸಿಎಂ ಅವರಿಗೆ ಇಷ್ಟವಾದ ನಾಟಿಕೋಳಿ ಸಾರು ವಿಶೇಷವಾಗಿ ತಯಾರಿಸಲಾಗಿತ್ತು. ಜೊತೆಗೆ ಇಡ್ಲಿ, ವಡೆ, ದೋಸೆ ಮತ್ತು ಉಪ್ಪಿಟ್ಟು ಸೇರಿದಂತೆ ಸಾಂಪ್ರದಾಯಿಕ ಖಾದ್ಯ ಮಾಡಲಾಗಿತ್ತು. ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಉಪಹಾರ ಕೂಟಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಡಿಕೆಶಿಯ ಸಹೋದರ ಮತ್ತು ಸಂಸದೆ ಡಿ.ಕೆ. ಸುರೇಶ್ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ಭಾಗವಹಿಸಿದ್ದರು.
ಬೆಳಗ್ಗೆ 8 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಅವರು ಡಿಕೆಶಿ ಮನೆ ತಲುಪಿದರು. ಸಿಎಂ ಸಿದ್ದರಾಮಯ್ಯ ಅವರನ್ನು ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಸ್ವಾಗತ ಕೋರಿದರು.
ಸಿಎಂ ಸಿದ್ದರಾಮಯ್ಯ ನಾನು ಬ್ರದರ್ಸ್ ರೀತಿ ಇದ್ದೀವಿ: ಡಿ.ಕೆ ಶಿವಕುಮಾರ್
ಬೆಂಗಳೂರು: “ನಾನು ಮತ್ತು ಸಿಎಂ ಬ್ರದರ್ಸ್ ತರಹ ಕೆಲಸ ಮಾಡ್ತಿದ್ದೇವೆ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ, ಗುಂಪು ಇರೋದೇ ಇಲ್ಲ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ.
ವಿಧಾನಸೌಧದ ನಿರ್ಮಾತೃ ಮಹಾನ್ ನಾಯಕ ಕೆಂಗಲ್ ಹನುಮಂತಯ್ಯನವರ 54ನೇ ಪುಣ್ಯತಿಥಿಯ ಅಂಗವಾಗಿ ಇಂದು ಡಿಕೆಶಿ ಅವರು ವಿಧಾನಸೌಧದಲ್ಲಿ ಹನುಮಂತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ನಮನ ಸಮರ್ಪಿಸಿದರು.
ನಂತರ ಮಾತನಾಡಿದ ಅವರು, “ಅದು ನನ್ನ ಮತ್ತು ಸಿಎಂ ಅವರ ನಡುವಿನ ವೈಯಕ್ತಿಕ ವಿಷಯ. ನಾವಿಬ್ಬರೂ ಸಹೋದರರಂತೆ ಇದ್ದೇವೆ. ಬ್ರದರ್ಸ್ ತರ ಕೆಲಸ ಮಾಡ್ತಿದ್ದೀವಿ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ನೀವು ಮಾಧ್ಯಮದವರೇ ಏನೇನೋ ಬಿತ್ತಿ ತೋರಿಸುತ್ತಿದ್ದೀರಿ, ಸಿದ್ದರಾಮಯ್ಯ ಗುಂಪು, ಡಿಕೆಶಿ ಗುಂಪು ಅಂತ. ನಮ್ಮಲ್ಲಿ ಅಂಥ ಯಾವುದೇ ಗುಂಪು ಇಲ್ಲ. ನಾವು ಹುಟ್ಟಿದ್ದು ಒಬ್ಬರೇ, ಸಾಯುವಾಗಲೂ ಒಬ್ಬರೇ. ಹಾಗಿದ್ದಾಗ ಗುಂಪು ಯಾಕೆ ಬೇಕು?” ಎಂದು ಡಿಕೆಶಿ ಪ್ರಶ್ನಿಸಿದರು.
ಅವರು, “ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದರು, ಎಸ್.ಎಂ. ಕೃಷ್ಣ ವಿಕಾಸಸೌಧ ಕಟ್ಟಿದರು, ಬೆಂಗಳೂರನ್ನು ಕೆಂಪೇಗೌಡ ಕಟ್ಟಿದ್ದಾರೆ.. ಯಾರೇ ಅಧಿಕಾರಕ್ಕೆ ಬಂದರೂ ಇಂಥ ಶಾಶ್ವತ ಕೊಡುಗೆಗಳನ್ನು ಬಿಟ್ಟು ಹೋಗಬೇಕು. ನಾವೂ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ನಾನು ಮತ್ತು ಸಿಎಂ ಒಟ್ಟಿಗೆ 140 ಶಾಸಕರನ್ನ ಒಗ್ಗೂಡಿಸಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ.” ಎಂದರು.
ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, “ನಿಮ್ಮ ಒತ್ತಡಕ್ಕೆ ಬ್ರೇಕ್ಫಾಸ್ಟ್ ಎಲ್ಲಾ? ನಮಗೆ ಅಂಥ ಯಾವುದೇ ಅಗತ್ಯ ಇಲ್ಲ. ನಾವು ಎಲ್ಲವನ್ನೂ ಒಟ್ಟಾಗೇ ಮಾಡುತ್ತಿದ್ದೇವೆ” ಎಂದು ನಗುಮೊಗದಲ್ಲಿ ಹೇಳಿದರು.
ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, “ಇನ್ನೂ ಡಿಕೆಶಿ ಬ್ರೇಕ್ಫಾಸ್ಟ್ಗೆ ಕರೆದಿಲ್ಲ. ಕರೆದರೆ ಕರೆಯುತ್ತಾರೆ, ಕರೆದ್ರೆ ನಾನು ಖಂಡಿತ ಹೋಗುತ್ತೇನೆ” ಎಂದು ಸಿದ್ದು ಸರಳವಾಗಿ ಹೇಳಿದರು.





