• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ದಾವಣಗೆರೆ, ಬಾಗಲಕೋಟೆ ಬೈ ಎಲೆಕ್ಷನ್: 2028ಕ್ಕೆ ದಿಕ್ಸೂಚಿ ಅಲ್ಲ..!

ಮಾರುತಿ ಪಾವಗಡ by ಮಾರುತಿ ಪಾವಗಡ
March 29, 2026 - 7:44 pm
in Flash News, ಎಲೆಕ್ಷನ್, ಕರ್ನಾಟಕ
0 0
0
Untitled design 2026 03 29T194238.455

ರಾಜ್ಯದಲ್ಲಿ ನಡೆಯುತ್ತಿರುವ ಎರಡು ಕ್ಷೇತ್ರಗಳ ಬೈ ಎಲೆಕ್ಷನ್ ಬಾರೀ ಸದ್ದು ಮಾಡ್ತಿದೆ. ಎರಡು ಕ್ಷೇತ್ರಗಳಲ್ಲೂ ಗೆಲುವಿನ ದಡ ಸೇರಲು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕಣದಲ್ಲಿ ಭರ್ಜರಿ ಅಸ್ತ್ರಗಳನ್ನ ಬಳಸಿ ಪ್ರಚಾರ ಶುರು ಮಾಡಿದ್ದಾರೆ. 2028ರ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗ ನಡೆಯುತ್ತಿರುವ ಚುನಾವಣೆ ಆಗಿರುವುದರಿಂದ ಈ ಫಲಿತಾಂಶ 2028ರ ಚುನಾವಣೆ ದಿಕ್ಸೂಚಿ ಆಗುತ್ತೆ ಅಂತ ಲೆಕ್ಕಚಾರ ಹಾಕಿ ಕಣದಲ್ಲಿ ಗೆಲುವಿನ ಆಟ ಶುರು ಮಾಡಿವೆ. ಆದ್ರೆ ಬೈ ಎಲೆಕ್ಷನ್ ವಾಸ್ತವೇ ಬೇರೆ ಇರುತ್ತೆ..

ಉಪ ಚುನಾವಣೆಯಿಂದ ಲಾಭವೋ ಇಲ್ಲ ನಷ್ಟವೋ ಇಲ್ಲ

RelatedPosts

ಪಾಕಿಸ್ತಾನದಲ್ಲಿ ಮತ್ತೆ ಧುರಂಧರ್ ಮಾದರಿ ಶೂಟೌಟ್..!: ಉಗ್ರ ನಾಯಕನಿಗೆ ಗುಂಡೇಟು

ಪ್ರಿಯಕರನಿಗೆ ಗಿಫ್ಟ್ ಕೊಡಲು ದುಬಾರಿ ವಾಚ್‌ ಕದ್ದ ಯುವತಿ ಅರೆಸ್ಟ್

ನಾನು IAS ಅಧಿಕಾರಿ ಎಂದು ನಂಬಿಸಿ ವಂಚನೆ: ಖತರ್ನಾಕ್ ಆರೋಪಿ ಅರೆಸ್ಟ್

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ

ADVERTISEMENT
ADVERTISEMENT

ಈಗ ನಡೆಯುತ್ತಿರುವ ದಾವಣಗೆರೆ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳ ಉಪ ಚುನಾವಣೆಯಿಂದ ಯಾವ ಪಕ್ಕಕ್ಕೂ ಲಾಭವೂ ಇಲ್ಲ-ನಷ್ಟವೂ ಆಗಲ್ಲ. ಅರ್ಥತ್ ಕಾಂಗ್ರೆಸ್ ಈ ಚುನಾವಣೆ ಗೆಲ್ಲೋದರಿಂದ ಸಂಖ್ಯೆಬಲ ಬದಲಾವಣೆ ಆಗಲಿಲ್ಲ ಅಂತ ಹೇಳಬಹುದು ಬಿಟ್ರೆ ಬೇರೇನು ಲಾಭವಿಲ್ಲ. ಸೋತ್ರೆ ಅಧಿಕಾರ ಅಂತೂ ಕಳೆದುಕೊಳ್ಳುವುದಿಲ್ಲ. ಬಿಜೆಪಿಗೆ ಇನ್ನೇರಡು ಸ್ಥಾನ ಜಾಸ್ತಿ ಆಗುತ್ತೆ ಅನ್ನೋದನ್ನ ಬಿಟ್ರೆ ಅದಕಿಂತಲೂ ಹೆಚ್ಚು ಲಾಭ ಮತ್ತು ನಷ್ಟ ತರುವ ಚುನಾವಣೆ ಇದಲ್ಲ.

ಉಪ ಚುನಾವಣೆಗಳ ಫಲಿತಾಂಶ- ಸಾರ್ವತ್ರಿಕ ಎಲೆಕ್ಷನ್‌ಗೆ ಅನ್ವಯಿಸುವುದಿಲ್ಲ

15 ಕ್ಷೆತ್ರ ಬಿದ್ದ ಬಿಎಸ್ವೈ- ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಿಜೆಪಿ

ಈ ಚುನಾವಣಾ ಫಲಿತಾಂಶ 2028ರ ಚುನಾವಣಾ ದಿಕ್ಸೂಚಿ ಆಗುತ್ತೆ ಅನ್ನೋದೇ ತಪ್ಪು. ಯಾಕಂದ್ರೆ ಈ ಹಿಂದೆ ನಡೆದ ಹಲವು ಉಪ ಚುನಾವಣೆಗಳಲ್ಲಿ ಆಡಳಿತರೂಢ ಪಕ್ಷಗಳು ಗೆದ್ರು ಮುಂದೆ ಬಂದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಗಂಟೆ ಮೂಟೆ ಕಟ್ಟಿಕೊಂಡು ಮನೆಗೆ ಹೋಗಿರುವುದನ್ನ ನೋಡಿದ್ದೇವೆ. ಅದಕ್ಕೆ ಬೆಸ್ಟ್ ಎಕ್ಸಂಪಲ್ 2019ರಲ್ಲಿ ಯಡಿಯೂರಪ್ಪ ಸರ್ಕಾರ ರಚನೆ ಮಾಡಲು ಮಾಡಿದ ಸಹಾಸ. ಬಳಿಕ ನಡೆದ 17 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹೊಸಕೋಟೆ, ಅಥಣಿ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಗೆದ್ದು ಬೀಗಿತ್ತು. ಇದನ್ನ ಆಧಾರವಾಗಿಟ್ಟುಕೊಂಡು ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು 2023ಕ್ಕೂ ನಾವೇ ಅಧಿಕಾರಕ್ಕೆ ಬರ್ತಿವಿ ನಿಮಗೆ ವಿರೋಧ ಪಕ್ಷವೇ ಗತಿ ಅಂತ ವಿಧಾನಸಭೆಯ ಒಳಗೆ ಘರ್ಜಿಸಿ ಹೇಳಿದ್ರು.

ಅಂದಿನ ಕಾನೂನು ಸಚಿವ ಮಧುಸ್ವಾಮಿ ಹಾಗೂ ಈಶ್ವರಪ್ಪ ಇದನ್ನ ಸಿದ್ದರಾಮಯ್ಯ ಅವರ ಎದುರೇ ಹೇಳಿದ್ರು. ಆದ್ರೆ 2023ಕ್ಕೆ ಈಶ್ವರಪ್ಪನಿಗೆ ಹೈಕಮಾಂಡ್ ಟಿಕೆಟ್ ಕೊಡಲಿಲ್ಲ. ಮಧುಸ್ವಾಮಿ ಬಗ್ಗೆ ಚಿಕ್ಕನಾಯಕನಹಳ್ಳಿ ಜನರೇ ಬೇಸತ್ತು ಮನೆಯಲ್ಲಿ ಕೂರುವಂತೆ ಮಾಡಿದ್ರು. 2023ರಲ್ಲಿ ಡಿಕೆಶಿ – ಸಿದ್ದರಾಮಯ್ಯ ಜೋಡಿ ಕಾಂಗ್ರೆಸ್‌‌ನ 136 ಸ್ಥಾನ ಗೆಲ್ಲಿಸಿ ವಿಧಾನ ಸೌಧದಲ್ಲಿ ಆಡಳಿತ ಪ್ರತಿಷ್ಠಾಪಿಸಲು ಕಾರಣವಾಗಿತ್ತು.

ಬೈ ಎಲಕ್ಷನ್ ಗೆದ್ದು ಸಾರ್ವತ್ರಿಕ ಚುನಾವಣೆ ಸೋತಿದ್ದ ಸಿದ್ದು ಸರ್ಕಾರ

2018ರ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಗೆ ಹೋಗುವ ಆರು ತಿಂಗಳ ಮೊದಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಗುಂಡ್ಲುಪೇಟೆ ಮತ್ತು ನಂಜನಗೂಡು ಎರಡು ಕ್ಷೇತ್ರಗಳ ಬೈ ಎಲೆಕ್ಷನ್ ಬಂದಿತ್ತು. ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸಮೀಪ ನಡೆಯುತ್ತಿರುವ ಉಪ ಚುನಾವಣೆಗಳಾಗಿರುವುದರಿಂದ ಇದು ದಿಕ್ಸೂಚಿ ಆಗುತ್ತೆ ಅಂತ ಸಿದ್ದರಾಮಯ್ಯ ಸೇರಿದಂತೆ ಇಡೀ ಕಾಂಗ್ರೆಸ್ ಟೀಮ್ ಕ್ಷೇತ್ರಗಳಲ್ಲಿ ಕೂಗಿ ಹೇಳಿದ್ದು ನಿಜ. ಉಪ ಚುನಾವಣೆಯಲ್ಲಿ ದಲಿತ ನಾಯಕ ಶ್ರೀನಿವಾಸ ಪ್ರಸಾದ್ ಅಂಥವರನ್ನ ಎದುರಾಕಿಕೊಂಡು ಎರಡು ಕಡೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿತ್ತು. ಇದನ್ನ ಆಧಾರವಾಗಿಟ್ಟುಕೊಂಡು 2018ಕ್ಕೆ ನಮ್ಮದೇ ಸರ್ಕಾರ ಅಂತ ಬೈ ಎಲೆಕ್ಷನ್ ಬಳಿಕವೂ ಹೇಳಿದ್ರು.. ಆದ್ರೆ ಮುಂದೆ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ 78ಕ್ಕೆ ಇಳಿದ್ರೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ 104 ಸ್ಥಾನ ಗೆದ್ದಿತ್ತು. 36 ಸ್ಥಾನ ಗೆದ್ದ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಸಪೋರ್ಟ್ ಇಂದ ಸಿಎಂ ಆದ್ರು. ಇದಷ್ಟೇ ಅಲ್ಲ ನಮ್ಮ ರಾಜ್ಯದ ಕಳೆದ 20 ವರ್ಷಗಳ ರಾಜಕೀಯ ಇತಿಹಾಸ ನೋಡಿದ್ರೆ ಬೈ ಎಲೆಕ್ಷನ್ ಫಲಿತಾಂಶ ಎಂದೂ ಸಹ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಿಲ್ಲ ಆಗೋದು ಇಲ್ಲ.

ಬೈ ಎಲೆಕ್ಷನ್ ಅಂದ್ರೆ ಆಡಳಿತ ಪಕ್ಷಕ್ಕೆ ಜೈ

ಕ್ಷೇತ್ರದಲ್ಲಿ ಇರೋ ಮತದಾರರಿಗೆ ಚೆನ್ನಾಗಿ ಗೊತ್ತು. ನಾವು ಈಗ ಬೈ ಎಲೆಕ್ಷನ್ ಲ್ಲಿ ಆಯ್ಕೆ ಮಾಡಿ ನಮ್ಮ ಶಾಸಕನನ್ನ ಸಿಎಂ ಮಾಡಬೇಕಿಲ್ಲ. ಕೇವಲ ಸರ್ಕಾರಕ್ಕೆ ಸಾಥ್ ಕೊಡುವ ಜನಪ್ರತಿನಿಧಿ ನೇಮಕ ಮಾಡಿದ್ರೆ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ಬರುತ್ತೆ ಅಂತ ಲೆಕ್ಕಚಾರ ಹಾಕಿ ಆಡಳಿರೂಢ ಪಕ್ಷದ ಅಭ್ಯರ್ಥಿಗೆ ಜೈ ಅನ್ನೋದು ಕಾಮನ್. ಜತೆಗೆ ಕುಟುಂಬದ ಒಬ್ಬ ಶಾಸಕನ ಸಾವಿನಿಂದ ತೆರವಾದ ಕ್ಷೇತ್ರ ಹೀಗಾಗಿ ಇದೊಂದು ಬಾರೀ ಆ ಕುಟುಂಬಕ್ಕೆ ವೋಟ್ ಕೊಟ್ಟು ಗೆಲ್ಲಿಸೋಣ ಅನ್ನೋ ಸೆಂಟಿಮೆಂಟ್ ರಾಜಕೀಯವೂ ಕಾರಣವಾಗೋದರಿಂದ ಆಡಳಿತ ಪಕ್ಷಕ್ಕೆ ಬೈ ಎಲೆಕ್ಷನ್ ಪೂರಕ ಫಲಿತಾಂಶ ಕೊಡುತ್ತೆ.

ನಾಳೆಯಿಂದ ಅಖಾಡ ಜೋರು – ಮತದಾರ ಹುಷಾರು

ಏಪ್ರಿಲ್ ಒಂಬತ್ತನೇ ತಾರೀಖು ನಡೆಯಲಿರುವ ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳ ಬೈ ಅಖಾಡ ನಾಳೆಯಿಂದ ಸಿಎಂ,ಡಿಸಿಎಂ ಹಾಗೂ ವಿಜಯೇಂದ್ರ ಆರ್ ಆಶೋಕ್ ಎಂಟ್ರಿಯಿಂದ ಇನ್ನಷ್ಟು ರಂಗೇರಲಿದೆ. ಈಗಾಗಲೇ ದಾವಣಗೆರೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಫೈಟ್ ಶುರುವಾಗಿದೆ. ಇನ್ನೂ ಸಿಎಂ ಸಿದ್ದರಾಮಯ್ಯ ಎರಡು ಕಡೆ ಅಹಿಂದ ಅಸ್ತ್ರ ಬಳಸುವುದರಲ್ಲಿ ಯಾವುದೇ ಡೌಟ್ ಇಲ್ಲ. ಸರ್ಕಾರವನ್ನ ಇನ್ನಷ್ಟು ಗಟ್ಟಿ ಮಾಡಲು ನನ್ನನ್ನ ಸುಭದ್ರ ಮಾಡಲು ಕಾಂಗ್ರೆಸ್‌ಗೆ ವೋಟ್ ಮಾಡಿ ಅಂತ ಕೇಳೋದು ಪಕ್ಕಾ. ಕೈ ಅಭ್ಯರ್ಥಿ ಗೆಲ್ಲಿಸಿದ್ರೆ ನನ್ನನ್ನ ಗೆಲ್ಲಿಸಿದಂತೆ ಅಂತ ಹೇಳಿದ್ರೂ ಅಚ್ಚರಿ ಇಲ್ಲ.

ಗ್ಯಾರಂಟಿಗಳ ಜಪ ಕಾಯಂ..ಬಿಜೆಪಿ ಟೀಕೆ ಕನ್ಫರ್ಮ್..ಕಾಂಗ್ರೆಸ್ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಸಿಎಂ ಸಿದ್ದರಾಮಯ್ಯ ಗ್ಯಾರಂಟಿಗಳನ್ನ ಅನುಷ್ಠಾನ ಮಾಡುವಲ್ಲಿ ಫೇಲ್ ಆಗಿದ್ದಾರೆ. ನಿಮ್ಮ ಮತ ಬಿಜೆಪಿ ಅಭ್ಯರ್ಥಿಗೆ ಹಾಕಿ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ,ಡಿಕೆ ಶಿವಕುಮಾರ್‌ಗೆ ಪಾಠ ಕಲಿಸಿ ಅಂತ ಹೇಳಲಿದ್ದಾರೆ. ಆದ್ರೆ ಆಡಳಿತ, ವಿಪಪಕ್ಷಗಳ ಆಸೆ, ಅಮಿಷೆ ಟೀಕೆ ಟಿಪ್ಪಣಿ ಎಲ್ಲವನ್ನೂ ತೂಕ ಮಾಡಿ..ಯಾವುದು ಸತ್ಯ..ಯಾವುದೂ ಸುಳ್ಳಅನ್ನೋದನ್ನ ಲೆಕ್ಕಚಾರ ಹಾಕಿ ಮತದಾರ ನಿರ್ಧಾರ ತೆಗೆದುಕೊಳ್ಳಲಿ.

ಲೇಖಕರು: ಮಾರುತಿ ಪಾವಗಡ, ಗ್ಯಾರಂಟಿ ನ್ಯೂಸ್ ಪೊಲಿಟಿಕಲ್ ಬ್ಯೂರೋ ಹೆಡ್

ShareSendShareTweetShare
ಮಾರುತಿ ಪಾವಗಡ

ಮಾರುತಿ ಪಾವಗಡ

ಗ್ಯಾರಂಟಿ ನ್ಯೂಸ್ ಸಂಸ್ಥೆಯ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ 2025ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 15 ವರ್ಷ ಕಾರ್ಯನಿರ್ವಹಿಸಿದ ಅನುಭವವಿದೆ. ರಾಜಕೀಯ, ಕಾನೂನು, ವಿಜ್ಞಾನ, ತಂತ್ರಜ್ಞಾನ ವಿಚಾರಗಳು ಇವರ ಆಸಕ್ತಿಯ ವಿಷಯಗಳು. ರಾಜಕೀಯ ಬೆಳವಣಿಗೆಗಳ ಬಗ್ಗೆ ಅಂಕಣಗಳನ್ನ ಬರೆಯುತ್ತಾರೆ. ಓದುವುದು ಹಾಗೂ ಪ್ರವಾಸ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 16T131616.820

ಪಾಕಿಸ್ತಾನದಲ್ಲಿ ಮತ್ತೆ ಧುರಂಧರ್ ಮಾದರಿ ಶೂಟೌಟ್..!: ಉಗ್ರ ನಾಯಕನಿಗೆ ಗುಂಡೇಟು

by ಶಾಲಿನಿ ಕೆ. ಡಿ
April 16, 2026 - 1:25 pm
0

Untitled design 2026 04 16T130356.842

ಪ್ರಿಯಕರನಿಗೆ ಗಿಫ್ಟ್ ಕೊಡಲು ದುಬಾರಿ ವಾಚ್‌ ಕದ್ದ ಯುವತಿ ಅರೆಸ್ಟ್

by ಶಾಲಿನಿ ಕೆ. ಡಿ
April 16, 2026 - 1:05 pm
0

Untitled design 2026 04 16T123200.992

ನಾನು IAS ಅಧಿಕಾರಿ ಎಂದು ನಂಬಿಸಿ ವಂಚನೆ: ಖತರ್ನಾಕ್ ಆರೋಪಿ ಅರೆಸ್ಟ್

by ಶಾಲಿನಿ ಕೆ. ಡಿ
April 16, 2026 - 12:32 pm
0

Untitled design 2026 04 16T120237.028

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ

by ಶಾಲಿನಿ ಕೆ. ಡಿ
April 16, 2026 - 12:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 16T131616.820
    ಪಾಕಿಸ್ತಾನದಲ್ಲಿ ಮತ್ತೆ ಧುರಂಧರ್ ಮಾದರಿ ಶೂಟೌಟ್..!: ಉಗ್ರ ನಾಯಕನಿಗೆ ಗುಂಡೇಟು
    April 16, 2026 | 0
  • Untitled design 2026 04 16T130356.842
    ಪ್ರಿಯಕರನಿಗೆ ಗಿಫ್ಟ್ ಕೊಡಲು ದುಬಾರಿ ವಾಚ್‌ ಕದ್ದ ಯುವತಿ ಅರೆಸ್ಟ್
    April 16, 2026 | 0
  • Untitled design 2026 04 16T123200.992
    ನಾನು IAS ಅಧಿಕಾರಿ ಎಂದು ನಂಬಿಸಿ ವಂಚನೆ: ಖತರ್ನಾಕ್ ಆರೋಪಿ ಅರೆಸ್ಟ್
    April 16, 2026 | 0
  • Untitled design 2026 04 16T120237.028
    ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ
    April 16, 2026 | 0
  • Untitled design 2026 04 16T113623.547
    ಮಗು ಬೇಕಿದ್ದರೆ ನಿನ್ನ ಪತ್ನಿಯನ್ನು ನನ್ನ ಬಳಿ ಕಳುಹಿಸು: ನಾಸಿಕ್ TCS ಉದ್ಯೋಗಿಯ ಶಾಕಿಂಗ್ ಆರೋಪ
    April 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version