ರಾಜ್ಯದಲ್ಲಿ ಹೃದಯಘಾತದಿಂದ ಸರಣಿ ಸಾವಾಗ್ತಿದ್ದು. ಈ ಹೃದಯಘಾತಕ್ಕೆ ಕೊವಿಡ್ ಲಸಿಕೆ ಕಾರಣ ಅನ್ನೋ ಅನುಮಾನ ಹೆಚ್ಚಾಗಿತ್ತು. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ಈ ವಿಚಾರವಾಗಿ ವರದಿ ಸಿದ್ದಪಡಿಸಿದ್ದು. ಆರೋಗ್ಯ ಇಲಾಖೆಗೆ ವರದಿಸಲ್ಲಿಸಿದೆ ಹಾಗಿದ್ರೆ ವರದಿಯಲ್ಲಿ ಏನಿದೆ.
ರಾಜ್ಯದಲ್ಲಿ ಕೊವಿಡ್ ನಂತರ ಜೀವನ ಶೈಲಿ ಬದಲಾಗಿದೆ. ಈ ಬದಲಾದ ಜೀವನಶೈಲಿಯಿಂದ ಹೃದಯಘಾತ ಪ್ರಮಾಣ ಹೆಚ್ಚಳವಾಗಿದೆ.ಆದ್ರೆ ಈ ಹೃದಯಘಾತಕ್ಕೆ ಕೊವಿಡ್ ಲಸಿಕೆ ಮುಖ್ಯ ಕಾರಣ ಅನ್ನೋ ಅನುಮಾನ ಹೆಚ್ಚಾಗಿತ್ತು. ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಅವರು ತಾಂತ್ರಿಕ ಸಲಹಾ ಸಮಿತಿಗೆ ಈ ಕುರಿತು ವರದಿ ಸಿದ್ದಪಡಿಸಲು ಸೂಚಿಸಿದ್ದು. ಇದೀಗಾ ವರದಿ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದ್ದು.ಫೈನಲ್ ರಿಪೋರ್ಟ್ ಸೋಮವಾರ ಸರ್ಕಾರದ ಕೈ ಸೇರಲಿದೆ.
ಜಯದೇವ ಹೃದ್ರೋಗ ಸಂಸ್ಥೆಯ ನಿರಗದೇಶಕ ಡಾ. ಕೆ.ಎಸ್. ರವೀಂದ್ರನಾಥ್ ಅವರ ನೇತೃತ್ವದ 10 ಜನರನ್ನ ಒಳಗೊಂಡ ತಾಂತ್ರಿಕ ಸಲಹಾ ಸಮಿತಿಯನ್ನ ಸರ್ಕಾರ ರಚಿಸಿತ್ತು. ಈ ತಾಂತ್ರಿಕ ಸಲಹಾ ಸಮಿತಿ ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹಲವು ವಿಚಾರಗಳ ಮೇಲೆ ಸ್ಟಡಿ ಮಾಡಿ ರಿಪೋರ್ಟ್ ಅನ್ನು ಸಿದ್ದಪಡಿಸಿದೆ. ರಾಜ್ಯದಲ್ಲಿ ಒಟ್ಟು 251ಜನರ ಸ್ಯಾಂಪಲ್ ಪಡೆದು ತನಿಖೆ ಮಾಡಲಾಗಿದೆ. ಪ್ರಮುಖವಾಗಿ ಈ 251ಜನರು 45 ವರ್ಷದೊಳಗಿನವರು. ಇವರ ಆರೋಗ್ಯದ ಕುರಿತು ವರದಿಯನ್ನ ಸಿದ್ದಪಡಿಸಲಾಗಿದೆ. ಆದ್ರೆ ಈ ವರದಿಯಲ್ಲಿ ಪ್ರಮುಖ ಅಂಶ ಏನು ಅಂದ್ರೆ ಈ ರೀತಿಯ ಸರಣಿ ಹೃದಯಘಾತಕ್ಜೆ ಯಾವುದೇ ರೀತಿ ಕೊವಿಡ್ ಲಸಿಕೆ ಕಾರಣವಲ್ಲ ಎಂಬುದು.ಬದಲಾಗಿ ಈಗಿನ ಬದಲಾದ ಜೀವನ ಶೈಲಿಯೇ ಹೃದಯಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಹೃದಯಘಾತಕ್ಕೆ ಪ್ರಮುಖವಾಗಿ ದೇಹದ ಬೊಜ್ಜು, ಡಯಾಬಿಟಿಸ್, ಫ್ಯಾಮಿಲಿ ಹಿಸ್ಟರಿ ಸೇರಿದಂತೆ ಹಲವು ವಿಚಾರಗಳು ಕಾರಣವಾಗಿದ್ದು, ಕೊವಿಡ್ ನಂತರ ಜನರಲ್ಲಿ ಹೆಚ್ಚಾಗಿ ಈ ಮೇಲಿನ ಹಲವು ವಿಚಾರಗಳು ಹೆಚ್ಚಾಗಿ ಕಾಣಿಸಿಕೊಳ್ಳುತಿದೆ.
ಹಾಗಾದ್ರೆ ಕೊವಿಡ್ಗಿಂತ ಮೊದಲು ಹಾಗೂ ಕೊವಿಡ್ ನಂತರ ಜನರ ಆರೋಗ್ಯದ ಸ್ಥಿತಿ ಹೇಗಿದೆ ಅನ್ನೋದನ್ನ ನೋಡೋದಾದ್ರೆ…!?
- ಕೊವಿಡ್ ಗಿಂತ ಮುಂಚೆ 13.9% ನಷ್ಟಿದ್ದ ಡಯಾಬಿಟಿಸ್, ಕೊವೀಡ್ ನಂತರ 20.5%ಗೆಏರಿಕೆ
- ಕೊವಿಡ್ ಗಿಂತ ಮುಂಚೆ 13.9%ನಷ್ಟಿದ್ದ ಹೈಪರ್ ಟೆನ್ಷನ್ ಕೊವಿಡ್ ನಂತರ 17.6% ಗೆ ಏರಿಕೆ
- ಕೊವಿಡ್ ಗಿಂತ ಮುಂಚೆ 34.8%ನಷ್ಟಿದ್ದ ಕೊಲೆಸ್ಟ್ರಾಲ್
ಕೊವಿಡ್ ನಂತರ 44.1%ಗೆ ಏರಿಕೆ - ಕೊವಿಡ್ ಗಿಂತ ಮುಂಚೆ 34.8%ನಷ್ಟಿದ್ದ ಕೊಲೆಸ್ಟ್ರಾಲ್
ಕೊವಿಡ್ ನಂತರ 44.1%ಗೆ ಏರಿಕೆ - ಕೊವಿಡ್ ಗಿಂತ ಮುಂಚೆ 34.8%ನಷ್ಟಿದ್ದ ಕೊಲೆಸ್ಟ್ರಾಲ್
- ಕೊವಿಡ್ ನಂತರ 44.1%ಗೆ ಏರಿಕೆ
ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ಕೆಲವೊಂದಿಷ್ಟು ಶಿಫಾರಸ್ಸನ್ನು ಕೂಡ ಸರ್ಕಾರಕ್ಕೆ ನೀಡಿದೆ. ಹಾಗಾದ್ರೆ ಸಲಹಾ ಸಮಿತಿ ನೀಡಿದ ಶಿಫಾರಸ್ಸು ಏನು ಅನ್ನೋದನ್ನ ನೋಡೋದಾದ್ರೆ.
- ಯುವ ವಯಸ್ಕರಲ್ಲಿ ಹಠಾತ್ ಹೃದಯ ಸಾವುಗಳಿಗೆ ಹೃದಯ ಕಣ್ಗಾವಲು ಕಾರ್ಯಕ್ರಮ
- ಹೃದಯಾಘಾತ ಸಂಬಂದಿಸಿದಂತೆರಾಷ್ಟ್ರೀಯ ನೋಂದಣಿಯನ್ನು ಸ್ಥಾಪಿಸುವುದು
- ಯುವ ವಯಸ್ಕರಲ್ಲಿ ವಿವರಿಸಲಾಗದ ಸಾವುಗಳಿಗೆ ಶವಪರೀಕ್ಷೆ ನೋಂದಣಿ ಮಾಡಲು ಸಲಹೆ
- ಶಾಲಾ ಮಟ್ಟದಲ್ಲಿ ಹೃದಯ ತಪಾಸಣೆ
- ಮಕ್ಕಳಿಗೆ ಜನ್ಮಜಾತ ಹೃದಯ ಕಾಯಿಲೆಗಳು, ಅನುವಂಶಿಕತೆ ಪರೀಕ್ಷೆ ಮಾಡಿಸುವುದು
- ಅಧಿಕ ತೂಕ/ಬೊಜ್ಜು, ಅಧಿಕ ರಕ್ತದೊತ್ತಡಗಳ ಪರೀಕ್ಷೆ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣ
- ಅಪಾಯಕಾರಿ ಅಂಶಗಳು, ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಆಹಾರ ಪದ್ದತಿ ಅಭಿಯಾನ
- ಜೀವನಶೈಲಿಯ ಬದಲಾವಣೆಗಳ ಕುರಿತು ಸಾರ್ವಜನಿಕ ಆರೋಗ್ಯ ಅಭಿಯಾನಗಳು
- ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವುದು
ಧೂಮಪಾನವನ್ನು ನಿಲ್ಲಿಸುವುದು - ಪರದೆಯ ಸಮಯವನ್ನು ಕಡಿಮೆ ಮಾಡುವುದು
- ಸಕ್ಕರೆ ಮತ್ತು ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು
- ಸಾಕಷ್ಟು ನಿದ್ರೆ, ಒತ್ತಡವನ್ನು ನಿಭಾಯಿಸುವುದು
ಕೊವಿಡ್ ಲಸಿಕೆಯೇ ಹೃದಯ ಬಡಿತ ನಿಲ್ಲೋಕೆ ಕಾರಣ ಅನ್ನೋ ಅನುಮಾನಕ್ಕೆ ಕೊನೆಗೂ ತೆರೆ ಬಿದ್ದಿದ್ದು.ಜನರು ಇನ್ಮುಂದೆ ಕೊವಿಡ್ ಲಸಿಕೆ ಬಗ್ಗೆ ಅನುಮಾನ ಪಡದೇ ಆರಾಮಾಗಿ ಇರಬಹುದು.