• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬುದ್ಧ ಬಸವನನ್ನು ತಿರಸ್ಕರಿಸಿದವರಿಂದಲೇ ಸಂವಿಧಾನದ ಮೇಲೆ ದಾಳಿ, ಇದು ಎಚ್ಚರಾಗಬೇಕಾದ ಕಾಲ: ಕೃಷ್ಣ ಬೈರೇಗೌಡ

admin by admin
April 12, 2025 - 3:13 pm
in Flash News, ಕರ್ನಾಟಕ
0 0
0
Film 2025 04 12t150740.666
  • ಬುದ್ಧ ಬಸವ ತತ್ವವೇ ಈ ನಾಡಿನ ಮಣ್ಣಿನ ಗುಣ
  • ಸಮಾನತೆಯೇ ಅಂಬೇಡ್ಕರ್‌ ಸಂವಿಧಾನದ ಬುನಾದಿ
  • ವಚನ ಸಾಹಿತ್ಯ-ಸಂವಿಧಾನ ವಿರೋಧಿಗಳ ಬಗ್ಗೆ ಎಚ್ಚರವಿರಲಿ

ಸಮಾನತೆಯನ್ನು ಪ್ರತಿಪಾದಿಸಿದ ಬುದ್ಧ ಬಸವಣ್ಣನವರನ್ನು ತ್ಯಜಿಸಿದವರಿಂದಲೇ ಇಂದು ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ದಾಳಿ ನಡೆಯುತ್ತಿದೆ. ಇದು ನಾವು ಎಚ್ಚರಾಗಬೇಕಾದ ಕಾಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕರೆ ನೀಡಿದರು.

ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಜಯಪುರದಲ್ಲಿ ಇಂದು ಆಯೋಜಿಸಲಾಗಿದ್ದ ಅಂಬೇಡ್ಕರ್ ಹಬ್ಬ ವಿಚಾರ ಸಂಕಿರಣ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

RelatedPosts

ಯುವಜನತೆ ಹೋರಾಟ ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರ, ಸಂಸತ್ತಿನಲ್ಲಿ ಚರ್ಚಿಸಿ: ಸಿಎಂ ಡಿ.ಕೆ ಶಿವಕುಮಾರ್ ಆಗ್ರಹ

ಪ್ರಧಾನಿ ನಿವಾಸದ ಬಳಿ ಪ್ರತಿಭಟನೆ ವೇಳೆ ರಾಹುಲ್ ಗಾಂಧಿಗೆ ಗಾಯ

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ: ಡಿಸಿಎಂ ಪರಮೇಶ್ವರ್ ಭರವಸೆ

ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆಗೆ ಯತ್ನ: ರಾಹುಲ್ ಗಾಂಧಿ, ಪ್ರಿಯಾಂಕಾ ಪೊಲೀಸ್ ವಶಕ್ಕೆ

ADVERTISEMENT
ADVERTISEMENT

ಹುಟ್ಟಿನಿಂದ ಇವ್ರು ಮೇಲೆ ಕೆಳಗೆ, ಈತ ಅಸ್ಪೃಶ್ಯ, ಇವರನ್ನು ಮುಟ್ಟಬಾರದು ಊರಿಂದ ಹೊರಗಿಡಬೇಕು ಎಂಬ ಮನುವಾದ ಬಹಳ ಹಿಂದಿನಿಂದಲೂ ಇದೆ. ಈ ಮನುವಾದದ ವಿರುದ್ಧ ಮೊದಲು ದ್ವನಿ ಎತ್ತಿದವರು ಬುದ್ಧ ಅದನ್ನು ಮುಂದುವರೆಸಿದವರು ಬಸವಣ್ಣ ಅದನ್ನು ಸಂವಿಧಾನದ ಆಶಯವನ್ನಾಗಿಸಿದವರು ಅಂಬೇಡ್ಕರ್. ಅದನ್ನೇ ಪ್ರತಿಪಾದಿಸಿದವರು ಕುವೆಂಪು. ಈ ತದ್ವಿರುದ್ಧ ವಾದಗಳ ನಡುವೆ ಅಂದಿನಿಂದಲೂ ಪ್ರತಿಸ್ಪರ್ಧೆ ಇದೆ. ಮಾನವತಾವಾದವನ್ನು ಪ್ರತಿಪಾದಿಸಿದ ಈ ಎಲ್ಲಾ ಮಹನೀಯರನ್ನು ತ್ಯಜಿಸಿದವರಿಂದಲೇ ಇಂದು ಸಂವಿಧಾನದ ಮೇಲೂ ದಾಳಿ ನಡೆಯುತ್ತಿದೆ. ಹೀಗಾಗಿ ನಾವೆಲ್ಲರೂ ಎಲ್ಲಾ ಕಾಲದಲ್ಲೂ ಜಾಗೃತರಾಗಿರಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯ ಪಟ್ಟರು.

ಬುದ್ಧ-ಬಸವ-ಅಂಬೇಡ್ಕರ್‌-ಫುಲೆ ಇವರ ಎಲ್ಲರ ಆಶಯವೂ ಒಂದೇ ಆಗಿತ್ತು. ಸಂಪ್ರದಾಯವಾದಿಗಳ ವಿರುದ್ಧ ಬುದ್ಧ ಧ್ವನಿ ಎತ್ತಿದ್ದ. ಎಲ್ಲರೂ ಒಂದೇ ಎಂಬ ಸಮಾನತೆಯನ್ನು ಸಾರಿದ್ದ, ಬುದ್ದನ ಆದಿಯಾಗಿ ಬಸವಣ್ಣ, ಫುಲೆ, ಅಂಬೇಡ್ಕರ್‌ ರಿಂದ ವಿಶ್ವಮಾನವ ಕುವೆಂಪುವರೆಗೆ ಎಲ್ಲರೂ ಪಾಲಿಸಿದ್ದು, ಪ್ರತಿಪಾದಿಸಿದ್ದು ಈ ಮಾನವತಾ ವಾದವನ್ನೇ. ಬುದ್ದನ ಈ ವೈಚಾರಿಕತೆಯನ್ನು ಬಸವಣ್ಣ-ಕನಕದಾಸರು ಜನ ಸಾಮಾನ್ಯರಿಗೆ ತತ್ವದ ಭಾಷೆಯಲ್ಲಿ ಹೇಳಿದರೆ, ಅದಕ್ಕೆ ಆಧುನಿಕ ಭಾಷೆಯನ್ನು ಸೇರಿಸಿ ಸಂವಿಧಾನವನ್ನಾಗಿಸಿದವರು ಅಂಬೇಡ್ಕರ್” ಎಂದರು.

“ಇರುವುದು ಒಂದೇ ಕುಲ, ಮಾನವ ಕುಲ. ಇಲ್ಲಿ ಹುಟ್ಟಿನಿಂದ ಯಾರೂ ಮೇಲಲ್ಲ, ಕೀಳೂ ಅಲ್ಲ ಎಂಬ ಸಮಾನತೆಯ ಆಶಯವೇ ನಮ್ಮ ಸಂವಿಧಾನದ ಮೂಲ ತತ್ವ. ಇದಕ್ಕೆ ಸ್ಫೂರ್ತಿ ಬಸವಣ್ಣನೂ ಹೌದು ಬುದ್ಧನೂ ಹೌದು. ಭಾಷೆ 20ನೇ ಶತಮಾನದ್ದಿರಬಹುದು. ಆದರೆ, ಅದರ ಸ್ಪೂರ್ತಿ ಈ ಮಣ್ಣಿನಲ್ಲಿ ಅಡಗಿದೆ. ಅವರು ಬಿತ್ತಿದ ಕಾಳು ಇಂದು ಮರವಾಗಿ ಬೆಳೆದು ಸಂವಿಧಾನದ ರೂಪದಲ್ಲಿ ನಮಗೆ ಸಿಕ್ಕಿದೆ. ಬಸವ ಸಾಹಿತ್ಯ, ದಾಸ ಸಾಹಿತ್ಯದಿಂದ ಕುವೆಂಪು ವರೆಗೆ ಎಲ್ಲರೂ ಇದನ್ನೇ ಪ್ರತಿಪಾದಿಸಿದ್ದು. ಇವರೆಲ್ಲರೂ ಮಾನವತಾವಾದಿಗಳು. ನಾವು ಅನುಸರಿಸಬೇಕಾದ ನಿಜವಾದ ನಾಯಕರು” ಎಂದು ತಿಳಿಸಿದರು.

ವಚನ ಸಾಹಿತ್ಯದ ಮೇಲಿನ ದಾಳಿಯ ಬಗ್ಗೆ ಎಚ್ಚರವಿರಲಿ!

ಬಸವಣ್ಣನವರ ತತ್ವವೇ ನಮ್ಮ ನಾಡಿನ ಗುಣ. ಜಾತಿ- ಕುಲ ಬಿಟ್ಟು ಮನುಷ್ಯರಾಗಿ ಬದುಕಿ ಎಂಬುದೇ ಅವರ ಸಿದ್ದಾಂತ. ಒಡೆದು ಆಳುವ ನೀತಿಯನ್ನು ತಿರಸ್ಕಾರ ಮಾಡಿ ಎಲ್ಲರೂ ನಮ್ಮವರು ಎಂಬುದೇ ನಮ್ಮ ಸಂಸ್ಕೃತಿ ಸಂಪ್ರದಾಯ. ಇದೇ ಕಾರಣಕ್ಕೆ ನಮ್ಮ ಸರ್ಕಾರ ಬಸವಣ್ಣನವರನ್ನು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಏಕೆಂದರೆ ಬಸವಣ್ಣನಿಗಿಂತ ನಮ್ಮ ನಾಡಿನ ಗುಣವನ್ನು ಯಾರೂ ಪ್ರತಿಬಿಂಬಿಸಲು ಸಾಧ್ಯವಿಲ್ಲ.

ಆದರೆ, ವಚನಗಳಿಗೆ ಶರಣು ಎಂದವರಿಂದಲೇ ಇಂದು ವಚನ ಸಾಹಿತ್ಯದ ಮೇಲೆ ದಾಳಿ ಶುರುವಾಗಿದೆ. ಬುದ್ಧನನ್ನು ಅವಹೇಳನ ಮಾಡಿದವರು, ಬಸವನನ್ನು ತಿರಸ್ಕರಿಸಿದವರು, ಅಂಬೇಡ್ಕರ್‌ ಅವರ ಸಂವಿಧಾನವನ್ನು ಬದಲಿಸಬೇಕು ಎಂದು ಮಾತನಾಡುತ್ತಿರುವವರು ಇಂದು ವಚನ ಸಾಹಿತ್ಯದ ಮೇಲೂ ದಾಳಿ ನಡೆಸುತ್ತಿದ್ದಾರೆ ಈ ಬಗ್ಗೆಯೂ ನಾವು ಎಚ್ಚರಾಗಿರಬೇಕು” ಎಂದು ಸಚಿವರು ಕರೆ ನೀಡಿದರು.

“ವಚನ ದರ್ಶನ ಎಂಬ ಪುಸ್ತಕ ಬಿಡುಗಡೆ ಮಾಡುವ ಮೂಲಕ ಕೆಲವರು ವಚನ ಸಾಹಿತ್ಯದ ಸಾರಾಂಶವನ್ನು ತಿರುಚಿ ಜನ ಸಾಮಾನ್ಯರು ತಿರಸ್ಕಾರ ಮಾಡುವಂತೆ ಮಾಡಿ, ಶ್ರೇಣೀಕೃತ ವ್ಯವಸ್ಥೆ ಉಳಿಸಲು ಮುಂದಾಗಿದ್ದಾರೆ. ಹೀಗಾಗಿ ನಾವು ಎಚ್ಚರಿಕೆ ವಹಿಸಬೇಕು. ಸತ್ಯ ಕಣ್ಣ ಮುಂದೆ ಇದ್ದರೂ ನೂರು ಬಾರಿ ಸುಳ್ಳನ್ನೇ ಹೇಳೀದರೆ ಅದೇ ಸತ್ಯವಾಗುವ ಕಾಲವಿದು. ಹೀಗಾಗಿ ನಾವು ಸದಾ ಕಾಲ ಎಚ್ಚರಿಕೆ ವಹಿಸಬೇಕಿದೆ” ಎಂದರು.

ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ತತ್ವಗಳನ್ನು ಪಾಲಿಸುವ ನಮ್ಮಗಳ ನಡೆ ಹಾಗೂ ನುಡಿಗೆ ಸಾಮರಸ್ಯವೇ ಇಲ್ಲದಂತಾಗಿದೆ. ಬಸವಣ್ಣ ಅಂಬೇಡ್ಕರ್‌ಗೆ ಕೈಮುಗಿದು ಅವರು ಹೇಳಿದ್ದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಈ ಆಚಾರ ವಿಚಾರಕ್ಕೆ ಸಾಮರಸ್ಯ ಇಲ್ಲದ ಢೋಂಗಿಗಳಿಗಳ ಕೈಯಲ್ಲಿ ನಮ್ಮ ಸಾಂಸ್ಕೃತಿಕ ನಾಯಕರು ಕೈಗೊಂಬೆ ಆಗಿದ್ದಾರ? ಎಂಬ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದರು. ಅಲ್ಲದೆ, ಎಲ್ಲರೂ ಸರ್ವ ಸಮಾನರಂತೆ ಸಾಮರಸ್ಯದ ಜೀವನ ಮಾಡಿದರೆ ಮಾತ್ರ ದೇಶದ ಭವಿಷ್ಯವನ್ನು ಕಟ್ಟಲು ಸಾಧ್ಯ. ಹೀಗಾಗಿ ಜನರನ್ನು ಜಾಗೃತಿಗೊಳಿಸುವ ಇಂತಹ ವಿಚಾರ ಸಂಕಿರಣಗಳು ನಾಡಿನಾದ್ಯಂತ ಆಗಬೇಕು ಎಂದು ಕಿವಿಮಾತು ಹೇಳಿದರು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 07 21T212325.764

ಯುವಜನತೆ ಹೋರಾಟ ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರ, ಸಂಸತ್ತಿನಲ್ಲಿ ಚರ್ಚಿಸಿ: ಸಿಎಂ ಡಿ.ಕೆ ಶಿವಕುಮಾರ್ ಆಗ್ರಹ

by ಶಾಲಿನಿ ಕೆ. ಡಿ
July 21, 2026 - 9:23 pm
0

Untitled design 2026 07 21T210422.806

ಪ್ರಧಾನಿ ನಿವಾಸದ ಬಳಿ ಪ್ರತಿಭಟನೆ ವೇಳೆ ರಾಹುಲ್ ಗಾಂಧಿಗೆ ಗಾಯ

by ಶಾಲಿನಿ ಕೆ. ಡಿ
July 21, 2026 - 9:05 pm
0

Untitled design 2026 07 21T203109.779

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ: ಡಿಸಿಎಂ ಪರಮೇಶ್ವರ್ ಭರವಸೆ

by ಶಾಲಿನಿ ಕೆ. ಡಿ
July 21, 2026 - 8:32 pm
0

Untitled design 2026 07 21T192714.337

ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆಗೆ ಯತ್ನ: ರಾಹುಲ್ ಗಾಂಧಿ, ಪ್ರಿಯಾಂಕಾ ಪೊಲೀಸ್ ವಶಕ್ಕೆ

by ಶಾಲಿನಿ ಕೆ. ಡಿ
July 21, 2026 - 7:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 21T212325.764
    ಯುವಜನತೆ ಹೋರಾಟ ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರ, ಸಂಸತ್ತಿನಲ್ಲಿ ಚರ್ಚಿಸಿ: ಸಿಎಂ ಡಿ.ಕೆ ಶಿವಕುಮಾರ್ ಆಗ್ರಹ
    July 21, 2026 | 0
  • Untitled design 2026 07 21T210422.806
    ಪ್ರಧಾನಿ ನಿವಾಸದ ಬಳಿ ಪ್ರತಿಭಟನೆ ವೇಳೆ ರಾಹುಲ್ ಗಾಂಧಿಗೆ ಗಾಯ
    July 21, 2026 | 0
  • Untitled design 2026 07 21T203109.779
    ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ: ಡಿಸಿಎಂ ಪರಮೇಶ್ವರ್ ಭರವಸೆ
    July 21, 2026 | 0
  • Untitled design 2026 07 21T192714.337
    ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆಗೆ ಯತ್ನ: ರಾಹುಲ್ ಗಾಂಧಿ, ಪ್ರಿಯಾಂಕಾ ಪೊಲೀಸ್ ವಶಕ್ಕೆ
    July 21, 2026 | 0
  • Untitled design 2026 07 21T191011.060
    ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್? ಲೋಕಭವನದಲ್ಲಿ ಸಿದ್ಧತೆ
    July 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version