ಬೆಂಗಳೂರು: ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ವಿಜಯೋತ್ಸವನ್ನು ರಾಜ್ಯ ಸರ್ಕಾರ ತುರಾತುರಿಯಲ್ಲಿ ಆಯೋಜನೆ ಮಾಡಿದೆ. ಸರಿಯಾದ ಬಂದೋಬಸ್ತ್ ಮಾಡಿಲ್ಲ. ಬೆಳಗ್ಗೆಯಿಂದ ಡಿಸಿಎಂ ಶಿವಕುಮಾರ್ ಅವರು ಆಟಗಾರರಿಗೆ ಹಾರ ತುರಾಯಿ ಹಾಕಿ ಬರ ಮಾಡಿಕೊಂಡಿದ್ದೇನು, ನಿಮಗೆ ಪರಿಜ್ಞಾನ ಜವಾಬ್ದಾರಿ ಇಲ್ವಾ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು .
ಬೌರಿಂಗ್ ಅಸ್ಪತ್ರೆಗೆ ಭೇಟಿ ಮಾಧ್ಯಮಗಳು ಜತೆ ಮಾತನಾಡಿದ ಅವರು; ಮಂತ್ರಿಗಳ ಮಕ್ಕಳು ಸೇಪಾಗಿದ್ರಲ್ಲ, ಬಡವರ ಮಕ್ಳು ತಾನೆ ಸತ್ತಿದ್ದು ಮಂತ್ರಿಗಳ ಮಕ್ಕಳಿಗೆ ಪ್ಲೇಯರ್ಸ್ ಜೊತೆ ಸೆಲ್ಫಿನೂ ಸಿಗುತ್ತೆ ಸೇಫ್ ಆಗಿಯೂ ಇರ್ತಾರೆ. ಬಡವರ ಮಕ್ಕಳು ಸಾವನ್ನಪ್ಪಿದ್ದಾರೆ ಯಾರು ಹೊಣೆ ಇದಕ್ಕೆ.? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೆ, ಯಾವುದೇ ಮುನ್ನೆಚ್ಚರಿಕೆ ವಹಿಸದಿರುವುದೇ ದುರಂತಕ್ಕೆ ಕಾರಣವಾಗಿದೆ. ದುರಂತದ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಗೃಹ ಸಚಿವರೇ ಹೊತ್ತುಕೊಳ್ಳಬೇಕು. ಸರ್ಕಾರ ಮೃತ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡುವುದರ ಜೊತೆಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಅವರು ಒತ್ತಾಯಿಸಿದರು.