• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 14, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

‘ನಾನಿನ್ನ ಬಿಡಲಾರೆ’ ಮಾತು ಬಾರದ ಬಾಲಕಿಯಾಗಿ ಹಿತಾ ನಟನೆಗೆ ವೀಕ್ಷಕರ ಕಣ್ಣೀರು!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 13, 2025 - 11:14 pm
in ಕಿರುತೆರೆ, ಸಿನಿಮಾ
0 0
0
Web 2025 06 13t230949.418

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಹಿತಾ ಪಾತ್ರದಲ್ಲಿ ನಟಿಸಿರುವ ಬಾಲಕಿ ಮಹಿತಾ, ತನ್ನ ಭಾವನಾತ್ಮಕ ಮತ್ತು ಮೂಕಿಯಾಗಿರುವ ನಟನೆಯಿಂದ ವೀಕ್ಷಕರ ಮನಗೆದ್ದಿದ್ದಾಳೆ. “ಅಮ್ಮಾ” ಎಂದು ಕೂಗುವ ದೃಶ್ಯದಲ್ಲಿ ಈ ಪುಟಾಣಿಯ ನಟನೆ ಎಂತಹವರ ಕಣ್ಣಲ್ಲೂ ನೀರು ತರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಯ ಮಹಾಪೂರವೇ ಹರಿದುಬಂದಿದ್ದು, ಮಹಿತಾಳ ಪ್ರತಿಭೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

ನಾ ನಿನ್ನ ಬಿಡಲಾರೆ:

ನಾ ನಿನ್ನ ಬಿಡಲಾರೆ ಧಾರಾವಾಹಿಯ ಕಥೆ ಶರತ್ ಮತ್ತು ಅಂಬಿಕಾ ದಂಪತಿಗಳ ಸುತ್ತ ಸುತ್ತುತ್ತದೆ. ಇವರ ಮಗಳು ಹಿತಾಳೇ ಈ ಕುಟುಂಬದ ಕೇಂದ್ರಬಿಂದು. ಆದರೆ, ಶರತ್‌ನನ್ನು ತನ್ನ ವಶಪಡಿಸಿಕೊಳ್ಳಲು ಯತ್ನಿಸುವ ಮಾಯಾ ಎಂಬ ಖಳನಾಯಕಿ, ಅಂಬಿಕಾಳನ್ನು ಕೊಂದುಬಿಡುತ್ತಾಳೆ. ತಾಯಿಯ ಸಾವಿನ ಆಘಾತದಿಂದ ಹಿತಾ ಮೂಕಿಯಾಗುತ್ತಾಳೆ. ತಂದೆಯೇ ತಾಯಿಯ ಸಾವಿಗೆ ಕಾರಣ ಎಂದು ತಪ್ಪಾಗಿ ಭಾವಿಸಿ, ಮಾತನಾಡುವುದನ್ನೇ ಬಿಡುತ್ತಾಳೆ. ಇತ್ತ, ಮಾಯಾ ಹಿತಾಳನ್ನು ತನ್ನ ದಾರಿಯಿಂದ ತೆಗೆದುಹಾಕಲು ಕೊಲೆಗೆ ಸಂಚು ರೂಪಿಸುತ್ತಾಳೆ.

RelatedPosts

ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಬೇಬಿ ಬಂಪ್ ಲುಕ್ ವೈರಲ್!

ಬೆಂಗಳೂರಲ್ಲಿರೋ ಶಿವನ ಮೊರೆ ಹೋಗಿದ್ಯಾಕೆ ಕಂಗನಾ?

ತಪ್ಪೊಪ್ಪಿಕೊಂಡ ಮಡೆನೂರು ಮನುಗೆ ಧ್ರುವ ಸರ್ಜಾ ಮಾಡಿದ್ದೇನು..?

ತಗ್ಗದ ಅನುಷ್ಕಾ ಮಾರ್ಕೆಟ್..ಘಾಟಿ ರೈಟ್ಸ್ ನ್ಯೂ ರೆಕಾರ್ಡ್‌

ADVERTISEMENT
ADVERTISEMENT

View this post on Instagram

 

A post shared by Zee Kannada (@zeekannada)


ಆದರೆ, ಸತ್ತ ತಾಯಿ ಅಂಬಿಕಾಳ ಆತ್ಮವು ಮಗಳ ರಕ್ಷಣೆಗೆ ಬಂದು ನಿಲ್ಲುತ್ತದೆ. ಶರತ್‌ನ ಕಚೇರಿಯಲ್ಲಿ ಕೆಲಸ ಮಾಡುವ ದುರ್ಗಾಳ ಗುಣಮುಗ್ಧಳಾದ ಹಿತಾ, ಆಕೆಯಿಂದ ತಾಯಿಯ ಪ್ರೀತಿಯನ್ನು ಪಡೆಯುತ್ತಾಳೆ. ಆದರೆ, ದುರ್ಗಾಗೆ ಈ ಸಂಗತಿಯ ಅರಿವಿರುವುದಿಲ್ಲ. ಇದೀಗ, ದುರ್ಗಾಳನ್ನು ಅಪಘಾತದಿಂದ ರಕ್ಷಿಸಲು ಹೋಗಿ ಆಕೆಯೇ ಅಪಘಾತಕ್ಕೀಡಾಗುತ್ತಾಳೆ. ದೇವಿಯೊಬ್ಬಳು ಅಜ್ಜಿಯ ರೂಪದಲ್ಲಿ ಬಂದು, “ದುರ್ಗಾಳನ್ನು ರಕ್ಷಿಸಲು ನೀನು ಮಾತನಾಡಲೇಬೇಕು” ಎಂದು ಹಿತಾಳಿಗೆ ಹೇಳುತ್ತಾಳೆ. ಈ ಭಾವನಾತ್ಮಕ ದೃಶ್ಯದಲ್ಲಿ ಹಿತಾಳ ಮಾತನಾಡುವ ಪ್ರಯತ್ನವು ವೀಕ್ಷಕರ ಕಣ್ಣೀರಿಗೆ ಕಾರಣವಾಗಿದೆ.

ಮಹಿತಾ: ಪುಟ್ಟ ತಾರೆಯ ಕತೆ

ಹಿತಾ ಪಾತ್ರದಲ್ಲಿ ನಟಿಸಿರುವ ಮಹಿತಾ, ಕನ್ನಡ ಟೆಲಿವಿಷನ್‌ನ ಉದಯೋನ್ಮುಖ ತಾರೆಯಾಗಿದ್ದಾಳೆ. ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸೇರಿದಂತೆ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಆಕೆ, ಚುಕ್ಕಿತಾರೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದಳು. ಇದೀಗ, ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ತನ್ನ ಸಹಜವಾದ ನಟನೆಯಿಂದ ಎಲ್ಲರ ಮನಗೆದ್ದಿದ್ದಾಳೆ.

ಮಹಿತಾಳ ತಾಯಿ ತನುಜಾ, ಮಾಧ್ಯಮದೊಂದಿಗೆ ಮಾತನಾಡಿ, “ಕೋವಿಡ್ ಸಮಯದಲ್ಲಿ ಅರಿವು ಮೂಡಿಸುವ ವಿಡಿಯೋಗಳನ್ನು ತಯಾರಿಸುವಾಗ ಮಹಿತಾಳ ನಟನೆಯ ಪ್ರತಿಭೆಯನ್ನು ಗುರುತಿಸಿದೆ. ಆಕೆಯ ಆಸಕ್ತಿಗೆ ನಾನು ಯಾವತ್ತೂ ಒತ್ತಡ ಹಾಕದೆ, ಬೆಂಬಲ ನೀಡಿದೆ. ಒಳ್ಳೆಯ ವೇದಿಕೆ ಸಿಕ್ಕಿದ್ದರಿಂದ ಆಕೆ ಇಂದು ಈ ಸ್ಥಾನದಲ್ಲಿದ್ದಾಳೆ” ಎಂದಿದ್ದಾರೆ. ಮಹಿತಾ ಶಾಲೆ ಮತ್ತು ಧಾರಾವಾಹಿಯ ಚಿತ್ರೀಕರಣ ಎರಡನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾಳೆ.

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಶರತ್ ಪಾತ್ರದಲ್ಲಿ ಪಾರು ಧಾರಾವಾಹಿಯಿಂದ ಖ್ಯಾತಿಗಳಿಸಿದ ಶರತ್ ಪದ್ಮನಾಭ್ ಕಾಣಿಸಿಕೊಂಡಿದ್ದಾರೆ. ಅಂಬಿಕಾಳಾಗಿ ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನೀತಾ ಅಶೋಕ್, ದುರ್ಗಾಳಾಗಿ ರಿಷಿಕಾ, ಮತ್ತು ಖಳನಾಯಕಿ ಮಾಯಾಳಾಗಿ ರುಹಾನಿ ಶೆಟ್ಟಿ ನಟಿಸಿದ್ದಾರೆ. ಕುಟುಂಬದ ಯಜಮಾನಿಯ ನಕಾರಾತ್ಮಕ ಪಾತ್ರದಲ್ಲಿ ವೀಣಾ ಸುಂದರ್ ಮತ್ತು ರಂಗಭೂಮಿ ಕಲಾವಿದ ಬಾಬು ಹಿರಣ್ಯ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Download 2025 06 13t203721.519

ಅಹ್ಮದಾಬಾದ್ ವಿಮಾನ ದುರಂತ: ಏರ್ ಇಂಡಿಯಾದಿಂದ 25 ಲಕ್ಷ ರೂ. ಹೆಚ್ಚುವರಿ ಪರಿಹಾರ!

by ಶ್ರೀದೇವಿ ಬಿ. ವೈ
June 14, 2025 - 7:10 pm
0

Web 2025 06 14t183926.723

ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಬೇಬಿ ಬಂಪ್ ಲುಕ್ ವೈರಲ್!

by ಶ್ರೀದೇವಿ ಬಿ. ವೈ
June 14, 2025 - 6:40 pm
0

Web 2025 06 14t175528.147

WTC 2025 final: ದಕ್ಷಿಣ ಆಫ್ರಿಕಾದ ಐತಿಹಾಸಿಕ ಗೆಲುವು, ಮುಡಿಗೇರಿದ ಟೆಸ್ಟ್ ಚಾಂಪಿಯನ್ ಕಿರೀಟ

by ಶ್ರೀದೇವಿ ಬಿ. ವೈ
June 14, 2025 - 5:58 pm
0

Web 2025 06 14t172920.738

ಬೆಂಗಳೂರಲ್ಲಿರೋ ಶಿವನ ಮೊರೆ ಹೋಗಿದ್ಯಾಕೆ ಕಂಗನಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 14, 2025 - 5:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 06 14t183926.723
    ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಬೇಬಿ ಬಂಪ್ ಲುಕ್ ವೈರಲ್!
    June 14, 2025 | 0
  • Web 2025 06 13t155259.585
    ಜೀ ಕನ್ನಡದಲ್ಲಿ ಡಬಲ್ ಧಮಾಕಾ-ನೋಡಲು ಮರೆಯದಿರಿ ಮಹಾನಟಿ ಸೀಸನ್ 2 ಮತ್ತು ಕರ್ಣ
    June 13, 2025 | 0
  • 1425 (8)
    ಹೊಸ ಅತಿಥಿ ಆಗಮನದ ನಿರೀಕ್ಷೆಯಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ​ ನಟಿ
    June 11, 2025 | 0
  • Untitled design 2025 06 08t233027.226
    ಕನ್ನಡದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಅಪರೂಪದ ದಾಖಲೆ
    June 8, 2025 | 0
  • 1 (8)
    ಸದಾ ನಿಮ್ಮೊಂದಿಗೆ ನಿಮ್ಮ ಜೀ ಕನ್ನಡ: ಕನ್ನಡಿಗರ ಜೊತೆ ಹೊಸ ಅಧ್ಯಾಯ ಬರೆಯಲು ಸಜ್ಜಾದ ಜೀ ಕನ್ನಡ
    June 8, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version