ರಾಕಿಂಗ್ ಸ್ಟಾರ್ ಯಶ್ಗೆ ಡಬಲ್ ಆಘಾತ. ಈಗಾಗ್ಲೇ ಟಾಕ್ಸಿಕ್ ರಿಲೀಸ್ ಪೋಸ್ಟ್ಪೋನ್ ಆಗಿದೆ. ಇದೀಗ ರಾಮಾಯಣ ಸಿನಿಮಾದ ಬಿಡುಗಡೆ ಕೂಡ ಅಂದುಕೊಂಡ ಡೇಟ್ಗೆ ಮಾಡೋಕೆ ಆಗ್ತಿಲ್ಲ ಅನ್ನೋದು ಕಾತರಿ ಆಗಿದೆ. ಇದು ಯಶ್ಗೆ ಡಬಲ್ ಶಾಕ್ ನೀಡಿದೆ. ಇಷ್ಟಕ್ಕೂ ಯಾವ ಡೇಟ್ಗೆ ಬರೋಕೆ ಸಜ್ಜಾಗಿತ್ತು ರಾಮಾಯಣ..? ಪೋಸ್ಟ್ಪೋನ್ ಹಿಂದಿನ ಅಸಲಿ ಕಾರಣ ಏನು ಅಂತೀರಾ..? ಇಲ್ಲಿದೆ ನೋಡಿ..
- ಇರಾನ್-ಇಸ್ರೇಲ್ ಕದನ.. ದೀಪಾವಳಿಗಿಲ್ಲ ರಾಮಾಯಣ
- ಈ ವರ್ಷ ರಿಲೀಸ್ ಇರಲ್ಲ.. ಪೋಸ್ಟ್ಪೋನ್ ಕನ್ಫರ್ಮ್..!
- ರಾಕಿಭಾಯ್ ಯಶ್ಗೆ ಬ್ಯಾಕ್ ಟು ಬ್ಯಾಕ್ ಡಬಲ್ ಶಾಕ್
- ರಿಲೀಸ್ ಜೊತೆ ಪ್ರಮೋಷನ್ಸ್ ಕೂಡ ಮುಂದೂಡಿದ ಟೀಂ.!
ರಾಮಾಯಣ.. ಭಾರತೀಯ ಚಿತ್ರರಂಗದ ಈ ಶತಮಾನದ ಬಿಗ್ಗೆಸ್ಟ್ ಎಪಿಕ್ ಸಾಗಾ. ಯೆಸ್.. ರಾಜಮೌಳಿಯ ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳನ್ನ ಮೀರಿದ ರೇಂಜ್ಗೆ ಈ ಬಾರಿ ರಾಮಾಯಣವನ್ನ ಕಟ್ಟಿಕೊಡಲು ನಮ್ಮ ಹೆಮನ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಪಣ ತೊಟ್ಟಿದ್ದಾರೆ. ರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಲೀಡ್ನಲ್ಲಿದ್ದು, ಲಂಕೇಶ್ವರನ ಪಾತ್ರದಲ್ಲಿ ಖುದ್ದು ಯಶ್ ಅವರೇ ಬಣ್ಣ ಹಚ್ಚಿದ್ದಾರೆ.
ರಾಮಾಯಣ ಚಿತ್ರ ಒಂದಲ್ಲ ಎರಡೆರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಇದೇ 2026ರ ದೀಪಾವಳಿ ಹಬ್ಬಕ್ಕೆ ಮೊದಲ ಭಾಗ, 2027ರ ದೀಪಾವಳಿಗೆ 2ನೇ ಭಾಗ ಬಿಡುಗಡೆ ಆಗಲಿದೆ ಅನ್ನೋದು ಮೊದಲೇ ಅನೌನ್ಸ್ ಆಗಿತ್ತು. ಆದ್ರೀಗ ಎಲ್ಲವೂ ಉಲ್ಟಾ ಪಲ್ಟಾ ಆಗಿವೆ. ದೀಪಾವಳಿ ಹಬ್ಬಕ್ಕೆ ರಾಮಾಯಣ ಬರೋದು ಬಹುತೇಕ ಡೌಟು. ಶ್ರೀರಾಮ ನವಮಿಗೆ ಚಿತ್ರದ ಟೀಸರ್ ಲಾಂಚ್ ಮಾಡೋ ಪ್ಲ್ಯಾನ್ ಕೂಡ ಕೈ ಬಿಟ್ಟಿದೆ ಚಿತ್ರತಂಡ.
ಯೆಸ್.. ಈ ಪೋಸ್ಟ್ಪೋನ್ ಸುದ್ದಿ ರಾಕಿಂಗ್ ಸ್ಟಾರ್ ಯಶ್ಗೆ ಭಾರೀ ಆಘಾತ ತಂದಿದೆ. ಇತ್ತೀಚೆಗೆ ಟಾಕ್ಸಿಕ್ ಸಿನಿಮಾದ ರಿಲೀಸ್ ಮುಂದೂಡಿದ್ದು ಗೊತ್ತೇ ಇದೆ. ಅದ್ರ ಬೆನ್ನಲ್ಲೀಗ ರಾಮಾಯಣ ಕೂಡ ಪೋಸ್ಟ್ಪೋನ್ ಆಗ್ತಿರೋದು ಬ್ಯಾಕ್ ಟು ಬ್ಯಾಕ್ ಹೊಡೆತ ಬಿದ್ದಂತಾಗಿದೆ. ಅಂದಹಾಗೆ ಇದಕ್ಕೆಲ್ಲಾ ಕಾರಣ ಇರಾನ್-ಇಸ್ರೇಲ್ ವಾರ್. ಹೌದು.. ಯುದ್ಧದ ಬಿಸಿ ಇಡೀ ವಿಶ್ವಕ್ಕೆ ವ್ಯಾಪಿಸಿದ್ದು, ನಮ್ಮ ಭಾರತೀಯ ಚಿತ್ರರಂಗದ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಯಶ್ ಇಲ್ಲಿ ಬರೀ ನಟನೆಗಷ್ಟೇ ಸೀಮಿತ ಆಗಿಲ್ಲ. ನಮಿತ್ ಮಲ್ಹೋತ್ರಾ ಜೊತೆಗೂಡಿ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ರಾಮಾಯಣ ಸೆಟ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ವಿಸಿಟ್ ಮಾಡಿರೋದು ವಿಶೇಷ. ಅಂದಹಾಗೆ ರಾಮಾಯಣ ಸಿನಿಮಾದ ಬಜೆಟ್ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ. ಯಾಕಂದ್ರೆ ಭಾರತೀಯ ಚಿತ್ರರಂಗದ ದುಬಾರಿ ಸಿನಿಮಾ ಇದು. ಹಾಲಿವುಡ್ ಸಿನಿಮಾಗಳಿಗೆ ಸುರಿಯುವ ರೇಂಜ್ಗೆ ಈ ಮಾಸ್ಟರ್ಕ್ಲಾಸ್, ಮಾಸ್ಟರ್ಪೀಸ್ಗೆ ಹೂಡಿಕೆ ಮಾಡ್ತಿದ್ದಾರೆ ಪ್ರೊಡ್ಯೂಸರ್ಸ್. ಮೂಲಗಳ ಪ್ರಕಾರ ಎರಡೂ ಭಾಗಗಳ ಚಿತ್ರೀಕರಣಕ್ಕೆ ಬರೋಬ್ಬರಿ 4 ಸಾವಿರ ಕೋಟಿ ಬಜೆಟ್ ಮೀಸಲಿಟ್ಟಿದ್ದಾರಂತೆ.
ವಿಎಫ್ಎಕ್ಸ್, ಸ್ಪೆಷಲ್ ಎಫೆಕ್ಟ್ಸ್ ಜಾಸ್ತಿ ಇರಲಿದ್ದು, ಸಾಕಷ್ಟು ದೃಶ್ಯಗಳು ಗ್ರೀನ್ಮ್ಯಾಟ್ನಲ್ಲೇ ಚಿತ್ರಿತಗೊಳ್ತಿವೆ. ನೋಡುಗರಿಗೆ ಸಹಜ ಹಾಗೂ ಸ್ವಾಭಾವಿಕತೆಯ ಫೀಲ್ ತರಿಸಲು ನಿರ್ದೇಶಕ ನಿತೇಶ್ ತಿವಾರಿ ಸಾಕಷ್ಟು ಎಫರ್ಟ್ ಹಾಕ್ತಿದ್ದಾರಂತೆ. ಇಲ್ಲಿಯ ತನಕ ಭಾರತೀಯ ಚಿತ್ರರಂಗದ ಅತಿಹೆಚ್ಚು ಗಳಿಸಿದ ಸಿನಿಮಾ ಅಂದ್ರೆ ಅದು ದಂಗಲ್. 2024 ಕೋಟಿ ಗಳಿಕೆಯಿಂದ ಅಗ್ರಸ್ಥಾನದಲ್ಲಿರೋ ದಂಗಲ್ ದಾಖಲೆಗಳನ್ನ ಸರಿಗಟ್ಟಲು ಅದೇ ಡೈರೆಕ್ಟರ್ ಜೊತೆ ನಮ್ಮ ಮಾಸ್ಟರ್ಮೈಂಡ್ ಯಶ್ ಈ ಸಿನಿಮಾ ಮಾಡ್ತಿರೋದು ಮತ್ತೊಂದು ಹೈಲೈಟ್. ಸೋ.. ಲೇಟ್ ಆದ್ರೂ ಸಿನಿಮಾ ಮಾತ್ರ ಲೇಟೆಸ್ಟ್ ಆಗಿ ಬರೋದು ಮಾತ್ರ ಗ್ಯಾರಂಟಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





