ಡಿಬಾಸ್ ಹಾಗೂ ರಾಕಿಭಾಯ್ ಫ್ಯಾನ್ಸ್ಗೆ ಗುಡ್ ನ್ಯೂಸ್. ಡೆವಿಲ್ ಶೂಟಿಂಗ್ ಸೆಟ್ನಲ್ಲಿ ಜೋಡೆತ್ತು ಯಶ್- ದರ್ಶನ್ ಕಲರವ.ಇದು ಎಷ್ಟರ ಮಟ್ಟಿಗೆ ನಿಜಾ ಅನ್ನೋದ್ರ ಜೊತೆಗೆ ತೂಗುದೀಪ ಬ್ರದರ್ಸ್ ದಚ್ಚು-ದಿನಕರ್ ಕೇಕ್ ಕಟ್ ಮಾಡಿ, ಸೆಲೆಬ್ರೇಟ್ ಮಾಡಿರೋ ಬರ್ತ್ ಡೇ ಯಾರದ್ದು ಅನ್ನೋದನ್ನ ಕೂಡ ತೋರಿಸ್ತೀವಿ.
ದರ್ಶನ್ ಕರಿಯರ್ನ ಈಗ ರೇಣುಕಾಸ್ವಾಮಿ ಹತ್ಯೆಗೂ ಮುನ್ನ, ರೇಣುಕಾಸ್ವಾಮಿ ಹತ್ಯೆ ನಂತರ ಅಂತ ವಿಭಜಿಸಿ ನೋಡುವ ಸ್ಥಿತಿ ಉಂಟಾಗಿದೆ. ಅದೊಂದು ಪ್ರಕರಣ ಡಿಬಾಸ್ ದರ್ಶನ್ ವ್ಯಕ್ತಿತ್ವ, ಕರಿಯರ್ ಮೇಲೆ ಎಲ್ಲಿಲ್ಲದ ಪರಿಣಾಮ ಬೀರಿದೆ. ಕಷ್ಟದಲ್ಲಿ ದರ್ಶನ್ ಕೈ ಹಿಡಿದವರು..? ಕೈ ಕೊಟ್ಟವ್ರು ಯಾರು ಅನ್ನೋದು ತೆರೆದ ಪುಸ್ತಕವಾಗಿದೆ.
ಅವಮಾನ, ಅಪಮಾನಗಳನ್ನ ಎದುರಿಸಿ ಬಂದ ನಟ ದರ್ಶನ್ಗೆ ಆ ಪ್ರಕರಣ ಕೋರ್ಟ್ನಲ್ಲಿ ಇರುವುದರ ಅರಿವಿದೆ. ಅಷ್ಟೇ ಅಲ್ಲ, ತಾನು ಇನ್ಮೇಲೆ ಯಾರ ಜೊತೆ ಇರ್ಬೇಕು, ಯಾರ ಜೊತೆ ಇರಬಾರದು, ಹೇಗಿರಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ. ಅದೇ ಕಾರಣದಿಂದ ಕ್ಲೋಸ್ ಸರ್ಕಲ್ನ ತುಂಬಾ ಕನಿಷ್ಟಗೊಳಿಸಿದ್ದಾರೆ. ಸಾರ್ವಜನಿಕವಾಗಿ ಅಡ್ಡಾಡೋದು ಕಮ್ಮಿ ಮಾಡಿದ್ದಾರೆ. ಫ್ಯಾಮಿಲಿ, ಸಿನಿಮಾ ಶೂಟಿಂಗ್, ಟೆಂಪಲ್ ರನ್, ಫಾರ್ಮ್ ಹೌಸ್ ಇಷ್ಟೇ ದಚ್ಚು ಪ್ರಪಂಚವಾಗಿದೆ.
ಅಂದಹಾಗೆ ರಾಕಿಭಾಯ್ ಯಶ್ ಜೊತೆಗಿರೋ ಯಶ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗ್ತಿದೆ. ಡೆವಿಲ್ ಸಿನಿಮಾ ಶೂಟಿಂಗ್ ಸೆಟ್ನಲ್ಲಿ ಇಬ್ಬರೂ ಭೇಟಿ ಆದ್ರಾ ಅನ್ನೋ ಕಮೆಂಟ್ಸ್ ಕೂಡ ಬರ್ತಿದೆ. ಆದ್ರೆ ಅದು ಹಳೆಯ ಫೋಟೋ ಆಗಿದ್ದು, ಇಬ್ಬರ ನಡುವೆ ಒಳ್ಳೆಯ ಬಾಂಡಿಂಗ್ ಇರೋದು ಗೊತ್ತೇಯಿದೆ. ಜೋಡೆತ್ತುಗಳಾಗಿ ಸುಮಲತಾರನ್ನ ಸಂಸದರಾಗಿಸಿದ ಗರಿಮೆ ಈ ಇಬ್ಬರಿಗಿದೆ.
ಒಂದ್ಕಡೆ ದಾಸ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ರೆ, ಮತ್ತೊಂದ್ಕಡೆ ಯಶ್ ತಮ್ಮ ಟಾಕ್ಸಿಕ್, ರಾಮಾಯಣ ಹಾಗೂ ತಾಯಿಯ ಕೊತ್ತಲವಾಡಿ ಸಿನಿಮಾಗಳ ಪ್ರೊಡಕ್ಷನ್, ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರೆ ಯಶ್-ದರ್ಶನ್ರನ್ನ ಒಟ್ಟೊಟ್ಟಿಗೆ ನೋಡೋದು ಸಖತ್ ಇಂಟರೆಸ್ಟಿಂಗ್. ಅದೇ ಕಾರಣಕ್ಕೆ ದಚ್ಚು ಫ್ಯಾನ್ಸ್ ಈ ಫೋಟೋನ ಈಗ ಶೇರ್ ಮಾಡ್ತಿದ್ದಾರೆ.
ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಿಸ್ತಿರೋ ಬಹುನಿರೀಕ್ಷಿತ ಸಿನಿಮಾ ಡೆವಿಲ್ ದಿ ಹೀರೋ ಶೂಟಿಂಗ್ ಭರದಿಂದ ಸಾಗ್ತಿದೆ. ಇತ್ತೀಚೆಗೆ ನಟ ದರ್ಶನ್ ಸಿಎಂ ಆಗಿ ಬಣ್ಣ ಹಚ್ಚಿದ್ದ ಫೋಟೋ ಶೂಟಿಂಗ್ ಸೆಟ್ನಿಂದ ಸೋರಿಕೆ ಆಗಿತ್ತು. ಇದೀಗ ಅದೇ ಡೆವಿಲ್ ಅಡ್ಡಾದಿಂದ ಮತ್ತಷ್ಟು ಫೋಟೋಸ್ ಹೊರಬಂದಿವೆ. ಆದ್ರೆ ಈ ಬಾರಿ ಸೆಲೆಬ್ರೇಷನ್ ಮೂಡ್ನಲ್ಲಿರೋ ದರ್ಶನ್ ಹಾಗೂ ಅವ್ರ ಸಹೋದರ ದಿನಕರ್ ತೂಗುದೀಪ ಫೋಟೋಸ್ ಹೊರಬಂದಿವೆ.
ದರ್ಶನ್ ಅವರ ಆಪ್ತ ಗೆಳೆಯ ಸಚ್ಚಿದಾನಂದ ಅವ್ರ ಹುಟ್ಟುಹಬ್ಬದ ಹಿನ್ನೆಲೆ, ಕ್ಯಾರವ್ಯಾನ್ನಲ್ಲೇ ಕೇಕ್ ಕಟ್ ಮಾಡಿ, ಬರ್ತ್ ಡೇ ಸೆಲೆಬ್ರೇಟ್ ಮಾಡುವ ಮೂಲಕ ಗೆಳೆತನ ಮೆರೆದಿದ್ದಾರೆ ಡಿಬಾಸ್ ದರ್ಶನ್. ಆದಷ್ಟು ಬೇಗ ಡೆವಿಲ್ ಸಿನಿಮಾ ಹೊರಬರಲಿ, ಮತ್ತೆ ದಚ್ಚು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮಿಂಚಲಿ ಅನ್ನೋದು ಅವ್ರ ಅಸಂಖ್ಯಾತ ಅಭಿಮಾನಿಗಳ ಆಶಯವಾಗಿದೆ.