ಪವನ್ ಕಲ್ಯಾಣ್ ಕಿಂಗ್ ಮೇಕರ್ ಆದ್ರೆ ದಳಪತಿ ವಿಜಯ್ ‘ಕಿಂಗ್’

MGR, ಜಯಲಲಿತಾ ಹಾದಿಯಲ್ಲಿ ವಿಜಯ್ ವಿಜಯೋತ್ಸವ

Untitled design 2026 05 04T165353.989

ತಮಿಳುನಾಡು ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲ ಆಗಿದೆ. ಇಲ್ಲಿಯ ತನಕ ನೀವು ಓದಿದಿ ಇತಿಹಾಸ ಈಗ ಕಂಪ್ಲೀಟ್ ಆಗಿ ಬದಲಿಸಿ ಬರೆಯುವಂತಾಗಿದೆ. ಯೆಸ್.. ಯಾರೂ ಕಂಡು ಕೇಳರಿಯದ ರೇಂಜ್‌‌ನಲ್ಲಿ ದಳಪತಿ ವಿಜಯ್ ಮೊದಲ ಹೆಜ್ಜೆಯಲ್ಲೇ ಭಾರೀ ವಿಜಯ ಸಾಧಿಸೋ ಮೂಲಕ ಸಿಎಂ ಆಗ್ತಿದ್ದಾರೆ. ಸ್ಟಾಲಿನ್ ಡಿಎಂಕೆ ಭದ್ರಕೋಟೆ ಛಿದ್ರ ಆಗಿದ್ದು, ಚುನಾವಣಾ ಫಲಿತಾಂಶ ಮಾಸ್ಟರ್‌‌ಸ್ಟ್ರೋಕ್ ನೀಡಿದೆ. ಈ ಕುರಿತ ಕಂಪ್ಲೀಟ್ ಅಪ್ಡೇಟ್ಸ್ ಇಲ್ಲಿದೆ ನೋಡಿ.

ರಾಜಕೀಯ ಒಂಥರಾ ಅನ್‌‌ಪ್ರೆಡಿಕ್ಟಬಲ್. ಯಾವಾಗ ಎಲ್ಲಿ ಏನಾಗುತ್ತೆ ಅನ್ನೋದನ್ನ ಊಹಿಸೋದು ಬಹಳ ಅಸಾಧ್ಯದ ಮಾತು. ಅದ್ಹೇಗೆ ಅಂದ್ರೆ ಐಪಿಎಲ್‌‌‌ ಮ್ಯಾಚ್ ನೋಡುವಾಗ ಒಂದೊಂದು ಓವರ್‌‌ಗೂ ಮ್ಯಾಚ್ ವಿನ್ನಿಂಗ್ ಪ್ರೆಡಿಕ್ಟ್ ಬದಲಾಗ್ತಾ ಹೋಗುವ ಹಾಗೆ. ಯೆಸ್.. ಇದನ್ನ ಈಗ್ಯಾಕೆ ಹೇಳ್ತಿದ್ದೀವಿ ಅಂದ್ರೆ ತಮಿಳುನಾಡು, ಕೇರಳಂ, ಪುದುಚೆರಿ ಸೇರಿದಂತೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ.

ಅದರಲ್ಲೂ ತಮಿಳುನಾಡು ರಾಜ್ಯ ರಾಜಕಾರಣದಲ್ಲಿ ಹಿಂದೆಂದೂ ಕಂಡು ಕೇಳರಿಯದ ಮಹತ್ವದ ಬದಲಾವಣೆಗಳು ಆಗಿರೋದು ಅಚ್ಚರಿ ಮೂಡಿಸಿದೆ. ಜೈಲಲ್ಲಿದ್ದ ಚಂದ್ರಬಾಬು ನಾಯ್ಡುರನ್ನ ಹೊರಗೆ ಕರೆತಂದು, ಮತ್ತೆ ಆತ ಟಿಡಿಪಿಯಿಂದ ಸಿಎಂ ಆಗುವಂತೆ ಮಾಡಿದ್ರು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್. ಅಷ್ಟೇ ಅಲ್ಲ ವೈಸಿಪಿಗೆ ಕಂಪ್ಲೀಟ್ ಆಗಿ ಮಣ್ಣು ಮುಕ್ಕಿಸಿ, ತಾನು ಡಿಸಿಎಂ ಕೂಡ ಆಗಿಬಿಟ್ರು ಪವನ್.

ಪವನ್ ಕಲ್ಯಾಣ್ ಆಂಧ್ರ ಪಾಲಿಟಿಕ್ಸ್‌ಗೆ ಕಿಂಗ್ ಮೇಕರ್ ಆದ್ರು. ಆದ್ರೆ ದಳಪತಿ ವಿಜಯ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಮಿಳುನಾಡು ರಾಜಕಾರಣದಲ್ಲಿ ಕಿಂಗ್ ಆಗಿದ್ದಾರೆ. ಯೆಸ್ ಟಿವಿಕೆ ಪಕ್ಷ ಸ್ವತಂತ್ರವಾಗಿ ಸರ್ಕಾರವನ್ನ ಕಟ್ಟುವ ರೇಂಜ್‌ಗೆ ಫಲಿತಾಂಶ ಹೊರಬಿದ್ದಿದ್ದು, ಇಷ್ಟು ದಿನ ಬರೀ ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಬ್ಬರಿಸುತ್ತಿದ್ದ  ವಿಜಯ್, ಸದ್ಯ ಇವಿಎಂ ಮಷಿನ್ಸ್‌‌ಗೂ ಸುಲ್ತಾನ ಅನ್ನೋದು ಪ್ರೂವ್ ಆಗಿದೆ.

ಒಂದು ಕಾಲದಲ್ಲಿ ತಮಿಳುನಾಡು ಅಂದ್ರೆ ಅಣ್ಣಾ ದೊರೈ ಕಟ್ಟಿದ ಡಿಎಂಕೆ ಎನ್ನಲಾಗುತ್ತಿತ್ತು. ನಂತ್ರ ಅದರ ಚುಕ್ಕಾಣಿಯನ್ನ ಕರುಣಾನಿಧಿ ಹಾಗೂ ಸೂಪರ್ ಸ್ಟಾರ್ ಎಂಜಿಆರ್‌‌ ಹಿಡಿದರು. ಎಂಜಿಆರ್ ಸಾಲು ಸಾಲು ಸಿನಿಮಾಗಳಲ್ಲಿ ಡಿಎಂಕೆ ಪಕ್ಷದ ಸೂರ್ಯ ಚಿಹ್ನೆಯನ್ನ ಖುದ್ದು ಅವರೇ ಪ್ರಮೋಟ್ ಮಾಡಿದ್ದಾರೆ ಕೂಡ. ಆದ್ರೆ ಯಾವಾಗ ಎಂಜಿಆರ್ ತನಗೆ ಮುಂದೊಂದು ದಿನ ಮುಳುವಾಗ್ತಾರೆ ಅಂತ ಕರುಣಾನಿಧಿಗೆ ಅನಿಸುತ್ತೋ, ಅಂದೇ ಎಂಜಿಆರ್‌‌ರಿಂದ ಅಂತರ ಕಾಯ್ದುಕೊಳ್ತಾರೆ ಕರುಣಾನಿಧಿ. ಆಗಲೇ ಎಂಜಿಆರ್‌ ಡಿಎಂಕೆ ಪಕ್ಷದಿಂದ ಹೊರಬಂದು ಎಐಡಿಎಂಕೆ ಕಟ್ಟುತ್ತಾರೆ. ಅದಕ್ಕೆ ಜಯಲಲಿತಾ ಕೂಡ ಕೈ ಜೋಡಿಸ್ತಾರೆ.

ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷಗಳು ತಮಿಳುನಾಡಿನ ಬಹಳ ಗಟ್ಟಿಯಾದ ಪ್ರಾದೇಶಿಕ ಪಕ್ಷಗಳಾಗಿ ಹೊರಹೊಮ್ಮಿ ನಾನಾ-ನೀನಾ ಫೈಟ್‌‌‌ನಂತೆ ರಾಜ್ಯಭಾರ ಮಾಡ್ತಾ ಬರ್ತಿವೆ. ಅದರಲ್ಲೂ ಜಯಲಲಿತಾ ನಿಧನಾ ನಂತರ ಎಐಡಿಎಂಕೆ ಕಂಪ್ಲೀಟ್ ಆಗಿ ದುರ್ಬಲಗೊಂಡಿದ್ದು, ಬಿಜೆಪಿ ಜೊತೆ ಕೈ ಜೋಡಿಸಿತು. ಇತ್ತ ಸ್ಟಾಲಿನ್ ಡಿಎಂಕೆ ಪಕ್ಷದಿಂದ ಗೆದ್ದು, ಸಿಎಂ ಆಗುವ ಮೂಲಕ ತಮ್ಮ ಕೋಟೆ ಕೊತ್ತಲುಗಳನ್ನ ಮತ್ತಷ್ಟು ವಿಸ್ತರಿಸಿಕೊಂಡಿದ್ದರು. ಅವರ ಆಟ ಇಲ್ಲಿಯ ತನಕ ನಡೆಯಿತಷ್ಟೇ. ಆದ್ರೀಗ ಅಂತಹ ದೈತ್ಯ ಪ್ರತಿಭೆ ಸ್ಟಾಲಿನ್‌ಗೇ ಮಾಸ್ಟರ್‌ಸ್ಟ್ರೋಕ್ ನೀಡಿದ್ದಾರೆ ದಳಪತಿ ವಿಜಯ್.

ಹೌದು.. ಟಿವಿಕೆ ಪಕ್ಷ ಕಟ್ಟಿ, ಅದನ್ನ ಬಹುಬೇಗ ಅಧಿಕಾರಕ್ಕೆ ತರುವಲ್ಲಿ ದಳಪತಿ ವಿಜಯ್ ಯಶಸ್ವಿ ಆದರು. ಆ ಮೂಲಕ ಇಲ್ಲಿಯ ತನಕ ಇದ್ದಂತಹ ತಮಿಳುನಾಡು ರಾಜ್ಯ ರಾಜಕಾರಣದ ಇತಿಹಾಸದ ಪುಟಗಳನ್ನ ಮತ್ತೆ ತಿರುಗಿಸಿ ಹೊಸ ಇತಿಹಾಸ ಬರೆದಿದ್ದಾರೆ ಜೋಸೆಫ್ ವಿಜಯ್ ಚಂದ್ರಶೇಖರ್. ಸ್ಟಾಲಿನ್‌ಗಿಂತ ಅರ್ಧಕ್ಕರ್ಧದಷ್ಟು ಹೆಚ್ಚುವರಿ ಸೀಟ್‌‌ಗಳನ್ನ ಗೆದ್ದು, ತಾನು ಸಿನಿಮಾದಲ್ಲಷ್ಟೇ ಅಲ್ಲ, ಪಾಲಿಟಿಕ್ಸ್‌‌ನಲ್ಲೂ ಹೀರೋನೇ ಅನ್ನೋದನ್ನ ತೋರಿಸಿದ್ದಾರೆ ದಳಪತಿ.

ಸರ್ಕಾರ್.. 2018ರಲ್ಲಿ ತೆರೆಕಂಡ ತಮಿಳಿನ ಈ ಸಿನಿಮಾ ದಳಪತಿ ವಿಜಯ್ ಕರಿಯರ್‌‌ನ ಗೇಮ್ ಚೇಂಜರ್ ಸಿನಿಮಾ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಎ ಆರ್ ಮುರುಗದಾಸ್ ನಿರ್ದೇಶನದ ಈ ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮತದಾರನ ವೋಟ್‌‌ಗಿರೋ ಪವರ್ ಎಂಥದ್ದು ಅನ್ನೋದನ್ನ ಸಮಾಜಕ್ಕೆ ತಿಳಿಸುವ ಪ್ರಯತ್ನ ನಡೆದಿತ್ತು. ಎಲ್ಲೋ ವಿದೇಶದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಂತಹ ಹೀರೋ, ಎಲೆಕ್ಷನ್ ಬಂದಾಗ ಮತ ಚಲಾಯಿಸಿ ಹೋಗೋಕೆ ಅಂತ ತಮಿಳುನಾಡಿನ ತಮ್ಮ ಮನೆಗೆ ಬರ್ತಾನೆ. ಆಗ ಯಾರೋ ಕಳ್ಳ ವೋಟ್ ಹಾಕೋ ಮೂಲಕ ತನಗೆ ವೋಟ್ ಹಾಕುವ ಹಕ್ಕೇ ಇಲ್ಲದಂತೆ ಮಾಡ್ತಾರೆ. ಅದನ್ನ ಪ್ರಶ್ನಿಸಿ ಎಲೆಕ್ಷನ್ ಕಮಿಷನ್ ವಿರುದ್ಧ ಕೋರ್ಟ್‌ಗೆ ಹೋಗುವ ಹೀರೋ, ಸಿಎಂ ಪ್ರಮಾಣ ವಚನ ಕ್ಯಾನ್ಸಲ್ ಆಗಿ, ಮತ್ತೆ ಮರು ಚುನಾವಣೆ ನಡೆಯುವಂತಾಗುತ್ತೆ.

ಇಡೀ ಸಿನಿಮಾ ರಾಜಕೀಯ ವ್ಯವಸ್ಥೆ, ನಮ್ಮ ಸಮಾಜ, ಜನರ ಪರಿಸ್ಥಿತಿ ಹಾಗೂ ಮನಸ್ಥಿತಿಗಳ ಮೇಲೆ ಕೆಂದ್ರೀಕೃತವಾಗಿದ್ದು, ಟೆಕ್ನಾಲಜಿ ಹಾಗೂ ಯೂತ್ಚ್ ಪವರ್‌‌ನಿಂದ ರಾಜ್ಯ ರಾಜಕಾರಣದ ದಿಕ್ಕು, ದೆಸೆ ಹೇಗೆಲ್ಲಾ ಬದಲಿಸಬಹುದು ಅನ್ನೋದನ್ನ ತೋರಿಸಲಾಗಿದೆ. ಬಹುಶಃ ಸರ್ಕಾರ್ ಸಿನಿಮಾ ರೀಲ್ ಇರಬಹುದು. ಆದ್ರೆ ರಿಯಲ್ ಲೈಫ್‌‌ಗೆ ಅದನ್ನ ಬಹಳಷ್ಟು ಮಂದಿ ಅಳವಡಿಸಿಕೊಂಡರು.

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ದೇಶ, ವಿದೇಶಗಳಿಂದ ಸಾವಿರಾರು ಕಿಲೋಮೀಟರ್ ಗಟ್ಟಲೆ ಪ್ರಯಾಣ ಮಾಡಿ ಬಂದಿದ್ರು ಮತದಾರರು. ಅದನ್ನ ವಿಡಿಯೋಗಳ ಮೂಲಕ ವಿಜಯ್‌ಗಾಗಿಯೇ ನಾವು ವೋಟ್ ಮಾಡೋಕೆ ಅಷ್ಟು ದೂರದಿಂದ ಬಂದೆವು ಅಂತ ಓಪನ್ ಆಗಿಯೇ ಹೇಳಿಕೊಂಡಿದ್ದರು. ಅದೇ ಕಾರಣದಿಂದ ತಮಿಳುನಾಡು ವಿಧಾನ ಸಭಾ ಚುನಾವಣೆಯ ಇತಿಹಾಸದಲ್ಲಿ ಇಲ್ಲಿಯತನಕ ಆಗದೇ ಇರೋ ಅಷ್ಟು ಶೇಕಡಾವಾರು ವೋಟಿಂಗ್ ಆಗಿತ್ತು. ಎಲೆಕ್ಷನ್ ಕಮಿಷನ್ ಹೇಳಿದಂತೆ ಬರೋಬ್ಬರಿ 84% ವೋಟಿಂಗ್ ಈ ಬಾರಿ ಆಗಿರೋದು ಇತಿಹಾಸವೇ ಸರಿ.

ಎಲೆಕ್ಷನ್ ಕ್ಯಾಂಪೇನ್ ವೇಳೆ ಕರೂರು ಕಾಲ್ತುಳಿತ ಪ್ರಕರಣ, ಜನನಾಯಗನ್ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಎದುರಾಗಿ ರಿಲೀಸ್ ಆಗದೇ ಇದ್ದಿದ್ದು, ಪತ್ನಿ ಸಂಗೀತಾ ಡಿವೋರ್ಸ್ ನೀಡಲು ಮುಂದಾಗಿದ್ದು, ನಟಿ ತ್ರಿಶಾ ಜೊತೆಗಿನ ಅಕ್ರಮ ಸಂಬಂಧದ ಆರೋಪ.. ಓ ಮೈ ಗಾಡ್ ದಳಪತಿ ವಿಜಯ್‌ಗೆ ಎದುರಾದ ವಿಘ್ನಗಳು ಒಂದಾ ಎರಡಾ..? ಹೀಗೆ ಹೇಳ್ತಾ ಹೋದ್ರೆ ಸಾಕಷ್ಟಿವೆ. ಆದ್ರೆ ಅವೆಲ್ಲವನ್ನ ಎದೆಗುಂದದೆ, ಧೈರ್ಯವಾಗಿ ಎದುರಿಸಿ, ಗಟ್ಟಿಯಾಗಿ ನೆಲೆ ನಿಂತರು ದಳಪತಿ ವಿಜಯ್.

ಚುನಾವಣಾ ಕ್ಯಾಂಪೇನ್ ವೇದಿಕೆಗಳಲ್ಲಿ ಖುದ್ದು ವಿಜಯ್ ಹೇಳಿದಂತೆ.. ವಿಜಯ್‌‌ನ ಯಾಕಾದ್ರೂ ಕೆಣಕಿದ್ವಿ ಅಂತ ಮುಟ್ಟಿ ನೋಡಿಕೊಳ್ಳಬೇಕು. ಅಂಥದ್ದೊಂದು ದಿನ, ಕ್ಷಣ ಬರುತ್ತೆ ಅಂದಿದ್ರು. ಅದೀಗ ನಿಜವಾಗಿದೆ. ಅಷ್ಟೇ ಅಲ್ಲ, ಸಿಂಗಲ್ ಲಯನ್ ಡೈಲಾಗ್ ಕೂಡ ಹೊಡೆದಿದ್ರು ದಳಪತಿ. ಅದು ಬರೀ ಡೈಲಾಗ್ ಆಗಿ ಮಾತ್ರ ಉಳಿದಿಲ್ಲ. ಹಿ ಈಸ್ ಹಂಡ್ರೆಡ್ ಪರ್ಸೆಂಟ್ ಲಯನ್ ರೀತಿ ಕಿಂಗ್ ಆಫ್ ತಮಿಳುನಾಡು ಪಾಲಿಟಿಕ್ಸ್ ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ.

ಅಂದಹಾಗೆ ವಿಜಯ್ ರಾಜಕೀಯ ಕರಿಯರ್‌ಗೆ ಬ್ರೇಕ್ ಹಾಕಲು ಸ್ಟಾಲಿನ್ ಮಾಡಿದ ಕಸರತ್ತುಗಳು ಅಷ್ಟಿಷ್ಟಲ್ಲ. ಆದ್ರೆ ಅದ್ಯಾವುದಕ್ಕೂ ಕುಗ್ಗದೆ, ತಾನು ಏನು..? ತನ್ನ ಖದರ್ ಏನು ಅನ್ನೋದನ್ನ ಮನೋಬಲ ಹಾಗೂ ಅಭಿಮಾನಿ ಬಳಗದಿಂದಲೇ ಗೆದ್ದು ತೋರಿಸಿದ್ದಾರೆ ವಿಜಯ್. ಹೆಸರಿಗೆ ತಕ್ಕನಾಗಿ ಈತ ಸಕ್ಸಸ್‌‌ಗೆ ಕೇರ್ ಆಫ್ ಅಡ್ರೆಸ್. ಕೇವಲ 69 ಸಿನಿಮಾಗಳನ್ನ ಮಾಡಿರೋ ವಿಜಯ್ ದ್ರಾವಿಡ ನೆಲದ ಗೇಮ್ ಚೇಂಜರ್ ಆಗಿ, ಎಂಜಿಆರ್, ಜಯಲಲಿತಾ ಹಾದಿಯಲ್ಲಿ ಜರ್ನಿ ಶುಭಾರಂಭ ಮಾಡಿರೋದು ಹೊಸ ಅಧ್ಯಾಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್   

Exit mobile version