‘ಜನನಾಯಗನ್’ಗೆ ಗ್ರೀನ್ ಸಿಗ್ನಲ್..ವಿಜಯ್ ಲಾಸ್ಟ್ ಸಿನಿಮಾ

ಜುಲೈ 23ಕ್ಕೆ ದಳಪತಿ ಧಮಾಕಾ.. ಸೆನ್ಸಾರ್ ಅಡೆತಡೆ ಕ್ಲಿಯರ್..!

ಅಪಾಯ (17)

ದಶಕಗಳ ಕಾಲ ಬೆಳ್ಳಿತೆರೆಯನ್ನು ಆಳಿದ ದಳಪತಿ, ಇಂದು ತಮಿಳುನಾಡಿನ ಸಿಎಂ ಸಿಂಹಾಸನದ ಅಧಿಪತಿ. ವಿಜಯ್ ಅವರ ಕೊನೆಯ ಚಿತ್ರ ‘ಜನನಾಯಗನ್’ ಬಿಡುಗಡೆಗೆ ಸಕಲ ಅಡೆತಡೆಗಳು ಮರೆಯಾಗಿವೆ. ಬಾಕ್ಸಾಫೀಸ್ ಚರಿತ್ರೆ ತಿರುಚಲು ಜನನಾಯಗನ್ ಸಜ್ಜಾಗಿದ್ದು ಯಾವಾಗ ರಿಲೀಸ್ ಆಗ್ತಿದೆ ಇದರ ಅಸಲಿ ಆಟ ಏನು? ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ…

ಇಡೀ ಜಗತ್ತಿನ ದಳಪತಿ ಫ್ಯಾನ್ಸ್ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಆ ಘಳಿಗೆ ಬಂದೇಬಿಟ್ಟಿದೆ. ಸೆನ್ಸಾರ್ ಕತ್ತರಿ, ಲೀಗಲ್ ಜಟಾಪಟಿ, ಇವೆಲ್ಲವನ್ನೂ ಸೈಡಿಗೆ ಸರಿಸಿ ‘ಜನನಾಯಗನ್’ ಸಿನಿಮಾ ಈಗ ಅಗ್ನಿಶುದ್ಧಿಯಾಗಿ ಹೊರಬಂದಿದೆ. ಕೆವಿಎನ್ ಪ್ರೊಡಕ್ಷನ್ಸ್ ಅಖಾಡಕ್ಕೆ ಇಳಿದು ಎಲ್ಲಾ ಅಡೆತಡೆಗಳನ್ನ ಕ್ಲಿಯರ್ ಮಾಡಿದೆ. ಜುಲೈ 23ರಂದು ವಿಜಯ್ ಅವರ ಈ ಐಕಾನಿಕ್ ಸಿನಿಮಾ ಭರ್ಜರಿ ಎಂಟ್ರಿ ಕೊಡ್ತಿದೆ. ವಿಜಯ್ ಅಬ್ಬರದ ಮುಂದೆ ಬಾಕ್ಸಾಫೀಸ್‌ನ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗೋದು ಗ್ಯಾರಂಟಿ.

ಇದು ಕೇವಲ ಸಿನಿಮಾ ಅಲ್ಲ, ಇದು ನಮ್ಮ ಸಿಎಂ ವಿಜಯ್ ಅವರ ರಿಯಲ್ ಲೈಫ್ ಸಿದ್ಧಾಂತ. ಎಸ್, ರಾಜಕೀಯದ ಅಖಾಡಕ್ಕೆ ಇಳಿದು, ಅಪ್ರತಿಮ ಜನಬೆಂಬಲದೊಂದಿಗೆ ತಮಿಳುನಾಡಿನ ಮುಖ್ಯಮಂತ್ರಿ ಪಟ್ಟವೇರಿದ ವಿಜಯ್ ಅವರ ಪಾಲಿಗೆ ಇದು ಅಂತಿಮ ಚಿತ್ರ. ತೆರೆಯ ಮೇಲೆ ಥಳಪತಿ ವೆಟ್ರಿ ಕೊಂಡನ್ ಆಗಿ ಆರ್ಭಟಿಸುವ ವಿಜಯ್, ಭ್ರಷ್ಟ ವ್ಯವಸ್ಥೆಯನ್ನ ಬುಡಮೇಲು ಮಾಡೋ ದೃಶ್ಯಗಳು ಫ್ಯಾನ್ಸ್‌ಗೆ ಸಖತ್ ಕಿಕ್ ಕೊಡಲಿದೆ. ಸಿನಿಮಾದ ಪಾತ್ರ ಮತ್ತು ವಿಜಯ್ ಅವರ ರಿಯಲ್ ಲೈಫ್ ಈಗ ಒಂದೇ ಹಳಿ ಮೇಲೆ ಸಾಗುತ್ತಿದ್ದು, ಪ್ರೇಕ್ಷಕರಿಗೆ ಇದು ಪಕ್ಕಾ ಪೈಸಾ ವಸೂಲ್ ಅನುಭವ.

ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಸಿನಿಮಾದಲ್ಲಿ ಮಾಡಿದ ಸರ್ಪ್ರೈಸ್ ಬದಲಾವಣೆ ಈಗ ಸಖತ್ ವೈರಲ್ ಆಗ್ತಿದೆ. ಮೂಲ ಸ್ಕ್ರಿಪ್ಟ್‌ನಲ್ಲಿ ಇರದ, ಬರೋಬ್ಬರಿ 40 ಸೆಕೆಂಡ್‌ಗಳ ಆ ಹೊಸ ಸೀನ್ ಇಡೀ ಸಿನಿಮಾದ ಕಥೆಯನ್ನೇ ಬದಲಿಸಲಿದೆಯಂತೆ. ಸಿಎಂ ಆದ ಬಳಿಕದ ಜವಾಬ್ದಾರಿ, ಆಕ್ರೋಶ ಮತ್ತು ಸಮಾಜದ ಬಗ್ಗೆ ಅವರ ವಿಷನ್ ಅನ್ನು ಆ 40 ಸೆಕೆಂಡುಗಳಲ್ಲಿ ಪವರ್‌ಫುಲ್ ಆಗಿ ತೋರಿಸಿದ್ದಾರಂತೆ. ಇಡೀ ಸಿನಿಮಾದ ಹಾರ್ಟ್ ಅಂಡ್ ಸೋಲ್ ಅದೇ ಸೀನ್ ಅಂದ್ರೆ ತಪ್ಪಾಗಲ್ಲ.

ಆಗಸ್ಟ್‌ನಲ್ಲಿ ಬರಲಿರುವ ‘ಟಾಕ್ಸಿಕ್’ ಮತ್ತು ಈಗ ರಿಲೀಸ್ ಆಗುತ್ತಿರುವ ‘ಜನನಾಯಗನ್’ ನಡುವೆ ಒಂದು ತಿಂಗಳ ಗ್ಯಾಪ್ ಇಟ್ಟು, ಪ್ರೇಕ್ಷಕರನ್ನು ಕ್ರೇಜ್‌ನ ಅಲೆಗಳಲ್ಲಿ ತೇಲಿಸ್ತಿದ್ದಾರೆ ಕೆವಿಎನ್ ಸಂಸ್ಥೆ. ತಮಿಳುನಾಡು ಇರಲಿ, ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ದಳಪತಿ ಹವಾ ಜೋರಾಗಿದೆ. ಪೈರಸಿ ಅಲೆಗಳನ್ನು ಲೆಕ್ಕಿಸದೆ, ಬೆಳ್ಳಿತೆರೆಯ ಮೇಲೆ ತಮ್ಮ ನೆಚ್ಚಿನ ನಟನನ್ನ ನೋಡೋಕೆ ಫ್ಯಾನ್ಸ್ ದಂಡೇ ಥಿಯೇಟರ್ ಕಡೆ ಮುಖ ಮಾಡಿದೆ.

ಇನ್ನು ಕೆಲವೇ ದಿನಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಲಿದ್ದು,ಬಾಕ್ಸಾಫೀಸ್‌ನಲ್ಲಿ ಯಾವುದೇ ದೊಡ್ಡ ಚಿತ್ರಗಳು ವಿಜಯ್‌ಗೆ ಸದ್ಯ ಎದುರಿಲ್ಲದ ಕಾರಣ, ‘ಜನನಾಯಗನ್’ ಸುನಾಮಿಯಂತೆ ಹರಿದು ಬರುವುದು ಖಚಿತ. ಸಿಎಂ ವಿಜಯ್ ಅವರ ಈ ಫೈನಲ್ ಕಮ್‌ಬ್ಯಾಕ್ ಬಾಕ್ಸಾಫೀಸ್ ರೆಕಾರ್ಡ್‌ಗಳನ್ನು ಧೂಳಿಪಟ ಮಾಡಲಿದೆಯಾ? ಕಾದು ನೋಡೋಣ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version