ಇರಲಾರದೆ ಇರುವೆ ಬಿಟ್ಕೊಂಡ ಸೋನು ನಿಗಮ್ ಇನ್ಮೇಲೆ ಕನ್ನಡ ಸಾಂಗ್ ಹಾಡೋದಲ್ಲ, ಕರುನಾಡಿಗೆ ಕಾಲಿಡೋಕೆ ಸಹ ಹತ್ತು ಸಲ ಯೋಚಿಸಬೇಕು. ಅಷ್ಟರ ಮಟ್ಟಿಗೆ ಕಿಡಿ ಕಾರುತ್ತಿದ್ದಾರೆ ನಮ್ಮ ಕರುನಾಡಿನ ಜನ. ನಾವು ಕನ್ನಡಿಗರು ವಿಶಾಲ ಹೃದಯದವರು ಅನ್ನೋದನ್ನ ಅರಿತು, ಅದನ್ನ ದುರುಪಯೋಗ ಪಡಿಸಿಕೊಂಡ್ರೆ ಏನಾಗುತ್ತೆ ಅನ್ನೋದನ್ನ ಅರ್ಥೈಸ್ತಿದ್ದಾರೆ ಕನ್ನಡಿಗರು.
900ಕ್ಕೂ ಅಧಿಕ ಕನ್ನಡ ಸಾಂಗ್ಸ್ ಹಾಡಿರೋ ಗಾಯಕ ಸೋನು ನಿಗಮ್, ಇದೀಗ ಅನ್ನ ಕೊಟ್ಟ ಮನೆಗೇ ಕನ್ನ ಹಾಕುವ ಕಾರ್ಯ ಮಾಡಿದ್ದಾರೆ. ಹೌದು.. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ತಾಳ್ಮೆ ಕಳೆದುಕೊಂಡು ಹುಚ್ಚುನಾಯಿ ಕಡಿದವನಂತೆ ಆಡಿದ್ರು. ಅದರಲ್ಲೂ ಹೀಗೆ ಆಡೋದಿಕ್ಕೇನೇ ಪಹಲ್ಗಾಮ್ನಲ್ಲಿ ಹಾಗೆ ಆಗಿದ್ದು ಅಂದಿದ್ರು. ಅದರ ಅರ್ಥ ಏನು ಅನ್ನೋದನ್ನ ಆ ಮಹಾನುಭಾವನೇ ಬಂದು ಸ್ಪಷ್ಟನೆ ಕೊಡಬೇಕಿದೆ.
ಹಾಗಂತ ಈಗ ಕರುನಾಡಿಗೆ ಕಾಲಿಡೋಕೆ ಸೋನು ನಿಗಮ್ಗೆ ಡಬಲ್ ಗುಂಡಿಗೆ ಬೇಕು. ಯಾಕಂದ್ರೆ ಆತನ ಆ ಒಂದು ಹೇಳಿಕೆಗೆ ಇಡೀ ಕರುನಾಡು ಕೊತ ಕೊತ ಕುದಿಯುತ್ತಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರೋ ಆತನನ್ನ ಕ್ಷಮಿಸೋ ಪ್ರಮೇಯವೇ ಇಲ್ಲ ಅಂತಿದ್ದಾರೆ ಕನ್ನಡಿಗರು. ಅದರಲ್ಲೂ ಕನ್ನಡಪರ ಹೋರಾಟಗಾರರು ಸೋನು ನಿಗಮ್ ಮೇಲೆ ಕೆಂಡ ಕಾರುತ್ತಿದ್ದಾರೆ.
ನಿನ್ನೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ ವಿಚಾರ ಕಂಪ್ಲೆಂಟ್ ಕೂಡ ದಾಖಲಾಗಿದೆ. ಎಫ್ಐಆರ್ ಕೂಡ ಆಗ್ತಿದ್ದು, ವಿಚಾರಣೆಗೆ ಸೋನು ನಿಗಮ್ ಹಾಜರಾಗಬೇಕಿದೆ. ಇನ್ನು ಕನ್ನಡ ಪರ ಹೋರಾಟಗಾರರು ಅದನ್ನ ಅಷ್ಟಕ್ಕೇ ನಿಲ್ಲಿಸಿಲ್ಲ. ಫಿಲ್ಮ್ ಚೇಂಬರ್ಗೆ ತೆರಳಿ, ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರೊಟೆಸ್ಟ್ ಕೂಡ ಮಾಡಿದ್ದಾರೆ. ಸೋನುಗೆ ಧಿಕ್ಕಾರ ಕೂಗುವುದರ ಜೊತೆಗೆ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣ ಗೌಡ, ರೂಪೇಶ್ ರಾಜಣ್ಣ, ಅರುಣ್ ಜಾವಗಲ್ ಸೇರಿದಂತೆ ನೂರಾರು ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿರೋ ಸೋನು ನಿಗಮ್, ಕೂಡಲೇ ಕ್ಷಮೆ ಯಾಚಿಸಬೇಕು ಅಂತ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಇನ್ಮೇಲೆ ಆತ ಯಾವುದೇ ಕಾರಣಕ್ಕೂ ಕನ್ನಡ ಚಿತ್ರರಂಗದಲ್ಲಿ ಹಾಡುಗಳನ್ನ ಹಾಡುವಂತಿಲ್ಲ. ಹಾಡಿದ್ರೆ ಅದಕ್ಕೆ ಫಿಲ್ಮ್ ಚೇಂಬರ್ ಹೊಣೆಯಾಗಲಿದೆ ಎಂದಿದ್ದಾರೆ.
ಅಷ್ಟೇ ಅಲ್ಲ, ಅರ್ಜುನ್ ಜನ್ಯ, ಅಜನೀಶ್ ಲೋಕನಾಥ್, ಹರಿಕೃಷ್ಣ ಸೇರಿದಂತೆ ಯಾರೆಲ್ಲಾ ಸೋನು ನಿಗಮ್ನ ಕರೆಸಿ ಹಾಡಿಸ್ತಿದ್ದರೂ ಅವರಿಗೆಲ್ಲಾ ಸೋನು ನಿಗಮ್ಗೆ ಕೆಲಸ ಕೊಡದಿರಲು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಕೂಡ ಬಾಯ್ಕಾಟ್ ಸೋನು ನಿಗಮ್ ಅಭಿಯಾನಕ್ಕೆ ಕನ್ನಡಿಗರು ಹಾಗೂ ಕನ್ನಡಪರ ಹೋರಾಟಗಾರರ ಜೊತೆ ಕೈ ಜೋಡಿಸ್ತಿದ್ದಾರೆ. ಶಿವರಾಜ್ ಕೆ ಆರ್ ಪೇಟೆ ಮಾರ್ಮಿಕವಾಗಿ ಸೋನು ನಿಗಮ್ರ ನಡೆಯನ್ನ ಪೋಸ್ಟ್ ಮೂಲಕ ಖಂಡಿಸಿದ್ದಾರೆ. ಅವಿವೇಕಿ, ದುರಹಂಕಾರಿ, ಸಾಂಸ್ಕೃತಿಕ ಭಯೋತ್ಪಾದಕನಾಗಿರೋ ಸೋನು ನಿಗಮ್ ಎಲ್ಲೆಡೆಯಿಂದ ನಟ್ಟು ಬೋಲ್ಟು ಫುಲ್ ಟೈಟ್ ಮಾಡುವ ಕಾರ್ಯ ನಡೀತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್