• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 14, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಾ ಕಲಿತ ಮೊದಲ ಭಾಷೆ ತಮಿಳು..ರಶ್ಮಿಕಾ ಮತ್ತೆ ಎಡವಟ್

ಎಲ್ಲಾ ಓಕೆ..ಕನ್ನಡ ಕಲಿಯಲ್ಲ ಏಕೆ ಡಿಯರ್ ರಶ್ಮಿಕಾ ಮೇಡಂ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 11, 2025 - 7:19 pm
in ಸಿನಿಮಾ
0 0
0
Web 2025 06 11t191630.844

ಅದ್ಯಾಕೋ ಈ ಭಾಷೆ, ಕನ್ನಡಾಭಿಮಾನ ವಿಷಯದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಎಡವಟ್ ಮೇಲೆ ಎಡವಟ್ ಮಾಡ್ಕೋತಾನೇ ಇದ್ದಾರೆ. ವೇದಿಕೆಗಳಲ್ಲಿ ಕನ್ನಡ ಮಾತಾಡೋಕೆ ಮೀನಾಮೇಷ ಎಣಿಸೋ ಈಕೆ, ಕನ್ನಡದ ಹೊರತಾಗಿ ಎಲ್ಲಾ ಭಾಷೆಗಳನ್ನ ನೀರು ಕುಡಿದಷ್ಟೇ ಸರಾಗವಾಗಿ, ಸುಲಲಿತವಾಗಿ ಮಾತಾಡ್ತಾರೆ. ಅದ್ರಲ್ಲೂ ನಾನು ಕಲಿತ ಮೊದಲ ಭಾಷೆ ತಮಿಳು ಅಂತ ಹೇಳಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ. ಖಾನ್, ಕಪೂರ್‌ಗಳಿಂದ ಹಿಡಿದು, ಟಾಲಿವುಡ್, ಕಾಲಿವುಡ್ ಸೌತ್ ಮೂವಿಗಳವರೆಗೆ ಈಕೆಗೆ ಎಲ್ಲಿಲ್ಲದ ಬೇಡಿಕೆ. ಯಾಕಂದ್ರೆ ಈಕೆ ಸಿನಿಮಾದಲ್ಲಿ ಇದ್ರೆ ಸಾಕು ಆ ಚಿತ್ರ ಬ್ಲಾಕ್ ಬಸ್ಟರ್ ಹಿಟ್. ಸದ್ಯ ಕುಬೇರ ಚಿತ್ರದ ಪ್ರಮೋಷನ್ಸ್‌‌ನಲ್ಲಿ ಬ್ಯುಸಿ ಇರೋ ನ್ಯಾಷನಲ್ ಕ್ರಶ್, ಅದ್ಯಾಕೋ ಮತ್ತೊಮ್ಮೆ ಕನ್ನಡ ವಿಚಾರದಲ್ಲಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

RelatedPosts

ಒಟಿಟಿ ವೀಕ್ಷಕರಿಗೆ ಹಬ್ಬ: ಈ ವಾರ ಬಂದಿವೆ ಹೊಸ ಸಿನಿಮಾ

ಕಮಲ್ ಹಾಸನ್‌ಗೆ ಬಿಗ್‌‌‌‌ ಶಾಕ್ ಕೊಡ್ತಾ ನೆಟ್‌ಪ್ಲಿಕ್ಸ್?

ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಬೇಬಿ ಬಂಪ್ ಲುಕ್ ವೈರಲ್!

ಬೆಂಗಳೂರಲ್ಲಿರೋ ಶಿವನ ಮೊರೆ ಹೋಗಿದ್ಯಾಕೆ ಕಂಗನಾ?

ADVERTISEMENT
ADVERTISEMENT

Rashmika solo (18)

ನಾನು ಕಲಿತ ಮೊದಲ ಭಾಷೆ ತಮಿಳು ಅಂತ ಸ್ಟೇಟ್ಮೆಂಟ್ ಕೊಡೋ ಮೂಲಕ ಮತ್ತೊಮ್ಮೆ ಕನ್ನಡಿಗರ ಭಾವನೆಗಳನ್ನ ಕೆಣಕಿದ್ದಾರೆ. ಕನ್ನಡದ ಕೂರ್ಗ್ ಬ್ಯೂಟಿ ಕಿರಿಕ್ ಪಾರ್ಟಿ ಅನ್ನೋ ಇಲ್ಲಿನ ಕನ್ನಡ ಸಿನಿಮಾದಿಂದಲೇ ಬೆಳಕಿಗೆ ಬಂದರಾದ್ರೂ, ಸದ್ಯ ಭಾರತೀಯ ಚಿತ್ರರಂಗವನ್ನು ಆಳುತ್ತಿದ್ದಾರೆ. ಸಲ್ಮಾನ್ ಖಾನ್, ಅಮಿತಾಬ್, ರಣ್‌ಬೀರ್ ಕಪೂರ್, ಮಹೇಶ್ ಬಾಬು, ವಿಕ್ಕಿ ಕೌಶಲ್ ಅಂತಹ ಸೂಪರ್ ಸ್ಟಾರ್ಸ್‌ ಜೊತೆ ಮಿಂಚು ಹರಿಸುತ್ತಿದ್ದಾರೆ.

Rashmika solo (10)

ಸದ್ಯ ಕುಬೇರ ಸಿನಿಮಾದಲ್ಲಿ ಧನುಷ್ ಹಾಗೂ ನಾಗಾರ್ಜುನ ಜೊತೆ ತೆರೆಹಂಚಿಕೊಂಡಿರೋ ರಶ್ಮಿಕಾ, ಆ ಚಿತ್ರದ ಪ್ರಮೋಷನ್ಸ್ ವೇಳೆ ಪೋಸ್ಟ್ ಮೂಲಕ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ನಾನು ನನ್ನ ಬಾಲ್ಯ ಕಳೆದಿದ್ದು ಚೆನ್ನೈನಲ್ಲೇ. ಹಾಗಾಗಿ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ ಎಂದಿದ್ದಾರೆ. ಈ ಹಿಂದೆಯೂ ಕೂಡ ಒಮ್ಮೆ ನಾನು ಚೆನ್ನೈನಲ್ಲೇ ಬಾಲ್ಯ ಕಳೆದಿದ್ದೇನೆ. ಅಪ್ಪ ಆಗ ಅಲ್ಲಿಯೇ ಕೆಲಸ ಮಾಡ್ತಿದ್ರು. ನಾನು ರಸ್ಕಿನ್ ಅನ್ನೋ ಶಾಲೆಯಲ್ಲಿ ಓದುತ್ತಿದ್ದೆ. ಆನಂತ್ರ ನಾವು ಕೂರ್ಗ್‌ಗೆ ಶಿಫ್ಟ್ ಆದ್ವಿ ಅಂತ ಹೇಳಿದ್ದರು.

Rashmika solo (24)

ಅಂದಹಾಗೆ ಇತ್ತೀಚೆಗೆ ಒಮ್ಮೆ ಮುಂಬೈನಲ್ಲಿ ಛಾವಾ ಸಿನಿಮಾದ ಪ್ರಚಾರದ ವೇಳೆ ನಾನು ಬೇಸಿಕಲಿ ಹೈದ್ರಾಬಾದ್ ಮೂಲದವಳು ಎಂದಿದ್ದ ರಶ್ಮಿಕಾ ಮೇಲೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ರು. ಅಲ್ಲದೆ, ಕನ್ನಡ ಮಾತಾಡೋಕೆ ಹಿಂದು ಮುಂದು ನೋಡುವ ಈಕೆ ತಮಿಳು, ತೆಲುಗು ಹಾಗೂ ಹಿಂದಿಯನ್ನ ನಿರರ್ಗಳವಾಗಿ ಮಾತನಾಡ್ತಾರೆ. ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಬ್ರೇಕಪ್ ಮಾಡಿಕೊಂಡ ರಶ್ಮಿಕಾ ಒಂಥರಾ ಕನ್ನಡ ವಿರೋಧಿ ಅಂತಲೇ ಲೇಬಲ್ ಆಗಿಬಿಟ್ಟಿದ್ದಾರೆ.

Rashmika solo (21)

ಅದರಲ್ಲೂ ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ನೀಡಿ ಸುಪ್ರೀಂ ಕೋರ್ಟ್‌ವರೆಗೂ ಹೋಗಿ ಛೀಮಾರಿ ಹಾಕಿಸಿಕೊಂಡ ಈ ಸಂದರ್ಭದಲ್ಲಿ ಈಕೆ ಇಂತಹ ಮಾತು ಆಡಬಾರದಿತ್ತು ಅನ್ನೋದು ಹಲವರ ಮಾತಾಗಿದೆ. ಎಷ್ಟೇ ಎತ್ತರಕ್ಕೆ ಬೆಳೆದರೂ, ಆಂಧ್ರ ಹುಡುಗನನ್ನೇ ಮದ್ವೆ ಆದ್ರೂ ಸಹ ಮಾತೃಭಾಷೆ, ತಾಯಿ ನೆಲವನ್ನು ಬಿಟ್ಟುಕೊಡಬಾರದು. ಎಲ್ಲವನ್ನೂ ಕಲಿಯೋ ಈಕೆಗೆ ಕನ್ನಡ ಅದ್ಯಾಕೆ ಕಷ್ಟವಾಗಿದೆಯೋ ಗೊತ್ತಿಲ್ಲ. ಆದ್ರೂ ಕೂಡ ಮುಂಬೈನಲ್ಲಿ ನಡೆದ ಕುಬೇರ ಇವೆಂಟ್‌‌ನಲ್ಲಿ ನಾಗಾರ್ಜುನ್ ಅವರಿಗೆ ಎಲ್ಲರಿಗೂ ನಮಸ್ಕಾರ ಅಂತ ಕನ್ನಡ ಪಾಠ ಹೇಳಿಕೊಟ್ಟು, ಆಗಿರೋ ಎಡವಟ್‌‌ನ ಸರಿಮಾಡಿಕೊಳ್ಳೋ ಕಾರ್ಯ ಮಾಡಿದ್ದಾರೆ.

Rashmika solo (7)

ಒಟ್ಟಾರೆ ಈಕೆ ಎಷ್ಟೇ ವಿವಾದಗಳನ್ನು ಮಾಡಿಕೊಂಡ್ರೂ, ಸಿನಿಮಾಗಳ ಸಕ್ಸಸ್ ರೇಟ್ ಮಾತ್ರ ಕಮ್ಮಿ ಆಗ್ತಿಲ್ಲ. ಆಕೆಯನ್ನ ಆಡಿಕೊಂಡಷ್ಟೂ ಎತ್ತರಕ್ಕೆ ಬೆಳೆಯುತ್ತಾ ಹೋಗ್ತಿದ್ದಾರೆ. ಸೋ ಕುಬೇರ ಸಿನಿಮಾ ಕೂಡ ಜೂನ್ 20ಕ್ಕೆ ಜನರಿಗೆ ಇಷ್ಟವಾಗಲಿದೆ ಅನ್ನೋದು ಸದ್ಯದ ಟಾಕ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web 2025 06 14t230613.761

ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಬಿಸಿಸಿಐ ಮಹತ್ವದ ನಿರ್ಧಾರ

by ಶ್ರೀದೇವಿ ಬಿ. ವೈ
June 14, 2025 - 11:07 pm
0

Web 2025 06 14t223538.304

ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಆರ್ಭಟ: 3,820 ನಿವಾಸಿಗಳ ಸ್ಥಳಾಂತರ!

by ಶ್ರೀದೇವಿ ಬಿ. ವೈ
June 14, 2025 - 10:43 pm
0

Web 2025 06 14t221842.751

ಧಾರಾಕಾರ ಮಳೆಗೆ ತತ್ತರಿಸಿದ ಮಂಗಳೂರು: ರಸ್ತೆ ಬಂದ್, ನಗರ ಜಲಾವೃತ!

by ಶ್ರೀದೇವಿ ಬಿ. ವೈ
June 14, 2025 - 10:20 pm
0

Web 2025 06 14t214644.535

IND vs NZ 2026: ಏಕದಿನ, ಟಿ20 ಸರಣಿ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ!

by ಶ್ರೀದೇವಿ ಬಿ. ವೈ
June 14, 2025 - 9:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 06 14t210219.301
    ಒಟಿಟಿ ವೀಕ್ಷಕರಿಗೆ ಹಬ್ಬ: ಈ ವಾರ ಬಂದಿವೆ ಹೊಸ ಸಿನಿಮಾ
    June 14, 2025 | 0
  • Web 2025 06 14t203634.581
    ಕಮಲ್ ಹಾಸನ್‌ಗೆ ಬಿಗ್‌‌‌‌ ಶಾಕ್ ಕೊಡ್ತಾ ನೆಟ್‌ಪ್ಲಿಕ್ಸ್?
    June 14, 2025 | 0
  • Web 2025 06 14t183926.723
    ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಬೇಬಿ ಬಂಪ್ ಲುಕ್ ವೈರಲ್!
    June 14, 2025 | 0
  • Web 2025 06 14t172920.738
    ಬೆಂಗಳೂರಲ್ಲಿರೋ ಶಿವನ ಮೊರೆ ಹೋಗಿದ್ಯಾಕೆ ಕಂಗನಾ?
    June 14, 2025 | 0
  • Web 2025 06 14t171526.625
    ತಪ್ಪೊಪ್ಪಿಕೊಂಡ ಮಡೆನೂರು ಮನುಗೆ ಧ್ರುವ ಸರ್ಜಾ ಮಾಡಿದ್ದೇನು..?
    June 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version