ಕೊತ್ತಲವಾಡಿ ಸಿನಿಮಾನ ನಿರ್ಮಾಣ ಮಾಡೋದ್ರ ಮೂಲಕ ಕನ್ನಡ ಚಿತ್ರರಂಗದ ಪಾಲಿಗೆ ಅನ್ನದಾತೆ ಆಗಿದ್ದ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಫಿಲ್ಮ್ ಡಿಸ್ಟ್ರಿಬ್ಯೂಷನ್ಗೂ ಕಾಲಿಟ್ಟಿರೋ ಪುಷ್ಪ ಅರುಣ್ ಕುಮಾರ್, ಇದಕ್ಕೆಲ್ಲಾ ಆಕೆಗಾದ ಆ ಅಪಮಾನವೇ ಕಾರಣ ಎಂದಿದ್ದಾರೆ. ಇಷ್ಟಕ್ಕೂ ಏನಾಗಿತ್ತು..? ಈ ಬಗ್ಗೆ ಗ್ಯಾರಂಟಿ ನ್ಯೂಸ್ ಜೊತೆ ರಾಕಿ ಮದರ್ ಹೇಳಿದ್ದೇನು ಅಂತೀರಾ..? ಜಸ್ಟ್ ವಾಚ್.
ಆಗಸ್ಟ್ 1ಕ್ಕೆ ಪ್ರೊಡ್ಯೂಸರ್.. ಸೆಪ್ಟೆಂಬರ್ 2ಕ್ಕೆ ಡಿಸ್ಟ್ರಿಬ್ಯೂಟರ್. ಒಂದೇ ತಿಂಗಳಲ್ಲಿ ಎರಡೆರಡು ಮಹತ್ವದ ಹೆಜ್ಜೆಗಳನ್ನ ಇಡುವ ಮೂಲಕ ಇಡೀ ಕನ್ನಡ ಚಿತ್ರರಂಗದ ಹುಬ್ಬೇರಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್. ಹೌದು.. ತಮ್ಮ ಪಿಎ ಪ್ರೊಡಕ್ಷನ್ಸ್ ಬ್ಯಾನರ್ನಡಿ ನಿರ್ಮಾಣಗೊಂಡ ಚೊಚ್ಚಲ ಚಿತ್ರ ಕೊತ್ತಲವಾಡಿ ಆಗಸ್ಟ್ 1ಕ್ಕೆ ರಿಲೀಸ್ ಮಾಡುವ ಮೂಲಕ ಪುಷ್ಪ ಅವರು ನಿರ್ಮಾಪಕಿ ಪಟ್ಟ ಪಡೆದಿದ್ರು. ಆದ್ರೆ ಆ ಚಿತ್ರದ ರಿಲೀಸ್ ವೇಳೆ ಕೆಆರ್ಜಿ ಕಾರ್ತಿಕ್ ಗೌಡ ಮಾಡಿದ ಥಿಯೇಟರ್ ಕಿತಾಪತಿಯಿಂದ ತನ್ನ ಸಿನಿಮಾ ಸೋಲು ಕಂಡಿತು ಅಂತ ಪುಷ್ಪ ಆರೋಪ ಮಾಡಿದ್ರು.

ಡಿಸ್ಟ್ರಿಬ್ಯೂಷನ್ ಫೀಲ್ಡ್ಗೆ ಯಶ್ ತಾಯಿ..ಆರದ ಆ ಕಿಚ್ಚು
‘ಕೊತ್ತಲವಾಡಿ’ಗೆ ಥಿಯೇಟರ್ ಸಮಸ್ಯೆ..ಪುಷ್ಪ ಫೈಯರ್
ತಮ್ಮ ಕೊತ್ತಲವಾಡಿ ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಥಿಯೇಟರ್ ಸಿಗದೆ ಮಾಡಿದ ಡಿಸ್ಟ್ರಿಬ್ಯೂಟರ್ ಮೇಲಿನ ಹಠಕ್ಕೆ ಇಂದು ಯಶ್ ತಾಯಿ ಪುಷ್ಪ ವಿತರಕರಾಗಿಯೂ ತಲೆ ಎತ್ತಿದ್ದಾರೆ. ಅದನ್ನ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಹಂಚಿಕೊಂಡಿದ್ದಾರೆ ರಾಕಿಂಗ್ ಸ್ಟಾರ್ ಮದರ್.

ನಮ್ಮ ಕನ್ನಡತಿ ಅನುಷ್ಕಾ ಶೆಟ್ಟಿ ಲೀಡ್ನಲ್ಲಿ ನಟಿಸಿರೋ ಘಾಟಿ ಚಿತ್ರವನ್ನು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡ್ತಿದ್ದಾರೆ ಪುಷ್ಪ. ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತಮ್ಮದೇ ಪಿಎ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಹಂಚಿಕೆ ಮಾಡ್ತಿದ್ದು, ಇದೇ ಸೆಪ್ಟೆಂಬರ್ 5ರಂದು ಗ್ರ್ಯಾಂಡ್ ರಿಲೀಸ್ ಆಗ್ತಿದೆ ಘಾಟಿ. ಅನಾರೋಗ್ಯದ ಕಾರಣ ಅನುಷ್ಕಾ ಅನುಪಸ್ಥಿತಿಯಲ್ಲಿ ಚಿತ್ರತಂಡದ ಜೊತೆ ಸುದ್ದಿಗೋಷ್ಠಿ ನಡೆಸಿದ ಪುಷ್ಪ, ಈ ಹೊಸ ಸಾಹಸದ ಬಗ್ಗೆ ಒಳ್ಳೆಯ ಭರವಸೆಯಲ್ಲಿದ್ದಾರೆ.
ಟ್ರೋಲ್ಸ್ & ನೆಗೆಟೀವ್ ಟಾಕ್ಸ್ಗೆ ಪುಷ್ಪ ಡೋಂಟ್ ಕೇರ್..!
100 ಥಿಯೇಟರ್ಗಳಲ್ಲಿ ಘಾಟಿ..ಕನ್ನಡತಿ ಅನುಷ್ಕಾಗೆ ಸಾಥ್

ಇದೇ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗುತ್ತಿರುವ ಹಾಗೂ ಜನ ನೆಗೆಟೀವ್ ಆಗಿ ಮಾತಾಡಿಕೊಳ್ತಿರೋ ಪುಷ್ಪ ಅವರ ಕುರಿತು ಸ್ವತಃ ಯಶ್ ತಾಯಿ ನಮ್ಮ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಮಾತನಾಡಿದ್ದಾರೆ. ಅವುಗಳಿಗೆಲ್ಲಾ ಡೋಂಟ್ ಕೇರ್ ಅನ್ನೋ ಮಾತನ್ನ ಹೇಳಿ, ಅದನ್ನೆಲ್ಲಾ ಪಾಸಿಟೀವ್ ಆಗಿ ತೆಗೆದುಕೊಂಡಿದ್ದಾರೆ ನಿರ್ಮಾಪಕಿ ಪುಷ್ಪ.

ಇದೆಲ್ಲಾ ಏನೇ ಇರಲಿ, ಸಿನಿಮಾಗಳ ನಿರ್ಮಾಣ, ವಿತರಣೆ ಸೇರಿದಂತೆ ಮಗನಂತೆ ತಾನು ಕೂಡ ಕಲಾಸೇವೆಯಲ್ಲಿ ತೊಡಗಿಕೊಳ್ತಿರೋ ರಾಕಿಭಾಯ್ ಮದರ್ ಪುಷ್ಪ ಅವರಿಗೆ ಸಲಾಂ ಹೇಳಲೇಬೇಕು. ಹೆಣ್ಣಾಗಿದ್ದುಕೊಂಡು, ಇಂತಹ ಮಹತ್ವದ ಕಾರ್ಯಗಳಿಗೆ ಕೈ ಹಾಕಿರೋದನ್ನ ಮೆಚ್ಚಲೇಬೇಕು. ಅಲ್ಲದೆ, ಶಿವಣ್ಣನ ಶಕ್ತಿಧಾಮದ ರೀತಿ ನೊಂದ ಹೆಣ್ಣು ಮಕ್ಕಳಿಗಾಗಿ ಒಂದು ವಿಶೇಷ ಸಂಸ್ಥೆ ಕಟ್ಟಿ, ಸಾಮಾಜಿಕ ಸೇವೆಗೂ ಮುಂದಾಗ್ತಿದ್ದಾರೆ ಪುಷ್ಪ. ಅವರ ಕನಸುಗಳು ನನಸಾಗಲಿ ಅನ್ನೋದು ನಮ್ಮ ಆಶಯ.





