ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಕಾಂತಾರ ಚಾಪ್ಟರ್ 1 ಚಿತ್ರದ ಕೊನೆಯ ದೃಶ್ಯದಲ್ಲಿ ಕೊರಗಜ್ಜ ಬರ್ತಾರೆ. ಈಗ ತುಳುನಾಡಿನ ದೈವದ ಮಹಿಮೆಯನ್ನು ಹೇಳುವುದಕ್ಕೆ ಹೊಸ ಟೀಂ ಬರ್ತಿದೆ. ಅದುವೇ ‘ಕೊರಗಜ್ಜ’. ಸಿನಿಮೋತ್ಸಾಹಿ ತಂಡ ಕೊರಗಜ್ಜ ಸಿನಿಮಾಗೆ ಕೈ ಹಾಕಿದ್ದು ಯಾಕೆ..? ಜೈ ಜಗದೀಶ್ ಈ ಸಿನಿಮಾ ಕೈ ಬಿಟ್ಟಿದ್ದು ಯಾಕೆ..? ಕೋಲ ಸೇವೆಯಲ್ಲಿ ಭಾಗಿಯಾದ ನಟಿ ಶ್ರುತಿ, ಭವ್ಯ ಏನು ಹೇಳಿದ್ರು ಅನ್ನೋದಕ್ಕೆ ಈ ಸ್ಟೋರಿ ನೋಡಿ.
ಕಾಂತಾರ ಸೂಪರ್ ಹಿಟ್ ನಂತರ ದೈವದ ಮೇಲಿನ ನಂಬಿಕೆ ಆಚಾರ ವಿಚಾರ ಜಗತ್ಜಾಹೀರು ಆಗಿದೆ. ಅದ್ರಲ್ಲೂ ಕೊರಗಜ್ಜ ಅಂದ್ರೆ ವಿದೇಶಿಗರನ್ನು ಕಣ್ಣು ಅರಳಿಸುತ್ತದೆ ಅಷ್ಟರ ಮಟ್ಟಿಗೆ ಪವರ್ ಫುಲ್ ದೇವರು ಎಂಬುದು ಸಾಬೀತು ಆಗಿದೆ. ಸದ್ಯ ಕೊರಗಜ್ಜ ಟೈಟಲ್ ನಲ್ಲೆ ಸಿನಿಮಾವೊಂದು ಬರ್ತಿದ್ದು ಬಿಡುಗಡೆಗೆ ತಯಾರಿ ನಡೆಸಿದೆ. ಎಸ್, 2010 ರಲ್ಲಿಯೇ ಕನ್ನಡದ ನಟ ಜೈಜಗದೀಶ್ ಕೊರಗ್ಗಜ್ಜ ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದರು. ಈ ಕಥೆ ಮೇಲೆ ಒಂದು ವರ್ಷದ ಕೆಲಸ ಕೂಡ ಮಾಡಿದ್ದರು. ಆದರೆ, ಅದ್ಯಾಕೋ ಕೆಲಸವೇ ಮುಂದೆ ಹೋಗ್ತಾ ಇರಲಿಲ್ಲ.
‘ಕೊರಗಜ್ಜ’ ಸಿನಿಮಾಗೆ ಪ್ಯಾನ್ ಇಂಡಿಯಾ ಟಚ್..!
ಕೊರಗಜ್ಜ ತಂಡದಿಂದ ಮಂಗಳೂರಲ್ಲಿ ಕೋಲ ಸೇವೆ
ಶ್ರುತಿ-ಭವ್ಯ, ಜೈ ಜಗದೀಶ್ ದಂಪತಿಗೆ ಕೋಲ ದರ್ಶನ
ಹೀಗಾಗಿ ಜೈಜಗದೀಶ್ ಪತ್ನಿ ವಿಜಯಲಕ್ಷ್ಮಿ ದೇವರ ಮೊರೆ ಹೋದರು. ದೇವರಲ್ಲಿ ಪ್ರಶ್ನೆ ಇಟ್ಟು ಕೇಳಿದಾಗ ಕೊರಗಜ್ಜನ ಸಿನಿಮಾ ನಿಮಗೆ ಆಗಿ ಬರೋದಿಲ್ಲ. ಇದನ್ನ ಮಾಡೋಕೆ ಹೋಗ್ಬೇಡಿ. ಹಾಗಂತ ದೈವದಿಂದ ಉತ್ತರ ಬಂತು. ಅಷ್ಟೆ ನೋಡಿ. ಇದಾದ್ಮೇಲೆ ಈ ಚಿತ್ರದ ಕೆಲಸವನ್ನ ಇವರು ಮುಂದುವರಿಸಲೇ ಇಲ್ಲ. ತಪ್ಪು ಕಾಣಿಕೆ ಇಟ್ಟು ಈ ಟೈಟಲ್ ನ ಈಗ ಸುಧೀರ್ ಅವ್ರಿಗೆ ಕೊಟ್ಟುಬಿಟ್ರು
ಈಗ ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ತ್ರಿಡಿ ಮೋಷನ್ ಪೋಸ್ಟರ್ ಇತೀಚೆಗೆ ಬಿಡುಗಡೆ ಆಗಿತ್ತು. ಸದ್ಯ ಮಂಗಳೂರಿನಲ್ಲಿ ಸುದ್ಧಿಗೋಷ್ಠಿ ಹಮ್ಮಿಕೊಂಡ ಚಿತ್ರತಂಡ ಚಿತ್ರದ ಎರಡು ಹಾಡುಗಳನ್ನ ಬಿಡುಗಡೆಗೊಳಿಸಿದ್ದರು. ಮೂರು ವರ್ಷಗಳ ಹಿಂದೆ ಕೊರಗಜ್ಜ ಸಿನಿಮಾ ಆರಂಭವಾಗಿದ್ದು, ಚಿತ್ರದಲ್ಲಿ ಆರು ಭಾಷೆಗಳಿಂದ ಒಟ್ಟು 31 ಹಾಡುಗಳಿವೆ. ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ಧ ಗಾಯಕ – ಗಾಯಕಿಯರು ಹಾಡಿದ್ದಾರೆ. ಸಿನಿಮಾದ ಸಂಗೀತ ಹಕ್ಕನ್ನು ಝೀ ಮ್ಯೂಸಿಕ್ ಖರೀದಿಸಿದೆ. ಸುಮಾರು ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ನಿರ್ದೇಶಕ ಸುಧೀರ್ ಹೇಳಿದ್ದಾರೆ
ಕೊರಗಜ್ಜ ಸಿನಿಮಾದಲ್ಲಿ ನಟಿ ಭವ್ಯ ಹಾಗು ಶೃತಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ಸಿನಿಮಾ ಮೂಡಿಬಂದರೆ ಕೋಲ ಸೇವೆ ನೆರವೇರಿಸೋದಾಗಿ ಚಿತ್ರತಂಡ ಹರಕೆ ಹೋತಿದ್ರು. ಹೀಗಾಗಿ ಚಿತ್ರತಂಡದಿಂದ ಮಾರ್ನಮಿಕಟ್ಟೆಯಲ್ಲಿ ಕೋಲ ಸೇವೆ ನಡೆಯಿತು. ಈ ವೇಳೆ ನಟಿ ಶೃತಿ ಅವರ ತಂದೆ ತಾಯಿ ಜೊತೆ ಕೋಲದಲ್ಲಿ ಭಾಗಿಯಾಗಿ ಕೊರಗಜ್ಜನ ಆಶೀರ್ವಾದ ಪಡೆದರು. ಹಾಗೆ ನಟಿ ಭವ್ಯ.. ಜೈಜಗದೀಶ್.. ವಿಜಯಲಕ್ಷ್ಮಿ ಸೇರಿದಂತೆ ಕೊರಗಜ್ಜ ಚಿತ್ರತಂಡವೇ ಕೋಲಸೇವೆಯಲ್ಲಿ ಭಾಗಿಯಾಗಿ ತಮ್ಮ ಅನುಭವನ್ನು ಹಂಚಿಕೊಂಡರು.
ಅಂದಹಾಗೆ ಈ ಚಿತ್ರಕ್ಕೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ನಿರ್ಮಾಣ ಮಾಡಿದ್ದಾರೆ. ಆದಷ್ಟು ಬೇಗ ಕೊರಗಜ್ಜ ಬಿಗ್ ಸ್ಕ್ರೀನ್ ಮೇಲೆ ದರ್ಶನ ಕೊಡಲಿದೆ.





