ಇಂದು ವಿಶ್ವ ತಾಯಂದಿರ ದಿನ. ದೇಶ ಕೂಡ ತಾಯಿಯಷ್ಟೇ ಪವಿತ್ರ. ಈ ಭರತ ಮಾತೆಯ ಮಕ್ಕಳಾಗಿ, ಇಲ್ಲೇ ಸೂಪರ್ ಸ್ಟಾರ್ಗಳಾದ ಖಾನ್ಗಳು ಮಾತ್ರ ದೇಶಕ್ಕಿಂತ ಧರ್ಮವೇ ಹೆಚ್ಚು ಅನ್ನುವಂತೆ ಆಡ್ತಾರೆ. ಇಡೀ ದೇಶ ಛೀಮಾರಿ ಹಾಕೋಕೆ ಶುರುವಿಟ್ಟ ಮೇಲೆ, ಈಗ ಮೌನ ಮುರಿದಿದ್ದಾರೆ. ಅದ್ರಲ್ಲೂ ಕಿಂಗ್ ಖಾನ್ ಇನ್ನೂ ಜಾಲಿ ಟ್ರಿಪ್ ಹ್ಯಾಂಗೋವರ್ನಿಂದ ಹೊರಬಂದಿಲ್ಲ.
- ಉಗಿದು, ಉಪ್ಪಿನಕಾಯಿ ಹಾಕಿದ್ಮೇಲೆ ಖಾನ್ಸ್ ರಿಯಾಕ್ಟ್ !
- ಯುದ್ಧದ ನಡುವೆ ಶಾರೂಖ್ ಮೆಟ್ ಗಾಲಾ ಜಾಲಿ ಟ್ರಿಪ್
- ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ಯಾಕೆ ಸಲ್ಮಾನ್ ಖಾನ್..?
- ಭಯೋತ್ಪಾದಕ ದಾಳಿ ಆಗದಿರಲು ಭರವಸೆ ಬೇಕು- ಆಮೀರ್
ಶಾರೂಖ್ ಖಾನ್ ಒಟ್ಟು ಆಸ್ತಿಯ ಮೊತ್ತ ಹೆಚ್ಚೂ ಕಮ್ಮಿ 7300 ಕೋಟಿ ರೂಪಾಯಿ. ಸಲ್ಮಾನ್ ಖಾನ್ 2900 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಆಸ್ತಿ ಹೊಂದಿದ್ದಾರೆ. ಆಮೀರ್ ಖಾನ್ 1868 ಕೋಟಿ ರೂಪಾಯಿಗಳ ಆಸ್ತಿಯ ಒಡೆಯ. ಸೈಫ್ ಅಲಿ ಖಾನ್ ಆಸ್ತಿಯ ಮೊತ್ತ 1200 ಕೋಟಿಗೂ ಅಧಿಕ. ಇದೆಲ್ಲವೂ ಕೊಟ್ಟಿದ್ದು ಯಾರು.. ನಮ್ಮ ಚಿತ್ರರಂಗವೇ ಅಲ್ಲವೇ..? ಇವರುಗಳನ್ನ ತಲೆ ಮೇಲೆ ಹೊತ್ತು ಮೆರೆಸಿದ್ಯಾರು.. ನಾವು ಭಾರತೀಯ ಚಿತ್ರಪ್ರೇಮಿಗಳಲ್ಲದೆ ಮತ್ಯಾರು..?
ಆದ್ರೆ ಇವಱರಿಗೂ ದೇಶದ ಮೇಲೆ ಭಕ್ತಿ ಆಗಲಿ, ಗೌರವ ಆಗಲಿ ಇದ್ದಂತಿಲ್ಲ. ಯಾಕಂದ್ರೆ ದೇಶಕ್ಕಿಂತ ಮಿಗಿಲಾದದ್ದು ಏನೂ ಇಲ್ಲ. ಆದ್ರೆ ಇವರುಗಳಿಗೆ ಮಾತ್ರ ನಮ್ಮ ದೇಶ ಶತ್ರು ರಾಷ್ಟ್ರದ ಜೊತೆ ಯುದ್ಧ ಮಾಡ್ತಿದ್ರೂ ಸಹ ಅದ್ರ ಬಗ್ಗೆ ರಿಯಾಕ್ಟ್ ಮಾಡ್ಬೇಕು ಅನ್ನೋ ಸೌಜನ್ಯತೆ ಕೂಡ ಇಲ್ಲ. ನಮಗೂ ಅದಕ್ಕೂ ಸಂಬಂಧ ಇಲ್ಲವೇ ಇಲ್ಲ ಅನ್ನೋ ರೇಂಜ್ಗೆ ತಟಸ್ಥರಾಗಿಬಿಟ್ಟಿದ್ದರು.
ಆಫರೇಷನ್ ಸಿಂದೂರ್ ಬಳಿಕ ಆದ ಬೆಳವಣಿಗೆಗಳಿಗೆ ಇಡೀ ದೇಶವೇ ತಲ್ಲಣಗೊಂಡಿದೆ. ಮಾಧ್ಯಮಗಳು, ಜನ ಎಲ್ಲರೂ ಒಗ್ಗಟ್ಟಿನಿಂದ ದೇಶದ ಪರ ನಿಲ್ಲೋದು ನಮ್ಮಗಳ ಮೂಲಭೂತ ಕರ್ತವ್ಯ. ಅದರಲ್ಲೂ ಸೂಪರ್ ಸ್ಟಾರ್ಗಳು ಅನಿಸಿಕೊಂಡ ಈ ಮಹಾನುಭಾವರುಗಳು ಮಸ್ಟ್ ಅಂಡ್ ಶುಡ್ ಸರ್ಕಾರದ ನಿರ್ಧಾರ ಹಾಗೂ ನಿಲುವುಗಳ ಪರ ನಿಲ್ಲಲೇಬೇಕು. ಅದ್ರ ಬಗ್ಗೆ ಪ್ರತಿಕ್ರಿಯಿಸೋ ಮೂಲಕ ತಮ್ಮ ಜವಾಬ್ದಾರಿ ಮೆರೆಯಬೇಕು.
ಕದನ ವಿರಾಮ ಅನೌನ್ಸ್ ಆಗುವವರೆಗೆ ಈ ಖಾನ್ಗಳು ಒಬ್ಬರೂ ಕೂಡ ರಿಯಾಕ್ಟ್ ಮಾಡಿಲ್ಲ. ಯಾವಾಗ ದೇಶದ ಮೂಲೆ ಮೂಲೆಯಿಂದ ಭಾರತೀಯರು ಛೀ, ಥೂ ಅಂತ ಉಗಿಯೋಕೆ ಶುರು ಮಾಡಿದ್ರೋ, ಆಗ ಎಚ್ಚೆತ್ತುಕೊಂಡ ಇವರುಗಳು ಕೊನೆಗೂ ಮೌನ ಮುರಿಯೋ ಸಾಹಸ ಮಾಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಇವರು ಮಾಡಿರೋ ಪೋಸ್ಟ್ಗಳು ನಿಜಕ್ಕೂ ಮನಸ್ಸಿನಿಂದ ಮಾಡಿದ್ರಾ ಅಥ್ವಾ ತೋರ್ಪಡಿಕೆಗೆ ಮಾಡಿದ್ರಾ ಅನ್ನೋ ಅನುಮಾನ ಕೂಡ ಮೂಡಿಸ್ತಿವೆ.
ಆಮೀರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಪೋಸ್ಟ್ಗಳು ಸದ್ಯ ಸಖತ್ ವೈರಲ್ ಆಗ್ತಿವೆ. ಆದ್ರೆ ಸಲ್ಮಾನ್ ಖಾನ್ ಪೋಸ್ಟ್ ಮಾಡಿ, ನಂತ್ರ ಕೂಡಲೇ ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಶಾರೂಖ್ ಖಾನ್ ಅಂತೂ ಅದ್ಯಾವುದೋ ಮೆಟ್ ಗಾಲಾ ಅನ್ನೋ ಫ್ಯಾಷನ್ ಶೋನಲ್ಲಿ ಭಾಗಿಯಾಗಿ, ದೇಶವನ್ನೇ ಕಡೆಗಣಿಸಿದ್ದಾರೆ. ಅಮೆರಿಕಾದಲ್ಲಿ ನಡೆದ ಆ ಶೋಗಾಗಿ ಜಾಲಿ ಟೂರ್ ಹೊರಟಿದ್ದ ಶಾರೂಖ್, ನಿನ್ನೆಯಷ್ಟೇ ಇಂಡಿಯಾಗೆ ವಾಪಸ್ ಆಗಿದ್ದುಕೊಂಡು, ಇನ್ನೂ ಜಾಲಿ ಮೂಡ್ನಿಂದ ಹೊರಬಂದಿಲ್ಲ.
ನಾವು ಬಾಲಿವುಡ್ ಭಾಯಿಜಾನ್ ಅಂತೆಲ್ಲಾ ಮೆರೆಸುವ ಸಲ್ಮಾನ್ ಖಾನ್ ಇಲ್ಲಿಯವರೆಗೆ ಒಂದು ಪೋಸ್ಟ್ ಮಾಡಿಲ್ಲ. ಮಾಡಿ ಡಿಲೀಟ್ ಮಾಡಿದ್ದಾರೆ ಅಂತೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಓಡಾಡ್ತಿದೆ. ಹೀಗೆ ದೇಶಪ್ರೇಮ ಇಲ್ಲದವರಿಗೆ ಲಾರೆನ್ಸ್ ಬಿಷ್ಣೋಯಿ ಅಂತಹವರು ಬೆದರಿಕೆ ಹಾಕೋದು ಕೂಡ ತಪ್ಪೇನಿಲ್ಲ ಅನಿಸುತ್ತೆ. ಇನ್ನು ಸೈಫ್ ಅಲಿ ಖಾನ್ ಜಸ್ಟ್ ಜೈ ಜವಾನ್.. ಜೈ ಹಿಂದ್.. ಅಂತ ಬರೆದುಕೊಂಡು ಕೈ ತೊಳೆದುಕೊಂಡಿದ್ದಾರೆ.
ಆದ್ರೆ ಆಮೀರ್ ಖಾನ್ ಮಾತ್ರ ಸ್ವಲ್ಪ ಸೆನ್ಸಿಬಲ್ ಆಗಿ ಪೋಸ್ಟ್ ಬರೆದುಕೊಂಡಿದ್ದಾರೆ. ಇಲ್ಲಿಂದ ಈಚೆಗೆ ಭಯೋತ್ಪಾದಕ ದಾಳಿಗಳು ನಡೆಯಲ್ಲ ಅನ್ನೋ ಭರವಸೆ ಬೇಕು ಅಂತ ವಿವೇಕವಾಗಿ ಮಾತನಾಡಿದ್ದಾರೆ. ಅದೇನೇ ಇರಲಿ, ಊರು ಕೊಳ್ಳೆ ಹೊಡೆದ ಮೇಲೆ ಇವರದ್ದೇನು ಪಂಚಾಯ್ತಿ ಅಂತ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಳ್ತಿದ್ದಾರೆ. ಇವರಿಗೆ ದೇಶಪ್ರೇಮ ಅನ್ನೋದು ಬರೀ ಸಿನಿಮಾಗಳ ಪಾತ್ರಗಳಿಗೆ ಸೀಮಿತ ಅನಿಸುತ್ತೆ. ಅದು ರಿಯಾಲಿಟಿಯಲ್ಲೂ ತೋರಿಸಿದ್ರೆ ಹೀರೋಗಳಾಗ್ತಿದ್ರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್