• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಚಿತ್ರಪ್ರೇಮಿಗಳಿಗೆ ಗುಡ್‌ನ್ಯೂಸ್..ಫಿಲ್ಮ್ ಟಿಕೆಟ್ 200ರೂ ಪ್ಲಸ್ ಟ್ಯಾಕ್ಸ್

ಗೃಹ ಇಲಾಖೆಯಿಂದ ಅಧಿಕೃತ ಆದೇಶ..ಗೆಜೆಟ್ ಒಂದೇ ಬಾಕಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 12, 2025 - 2:19 pm
in ಸಿನಿಮಾ
0 0
0
Web (12)

ಗುಡ್ ನ್ಯೂಸ್.. ಗುಡ್ ನ್ಯೂಸ್.. ಗುಡ್ ನ್ಯೂಸ್.. ಚಿತ್ರ ಪ್ರೇಮಿಗಳಿಗೆ ಗುಡ್‌ ನ್ಯೂಸ್. ಅಕ್ಕ ಪಕ್ಕದ ರಾಜ್ಯಗಳಂತೆ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗೇ ಬಿಡ್ತು. 200 ರೂಪಾಯಿ ಇದ್ರೆ ಸಿನಿಮಾ ನೋಡಬಹುದು. ಅರೇ ನಿಜಾನಾ..? ಕೊಟ್ಟ ಮಾತು ಉಳಿಸಿಕೊಂಡ್ರಾ ಸಿದ್ದರಾಮಯ್ಯ.

ಆಂಧ್ರ, ತಮಿಳುನಾಡು ಹಾಗೂ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಇನ್ಮೇಲೆ 200 ರೂಪಾಯಿ ಟೆಕೆಟ್ ದರ ಮೀರುವಂತಿಲ್ಲ. ಇದು ಇಂದಿನಿಂದಲೇ ಅಧಿಕೃತವಾಗಿ ಜಾರಿ ಆಗಲಿದ್ದು, ಗೃಹ ಇಲಾಖೆ ಮೂಲಕ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ.

RelatedPosts

ಅಜನೀಶ್ ಕಂಪೋಸ್..ಫಸ್ಟ್ ಸಾಂಗ್ ಬಗ್ಗೆ ಸುದೀಪ್ ಹಿಂಟ್

ದರ್ಶನ್‌ಗೆ ಬೆನ್ನು ನೋವು ಇದ್ಯಾ ? ಬಿಲಿಯನ್ ಡಾಲರ್ ಪ್ರಶ್ನೆ

ಯಶ್ ತಾಯಿ ಪುಷ್ಪ ವಿರುದ್ಧ ಕೊತ್ತಲವಾಡಿ ಸಹ ನಟನ ಪೇಮೆಂಟ್ ವಂಚನೆ ಆರೋಪ

ಕನ್ನಡಿಗರಿಗೆ ಅವಮಾನ ಮಾಡಿದವ್ರನ್ನೇ ಕೊಂಡಾಡಿದ ರಶ್ಮಿಕಾ

ADVERTISEMENT
ADVERTISEMENT

5b6af38c370de3308eeacb78 1533735820940

ಚಿತ್ರಪ್ರೇಮಿಗಳಿಗೆ ಗುಡ್‌ನ್ಯೂಸ್..ಫಿಲ್ಮ್ ಟಿಕೆಟ್ 200 ರೂ

ಆದ್ರೆ 200 ರೂಪಾಯಿ ಟಿಕೆಟ್‌ಗೆ ಕಟ್ಟಬೇಕಿದೆ ಎಕ್ಸ್ಟ್ರಾ ಟ್ಯಾಕ್ಸ್

ಚಿತ್ರಮಂದಿರಗಳಿಗೆ ಜನ ಬರ್ತಿಲ್ಲ. ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಆಗ್ತಿಲ್ಲ. ನಿರ್ಮಾಪಕರಿಗೆ ಹಾಕಿರೋ ಬಂಡವಾಳ ಬರ್ತಿಲ್ಲ ಅನ್ನೋ ಆರೋಪಗಳಿಗೆಲ್ಲಾ ಶಾಶ್ವತ ಪರಿಹಾರ ದೊರಕಿದೆ. ಹೌದು.. ಆಂಧ್ರ, ತಮಿಳುನಾಡು, ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗಿದೆ. ಇನ್ಮೇಲೆ ಮಲ್ಟಿಪ್ಲೆಕ್ಸ್‌‌ಗಳು ಸೇರಿದಂತೆ ಚಿತ್ರಮಂದಿರಗಳಲ್ಲಿ 200 ರೂಪಾಯಿ ಟಿಕೆಟ್ ದರ ಮೀರುವಂತಿಲ್ಲ. ಆದ್ರೆ ಅಲ್ಲೊಂದು ಕಂಡಿಷನ್ ಅಪ್ಲೈ ಆಗಲಿದೆ.

Bangalore rex theater cover

ಈ 200 ರೂಪಾಯಿ ಟಿಕೆಟ್ ಪ್ರೈಸ್ ಗೋಲ್ಡ್ ಕ್ಲಾಸ್ ಅಥ್ವಾ ರೆಕ್‌‌ಲೈನರ್‌‌ ಸೀಟ್‌ಗಳಿಗೆ ಅನ್ವಯ ಆಗಲ್ಲ. ಅಷ್ಟೇ ಅಲ್ಲ, 200 ರೂಪಾಯಿ ಟಿಕೆಟ್ ದರ ಟ್ಯಾಕ್ಸ್ ಹೊರತು ಪಡಿಸಿ ಅನ್ನೋದು ಶಾಕಿಂಗ್ ನ್ಯೂಸ್. 200 ರೂಪಾಯಿ ಜೊತೆ ಟ್ಯಾಕ್ಸ್ ಕೂಡ ಕಟ್ಟಬೇಕಾಗುತ್ತೆ. ಅಲ್ಲಿಗೆ 18 ಪರ್ಸೆಂಟ್ ಟ್ಯಾಕ್ಸ್ ಅಂದ್ರೆ 200ರೂಗೆ ಹೆಚ್ಚುವರಿ 36 ರೂಪಾಯಿ ನೀಡಿ ಟಿಕೆಟ್ ಖರೀದಿಸಬೇಕಾಗುತ್ತೆ. ಇದು ನಮ್ಮ ಕನ್ನಡ ಚಿತ್ರಗಳ ಜೊತೆಗೆ ಎಲ್ಲಾ ಪರಭಾಷಾ ಸಿನಿಮಾಗಳಿಗೂ ಅನ್ವಯ ಆಗಲಿದೆ ಅನ್ನೋದು ಖುಷಿಯ ವಿಚಾರ.

Pvr cinemas vr mall mahadevapura bangalore multiplex cinema halls erxvft

ಗೃಹ ಇಲಾಖೆಯಿಂದ ಅಧಿಕೃತ ಆದೇಶ.. ಗೆಜೆಟ್ ಒಂದೇ ಬಾಕಿ

ಬಜೆಟ್‌‌ನಲ್ಲಿ ಸಿಎಂ ಮಾತು.. ನುಡಿದಂತೆ ನಡೆದ ಸಿದ್ದರಾಮಯ್ಯ

ಸ್ಟೇಟ್ ಬಜೆಟ್‌‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಏಕರೂಪ ಟಿಕೆಟ್ ದರ ನೀತಿಯನ್ನ ನೆರೆ ರಾಜ್ಯಗಳಂತೆ ಇಲ್ಲಿಯೂ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದರು. ನುಡಿದಂತೆ ನಡೆದ ಸಿಎಂ ಸಿದ್ದರಾಮಯ್ಯ, ಕ್ಯಾಬಿನೆಟ್‌‌‌ನಲ್ಲಿ ಒಮ್ಮತದ ನಿರ್ಧಾರದೊಂದಿಗೆ ಜುಲೈ 15ರಂದು ಸರ್ಕಾರ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ಅಲ್ಲದೆ, ಏನಾದ್ರೂ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಬಹುದು ಎಂದು ಚಿತ್ರರಂಗಕ್ಕೆ ಗಡುವು ನೀಡಿತ್ತು ಸರ್ಕಾರ. ಅದಕ್ಕೆ ಒಂದಷ್ಟು ಬದಲಾವಣೆಗಳನ್ನ ಸೂಚಿಸಿರೋ ನಿರ್ಮಾಪಕ, ವಿತರಕರು, 200 ರೂಪಾಯಿ ಪ್ಲಸ್ ಟ್ಯಾಕ್ಸ್‌ ಮಾಡುವಂತೆ ಗ್ರೀನ್ ಸಿಗ್ನಲ್ ನೀಡಿತ್ತು. ಅದರಂತೆ ಈಗ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸಿಎಂ ಮುಖ್ಯ ಕಾರ್ಯದರ್ಶಿ ಸಹಿ ಹಾಕಿ, ಇದನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗುತ್ತದೆ. ಅಲ್ಲಿ ರಾಜ್ಯಪಾಲರ ಒಪ್ಪಿಗೆ ಮೇರೆಗೆ ರಾಜ್ಯಪತ್ರ ಹೊರಡಿಸಲಾಗುತ್ತೆ. ಅಲ್ಲಿಗೆ ಇದು ಅಧಿಕೃತ ಆಗಲಿದೆ. ಬಹುಶಃ ಇಂದು ಅಥವಾ ನಾಳೆಯಲ್ಲಿ ಗೆಜೆಟ್‌ಗೆ ಬೀಳಲಿದ್ದು, ಮುಂದಿನ ಸೋಮವಾರದಿಂದ ಈ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಇದರಿಂದ ಲಂಗು ಲಗಾಮು ಇಲ್ಲದೆ ಟಿಕೆಟ್ ದರ ನಿಗದಿ ಮಾಡ್ತಿದ್ದ ಪಿವಿಆರ್, ಐನಾಕ್ಸ್ ಅಂತಹ ಮುಂಬೈ ಬೇಸ್ಡ್ ಮಲ್ಟಿಪ್ಲೆಕ್ಸ್‌‌‌ಗಳ ಮೇಲೆ ಹಿಡಿತ ಸಾಧಿಸಿದಂತಾಗಲಿದೆ. ಅದರಲ್ಲೂ ಇದು ಕನ್ನಡ ಸಿನಿಮಾಗಳ ಮೇಲೆ ಹೆಚ್ಚು ಪ್ರಭಾವ ಬೀರಲ್ಲ. ಬದಲಿಗೆ ಪರಭಾಷಾ ಸೂಪರ್ ಸ್ಟಾರ್‌‌ಗಳ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ನೇರವಾಗಿ ಹೊಡೆತ ಕೊಡಲಿದೆ.

ಕರ್ನಾಟಕದಲ್ಲಿ ಹಗಲು ದರೋಡೆ ಮಾಡ್ತಿತ್ತು PVR, INOX

ಇನ್ಮೇಲೆ ಮನಸೋ ಇಚ್ಚೆ ಫಿಲ್ಮ್ ಟಿಕೆಟ್ ದರ ಇಡುವಂತಿಲ್ಲ

ಆಂಧ್ರ, ಕೇರಳ ಹಾಗೂ ತಮಿಳುನಾಡಿನಲ್ಲಿ ಕುಟುಂಬ ಸಮೇತ ಥಿಯೇಟರ್‌ಗಳಿಗೆ ಹೋಗಿ ಸಿನಿಮಾಗಳನ್ನ ನೋಡ್ತಾರೆ. ವಾರವಿಡೀ ಕೆಲಸ ಕಾರ್ಯಗಳನ್ನ ಮಾಡುವ ಜನ, ವಾರಾಂತ್ಯದಲ್ಲಿ ಮನರಂಜನೆಗಾಗಿ ಥಿಯೇಟರ್‌ಗೆ ಹೋಗ್ತಾರೆ. ಅಲ್ಲಿ ಟಿಕೆಟ್ ದರ ಕಮ್ಮಿ ಇರೋದ್ರಿಂದ ಎಲ್ಲರೂ ಒಟ್ಟಿಗೆ ಚಿತ್ರಗಳನ್ನು ವೀಕ್ಷಿಸ್ತಾರೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಪರಭಾಷಾ ಸ್ಟಾರ್‌ಗಳ ಚಿತ್ರಗಳು ಬಂದ್ರೆ ಸಾಲು ಒಂದ್ಕಡೆ ಡಿಸ್ಟ್ರಿಬ್ಯೂಟರ್‌ಗಳು, ಮತ್ತೊಂದ್ಕಡೆ ಮಲ್ಟಿಪ್ಲೆಕ್ಸ್‌‌ಗಳು.. ಹೇಳೋರಿಲ್ಲ ಕೇಳೋರಿಲ್ಲ. ಇಷ್ಟ ಬಂದಷ್ಟು ಟಿಕೆಟ್ ದರ ಫಿಕ್ಸ್ ಮಾಡ್ತಿದ್ರು. ಆದ್ರೀಗ ಅದಕ್ಕೆಲ್ಲಾ ಬ್ರೇಕ್ ಬೀಳಲಿದೆ.

 

ಯಾವ್ಯಾವ ರಾಜ್ಯದಲ್ಲಿ ಎಷ್ಟಿದೆ ಟಿಕೆಟ್ ದರ..?

ರಾಜ್ಯ  ಟಿಕೆಟ್ ದರ
ಆಂಧ್ರ 195 ರೂಪಾಯಿ
ತಮಿಳುನಾಡು 196 ರೂಪಾಯಿ
ಕೇರಳ 190 ರೂಪಾಯಿ
ತೆಲಂಗಾಣ 190 ರೂಪಾಯಿ
ಕರ್ನಾಟಕ 236 ರೂಪಾಯಿ

 

ಅಂದಹಾಗೆ ಬಾಲಿವುಡ್ ಸೇರಿದಂತೆ ಸೌತ್ ಸಿನಿದುನಿಯಾದ ನೆರೆ ಚಿತ್ರರಂಗಗಳಿಗೆ ಬಿಗ್ ಮಾರ್ಕೆಟ್ ಅಂದ್ರೆ ಅದು ನಮ್ಮ ಕರ್ನಾಟಕ. ಕಾರಣ ಇಲ್ಲಿ ಏಕರೂಪ ಟಿಕೆಟ್ ದರ ನೀತಿ ಇಲ್ಲದಿರೋದು. ಈಗ 200 ರೂಪಾಯಿಗೆ ಟಿಕೆಟ್ ಸೀಮಿತಗೊಳಿಸಿರೋದ್ರಿಂದ ಇದು ಮುಂಬರುವ ಪರಭಾಷಾ ಬಿಗ್ ಸ್ಟಾರ್ಸ್‌ ಬಿಗ್ ಮೂವೀಸ್ ಮೇಲೆ ನೇರವಾಗಿ ಪರಿಣಾಮ ಬೀಳಲಿದೆ. ಇದರಿಂದಾಗಿ ಅವರುಗಳಿಂದ ಕನ್ನಡ ಚಿತ್ರರಂಗದ ಮೇಲೆ ಆಗ್ತಿದ್ದ ನೇರ ಪರಿಣಾಮಗಳು ತಪ್ಪಲಿವೆ.

ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳು ಚಿತ್ರ ಪ್ರೇಮಿಗಳಿಗೆ ಖುಷಿ ತಂದಿದೆ. ಪರಭಾಷಿಗರಿಗೆ, ಒಂದಷ್ಟು ಡಿಸ್ಟ್ರಿಬ್ಯೂಟರ್‌ಗಳಿಗೆ ಇದು ತಲೆ ನೋವಾಗಿ ಪರಿಣಮಿಸಿದ್ರೂ, ಚಿತ್ರಗಳನ್ನ ನೋಡುಗರ ಸಂಖ್ಯೆ ಇದ್ರಿಂದ ಗಣನೀಯವಾಗಿ ಹೆಚ್ಚಳ ಆಗಲಿದೆ. ಹಾಗಾಗಿ, ಏಕರೂಪ ಟಿಕೆಟ್ ದರ ನೀತಿಯನ್ನ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (67)

ಅಜನೀಶ್ ಕಂಪೋಸ್..ಫಸ್ಟ್ ಸಾಂಗ್ ಬಗ್ಗೆ ಸುದೀಪ್ ಹಿಂಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 16, 2025 - 4:06 pm
0

Web (66)

ದರ್ಶನ್‌ಗೆ ಬೆನ್ನು ನೋವು ಇದ್ಯಾ ? ಬಿಲಿಯನ್ ಡಾಲರ್ ಪ್ರಶ್ನೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 16, 2025 - 3:39 pm
0

Web (65)

ಐಟಿ ರಿಟರ್ನ್ಸ್ ಫೈಲ್ ಮಾಡಿಲ್ವಾ? ಡೆಡ್​​ಲೈನ್​​ ವಿಸ್ತರಣೆ ಆಗಿದೆ..!

by ಶ್ರೀದೇವಿ ಬಿ. ವೈ
September 16, 2025 - 2:52 pm
0

Web (64)

ಮಹಾಲಯ ಅಮಾವಾಸ್ಯೆ ದಿನವೇ ಸೂರ್ಯ ಗ್ರಹಣ!

by ಶ್ರೀದೇವಿ ಬಿ. ವೈ
September 16, 2025 - 2:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (67)
    ಅಜನೀಶ್ ಕಂಪೋಸ್..ಫಸ್ಟ್ ಸಾಂಗ್ ಬಗ್ಗೆ ಸುದೀಪ್ ಹಿಂಟ್
    September 16, 2025 | 0
  • Web (66)
    ದರ್ಶನ್‌ಗೆ ಬೆನ್ನು ನೋವು ಇದ್ಯಾ ? ಬಿಲಿಯನ್ ಡಾಲರ್ ಪ್ರಶ್ನೆ
    September 16, 2025 | 0
  • Web (63)
    ಯಶ್ ತಾಯಿ ಪುಷ್ಪ ವಿರುದ್ಧ ಕೊತ್ತಲವಾಡಿ ಸಹ ನಟನ ಪೇಮೆಂಟ್ ವಂಚನೆ ಆರೋಪ
    September 16, 2025 | 0
  • Web (51)
    ಕನ್ನಡಿಗರಿಗೆ ಅವಮಾನ ಮಾಡಿದವ್ರನ್ನೇ ಕೊಂಡಾಡಿದ ರಶ್ಮಿಕಾ
    September 15, 2025 | 0
  • Web (49)
    ‘ಪೀಕಬೂ’..ಅವಳಿ ಮಕ್ಕಳ ಅಮೂಲ್ಯ ಭರ್ಜರಿ ಕಂಬ್ಯಾಕ್..!
    September 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version