ಕಾಂತಾರ ಸಿನಿಮಾದಲ್ಲಿನ ದೈವದ ಅನುಕರಣೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಒಬ್ರು ದೆವ್ವ ಅಂತಾರೆ.. ಮತ್ತೊಬ್ರು ಟಾಯ್ಲೆಟ್ನಲ್ಲಿ ಅದೇ ರೀತಿ ರೀಲ್ಸ್ ಮಾಡ್ತಾರೆ. ಚಿತ್ರತಂಡ, ರಿಷಬ್ ಹೇಳಿದ್ರೂ ಕೂಡ ಹುಚ್ಚಾಟ ಮಾತ್ರ ನಿಲ್ಲುತ್ತಲೇ ಇಲ್ಲ. ಜನಕ್ಕೆ ಬುದ್ಧಿ ಬರೋದ್ಯಾವಾಗ ಅನ್ನೋದ್ರ ಜೊತೆಗೆ ಕ್ಷಮೆ ಕೇಳಿ, ಮಾಡಿದ ಎಡವಟ್ನ ಸರಿ ಮಾಡಿಕೊಂಡ ಬಾಲಿವುಡ್ ಸ್ಟಾರ್ ರಣ್ವೀರ್ ಕಥೆ ಕೂಡ ಇಲ್ಲಿದೆ. ಜಸ್ಟ್ ವಾಚ್.

ಕಾಂತಾರ ಬರೀ ಸಿನಿಮಾ ಅಲ್ಲ. ಅದು ಕರಾವಳಿ ನೆಲದ ಸಂಸ್ಕೃತಿ, ಆಚಾರ, ವಿಚಾರ, ದೈವಗಳ ತೇರು. ಹೌದು.. ಪ್ರೇಕ್ಷಕರಿಗೆ ಕಾಂತಾರ ಸಿನಿಮಾ ಕನೆಕ್ಟ್ ಆಗೋಕೆ ಕಾರಣ ಗುಳಿಗ, ಪಂಜುರ್ಲಿ ದೈವಗಳು. ತಲೆ ತಲಾಂತರಗಳಿಂದ ಕರಾವಳಿ ಜನ ದೈವಾರಾಧನೆ ಮಾಡ್ತಾ ಬರ್ತಿದ್ದಾರೆ. ಅದು ಹೇಗಿರುತ್ತೆ..? ಅವುಗಳ ವೈಶಿಷ್ಟ್ಯತೆ ಏನು ಅನ್ನೋದನ್ನ ವಿಶ್ವಕ್ಕೆ ಸಾರಿದವರು ರಿಷಬ್ ಶೆಟ್ಟಿ.
ನಿಲ್ಲದ ದೈವದ ಅನುಕರಣೆ.. ಜನಕ್ಕೆ ಬುದ್ಧಿ ಬರೋದ್ಯಾವಾಗ..?
ದೈವವನ್ನ ದೆವ್ವ ಅಂತಾರೆ.. ಟಾಯ್ಲೆಟ್ನಲ್ಲಿ ರೀಲ್ಸ್ ಮಾಡ್ತಾರೆ
ಹೌದು.. ನಟನಾಗಿ, ನಿರ್ದೇಶಕರಾಗಿ ರಿಷಬ್ ಕರಾವಳಿ ದೈವಗಳ ಮಹತ್ವವನ್ನು ಕಾಂತಾರ ಹಾಗೂ ಕಾಂತಾರ-1 ಚಿತ್ರಗಳಿಂದ ಜನಕ್ಕೆ ಗೊತ್ತು ಮಾಡಿದ್ರು. ಆ ನಂತ್ರ ಸಿನಿಮಾಗಳಲ್ಲಿ ದೈವಗಳ ಬಳಕೆಗೆ ಆಕ್ಷೇಪಣೆ ವ್ಯಕ್ತವಾಗಿತ್ತು. ಆದ್ರೆ ಇಂತಹ ಸಿನಿಮಾಗಳ ಮೂಲಕ ದೈವದ ವಿಚಾರಗಳನ್ನ ಜನಕ್ಕೆ ಸಾರಿದ್ರೆ ಮಾತ್ರ ಅದು ದೊಡ್ಡ ಮಟ್ಟದಲ್ಲಿ ಇಂಪ್ಯಾಕ್ಟ್ ಆಗಲಿದೆ ಅನ್ನೋದನ್ನ ಪ್ರೂವ್ ಮಾಡಿದ್ರು ಡಿವೈನ್ ಸ್ಟಾರ್. ಸಿನಿಮಾನ ಸಿನಿಮಾ ತರಹ ನೋಡೋದು ಬಿಟ್ಟು, ಅದನ್ನ ಅನುಕರಿಸೋಕೆ ಮುಂದಾಗ್ತಿರೋ ಜನಕ್ಕೆ ಏನನ್ನಬೇಕೋ ಗೊತ್ತಿಲ್ಲ.
ಇತ್ತೀಚೆಗೆ ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ ರಿಷಬ್ ಶೆಟ್ಟಿ ಎದುರೇ ಕಾರ್ಯಕ್ರಮ ಹೋಸ್ಟ್ ಮಾಡ್ತಿದ್ದ ರಣ್ವೀರ್ ಸಿಂಗ್, ದೈವವನ್ನು ಅನುಕರಿಸಿದ್ರು. ಅಷ್ಟೇ ಅಲ್ಲ ಹೆಣ್ಣು ದೆವ್ವ ಅಂದಿದ್ರು. ಅದಕ್ಕೆ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ತಮ್ಮ ತಪ್ಪಿನ ಅರಿವಾಗಿ, ಇನ್ಸ್ಟಾ ಖಾತೆ ಮೂಲಕ ಬೇಷರತ್ ಕ್ಷಮೆ ಯಾಚಿಸಿದ್ದಾರೆ ಕರ್ನಾಟಕ ಅಳಿಯ, ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್.
&imwidth=800&imheight=600&format=webp&quality=medium)
ಹುಚ್ಚಾಟಗಳು ನಿಲ್ಲೋದು ಯಾವಾಗ..? ಪರಿಹಾರವೇ ಇಲ್ವಾ?
ಮಾಡಿದ ಎಡವಟ್ಗೆ ಕ್ಷಮೆ ಕೇಳಿದ್ರು ನಟ ರಣ್ವೀರ್ ಸಿಂಗ್
ಹೌದು.. ನಾನು ದೇಶದ ಎಲ್ಲಾ ಸಂಸ್ಕೃತಿ, ಆಚಾರಗಳನ್ನ ಗೌರವಿಸುತ್ತೇನೆ. ನನ್ನಿಂದ ಯಾರದಾದ್ರೂ ಭಾವನೆಗಳಿಗೆ ಧಕ್ಕೆ ಆಗಿದ್ರೆ ಕ್ಷಮೆ ಕೋರುತ್ತೇನೆ. ರಿಷಬ್ ಶೆಟ್ಟಿ ಅವರ ಅಭೂತಪೂರ್ವ ನಟನೆಯನ್ನ ಪ್ರಶಂಸಿಸುವುದು ನನ್ನ ಉದ್ದೇಶವಾಗಿತ್ತು. ಒಬ್ಬ ಕಲಾವಿದನಾಗಿ ಹಾಗೆ ನಟಿಸೋದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತು. ನಾನು ಅವ್ರ ನಟನೆಗೆ ಪ್ರಭಾವಿತನಾಗಿ ಹಾಗೆ ಹೇಳಿದೆ ಎಂದು ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಇದೀಗ ಕಾಂತಾರ ದೈವವನ್ನು ಅನುಕರಿಸೋ ಮತ್ತೊಂದು ವಿಡಿಯೋ ವೈರಲ್ ಆಗ್ತಿದ್ದು, ಕೇರಳ ಮೂಲಕ ಮಲ್ಲು ದಂಪತಿ ದುಬೈನಲ್ಲಿ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅದರಲ್ಲಿ ಬೇಕು ಅಂತಲೇ ದೈವಕ್ಕೆ ಹಾಗೂ ನಂಬಿದವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಬೆಡ್ರೂಮ್, ಟಾಯ್ಲೆಟ್, ಡೈನಿಂಗ್ ಟೇಬಲ್ ಸೇರಿದಂತೆ ಮಾಡಬಾರದ ಕಡೆಯಲ್ಲೆಲ್ಲಾ ಅದ್ರ ರೀಲ್ ಮಾಡಿದ್ದಾರೆ. ಸಾಲದು ಅಂತ ಪೊರಕೆ ಕೂಡ ಅದ್ರಲ್ಲಿ ಬಳಸಿದ್ದಾರೆ. ಈ ತರಹದ ಹುಚ್ಚಾಟಗಳು ನಿಲ್ಲೋದು ಯಾವಾಗ..? ಜನಕ್ಕೆ ಬುದ್ಧಿ ಬರೋದಾದ್ರೂ ಯಾವಾಗ..?
ಇನ್ಫ್ಯಾಕ್ಟ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್, ದೈವದ ಅನುಕರಣೆ ಬೇಡ ಅನ್ನೋದನ್ನ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಜನಕ್ಕೆ ಹೇಳಿದ್ದರು. ರಿಷಬ್ ಶೆಟ್ಟಿ ಕೂಡ ಜನರಲ್ಲಿ ಆ ರೀತಿ ಅನುಕರಿಸಬೇಡಿ ಅಂತ ಮನವಿ ಮಾಡಿದ್ರು. ಆದ್ರೀಗ ಪದೇ ಪದೆ ಇಂತಹ ಘಟನೆಗಳು ಮರುಕಳಿಸುತ್ತಿರೋದು ವಿಷಾದ. ಇದಕ್ಕೆ ಪರ್ಮನೆಂಟ್ ಸೆಲ್ಯೂಷನ್ ಕಂಡುಕೊಳ್ಳೋಕೆ ರಿಷಬ್ ಶೆಟ್ಟಿ ಅಥ್ವಾ ತುಳುನಾಡ ದೈವಗಳ ಸಂಘಟನೆ ಏನು ಮಾಡುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.





