CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!

ಚಂದ್ರಬಾಬು-ಪವನ್‌ಗೆ ಟೆನ್ಷನ್.. ಆಂಧ್ರ ಪಾಲಿಟಿಕ್ಸ್‌‌ ಹೈಟೆನ್ಷನ್

ಷ್ಯ (19)

ಜೂನಿಯರ್‌ ಎನ್‌ಟಿಆರ್ ರಾಜಕೀಯ ರಂಗ ಪ್ರವೇಶಕ್ಕೆ ಸಜ್ಜಾಯ್ತಾ ವೇದಿಕೆ..? ತಾತ ನಂದಮೂರಿ ತಾರಕ ರಾಮರಾವ್ ನೆಚ್ಚಿನ ತಿರುಪತಿ ಕ್ಷೇತ್ರದಿಂದಲೇ ಮೊದಲ ಹೆಜ್ಜೆ..? ಚಂದ್ರಬಾಬು ನಾಯ್ಡು-ಪವನ್ ಕಲ್ಯಾಣ್‌‌ಗೆ ಟೆನ್ಷನ್ ಶುರು. ಹೀಗೊಂದು ಅಲೆ ಆಂಧ್ರ ರಾಜ್ಯ ರಾಜಕಾರಣದಲ್ಲಿ ಎದ್ದಿದೆ. ಅದಕ್ಕೆ ಕಾರಣ ಜುಲೈ 18ಕ್ಕೆ ನಡೆಯುತ್ತಿರೋ RAW NTR ಸಮಾವೇಶ. ಈ ಕುರಿತ ಒಂದು ಸಂಕ್ಷಿಪ್ತ ವರದಿ ಇಲ್ಲಿದೆ..

ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಕಟ್ಟಿ, ಸಿಎಂ ಪಟ್ಟಕ್ಕೇರಿದ ವಿಜಯ್‌ ಬಳಿಕ ಟಾಲಿವುಡ್‌ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಕೂಡ ಅದೇ ಹಾದಿಯಲ್ಲಿ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಆಗಿರೋ RAW NTR ಮೊಮೆಂಟ್. ಹೌದು.. ಇದೇ ಜುಲೈ 18ರಂದು ತಿರುಪತಿಯಲ್ಲಿ ಜೂನಿಯರ್ ಎನ್‌ಟಿಆರ್ ಅಭಿಮಾನಿ ಸಂಘಗಳೇ ಕೂಡಿ ಮಾಡ್ತಿರೋ RAW NTR ಸಮಾವೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಜೂನಿಯರ್‌ ಎನ್‌ಟಿಆರ್ ತಾತ ನಂದಮೂರಿ ತಾರಕ ರಾಮರಾವ್‌ ಕೂಡ ಆಂಧ್ರ ಮಾಜಿ ಸಿಎಂ ಅನ್ನೋದು ಎಲ್ಲರಿಗೂ ಗೊತ್ತು. ಇದೀಗ ಅವ್ರ ಮೊಮ್ಮಗ ತಾತನ ನೆಚ್ಚಿನ ತಾಣ ತಿರುಪತಿಯಲ್ಲೇ ಪಾಲಿಟಿಕ್ಸ್‌‌ಗೆ ಮುನ್ನುಡಿ ಬರೆಯೋಕೆ ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ಜುಲೈ 18ರ ಬೆಳಗ್ಗೆ 10 ಗಂಟೆಗೆ ತಿರುಪತಿಯ ತಾಜ್ ಹೋಟೆಲ್‌‌ನಲ್ಲಿ ದೊಡ್ಡ ಸುದ್ದಿಗೋಷ್ಠಿ ನಡೆಯಲಿದೆ. ಅಲ್ಲಿ ಊರು ವಾಡ ಹೆಸ್ರಲ್ಲಿ ಸುಮಾರು 100 ಕೋಟಿಯಷ್ಟು ಬೃಹತ್ ಮೊತ್ತದ ಹಣವನ್ನ ಸಮಾಜ ಸೇವೆಗೆ ಮುಡಿಪಾಗಿಡ್ತಿರೋ ಬಗ್ಗೆ ಮಾಹಿತಿ ನೀಡಲಾಗುತ್ತಂತೆ.

2009ರ ಚುನಾವಣಾ ಫಲಿತಾಂಶದ ಬಳಿಕ ರಾಜಕಾರಣದಿಂದ ದೂರ ಉಳಿದಿರೋ ನಟ ಜೂನಿಯರ್‌ ಎನ್‌ಟಿಆರ್, ಇದೀಗ 100 ಕೋಟಿ ಸಮಾಜಸೇವೆಗೆ ಮುಡಿಪಾಗಿಡ್ತಿರೋದು ಅಚ್ಚರಿ ತಂದಿದೆ. ಮೊದಲು ಸಮಾಜ ಸೇವೆ.. ನಂತ್ರ ಪಾಲಿಟಿಕ್ಸ್ ಅಂದ್ರೆ ನಮಗೆ ಕಷ್ಟ ಆಗಲಿದೆ ಅಂತ ಈಗಾಗ್ಲೇ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಮ ಪವನ್ ಕಲ್ಯಾಣ್‌ಗೆ ಟೆನ್ಷನ್ ಶುರುವಾಗಿದೆಯಂತೆ. ಸೋ.. ಇದು ಆಂಧ್ರ ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆ ಆಗಿದ್ದು, ಅಭಿಮಾನಿ ಸಂಘಗಳು, ಸದ್ಯ ಎನ್‌ಟಿಆರ್ ಪಾಲಿಟಿಕ್ಸ್‌ಗೆ ಬರಲ್ಲ ಅನ್ನೋದನ್ನ ಪತ್ರವೊಂದರ ಮೂಲಕ ಸ್ಪಷ್ಟಪಡಿಸಿವೆ. ಆದ್ರೆ RAW NTR ಸುದ್ದಿಗೋಷ್ಠಿ ಹಾಗೂ ಸಮಾವೇಶಕ್ಕೆ ಎನ್‌ಟಿಆರ್ ಬರ್ತಾರಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version