ಮಾನ್ಸ್ಟರ್ ರಾಕಿಭಾಯ್ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ ಇಂಡೋ-ಪಾಕ್ ವಾರ್ ಕುರಿತು ರಿಯಾಕ್ಟ್ ಮಾಡಿದ್ದಾರೆ. ಇವರ ಮಾತುಗಳು ಸಾಕಷ್ಟು ತೂಕಮಯವಾಗಿದ್ದು, ಅವ್ರ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತಿವೆ. ಇಷ್ಟಕ್ಕೂ ಯುದ್ಧದ ಬಗ್ಗೆ ಏನಂದ್ರು..? ಜನಕ್ಕೆ ಕೊಟ್ಟ ಸಂದೇಶ ಆದ್ರೂ ಏನು ಅಂತೀರಾ..? ಈ ಸ್ಪೆಷಲ್ ಪ್ಯಾಕೇಜ್ ಒಮ್ಮೆ ನೋಡಿ.
- ಇಂಡೋ-ಪಾಕ್ ವಾರ್ಗೆ ಯಶ್- ಮೌಳಿ ಹೇಳಿದ್ದೇನು..?
- ಜವಾಬ್ದಾರಿಯುತ ಸ್ಟಾರ್ಗಳಿಂದ ಮೌಲ್ಯಯುತ ಪೋಸ್ಟ್
- ‘ಆರ್ಮಿ ಫೋಟೋ, ವಿಡಿಯೋ ಕ್ಲಿಕ್ಕಿಸಬೇಡಿ’- ರಾಜಮೌಳಿ
- ‘ಸೇನೆ ಪರ ನಿಂತು, ತಪ್ಪು ಮಾಹಿತಿ ವಿರುದ್ಧ ಹೋರಾಟ’- ಯಶ್
ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿಯ ಬಹುನಿರೀಕ್ಷಿತ ಸಿನಿಮಾಗಳಾದ ಟಾಕ್ಸಿಕ್, ರಾಮಾಯಣ ಹಾಗೂ SSMB29 ಸಿನಿಮಾಗಳ ಶೂಟಿಂಗ್ ನಿಂತು ಹೋಗಿದೆ ಎನ್ನಲಾಗ್ತಿದೆ. ಹೌದು.. ಪಹಲ್ಗಾಮ್ಗೆ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಪಾಕ್ ಮೇಲೆ ಮಾಡಿದಂತಹ ಆಪರೇಷನ್ ಸಿಂದೂರ್ ಪ್ರತಿದಾಳಿ, ಸದ್ಯ ಇಂಡೋ-ಪಾಕ್ 2025 ವಾರ್ಗೆ ನಾಂದಿ ಹಾಡಿದೆ. ಇದೇ ಕಾರಣಕ್ಕೆ ಸದ್ಯ ಮೂರೂ ಚಿತ್ರಗಳ ಚಿತ್ರೀಕರಣ ರದ್ದಾಗಿದೆ ಎನ್ನಲಾಗ್ತಿದೆ.
ಭಾರತ ಹಾಗೂ ಪಾಕಿಸ್ತಾನಗಳ ಪರಸ್ಪರ ದಾಳಿ, ಪ್ರತಿದಾಳಿಗಳಿಂದಾಗಿ ಕೊಲ್ಯಾಟ್ರಲ್ ಡ್ಯಾಮೇಜ್ ಆಗ್ತಿದೆ. ಅದರಲ್ಲೂ ಪಾಪಿಸ್ತಾನದ ಪಾತಕಿಗಳಿಗೆ ನಮ್ಮದು ಭಯೋತ್ಪಾದಕರ ವಿರುದ್ಧದ ದಾಳಿ ಅನ್ನೋದು ಗೊತ್ತಾಗದೆ, ನಮ್ಮ ನಾಗರಿಕರ ಮೇಲೆ ದಾಳಿಗೆ ಮುಂದಾಗ್ತಿದ್ದಾರೆ. ಸಾಕಷ್ಟು ಪಾಕ್ ಮಿಸೈಲ್ಸ್ನ ಒಡೆದು ಹಾಕಿದ್ರೂ ಸಹ, ಬುದ್ದಿ ಕಲಿಯದ ಪಾಕ್ ನರಿಗಳು, ಕಾಲ್ಕೆರೆದುಕೊಂಡು ಬಂದು ಭಾರತೀಯ ಸೇನೆಗೆ ಬಲಿಯಾಗ್ತಿದೆ.
ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ಇಂಡೋ-ಪಾಕ್ ಕದನದ ದೃಶ್ಯಗಳು ಸಿಕ್ಕಾಪಟ್ಟೆ ವಿಜೃಂಭಿಸುತ್ತಿವೆ. ನಮ್ಮ ಆರ್ಮಿ ಆಫೀಸರ್ಗಳು ಅಫಿಶಿಯಲಿ ಪ್ರೆಸ್ ಕಾನ್ಫರೆನ್ಸ್ ಮಾಡಿ ಬ್ರೀಫ್ ಮಾಡ್ತಿದ್ರೂ ಸಹ, ಹಳೆಯ ವಿಡಿಯೋಗಳೆಲ್ಲಾ ಸದ್ಯ ನಡೆದಿರುವಂತೆ ಹರಿದಾಡ್ತಿವೆ. ಅಲ್ಲದೆ, ನಮ್ಮ ಸೇನೆಯ ಚಲನವಲನಗಳ ಬಗ್ಗೆ ನಾವೇ ಶತ್ರುಗಳಿಗೆ ಮಾಹಿತಿ ಬಿಟ್ಟುಕೊಡುವಂತಾಗ್ತಿದೆ. ಹಾಗಾಗಿಯೇ ರಾಜಮೌಳಿ ಹಾಗೂ ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಜವಾಬ್ದಾರಿಯುತವಾಗಿ ಪೋಸ್ಟ್ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸ್ತಿದ್ದಾರೆ.
ಸೇನೆ ಪರ ನಿಂತು, ತಪ್ಪು ಮಾಹಿತಿ ವಿರುದ್ಧ ಹೋರಾಡೋಣ..!
‘ಭಾರತೀಯ ಸಶಸ್ತ್ರ ಪಡೆಗಳ ಅಚಲ ಶಕ್ತಿ ಹಾಗೂ ನಿಖರತೆಗೆ ನಮನಗಳು. ಸೇನೆಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಸೇನೆಯ ಪರವಾಗಿ ನಾವೆಲ್ಲಾ ಒಟ್ಟಾಗಿ ನಿಲ್ಲುವುದು ಸದ್ಯದ ಜವಾಬ್ದಾರಿ ಆಗಿದೆ. ಆದ್ರೆ, ಆನ್ಲೈನ್ನಲ್ಲಿ ಯಾವುದೇ ವಿಷಯವನ್ನು ಹಂಚಿಕೊಳ್ಳುವ ಮುನ್ನ ಪರಿಶೀಲನೆ ಮಾಡಿಕೊಳ್ಳಬೇಕು. ತಪ್ಪು ಮಾಹಿತಿ ವಿರುದ್ಧ ಹೋರಾಟ ನಡೆಸುವುದು ಕೂಡ ದೇಶಕ್ಕೆ ಶಕ್ತಿ ನೀಡುತ್ತದೆ. ಹಾಗೆಯೇ ಶತ್ರುಗಳ ದಾಳಿಯಿಂದ ಹಾನಿಗೊಳಗಾದ, ಆತಂಕಕ್ಕೀಡಾಗಿರುವ ಪ್ರದೇಶಗಳ ಜನರ ಪರವಾಗಿಯೂ ನಾವು ನಿಲ್ಲಬೇಕಿದೆ. ಅವರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ. ಧೈರ್ಯವಾಗಿರಿ. ಜೈ ಹಿಂದ್’. – ಯಶ್ ನಟ
ನಮ್ಮ ಆರ್ಮಿಯ ಚಲನವಲನಗಳನ್ನು ಚಿತ್ರಿಸಬೇಡಿ..!
‘ನಮ್ಮ ಸೈನಿಕರ ವಿಡಿಯೋಗಳು ಮತ್ತು ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳಬೇಡಿ. ಭಾರತೀಯ ಸೇನೆಯ ಯಾವುದೇ ಚಲನವಲನಗಳನ್ನು ನೀವು ನೋಡಿದರೆ, ಅದರ ಫೋಟೋಗಳಾಗಲಿ, ವಿಡಿಯೋಗಳಾಗಲಿ ತೆಗೆಯಬೇಡಿ. ಇದರಿಂದ ಶತ್ರುಗಳಿಗೆ ಸಹಾಯ ಮಾಡಿದಂತಾಗುತ್ತದೆ. ಆದ್ದರಿಂದ ಅವುಗಳನ್ನು ಹಂಚಿಕೊಳ್ಳಬೇಡಿ. ಶಾಂತರಾಗಿ ಇರಿ, ಅಲರ್ಟ್ ಆಗಿ ಇರಿ ಹಾಗೂ ಪಾಸಿಟಿವ್ ಆಗಿ ಇರಿ. ಗೆಲುವು ನಮ್ಮದೇ’. – ರಾಜಮೌಳಿ, ನಿರ್ದೇಶಕ
ಇವರ ಮಾತುಗಳು ನಿಜಕ್ಕೂ ತೂಕದಿಂದ ಕೂಡಿದ್ದು, ಭಾರತೀಯರು ಇದನ್ನ ಪಾಲಿಸಬೇಕಿದೆ. ಶತ್ರುಗಳ ಸಂಹಾರಕ್ಕೆ ಸೇನೆ, ಸರ್ಕಾರ ಹಾಗೂ ದೇಶದ ಜೊತೆ ನಿಲ್ಲುವ ಅವಶ್ಯಕತೆ ತುಂಬಾ ಇದೆ. ಬಾಹುಬಲಿ ಡೈರೆಕ್ಟರ್ ಹೇಳಿದಂತೆ ಶಾಂತರಾಗಿ ಇದ್ದುಕೊಂಡು ಧನಾತ್ಮಕವಾಗಿ ಚಿಂತಿಸೋಣ. ಗೆಲುವು ನಮ್ಮದೇ ಆಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್