ಕ್ರೇಜಿ ಸೀಕ್ರೆಟ್..ಜೂಜು ಮಸ್ತಿ..ಹಂಸಲೇಖ ಜೊತೆ ಕುಸ್ತಿ !

ಕ್ಯಾಸಿನೋ ದುಡ್ಡಲ್ಲೇ ಒಂದು ವರ್ಷ ಬದುಕು- ರವಿಚಂದ್ರನ್

Untitled design 2025 06 24t150305.060

ನಾದಬ್ರಹ್ಮ ಹಂಸಲೇಖ ನಿರ್ದೇಶಕರಾಗುವ ಕನಸು ಕೊನೆಗೂ ನನಸಾಗ್ತಿದೆ. ಓಕೆ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಚಾಲನೆ ನೀಡಿದ್ದು, ನಾಲ್ಕು ದಶಕಗಳ ಹಂಸಲೇಖ ಡ್ರೀಮ್ ಈಡೇರುತ್ತಿದೆ. ಇಷ್ಟಕ್ಕೂ ಪ್ರೇಮಲೋಕ ಕಟ್ಟಿದ ಈ ರಣಧೀರರ ನಡುವೆ ಮನಸ್ತಾಪ ಬಂದಿದ್ಯಾಕೆ..? ರವಿಮಾಮ ಜೂಜಿಗೆ ದಾಸನಾಗಿದ್ದು ಹೇಗೆ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.

ಬರೋಬ್ಬರಿ 40 ವರ್ಷಗಳ ನಂತ್ರ ತಮ್ಮ ನಿರ್ದೇಶನದ ಕನಸು ನನಸು ಮಾಡಿಕೊಳ್ತಿರೋ ಹಂಸಲೇಖಗಾಗಿ ಶೂಟಿಂಗ್‌ನ ಮೊಟಗುಗೊಳಿಸಿ, ದೂರದಿಂದ ಓಡೋಡಿ ಬಂದಿದ್ದಾರೆ ಪ್ರೇಮಲೋಕದ ಸರದಾರ ರವಿಚಂದ್ರನ್. ಯೆಸ್.. ಓಕೆ ಅನ್ನೋ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿರೋ ಹಂಸಲೇಖಗೆ ಶೂಭ ಕೋರೋಕೆ ಬಹಳ ದೂರದಿಂದ ಬಂದು, ಮನಸಾರೆ ಹರಸಿದ್ದಾರೆ ಕ್ರೇಜಿಸ್ಟಾರ್. ಅಷ್ಟೇ ಅಲ್ಲ, ತಮ್ಮ ನಡುವೆ ಬಿರುಕು ಯಾಕೆ ಬಂತು ಅನ್ನೋದ್ರ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.

ADVERTISEMENT
ADVERTISEMENT

ಎರಡು ವರ್ಷದಿಂದ ಗ್ಯಾಂಬ್ಲಿಂಗ್ ಜೂಜು ಆಡೋದನ್ನ ಬಿಟ್ಟಿರೋ ರವಿಮಾಮ, ಒಂದು ಕಾಲದಲ್ಲಿ ವರ್ಷವಿಡೀ ಕ್ಯಾಸಿನೋದಲ್ಲಿ ದುಡಿದ ದುಡ್ಡಲ್ಲೇ ಜೀವನ ನಡೆಸಿರೋ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಾನು ಸಿಗರೇಟ್ ಸೇದಲ್ಲ, ಎಣ್ಣೆ ಕೂಡ ಕುಡಿಯಲ್ಲ. ಆದ್ರೆ ಹೊಟ್ಟೆ ಯಾಕೆ ಬಂತೋ ಗೊತ್ತಿಲ್ಲ ಅಂತ ತನ್ನ ಗುಂಡು ಗುಂಡಾಗಿರೋ ಹೊಟ್ಟೆ ಬಗ್ಗೆ ಸಹ ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ಹೀರೋ ಆಗಿ ರಾಜನಂತೆ ಕ್ರೇಜಿಸ್ಟಾರ್ ಮೆರೆಯಬೇಕು ಅಂದ್ರೆ ಅದಕ್ಕೆ ಕಾರಣ ಹಂಸಲೇಖ. ಅದನ್ನ ಸ್ವತಃ ರವಿಚಂದ್ರನ್ ವೇದಿಕೆ ಮೇಲೆ ಬಹಿರಂಗಪಡಿಸಿದ್ದಾರೆ. ನಾದಬ್ರಹ್ಮ ನನ್ನ ಲೈಫ್‌ನ ರಿದಮ್ ಎಂದಿರೋ ಕ್ರೇಜಿಸ್ಟಾರ್, ಸದ್ಯ ನನಗೆ ದುಡ್ಡಿನ ಸಮಸ್ಯೆ ಇದೆ.  ಆದ್ರೂ ‘ಐ ಆ್ಯಮ್ ಗಾಡ್.. ಗಾಡ್ ಈಸ್ ಕ್ರೇಜಿ’ ಅನ್ನೋ ಸಿನಿಮಾ ಮಾಡ್ತಿದ್ದೀನಿ ಎಂದಿದ್ದಾರೆ.

ಎನ್ ಎಸ್ ರಾವ್ ಮೂಲಕ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದಂತಹ ಹಂಸಲೇಖ, ನಿರ್ದೇಶಕನಾಗುವ ಬದಲಿಗೆ ಸಂಗೀತ ಸಂಯೋಜಕರಾಗ್ತಾರೆ. ಮೂರು ಬಾರಿ ಪ್ರಯತ್ನಿಸಿದ್ರೂ ಡೈರೆಕ್ಟರ್ ಆಗುವ ಕನಸು ನನಸಾಗಲ್ಲ. ಆದ್ರೀಗ ಓಕೆ ಅನ್ನೋ ಚಿತ್ರದಿಂದ ತಮ್ಮ ದಶಕಗಳ ಕನಸನ್ನ ಸಾಕಾರ ಮಾಡಿಕೊಳ್ತಿದ್ದಾರೆ. ಇನ್ನು ರವಿಚಂದ್ರನ್‌ಗಿರೋ ಮಹಿಳಾ ಅಭಿಮಾನಿಗಳ ಬಗ್ಗೆ ಮಾತನಾಡಿದ ಹಂಸಲೇಖ, ಈಗಲೂ 10ಕೆಜಿ ಇಳಿಸಿಕೊಂಡ್ರೆ ಅವರನ್ನ ಮೀರಿಸೋ ಸುರಸುಂದರ ಯಾರೂ ಇಲ್ಲ ಎಂದಿದ್ದಾರೆ.

ನಾನು ಸಿಗರೇಟ್ ಸೇದಿದ್ರೂ, ಬ್ರಾಂಡಿ ಕುಡಿದರೂ ಸಹ ನನ್ನ ಶ್ರೀಮತಿಗೆ ತಗಾದೆ ಇಲ್ಲ. ಎಲ್ಲಕ್ಕೂ ಓಕೆ ಅಂತಾರೆ ಅಂತ ತಮ್ಮ ಚಿತ್ರದ ಓಕೆ ಟೈಟಲ್ ಬಗ್ಗೆ ಹಂಸಲೇಖ ಮಾತನಾಡಿದ್ದು ಇಂಟರೆಸ್ಟಿಂಗ್.

ಒಟ್ಟಾರೆ ರವಿಚಂದ್ರನ್ ಹಾಗೂ ಹಂಸಲೇಖ ಇಬ್ಬರೂ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಒಂಥರಾ ಅಪರೂಪದ ಅಪೂರ್ವ ಸಂಗಮ. ಈ ನಿಷ್ಕಲ್ಮಶ ಸ್ನೇಹದ ಮೇಲೆ ಯಾರ ಕಣ್ಣೂ ಬೀಳದಿರಲಿ. ರವಿಮಾಮ ಹೇಳಿದಂತೆ ಕ್ರೇಜಿಸ್ಟಾರ್ ಮಕ್ಕಳಿಗೂ ಹಂಸಲೇಖ ಅಂತಹ ಒಳ್ಳೆಯ ಗೆಳೆಯ ಸಿಗಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

Exit mobile version